For Quick Alerts
ALLOW NOTIFICATIONS  
For Daily Alerts

ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ವರ್ಷಕ್ಕೆ 6,000 ರುಪಾಯಿ ಪಿಂಚಣಿ

|

ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವು ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ವಾರ್ಷಿಕ 6,000 ರುಪಾಯಿ ಪಿಂಚಣಿ ನೀಡಲಿದೆ. ಸರ್ಕಾರದ ಈ ತೀರ್ಮಾನವನ್ನು ಶಿಯಾ ಧಾರ್ಮಿಕ ಗುರು ಮೌಲಾನಾ ಸೈಫ್ ಅಬ್ಬಾಸ್ ಸ್ವಾಗತಿಸಿ ಮಾತನಾಡಿ, ಈ ತೀರ್ಮಾನಕ್ಕಿಂತ ಸರ್ಕಾರವು ಮಕ್ಕಳ ಶಿಕ್ಷಣ, ಮನೆಯ ಸಮಸ್ಯೆಗಳನ್ನು ಪರಿಹರಿಸಲು ಯೋಚಿಸಬೇಕು. ತಿಂಗಳಿಗೆ 500 ರುಪಾಯಿಯಂತೆ ನೀಡುವುದಕ್ಕಿಂತ ಅದು ಮುಖ್ಯ ಎಂದಿದ್ದಾರೆ.

ಇನ್ನು ಸುನ್ನಿ ಧರ್ಮ ಗುರು ಮೌಲಾನಾ ಸೂಫಿಯಾನ ಮಾತನಾಡಿ, ಈ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ತಿಂಗಳಿಗೆ ಐನೂರು ರುಪಾಯಿ ಪಿಂಚಣಿ ನೀಡುವ ತೀರ್ಮಾನದ ಮೂಲಕ ಸರ್ಕಾರವು ಎಂಥ ನ್ಯಾಯವನ್ನು ಒದಗಿಸಿದಂತಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ವರ್ಷಕ್ಕೆ 6,000 ರುಪಾಯಿ ಪಿಂಚಣಿ

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ನ್ಯಾಯ ಮಂಡಳಿ ಅಧ್ಯಕ್ಷ ಶಾಹಿಸ್ತಾ ಅಂಬರ್ ಮಾತನಾಡಿ, ಸರ್ಕಾರದ ಈ ನಿರ್ಣಯ ಉತ್ತಮವಾದದ್ದು. ಆದರೆ ಈ ಮೊತ್ತ ಬಹಳ ಕಡಿಮೆ. ವರ್ಷಕ್ಕೆ ಆರು ಸಾವಿರ ಪಿಂಚಣಿಯು ಮೂಲ ಅಗತ್ಯಗಳಿಗೂ ಸಾಲುವುದಿಲ್ಲ ಎಂದು ಅವರು ಹೇಳಿದ್ದಾರೆ.

English summary

Triple Talaq Victims Will Get 6 Thousand Pension Annually

Triple Talaq victims will get 6000 annual pension from Uttar Pradesh government. Here is the complete details.
Story first published: Sunday, December 29, 2019, 14:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X