For Quick Alerts
For Daily Alerts
ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ವರ್ಷಕ್ಕೆ 6,000 ರುಪಾಯಿ ಪಿಂಚಣಿ
|
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವು ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ವಾರ್ಷಿಕ 6,000 ರುಪಾಯಿ ಪಿಂಚಣಿ ನೀಡಲಿದೆ. ಸರ್ಕಾರದ ಈ ತೀರ್ಮಾನವನ್ನು ಶಿಯಾ ಧಾರ್ಮಿಕ ಗುರು ಮೌಲಾನಾ ಸೈಫ್ ಅಬ್ಬಾಸ್ ಸ್ವಾಗತಿಸಿ ಮಾತನಾಡಿ, ಈ ತೀರ್ಮಾನಕ್ಕಿಂತ ಸರ್ಕಾರವು ಮಕ್ಕಳ ಶಿಕ್ಷಣ, ಮನೆಯ ಸಮಸ್ಯೆಗಳನ್ನು ಪರಿಹರಿಸಲು ಯೋಚಿಸಬೇಕು. ತಿಂಗಳಿಗೆ 500 ರುಪಾಯಿಯಂತೆ ನೀಡುವುದಕ್ಕಿಂತ ಅದು ಮುಖ್ಯ ಎಂದಿದ್ದಾರೆ.
ಇನ್ನು ಸುನ್ನಿ ಧರ್ಮ ಗುರು ಮೌಲಾನಾ ಸೂಫಿಯಾನ ಮಾತನಾಡಿ, ಈ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ತಿಂಗಳಿಗೆ ಐನೂರು ರುಪಾಯಿ ಪಿಂಚಣಿ ನೀಡುವ ತೀರ್ಮಾನದ ಮೂಲಕ ಸರ್ಕಾರವು ಎಂಥ ನ್ಯಾಯವನ್ನು ಒದಗಿಸಿದಂತಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ನ್ಯಾಯ ಮಂಡಳಿ ಅಧ್ಯಕ್ಷ ಶಾಹಿಸ್ತಾ ಅಂಬರ್ ಮಾತನಾಡಿ, ಸರ್ಕಾರದ ಈ ನಿರ್ಣಯ ಉತ್ತಮವಾದದ್ದು. ಆದರೆ ಈ ಮೊತ್ತ ಬಹಳ ಕಡಿಮೆ. ವರ್ಷಕ್ಕೆ ಆರು ಸಾವಿರ ಪಿಂಚಣಿಯು ಮೂಲ ಅಗತ್ಯಗಳಿಗೂ ಸಾಲುವುದಿಲ್ಲ ಎಂದು ಅವರು ಹೇಳಿದ್ದಾರೆ.
English summary
Triple Talaq Victims Will Get 6 Thousand Pension Annually
Story first published: Sunday, December 29, 2019, 14:22 [IST]