ಆಹಾರ ತಂತ್ರಜ್ಞಾನ ವೇದಿಕೆಯ ಜೊಮ್ಯಾಟೊನ ಉನ್ನತ ಕಾರ್ಯನಿರ್ವಾಹಕರಲ್ಲಿ ಒಬ್ಬರಾದ ಗೌರವ್ ಗುಪ್ತಾ ಕಂಪನಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೌರವ್ ಗುಪ್ತಾ, ಈ ವರ್ಷ ಆಹಾರ ವಿತರಣಾ ದಿಗ್ಗಜ ಜೊಮ್ಯಾಟೊನ ಪ್ರಮುಖ ಸಾರ್ವಜನಿಕ ಕೊಡುಗೆ (ಐಪಿಒ) ಹಿಂದೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇವರು ಮಂಗಳವಾರ ಕಂಪನಿಗೆ ರಾಜೀನಾಮೆ ನೀಡಿದರು.
ಜೊಮ್ಯಾಟೊದ ತನ್ನ ತಂಡದ ಸದಸ್ಯರು ಮತ್ತು ಸಹೋದ್ಯೋಗಿಗಳನ್ನು ಉದ್ದೇಶಿಸಿ, ಗುಪ್ತಾ ಇ-ಮೇಲ್ನಲ್ಲಿ ಬರೆದಿದ್ದಾರೆ, ನಾನು ಹೆಚ್ಚು ಹೇಳಲು ಬಯಸುವುದಿಲ್ಲ, ಎಲ್ಲಾ ಅನುಭವಗಳಿಗಾಗಿ ಕಂಪನಿಯಲ್ಲಿರುವ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದರು.
2015 ರಲ್ಲಿ ಜೊಮಾಟೊಗೆ ಸೇರಿದ ಗುಪ್ತಾ 2018 ರಲ್ಲಿ ಮುಖ್ಯ ಆಪರೇಟಿಂಗ್ ಆಫೀಸರ್ ಆಗಿ ಮತ್ತು 2019 ರಲ್ಲಿ ಸಂಸ್ಥಾಪಕರಾಗಿ ಬಡ್ತಿ ಹೊಂದಿದರು. ಅವರು ಐಪಿಒಗೆ ಮುಂಚಿತವಾಗಿ ಕಂಪನಿಯ ಮುಖ್ಯ ವ್ಯಕ್ತಿಯಾಗಿ ಹೊರಹೊಮ್ಮಿದ್ದರು, ಹೂಡಿಕೆದಾರರು ಮತ್ತು ಮಾಧ್ಯಮಗಳೊಂದಿಗೆ ಚರ್ಚೆಗಳನ್ನು ನಡೆಸಿದರು.
ಕಳೆದ ಹಲವು ವರ್ಷಗಳಲ್ಲಿ ಭಾರತದ ಮನೆಗಳಲ್ಲಿ ಅತ್ಯಂತ ಪರಿಚಿತ ಹೆಸರುಗಳಲ್ಲಿ ಒಂದಾಗಿರುವ ಆಹಾರ ತಂತ್ರಜ್ಞಾನ ಜೊಮ್ಯಾಟೊ ಆರಂಭದ ದಿನಗಳ ಪ್ರಯಾಣವನ್ನ ನೆನಪಿಸಿಕೊಳ್ಳುತ್ತಾ ''ಜೊಮ್ಯಾಟೊವನ್ನು ಮುನ್ನಡೆಸಲು ನಮ್ಮಲ್ಲಿ ಉತ್ತಮ ತಂಡವಿದೆ ಮತ್ತು ನನ್ನ ಪ್ರಯಾಣದಲ್ಲಿ ಪರ್ಯಾಯ ಮಾರ್ಗವನ್ನು ಆಯ್ಕೆ ಮಾಡುವ ಸಮಯ ಬಂದಿದೆ'' ಎಂದು ಹೇಳಿದರು.

ಇನ್ನು ಗೌರವ್ ಜೊಮ್ಯಾಟೊ ಪ್ರಯಾಣ ಕುರಿತು ಮಾತನಾಡಿರುವ ಸಿಇಒ ದೀಪಿಂದರ್ ಗೋಯೆಲ್'' ಧನ್ಯವಾದ ಗೌರವ್ ಗುಪ್ತಾ ಕಳೆದ 6 ವರ್ಷಗಳು ಅದ್ಭುತವಾಗಿದೆ ಮತ್ತು ನಾವು ಬಹಳ ದೂರ ಬಂದಿದ್ದೇವೆ. ನಮ್ಮ ಪಯಣವು ಇನ್ನೂ ಮುಂದೆ ಸಾಗಬೇಕಿದೆ. ಉತ್ತಮ ತಂಡ ಹಾಗೂ ನಾಯಕತ್ವ ನಮ್ಮನ್ನು ಮುಂದಕ್ಕೆ ತಂದಿದೆ. ಅದಕ್ಕೆ ನಾನು ಕೃತಜ್ಞನಾಗಿದ್ದೇನೆ'' ಎಂದು ಹೇಳಿದ್ದಾರೆ.
ಜೊಮ್ಯಾಟೊ ತನ್ನ ಮೆಗಾ ಇನಿಶಿಯಲ್ ಪಬ್ಲಿಕ್ ಆಫರಿಂಗ್ (IPO) ಅನ್ನು ಎರಡು ತಿಂಗಳ ಹಿಂದೆ ಆರಂಭಿಸಿತು. ಆದರೆ ಕಂಪನಿಯು ಜೂನ್ 30, 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 356 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ವರದಿ ಮಾಡಿದೆ. ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ 916 ಕೋಟಿ ರೂ. ಆಗಿದ್ದು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವಿತರಣೆಗಳ ಸಂಖ್ಯೆ ಹೆಚ್ಚಾದ ಕಾರಣ ಆದಾಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಜೊಮ್ಯಾಟೊ ಷೇರು ಬೆಲೆ?
ಇಂದಿನ ವಹಿವಾಟಿನಲ್ಲಿ ಇದು 136.20 ರೂಪಾಯಿಗೆ ಇಳಿದಿದೆ. ಪ್ರಸ್ತುತ ಕಂಪನಿಯ ಮಾರುಕಟ್ಟೆ ಬಂಡವಾಳ 1,13,441 ಕೋಟಿ ರೂ. ಆಗಿದ್ದು, ಇದರ ಐಪಿಒ ಜುಲೈ 14 ರಂದು ಪ್ರಾರಂಭವಾಯಿತು ಮತ್ತು ಜುಲೈ 16 ರಂದು ಮುಚ್ಚಲಾಯಿತು. IPO ನಲ್ಲಿ ಅದರ ಷೇರುಗಳ ಬೆಲೆ ಬ್ಯಾಂಡ್ 72-76 ರೂ. ನಷ್ಟಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!



Click it and Unblock the Notifications