ಹಸುವಿನ ಹಾಲು, ಎಮ್ಮೆ ಹಾಲು ಕುಡಿಯುವುದರ ಬಗ್ಗೆ ಕೇಳಿರುತ್ತೀರಿ. ಆದರೆ ಒಂಟೆ ಹಾಲು ಕೂಡ ಅದೇ ರೀತಿಯಲ್ಲಿ ಮಾರಾಟ ಆಗುವ ದಿನಗಳು ದೂರವಿಲ್ಲ. ಯಾಕೆ ಒಂಟೆ ಹಾಲು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಅಂದ ಹಾಗೆ ಒಂಟೆ ಹಾಲಿನಲ್ಲಿ ಮನುಷ್ಯರ ದೇಹಕ್ಕೆ ಚೈತನ್ಯ ತುಂಬುವ ಶಕ್ತಿ ಇದೆಯಂತೆ. ಆ ಹಾಲಿನಲ್ಲಿ ಇರುವ ಅಂಶಗಳಿಂದ ಇಡೀ ದೇಹಕ್ಕೆ ಅಗತ್ಯ ಇರುವ ಅಂಶಗಳು ಪೂರೈಕೆಯಾಗಿ, ಉತ್ಸಾಹಭರಿತವಾಗಿ ಇರುತ್ತದಂತೆ.
ಮುಖ್ಯವಾಗಿ ಮಾನಸಿಕವಾಗಿ ದುರ್ಬಲವಾಗಿರುವ ಮಕ್ಕಳಿಗೆ ಒಂಟೆ ಹಾಲು ಬಹಳ ಆರೋಗ್ಯಕರ ಎಂಬ ನಂಬಿಕೆ ಇದೆ. ತಿಂಗಳ ಕಾಲ ಒಂಟೆ ಹಾಲು ಸೇವಿಸಿದರೆ ಹಲವು ಮಾನಸಿಕ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂದು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಮಧುಮೇಹಕ್ಕೆ ಕೂಡ ಈ ಹಾಲು ರಾಮಬಾಣ.
ವರ್ಷಗಳ ಕಾಲ ತೀವ್ರತರವಾದ ಮಧುಮೇಹದಿಂದ ಬಳಲುತ್ತಿದ್ದರೆ ಅದಕ್ಕೂ ಕೂಡ ತಿಂಗಳ ಕಾಲ ಒಂಟೆ ಹಾಲು ಸೇವನೆ ಮಾಡಿದಲ್ಲಿ ಶೀಘ್ರ ಮೇಲಾಗುತ್ತದೆ ಅನ್ನೋದು ತಜ್ಞರ ಮಾತು. ಒಂದು ಲೀಟರ್ ಒಂಟೆ ಹಾಲಿನಲ್ಲಿ ಇನ್ಸುಲಿನ್ ನ ಐವತ್ತೆರಡಕ್ಕೂ ಹೆಚ್ಚು ವಸ್ತುಗಳು ಇರುತ್ತವೆ.

ಒಂಟೆ ಹಾಲಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕ್ಯಾಲ್ಷಿಯಂ ಇರುತ್ತದೆ. ಇದರಿಂದ ಮೂಳೆ ಬಲವಾಗುತ್ತದೆ. ಇದರ ಜತೆಗೆ ಲೆಕ್ಟೋಫೆರಿನ್ ಇರುವುದರಿಂದ ಹಲವು ಬಗೆಯ ಕ್ಯಾನ್ಸರ್ ಗಳ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸುತ್ತದೆ. ಚರ್ಮದ ಸಮಸ್ಯೆಗಳು ಮತ್ತು ರಂಧ್ರಕ್ಕೆ ಪರಿಹಾರದಂತೆ ಕೆಲಸ ಮಾಡುತ್ತದೆ.
ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಒಂಟೆ ಹಾಲಿಗೆ ವಿಪರೀತ ಬೇಡಿಕೆ. ವಿಶ್ವದ ಒಟ್ಟಾರೆ ಒಂಟೆ ಹಾಲು ಉತ್ಪಾದನೆಯಲ್ಲಿ ಶೆಕಡಾ ಅರವತ್ನಾಲ್ಕರಷ್ಟು ಸೋಮಾಲಿಯಾ ಮತ್ತು ಕೀನ್ಯಾದಿಂದ ಆಗುತ್ತದೆ. ಹಸುವಿಗಿಂತ ಒಂಟೆ ಬಹಳ ಕಡಿಮೆ ಪ್ರಮಾಣದಲ್ಲಿ ಹಾಲು ನೀಡುತ್ತದೆ.
ಇನ್ನು ವಿದೇಶಗಳಲ್ಲಿ ಒಂಟೆ ಹಾಲಿಗೆ ಲೀಟರ್ ಗೆ ಮೂವತ್ತು ಅಮೆರಿಕನ್ ಡಾಲರ್ ನಂತೆ ಮಾರಲಾಗುತ್ತದೆ. ಹಸುವಿನ ಹಾಲಿನ ಬೆಲೆಗೆ ಹೋಲಿಸಿದರೆ ಇಪ್ಪತ್ತು- ಮೂವತ್ತು ಪಟ್ಟು ಬೇಡಿಕೆ ಹೆಚ್ಚು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications