ಆಹಾರ, ಇಂಧನ ಹಾಗೂ ಗೊಬ್ಬರಕ್ಕೆ ನೀಡುವ ಸರ್ಕಾರದ ಸಬ್ಸಿಡಿ ಮೊತ್ತ ಈ ಬಜೆಟ್ ನಲ್ಲಿ 0.23 ಪರ್ಸೆಂಟ್ ಏರಿಕೆ ಮಾಡಿದ್ದು, 2,27,793.89 ಕೋಟಿ ಮೊತ್ತಕ್ಕೆ ಹೆಚ್ಚಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ಪರಿಷ್ಕೃತ ಅಂದಾಜು 2,27,255 ಕೋಟಿಗೂ ಹೆಚ್ಚು ಮೀಸಲಿಡಲಾಗಿದೆ.
ಮುಂದಿನ ಆರ್ಥಿಕ ವರ್ಷಕ್ಕೆ ಅಂದಾಜು ಮಾಡಿರುವ ಒಟ್ಟಾರೆ ಸಬ್ಸಿಡಿಯಲ್ಲಿ ಗರಿಷ್ಠ ಮೊತ್ತ ಮೀಸಲಾಗಿರುವುದು ಆಹಾರಕ್ಕೆ. ಆ ನಂತರ ಗೊಬ್ಬರ ಮತ್ತು ಇಂಧನಕ್ಕೆ. 2020-21ನೇ ಸಾಲಿಗೆ ಸಾರ್ವ್ಜಜನಿಕ ವಿತರಣೆ ವ್ಯವಸ್ಥೆ ಮತ್ತು ಕಲ್ಯಾಣ ಯೋಜನೆ ಅಡಿಯಲ್ಲಿ ಸಬ್ಸಿಡಿ ಸಹಿತ ಆಹಾರ ಧಾನ್ಯಗಳನ್ನು ಪೂರೈಸಲು 1,15,569.68 ಕೋಟಿ ಮೀಸಲಿರಿಸಲಾಗಿದೆ.
ಪ್ರಸ್ಸಕ್ತ ವರ್ಷದ ಪರಿಷ್ಕೃತ ಅಂದಾಜು 1,08,688.35 ಕೋಟಿಯಿಂದ 6.33 ಪರ್ಸೆಂಟ್ ಏರಿಕೆ ಮಾಡಲಾಗಿದೆ. ಸಬ್ಸಿಡಿ ಸಹಿತ ಇಂಧನ ಪೂರೈಕೆಗಾಗಿ, ಅದರಲ್ಲೂ ಎಲ್ ಪಿಜಿ ಮತ್ತು ಸೀಮೆ ಎಣ್ಣೆಗಾಗಿ ಈ ಆರ್ಥಿಕ ವರ್ಷಕ್ಕಿಂತ 6 ಪರ್ಸೆಂಟ್ ಹೆಚ್ಚು ಮೊತ್ತ, 40,915.21 ಕೋಟಿ ಮೀಸಲಿಡಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಪರಿಷ್ಕೃತ ಅಂದಾಜಿನ ಪ್ರಕಾರ ಇಂಧನ ಸಬ್ಸಿಡಿಗಾಗಿ 38,568.86 ಕೋಟಿ ಮೀಸಲಿಡಲಾಗಿತ್ತು.

ಇನ್ನು ಎಲ್ ಪಿಜಿ ಸಬ್ಸಿಡಿಯನ್ನು ಮುಂದಿನ ಅರ್ಥಿಕ ವರ್ಷಕ್ಕೆ 37,256.21 ಕೋಟಿ ಎತ್ತಿಡಲಾಗಿದೆ. ಪ್ರಸಕ್ತ ವರ್ಷದ ಪರಿಷ್ಕೃತ ಅಂದಾಜು 34,085.86 ಕೋಟಿ ಇದೆ. ಆದರೆ ಸೀಮೆ ಎಣ್ಣೆ ಸಬ್ಸಿಡಿಯನ್ನು 3,659 ಕೋಟಿ ರುಪಾಯಿಗೆ ಇಳಿಸಲಾಗಿದೆ. ಈ ವರ್ಷದಲ್ಲಿ ಪರಿಷ್ಕೃತ ಅಂದಾಜು 4,483 ಕೋಟಿ ಇಡಲಾಗಿತ್ತು.
ಇನ್ನು ಗೊಬ್ಬರಕ್ಕಾಗಿ 2020-21ನೇ ಸಾಲಿನಲ್ಲಿ 11 ಪರ್ಸೆಂಟ್ ಸಬ್ಸಿಡಿ ಕಡಿಮೆ ಮಾಡಲಾಗಿದೆ. ಮುಂದಿನ ಆರ್ಥಿಕ ವರ್ಷಕ್ಕೆ 71,309 ಕೋಟಿ ಮೀಸಲಿಟ್ಟರೆ, ಈ ವರ್ಷದ ಪರಿಷ್ಕೃತ ಅಂದಾಜು 79,997.85 ಕೋಟಿ ಎತ್ತಿಡಲಾಗಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications