ಭಾರತದ ಸಾಫ್ಟ್ ವೇರ್ ಉದ್ಯದ ಪ್ರಮುಖ ಕಂಪೆನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ (ಟಿಸಿಎಸ್) ಏಪ್ರಿಲ್- ಜೂನ್, 2020ರ ಮೊದಲ ತ್ರೈ ಮಾಸಿಕದಲ್ಲಿ ಕಡಿಮೆ ಲಾಭವನ್ನು ಘೋಷಣೆ ಮಾಡಿದೆ. ಇದು ನಿರೀಕ್ಷೆಗಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ. ಕೊರೊನಾದ ಕಾರಣಕ್ಕೆ ಕಂಪೆನಿಯ ಗ್ರಾಹಕರು ಐ.ಟಿ. ಸೇವೆಗಳ ಮೇಲೆ ಮಾಡುವ ಖರ್ಚು ಕಡಿಮೆ ಆಗಿರುವುದು ಪರಿಣಾಮ ಬೀರಿದೆ.
ಆದರೆ, ಟಿಸಿಎಸ್ ಸಿಬ್ಬಂದಿಯ ಅಭಿಪ್ರಾಯಗಳು ಪ್ರೋತ್ಸಾಹದಾಯಕ ಆಗಿವೆ. ಜೂನ್ 30ಕ್ಕೆ ಕೊನೆಯಾದ ಮೊದಲ ತ್ರೈಮಾಸಿಕಕ್ಕೆ ಕಂಪೆನಿಯ ಲಾಭ 13.8 ಪರ್ಸೆಂಟ್ ಕುಸಿದು, 7008 ಕೋಟಿ ರುಪಾಯಿಗೆ ಬಂದಿದೆ. ಇನ್ನು ಕಂಪೆನಿ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿ 38,322 ಕೋಟಿ ರುಪಾಯಿ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 38,172 ಕೋಟಿ ರುಪಾಯಿ ಆದಾಯ ಇತ್ತು.
ಮೊದಲ ತ್ರೈಮಾಸಿಕದಲ್ಲಿ ಹೊಸಬರು ಕೆಲಸಕ್ಕೆ ಸೇರ್ಪಡೆಯಾಗುವುದು ಇಲ್ಲದಿದ್ದರೂ ಸಿಬ್ಬಂದಿಯಲ್ಲಿನ ಕಲಿಕಾ ಚಟುವಟಿಕೆ ಹೆಚ್ಚಳ ಆಗಿದೆ. ಕಳೆದ ಅವಧಿಗೆ ಹೋಲಿಸಿದರೆ 24% ಏರಿಕೆ ಆಗಿದೆ ಎಂದು ಮಾನವ ಸಂಪನ್ಮೂಲ ವಿಭಾಗದ ಜಾಗತಿಕ ಮಟ್ಟದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಕಚೇರಿಗೆ ಹಿಂತಿರುಗಲು ಕಾತರಿಸುತ್ತಿರುವ ಉದ್ಯೋಗಿಗಳು
ಈಗಿನ ಸನ್ನಿವೇಶವನ್ನು ಟಿಸಿಎಸ್ ಸಿಬ್ಬಂದಿ ತಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಂಡಿದ್ದಾರೆ. ಮೊದಲ ತ್ರೈಮಾಸಿಕದಲ್ಲಿ ಹೊಸಬರು ಕಂಪೆನಿಗೆ ಸೇರ್ಪಡೆ ಆಗಿಲ್ಲ. ಇನ್ನು ನಮ್ಮ ಸಿಬಂದಿಯ ಆರೋಗ್ಯ, ಉತ್ತಮ ಬದುಕು ಆದ್ಯತೆ ಆಗಿದೆ. ಈ ಮೊದಲ ತ್ರೈ ಮಾಸಿಕದಲ್ಲಿ ಕಂಪೆನಿಯೊಳಗೇ ಇರುವ 4500 ಹುದ್ದೆಗಳನ್ನು ಇಲ್ಲಿನ ಪ್ರತಿಭೆಗಳಿಂದಲೇ ತುಂಬಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ನಮ್ಮ ಸಿಬ್ಬಂದಿ ಕಚೇರಿಗೆ ವಾಪಸಾಗಲು ಕಾತರರಾಗಿದ್ದಾರೆ. ಆದರೆ ನಾವು ಎಚ್ಚರಿಕೆ ವಿಧಾನದಲ್ಲೇ ಮುಂದುವರಿದಿದ್ದೇವೆ. ಉದ್ಯೋಗ ಸ್ಥಳವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಎಲ್ಲ ಮುಂಜಾಗ್ರತೆ ವಹಿಸಿದ್ದೇವೆ. ನಮ್ಮ ಸ್ಥಳದಲ್ಲೇ ಸದ್ಯಕ್ಕೆ ಒಟ್ಟು ಉದ್ಯೋಗಿಗಳ ಪೈಕಿ 1%ನಷ್ಟು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತ್ರೈ ಮಾಸಿಕದಲ್ಲಿ ಸಂಖ್ಯೆಯನ್ನು ಸ್ಥಿರವಾಗಿ ಹೆಚ್ಚಿಸಿಕೊಂಡು ಹೋಗಲು ಆಲೋಚಿಸಿದ್ದೇವೆ ಎಂದಿದ್ದಾರೆ.
ದೊಡ್ಡ ಮಟ್ಟದ ಆದಾಯ ಕುಸಿತ ತಡೆಯುವಲ್ಲಿ ಸಫಲ
ಟಿಸಿಎಸ್ ಮೊದಲ ತ್ರೈ ಮಾಸಿಕದ ಫಲಿತಾಂಶದ ಬಗ್ಗೆ ಸಿಒಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಎನ್. ಗಣಪತಿ ಸುಬ್ರಹ್ಮಣಿಯಂ ಮಾತನಾಡಿ, ವಿವಿಧ ಸ್ಥಳಗಳಲ್ಲಿ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದರೂ ಫಲಿತಾಂಶ ದೊರೆಯುತ್ತಿದೆ. ದೂರದ ಸ್ಥಳಗಳಿಂದ ಕೆಲಸ ನಿರ್ವಹಿಸುತ್ತಿದ್ದರೂ ಗ್ರಾಹಕರಿಗೆ ಅಗತ್ಯ ನೆರವು ಸಿಗುತ್ತಿದೆ ಎಂದಿದ್ದಾರೆ.
ಮುಖ್ಯ ಹಣಕಾಸು ಅಧಿಕಾರಿ ವಿ.ರಾಮಕೃಷ್ಣನ್ ಮಾತನಾಡಿ, ದೊಡ್ಡ ಮಟ್ಟದಲ್ಲಿ ಆದಾಯ ಕುಸಿತ ಆಗಬಹುದಾದ ಸನ್ನಿವೇಶವನ್ನು ಸಿಬಂದಿ ಮತ್ತಿತರರ ಸಹಾಯದಿಂದ ಮಿತಿಗೊಳಿಸುವುದಕ್ಕೆ ಸಫಲರಾಗಿದ್ದೇವೆ. ಪ್ರಬಲವಾದ ನಗದು ಬ್ಯಾಲನ್ಸ್ ಹಾಗೂ ಸಂಗ್ರಹದ ಕಾರಣಕ್ಕೆ ಇಳಿಕೆಯ ಸನ್ನಿವೇಶದಲ್ಲೂ ಉತ್ತಮ ಸ್ಥಿತಿಯಲ್ಲಿ ಇದ್ದೇವೆ ಎಂದಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications