ಕಳೆದ ಮೇ ತಿಂಗಳಲ್ಲಿ ವಿವಿಧ ನಗರಗಳಲ್ಲಿ 1100 ಸಿಬ್ಬಂದಿಯನ್ನು ಉದ್ಯೋಗದಿಂದ ತೆಗೆದಿದ್ದ ಸ್ವಿಗ್ಗಿ ಇದೀಗ 350 ಉದ್ಯೋಗಿಗಳನ್ನು ತೆಗೆಯಲು ನಿರ್ಧಾರ ಮಾಡಿದೆ. ಇದು ಎರಡನೇ ಹಂತದ ಉದ್ಯೋಗ ಕಡಿತ ಎನ್ನಲಾಗುತ್ತಿದೆ. ಸ್ವಿಗ್ಗಿ ಹೇಳುವ ಪ್ರಕಾರ, ಕೊರೊನಾ ಬಿಕ್ಕಟ್ಟಿನಿಂದ ಶೀಘ್ರವಾಗಿ ಚಿಗಿತುಕೊಳ್ಳುವ ನಿರೀಕ್ಷೆ ಇತ್ತು. ಆದರೆ ಶೇಕಡಾ ಐವತ್ತರಷ್ಟು ಮಾತ್ರ ಆಹಾರ ತಂತ್ರಜ್ಞಾನ ಕೈಗಾರಿಕೆ ಚೇತರಿಸಿಕೊಂಡಿದೆ.
ಯಾವ ಪ್ರದೇಶದಲ್ಲಿ ಹೆಚ್ಚಿನ ಸಾಮರ್ಥ್ಯ ಇದೆಯೋ ಅಲ್ಲಿಗೆ ಸಂಪನ್ಮೂಲ ಸೃಷ್ಟಿಸಲು ಕಳೆದ ಮೇ ತಿಂಗಳಲ್ಲಿ ಪ್ರಯತ್ನ ಆರಂಭಿಸಿದೆವು. ಆದರೆ ಶೇಕಡಾ ಐವತ್ತರಷ್ಟು ಮಾತ್ರ ಸುಧಾರಿಸಿಕೊಂಡಿದೆ. ಆದ್ದರಿಂದ ಮತ್ತೆ ಈ ಅಂತಿಮ ಪ್ರಯತ್ನ ಶುರು ಮಾಡಬೇಕಾಯಿತು. ಅದರ ಫಲಿತವಾಗಿ 350 ಉದ್ಯೋಗ ನಷ್ಟವಾಗಿದೆ ಎಂದು ಹೇಳಿಕೆಯಲ್ಲಿ ಸ್ವಿಗ್ಗಿ ತಿಳಿಸಿದೆ.
ಇದೇ ಅಂತಿಮವಾದ ಉದ್ಯೋಗ ಕಡಿತ. ಮುಂಬರುವ ತಿಂಗಳಲ್ಲಿ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂದು ಸ್ವಿಗ್ಗಿಯ ವಕ್ತಾರರು ತಿಳಿಸಿದ್ದಾರೆ. ಈಗ ಉದ್ಯೋಗದಿಂದ ತೆಗೆಯುವ ಸಿಬ್ಬಂದಿಗೆ ಕನಿಷ್ಠ ಮೂರರಿಂದ ಎಂಟು ತಿಂಗಳು ವೇತನ, ನೋಟಿಸ್ ಅವಧಿಯಲ್ಲಿನ ವೇತನದ ಜತೆಗೆ ಈಗಾಗಲೇ ಪೂರ್ತಿ ಮಾಡಿರುವ ಸೇವೆಗೆ ಹೆಚ್ಚುವರಿಯಾಗಿ ತಿಂಗಳು ಎಕ್ಸ್ ಗ್ರೇಷಿಯಾ ನೀಡಲಾಗುವುದು ಎಂದು ತಿಳಿಸಲಾಗಿದೆ.

ಈ ಹಿಂದೆ ಅನ್ವಯಿಸಿದಂತೆಯೇ ಈಗಲೂ ಉದ್ಯೋಗದಿಂದ ಹೊರಬೀಳುವ ಸಿಬ್ಬಂದಿಗೆ ಈ ವರ್ಷದ ಕೊನೆ ತನಕ ಆಕ್ಸಿಡೆಂಟ್ ಮತ್ತು ಟರ್ಮ್ ಇನ್ಷೂರೆನ್ಸ್ ದೊರೆಯುತ್ತದೆ. ಇನ್ನು ಕಳೆದ ಮೇ ತಿಂಗಳಲ್ಲಿ ಎಲ್ಲೆಲ್ಲಿ ಲಾಭದ ಪ್ರಮಾಣ ಕಡಿಮೆ ಆಗಿತ್ತೋ ಅಂಥ ಕ್ಲೌಡ್ ಅಡುಗೆ ಮನೆಗಳನ್ನು ಬದಲಾಯಿಸಿಕೊಳ್ಳಲಾಗಿತ್ತು. ಜತೆಗೆ ಅಲ್ಲಿನ ಐನೂರು ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಅದರಲ್ಲಿ ಗುತ್ತಿಗೆ ಸಿಬ್ಬಂದಿ ಕೂಡ ಇದ್ದರು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications