ಹಣದುಬ್ಬರವಿಳಿತ ಎಂಬುದು ಸರಕುಗಳು ಮತ್ತ ಸೇವೆಗಳ ಸಾರ್ವತಿಕ ಬೆಲೆಯಲ್ಲಿನ ತೀವ್ರ ಕುಸಿತವಾಗಿದೆ. ವಾರ್ಷಿಕ ಹಣದುಬ್ಬರ ದರವು ಶೂನ್ಯ ಶೇಕಡಾವಾರು ಪ್ರಮಾಣಕ್ಕಿಂತ ಕುಸಿದಾಗ ಹಣದುಬ್ಬರವಿಳಿತವು ಕಂಡುಬರುತ್ತದೆ.
ಹಣದುಬ್ಬರವಿಳಿತದ ಸಮಯದಲ್ಲಿ ಎಲ್ಲಾ ವಸ್ತುಗಳು ಮತ್ತು ಸೇವೆಗಳ ಬೆಲೆಗಳು ಕೈಗೆಟುಕುವ ಬೆಲೆಗಿಂತ ಕೆಳಮಟ್ಟದಲ್ಲಿರುತ್ತದೆ. ಇದರಿಂದ ಗ್ರಾಹಕರು ಸಾಕಷ್ಟು ಖುಷಿಯಾಗೋದು ಸಾಮಾನ್ಯ. ಆದರೆ ಬೆಲೆಯಲ್ಲಿನ ತೀವ್ರ ಕುಸಿತವು ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಇದರಿಂದ ಆಗುವ ಪರಿಣಾಮದಿಂದಾಗಿ ವಸ್ತು, ಸೇವೆಗಳ ಬೆಲೆ ಇಳಿಕೆ ಒಂದೆಡೆಯಾದ್ರೆ, ಮತ್ತೊಂದೆಡೆ ಹಣದ ಮೌಲ್ಯದ ಕುಸಿತದ ಜೊತೆಗೆ ಹಣದ ಪೂರೈಕೆ ಕೂಡ ಕಡಿಮೆಯಾಗತೊಡಗುತ್ತದೆ. ಇದೇ ರೀತಿಯಲ್ಲಿ ಹಣದುಬ್ಬರವಿದ್ದಾಗ ವಿರುದ್ಧವಾಗಿ ವಸ್ತುಗಳ ಬೆಲೆ ಗಗನಕ್ಕೇರುತ್ತದೆ.
ವಸ್ತುಗಳ ಬೆಲೆ ಕುಸಿತದ ಜೊತೆಗೆ ಆಹಾರ ಬೆಲೆ, ಮನೆ ಒಟ್ಟಾರೆ ಮೌಲ್ಯವು ಕೂಡ ತಗ್ಗುತ್ತದೆ. ಆದರೆ ಈ ಸಮಯದಲ್ಲಿ ಜನರಿಗೆ ಖರೀದಿಗೂ ಸಾಧ್ಯವಾಗುವುದಿಲ್ಲ. ಏಕೆಂದರೆ ಜನರಿಗೆ ಕೊಂಡುಕೊಳ್ಳುವಷ್ಟು ಹಣದ ಪೂರೈಕೆಯು ಇರುವುದಿಲ್ಲ.

ಹಣದುಬ್ಬರವಿಳಿತದ ಕುರಿತು ಉದಾಹರಣೆ ಹೇಳುವುದಾದದರೆ, ಕಂಪನಿಗಳು ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆ ಮಾರಾಟ ಮಾಡುತ್ತಾರೆ. ಆದರೆ ಉತ್ಪಾದನಾ ವೆಚ್ಚವನ್ನು ಹೆಚ್ಚು ಸಮಯದವರೆಗೆ ಸರಿದೂಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕಂಪನಿಯು ವೇತನ ಕಡಿತ, ಉದ್ಯೋಗಿಗಳ ವಜಾಕ್ಕೆ ಮುಂದಾಗುತ್ತದೆ. ಇದರಿಂದಾಗಿ ಕೆಲವೇ ಕೆಲವು ಮಂದಿಯ ಬಳಿ ಹಣ ಉಳಿಕೆಯಾಗುತ್ತದೆ.
ಆದರೆ ಇವರೂ ಕೂಡ ಖರೀದಿಸಲು ಮುಂದಾಗುವುದು ಕಡಿಮೆ. ಏಕೆಂದರೆ ವಸ್ತು, ಸೇವೆಗಳ ಬೆಲೆ ಇನ್ನೂ ಕಡಿಮೆಯಾಗಬಹುದು ಎಂದು ಕಾಯುತ್ತಾರೆ. ಇದರ ಫಲಿತಾಂಶವು ಎಲ್ಲ ವಸ್ತು, ಸೇವೆಗಳನ್ನು ಹಣದುಬ್ಬರವಿಳಿನವು ನುಂಗಿ ಹಾಕುತ್ತದೆ.
ಇದನ್ನು ತಡೆಗಟ್ಟಲು ಕೇಂದ್ರ ಬ್ಯಾಂಕುಗಳು ಬಡ್ಡಿದರವನ್ನು ಕಡಿಮೆ ಮಾಡುತ್ತವೆ ಮತ್ತು ಸಾಲಗಳನ್ನು ನೀಡುತ್ತವೆ. ಇದರಿಂದಾಗಿ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗುತ್ತದೆ ಎಂಬುದು ನಂಬಿಕೆಯಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications