ಅದೃಷ್ಟ ಖುಲಾಯಿಸೋದು ಅಂದರೆ ಇದೇನಾ? ಈ ವರದಿಯನ್ನು ಓದಿದ ಮೇಲೆ ನೀವೇ ನಿರ್ಧರಿಸಿ. ಈ ಘಟನೆ ನಡೆದಿರುವುದು ತಾಂಜೇನಿಯಾದಲ್ಲಿ. ಗಣಿ ಮಾಲೀಕರೊಬ್ಬರಿಗೆ ಸಿಕ್ಕಿರುವ ಎರಡು ತಾಂಜನೈಟ್ ಜೆಮ್ ಸ್ಟೋನ್ (ರತ್ನದ ಹರಳುಗಳು)ಗೆ ಅಲ್ಲಿನ ಸರ್ಕಾರ 774 ಕೋಟಿ ತಾಂಜೇನಿಯನ್ ಶಿಲ್ಲಿಂಗ್ಸ್ ಚೆಕ್ ನೀಡಿದೆ.
ಇದು ಈ ವರೆಗೆ ಸಿಕ್ಕಿರುವುದರಲ್ಲೇ ಅತಿ ದೊಡ್ಡ ಜೆಮ್ ಸ್ಟೋನ್ ಅಂತೆ. ಭಾರತದ ರುಪಾಯಿಗಳಲ್ಲಿ ಹೇಳಬೇಕು ಅಂದರೆ ಆತನಿಗೆ ಸಿಕ್ಕಿರುವ ಮೊತ್ತ 25.27 ಕೋಟಿ. ಕಡು ನೇರಳೆ ನೀಲಿಯ ರತ್ನಗಳಿವು. ಒಬ್ಬ ಬಲಿಷ್ಠ ವ್ಯಕ್ತಿಯ ಮಣಿಕಟ್ಟಿನ ಗಾತ್ರದಲ್ಲಿವೆ ಈ ರತ್ನಗಳು. ದೇಶದ ಉತ್ತರ ಭಾಗದಲ್ಲಿ ಇರುವ ತಾಂಜನೈಟ್ ಗಣಿಯಲ್ಲಿ, ಸನಿನ್ಯು ಲೈಜರ್ ಎಂಬುವರಿಗೆ ಸಿಕ್ಕಿದೆ. ಈ ಸ್ಥಳದಲ್ಲಿ ಹಿಂದೆಯೇ ಗೋಡೆಯನ್ನು ಕಟ್ಟಲಾಗಿದ್ದು, ಈ ರತ್ನದ ಕಳ್ಳಸಾಗಣೆ ತಡೆಯುವ ಉದ್ದೇಶಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಮಕ್ಕಳಿಗಾಗಿ ಶಾಲೆ ಕಟ್ಟಿಸುತ್ತೇನೆ
"ನಾಳೆ ದೊಡ್ಡ ಪಾರ್ಟಿ ಮಾಡ್ತೀನಿ" ಎಂದು ಬಿಬಿಸಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ ಸಿಮಂಜ್ರೋ ಜಿಲ್ಲೆಯ ಮನ್ಯಾರದ ಗಣಿ ಮಾಲೀಕ ಸನಿನ್ಯು ಲೈಜರ್. "ಒಂದು ಶಾಪಿಂಗ್ ಮಾಲ್ ಹಾಗೂ ಶಾಲೆ ಕಟ್ಟಬೇಕು. ಆ ಶಾಲೆ ನನ್ನ ಮನೆ ಹತ್ತಿರವೇ ಇರಬೇಕು. ಏಕೆಂದರೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಸಾಧ್ಯವಾಗದಷ್ಟು ಬಡತನದ ಸ್ಥಿತಿಯಲ್ಲಿ ಇರುವವರು ಬಹಳ ಮಂದಿ ಇದ್ದಾರೆ" ಎಂದಿದ್ದಾರೆ ಈ ಜಾಕ್ ಪಾಟ್ ಹೊಡೆದ ಅದೃಷ್ಟವಂತ.
ತಾಂಜನೈಟ್ ಎಂಬ ಜೆಮ್ ಸ್ಟೋನ್
ನಾನು ಅಕ್ಷರಸ್ಥನಲ್ಲ. ಆದರೆ ಎಲ್ಲವೂ ವೃತ್ತಿಪರವಾಗಿ ನಡೆಯುವುದನ್ನು ಬಯಸುತ್ತೇವೆ. ಆದ್ದರಿಂದ ನನ್ನ ಮಕ್ಕಳು ವೃತ್ತಿ ಪರವಾಗಿ ಉದ್ಯಮ ನಡೆಸಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಅಂದ ಹಾಗೆ ಸಿಕ್ಕಿರುವ ಎರಡು ರತ್ನಗಳ ಪೈಕಿ ಒಂದರ ತೂಕ 9.27 ಕೇಜಿ ಇದ್ದರೆ, ಮತ್ತೊಂದು 5.103 ಕೇಜಿ ಇದೆ. ಈ ತಾಂಜನೈಟ್ ಅನ್ನೋ ಜೆಮ್ ಸ್ಟೋನ್ ಸಿಗುವುದು ಪೂರ್ವ ಆಫ್ರಿಕಾದ ಈ ದೇಶದ ಸಣ್ಣ ಪ್ರಮಾಣ ಉತ್ತರ ಭಾಗದಲ್ಲಿ ಮಾತ್ರ.
ಬ್ಯಾಂಕ್ ಆಫ್ ತಾಂಜೇನಿಯಾದಿಂದ ಖರೀದಿ
ಈ ರತ್ನದ ಹರಳನ್ನು ಬ್ಯಾಂಕ್ ಆಫ್ ತಾಂಜೇನಿಯಾ ಖರೀದಿ ಮಾಡಿದೆ. ಲೈಜರ್ ಗೆ ಚೆಕ್ ನೀಡುವುದನ್ನು ಅಲ್ಲಿನ ಟೀವಿಗಳಲ್ಲಿ ಪ್ರಸಾರ ಮಾಡಲಾಗಿದೆ. ಅಧ್ಯಕ್ಷ ಜಾನ್ ಮಗುಫುಲಿ ಟೀವಿಯ ನೇರಪ್ರಸಾರದಲ್ಲೇ ಕರೆ ಮಾಡಿ, ಲೈಜರ್ ಅವರನ್ನು ಅಭಿನಂದಿಸಿದ್ದಾರೆ. "ಇದರಿಂದಲೇ ಗೊತ್ತಾಗುತ್ತದೆ ತಾಂಜೇನಿಯಾ ಶ್ರೀಮಂತ ದೇಶ" ಎಂದು ಅವರು ಹೇಳಿದ್ದಾರೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications