ಭಾರತದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಎಕ್ಸ್ ಕ್ಯೂಟಿವ್ ಗಳು ಯಾರು ಮತ್ತು ಅಷ್ಟು ವೇತನ ನೀಡುವ ಸಂಸ್ಥೆ ಯಾವುದು ಗೊತ್ತಾ? ರಿಲಯನ್ಸ್ ಅಥವಾ ಟಾಟಾ ಸಂಸ್ಥೆಯೋ ಹಾಗೂ ಮುಕೇಶ್ ಅಂಬಾನಿಯೋ ರತನ್ ಟಾಟಾ ಇವರ್ಯಾರೂ ಅಲ್ಲ. ಸನ್ ಟಿವಿ ಪ್ರವರ್ತಕರಾದ ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಕಾವೇರಿ 2019- 20ನೇ ಸಾಲಿನಲ್ಲಿ ಅತಿ ಹೆಚ್ಚು ವೇತನ ಪಡೆದವರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.
ಈ ದಂಪತಿ 175 ಕೋಟಿ ರುಪಾಯಿ ಪಡೆದುಕೊಂಡಿದ್ದಾರೆ. ಸನ್ ಟಿವಿಯ ಸ್ಥಾಪಕರು ಕಲಾನಿಧಿ ಮಾರನ್. 1993ರಲ್ಲಿ ಸ್ಥಾಪಿಸಿದರು. ಅವರು ಸನ್ ಟಿವಿಯ ಕಾರ್ಯ ನಿರ್ವಾಹಕ ಮುಖ್ಯಸ್ಥರು. ಇನ್ನು ಅವರ ಪತ್ನಿ ಕಾವೇರಿ ಕಾರ್ಯ ನಿರ್ವಾಹಕ ನಿರ್ದೇಶಕಿ ಆಗಿದ್ದಾರೆ. ಈ ದಂಪತಿ ಸಂಬಳ ರೂಪದಲ್ಲಿ ಪಡೆಯುವುದು 13.87 ಕೋಟಿ ರುಪಾಯಿ. ಇನ್ನು ಎಕ್ಸ್ ಗ್ರೇಷಿಯಾ/ ಬೋನಸ್ ಆಗಿ, 2019- 20ನೇ ಸಾಲಿನಲ್ಲಿ ತಲಾ 73.63 ಕೋಟಿ ಪಡೆದಿದ್ದಾರೆ.
ವೇತನ ಸರಾಸರಿ ತಲಾ 87.50 ಕೋಟಿ ರುಪಾಯಿ
ಆ ಮೂಲಕ ಇಬ್ಬರೂ ಸರಾಸರಿ ತಲಾ 87.50 ಕೋಟಿ ರುಪಾಯಿ ಪಡೆದಿದ್ದಾರೆ. ಮಾಲೀಕರೂ ಆಗಿರುವ ಇವರು ಇಷ್ಟು ವೇತನವನ್ನು ನಿಗದಿ ಮಾಡಿಕೊಂಡಿದ್ದು ಮೂರು ವರ್ಷಗಳ ಹಿಂದೆ. ಸನ್ ಟಿವಿಯಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕ ಆಗಿರುವ ಆರ್. ಮಹೇಶ್ ಗೆ ಸಂಬಳ 1.16 ಕೋಟಿ ಹಾಗೂ ಎಕ್ಸ್ ಗ್ರೇಷಿಯಾ/ ಬೋನಸ್ 62 ಲಕ್ಷ ಇದೆ.
2019- 20ನೇ ಸಾಲಿನಲ್ಲಿ 3,653.35 ಕೋಟಿ ಆದಾಯ
ಆ ನಂತರ ಮಾರನ್ ಅವರ ಮಗಳು ಹಾಗೂ ಕಂಪೆನಿಯ ಕಾರ್ಯ ನಿರ್ವಾಹಕ ನಿರ್ದೇಶಕಿ ಕಾವ್ಯಾ ಸಂಬಳ 80 ಲಕ್ಶ ಹಾಗೂ ಎಕ್ಸ್ ಗ್ರೇಷಿಯಾ/ ಬೋನಸ್ 42 ಲಕ್ಷ ಇದೆ. ಸನ್ ಟಿವಿಯೊಂದರಿಂದಲೇ 2019- 20ನೇ ಸಾಲಿನಲ್ಲಿ 3,653.35 ಕೋಟಿ ಆದಾಯ ಬಂದಿದ್ದು, 1,797.88 ಕೋಟಿ ಲಾಭವಾಗಿದೆ.
ಡಿಟಿಎಚ್ ನಿಂದ ಅನುಕೂಲ ಆಗಿದೆ
ಕಂಪೆನಿ ಬಳಿ ನಿವ್ವಳ ನಗದು ಈ ವರ್ಷ ಮಾರ್ಚ್ ನಲ್ಲಿ 2800 ಕೋಟಿ ರುಪಾಯಿ ಇದ್ದದ್ದು, ಜೂನ್ ನಲ್ಲಿ 3000 ಕೋಟಿ ರುಪಾಯಿಗೆ ಏರಿಕೆ ಆಗಿದೆ. ಪ್ರಾದೇಶಿಕವಾಗಿ ಸನ್ ಟಿವಿ ಜಾಲ ವಿಸ್ತಾರವಾಗಿದೆ. ಡಿಟಿಎಚ್ ನ ಇತ್ತೀಚಿನ ಬೆಳವಣಿಗೆಯಿಂದ ಸನ್ ಟಿವಿಗೆ ದೊಡ್ಡ ಮಟ್ಟದ ಅನುಕೂಲ ಆಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣದಿಂದ ಸನ್ ಟಿವಿ ಕಾರ್ಯ ನಿರ್ವಹಣೆಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಿತ್ತು. ಆದರೆ ಈಗ ಕೊರೊನಾ ಹಿಂದಿನ ಸ್ಥಿತಿಗೆ ಮರಳುತ್ತಾ ಇದೆ ಎಂದು ತಿಳಿಸಲಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications