ಕೊರೊನಾವೈರಸ್ ಲಾಕ್ಡೌನ್ ಪರಿಣಾಮವಾಗಿ ಅನೇಕ ದೇಶಗಳಿಗೆ ಆರ್ಥಿಕ ಬಿಕ್ಕಟ್ಟು ಸಂಭವಿಸಿದೆ. ಹೀಗೆ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನ ನಿವಾರಣೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಡಿಮೆ ಆದಾಯದ ದೇಶಗಳಿಗೆ special drawing rights (SDR) currencies ನೀಡುವ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.
ಆದರೆ, ಈ ಪ್ರಸ್ತಾವನೆಯನ್ನು ಮುಂದುವರೆದ ದೇಶಗಳು ವಿರೋಧಿಸಿದ್ದವು. ಈ ಬಗ್ಗೆ ಹೇಳಿಕೆ ನೀಡಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಆರ್ಥಿಕ ತಜ್ಞೆ, ಭಾರತ ಮೂಲದ ಗೀತಾ ಗೋಪಿನಾಥ್ ಅವರು, ಎಸ್ಡಿಆರ್ ಹಂಚಿಕೆ ವಿಷಯದ ಬಗ್ಗೆ ಸದ್ಯ ಚರ್ಚಿಸಲಾಗುತ್ತಿದೆ ಮತ್ತು ಈ ಹಂತದಲ್ಲಿ ಯಾವುದೇ ಒಮ್ಮತವಿಲ್ಲ ಎಂದು ಹಣಕಾಸು ಸಂಸ್ಥೆಯ ವೆಬಿನಾರ್ ಒಂದರಲ್ಲಿ ಹೇಳಿದ್ದಾರೆ.
ಎಸ್ಡಿಆರ್ ಹಂಚಿಕೆ ಮಾಡುವುದು ಬಂದಾಗ ಕೋಟಾ ಅನುಪಾತದಡಿ ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳಿಗೆ ಹೋಗುತ್ತದೆ. ಆದರೆ, ಕಡಿಮೆ ಆದಾಯದ ದೇಶಗಳಿಗೆ ಹಂಚಿಕೆ ಆಗುವುದಿಲ್ಲ. ಭಾರತವೂ ಸೇರಿದಂತೆ ಕೆಲ ಮುಂದುವರೆದ ರಾಷ್ಟ್ರಗಳು ಎಸ್ಡಿಆರ್ ಹಂಚಿಕೆಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿವೆ. ಐಎಂಎಫ್ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಪರ್ಯಾಯ ಕಾರ್ಯವಿಧಾನಗಳನ್ನು ಚರ್ಚಿಸುತ್ತಿದೆ ಎಂದು ಗೋಪಿನಾಥ್ ಹೇಳಿದ್ದಾರೆ.

ತಮ್ಮ ಎಸ್ಡಿಆರ್ ಅಗತ್ಯವಿಲ್ಲದ ಶ್ರೀಮಂತ ರಾಷ್ಟ್ರಗಳು ಕಡಿಮೆ ಆದಾಯದ ದೇಶಗಳಿಗೆ ಸಾಲ ನೀಡಬಹುದು. ಎಸ್ಡಿಆರ್ ಎನ್ನುವುದು ಡಾಲರ್, ಯೂರೋ, ಯೆನ್, ಸ್ಟರ್ಲಿಂಗ್ ಮತ್ತು ಯುವಾನ್ಗಳನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಮೀಸಲು ಆಸ್ತಿಯಾಗಿದೆ. ಮತ್ತು ಐಎಂಎಫ್ ಸದಸ್ಯರಿಗೆ ಅವರ ಕೋಟಾ ಪ್ರಕಾರ ಹಂಚಿಕೆ ಮಾಡಲಾಗುತ್ತದೆ. ಭಾರತವು ತನ್ನ 2.76% ಕೋಟಾದ ಕಾರಣದಿಂದಾಗಿ 13,114 ಮಿಲಿಯನ್ ಡಾಲರ್ ಎಸ್ಡಿಆರ್ಗಳನ್ನು ಹೊಂದಿದ್ದರೆ, 17.45% ಕೋಟಾದ ಕಾರಣದಿಂದಾಗಿ ಅಮೆರಿಕ 82,994 ಮಿಲಿಯನ್ ಎಸ್ಡಿಆರ್ಗಳನ್ನು ಹೊಂದಿದೆ. 6.41% ಕೋಟಾ ಹೊಂದಿರುವ ಚೀನಾ ಐಎಂಎಫ್ನಲ್ಲಿ 30,483 ಮಿಲಿಯನ್ ಎಸ್ಡಿಆರ್ಗಳನ್ನು ಹೊಂದಿದೆ.
More From GoodReturns

US, Israel-Iran War: ಸದ್ಯ ಭಾರತಕ್ಕಿಲ್ಲ ತೈಲದ ಕೊರತೆ; ಯುದ್ಧದ ನಡುವೆ ದೇಶದ ಬಿಗ್ ಪ್ಲಾನ್!

FIFA World Cup 2026: ಅಮೆರಿಕ ನೇತೃತ್ವದ ಫಿಫಾ ವಿಶ್ವಕಪ್ನಲ್ಲಿ ಇರಾನ್ ಭಾಗವಹಿಸುತ್ತಾ? ಇಲ್ಲಿದೆ ಮಾಹಿತಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications