ನವದೆಹಲಿ, ಡಿಸೆಂಬರ್ 09: ಡಿಜಿಟಲ್ ಹಣಕಾಸು ಸೇವಾ ಸಂಸ್ಥೆ ಆಗಿರುವ ಪೇಟಿಎಂ ಕಂಪನಿಯು ತನ್ನ ಷೇರುಗಳ ಮರುಖರೀದಿಯ ಪ್ರಸ್ತಾಪವನ್ನು ಪರಿಗಣಿಸುವ ನಿಟ್ಟಿನಲ್ಲಿ ಡಿಸೆಂಬರ್ 13ರಂದು ಮಹತ್ವದ ಸಭೆ ಕರೆಯಲಾಗುವುದು ಎಂದು ತಿಳಿಸಿದೆ.
ಮುಂದಿನ ವಾರದಲ್ಲಿ ನಡೆಯಲಿರುವ ಪೇಟಿಎಂ ಕಂಪನಿ ಮಂಡಳಿ ಸಭೆಯಲ್ಲಿ ತನ್ನ ಷೇರುದಾರರಿಗೆ ಲಾಭದಾಯಕವಾಗಬಹುದಾದ ಕಂಪನಿಯ ದ್ರವ್ಯತೆಯ ಸ್ಥಿತಿಯನ್ನು ಮುಖ್ಯವಾಗಿ ಗಮನದಲ್ಲಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಷೇರುಗಳ ಮರುಖರೀದಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಕಳೆದ ತನ್ನ ಆದಾಯದ ವರದಿ ಪ್ರಕಾರ, ಪೇಟಿಎಂ ಸಂಸ್ಥೆಯು 9,182 ಕೋಟಿ ರೂಪಾಯಿ ಮೌಲ್ಯದ ಲಿಕ್ವಿಡಿಟಿಯನ್ನು ಹೊಂದಿದೆ. ಈ ಕಂಪನಿಯ ಲಿಕ್ವಿಡಿಟಿಯನ್ನು ನಗದು ರೂಪದಲ್ಲಿ ರಹಸ್ಯವಾಗಿಡುವ ಸಾಮರ್ಥ್ಯದಿಂದ ಅಳೆಯಲಾಗುತ್ತದೆ.

ಡಿಸೆಂಬರ್ 13ರ ಮಂಗಳವಾರ ಮಂಡಳಿ ಸಭೆ:
"ಮುಂದಿನ ಡಿಸೆಂಬರ್ 13ರ ಮಂಗಳವಾರದಂದು ಪೇಟಿಎಂ ಕಂಪನಿಯ ಸಂಪೂರ್ಣವಾಗಿ ಪಾವತಿಸಿದ ಈಕ್ವಿಟಿ ಷೇರುಗಳ ಮರುಖರೀದಿಯ ಪ್ರಸ್ತಾಪವನ್ನು ಪರಿಗಣಿಸಲು ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯನ್ನು ಕರೆಯಲಾಗಿದೆ," ಎಂದು ಪೇಟಿಎಂ ಬಿಎಸ್ಇ ಫೈಲಿಂಗ್ನಲ್ಲಿ ತಿಳಿಸಿದೆ. ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ 1,914 ಕೋಟಿ ರೂಪಾಯಿ ಆಗಿದೆ.
"ಈ ಕಂಪೆನಿಯು ಚಾಲ್ತಿಯಲ್ಲಿರುವ ಹಣಕಾಸಿನ ಸ್ಥಿತಿಯನ್ನು ಗಮನಿಸಿದರೆ, ಮರುಖರೀದಿಯು ನಮ್ಮ ಷೇರುದಾರರಿಗೆ ಲಾಭದಾಯಕವಾಗಬಹುದು ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಕಂಪನಿಯು ತನ್ನ ಇತ್ತೀಚಿನ ವಿಶ್ಲೇಷಕರ ಸಭೆಯಲ್ಲಿ ಪ್ರಮುಖ ಬೆಳವಣಿಗೆಯ ಬಗ್ಗೆ ವಿವರಿಸಿದೆ. ಮುಂದಿನ 12-18 ತಿಂಗಳುಗಳಲ್ಲಿ ನಗದು ಹರಿವು ಧನಾತ್ಮಕವಾಗಿ ಪರಿಣಮಿಸುವ ನಿರೀಕ್ಷೆಯಿದೆ.
ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿದ ಪೇಟಿಎಂ ಷೇರು:
ಕಳೆದ ನವೆಂಬರ್ 2021ರಲ್ಲಿ ಪೇಟಿಎಂ ಕಂಪನಿಯು ಸ್ಟಾಕ್ ಎಕ್ಸ್ಚೇಂಜ್ನಲ್ಲಿ ತನ್ನ ಕಂಪನಿ ಹೆಸರನ್ನು ಸೇರಿಸಿತ್ತು. ಪೇಟಿಎಂ ತನ್ನ ಷೇರುಗಳನ್ನು 2,150 ರೂಪಾಯಿಗೆ ಒಂದರಂತೆ ಹಂಚಿಕೆ ಮಾಡಿತು. ಆದರೆ ಪೇಟಿಎಂ ಕಂಪನಿಯ ಷೇರು ಮೌಲ್ಯವು 1,950 ರೂಪಾಯಿಗೆ ವಹಿವಾಟು ಆರಂಭಿಸಿತು. ಈ ಷೇರು ಕಳೆದ ತಿಂಗಳು 441ರೂಪಾಯಿ ಇಳಿಕೆಯಾಗಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿತ್ತು.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Liquor policy: ಕರ್ನಾಟಕ ಹೊಸ ಮದ್ಯ ನೀತಿ..ಯುನೈಟೆಡ್ ಬ್ರೂವರೀಸ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಷೇರುಗಳಲ್ಲಿ 5% ಏರಿಕೆ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications