ಪ್ರಧಾನಿ ಮೋದಿಯವರ ಮಹತ್ವದ ಯೋಜನೆಗಳಲ್ಲಿ ಸುರಕ್ಷಾ ವಿಮಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಶದ ಪ್ರತಿಯೊಬ್ಬ ನಾಗರಿಕರ ವಿಮೆ ಸುರಕ್ಷತೆಯನ್ನು ನೀಡುವ ಸಲುವಾಗಿ ಜಾರಿ ತರಲಾದ ಯೋಜನೆಯಾಗಿದೆ.
ಪ್ರಧಾನಿ ಮೋದಿಯವರ ಮಹತ್ವದ ಯೋಜನೆಗಳಲ್ಲಿ ಸುರಕ್ಷಾ ವಿಮಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಶದ ಪ್ರತಿಯೊಬ್ಬ ನಾಗರಿಕರ ವಿಮೆ ಸುರಕ್ಷತೆಯನ್ನು ನೀಡುವ ಸಲುವಾಗಿ ಜಾರಿ ತರಲಾದ ಯೋಜನೆಯಾಗಿದೆ.
ಹಣಕಾಸು ಭದ್ರತೆ ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು ಎನ್ನುವುದು ಭಾರತದಲ್ಲಿನ ನೂತನ ಪರಿಕಲ್ಪನೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸುರಕ್ಷಾ ವಿಮಾ ಯೋಜನೆ ಕೂಡ ನೂತನ ಯೋಜನೆಯಾಗಿದ್ದು, ಎಲ್ಲ ವ್ಯಕ್ತಿಗಳು ಈ ವಿಮೆಯನ್ನು ಮಾಡಿಸಬಹುದು. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?
ಸುರಕ್ಷಾ ವಿಮಾ ಯೋಜನೆಯ ಉದ್ದೇಶ, ಅರ್ಹತೆ, ವಿಮಾ ಮೊತ್ತ ಹಾಗೂ ಇನ್ನಿತರ ಮಾನದಂಡಗಳೇನು ಎನ್ನುವುದನ್ನು ಇಲ್ಲಿ ನೀಡಲಾಗಿದೆ.
ವಿಮಾ ಉದ್ದೇಶ
ಭಾರತದ ಪ್ರತಿಯೊಬ್ಬ ಪ್ರಜೆಗೂ ಅಪಘಾತ ಇನ್ಸೂರೆನ್ಸ್ ಕವರ್ ಒದಗಿಸುವುದು ಈ ಯೋಜನೆ ಉದ್ದೇಶವಾಗಿದೆ. ಅಪಘಾತ, ಆಕಸ್ಮಿಕ ಸಾವು ಇಲ್ಲವೇ ಅಂಗವೈಕಲ್ಯ ಸಂಭವಿಸಿದಲ್ಲಿ ಅಂತಹ ವ್ಯಕ್ತಿಗಳಿಗೆ ಈ ವಿಮೆ ಪ್ರಯೋಜನಕಾರಿ.
ಅರ್ಹತೆ
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ಮಾಡಿಸಲು 18 ವರ್ಷಗಳನ್ನು ಪೂರೈಸಿರಬೇಕು. 18-70 ವರ್ಷದ ನಡುವಿನ ಪ್ರತಿಯೊಬ್ಬರೂ ಈ ವಿಮೆ ಮಾಡಿಸಬಹುದಾಗಿದ್ದು, ಉಳಿತಾಯ ಖಾತೆಯನ್ನು ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ.
ಪ್ರೀಮಿಯಂ ಮೊತ್ತ
ಸುರಕ್ಷಾ ವಿಮಾ ಯೋಜನೆಯ ಮಾಸಿಕ ಪ್ರೀಮಿಯಂ ಮೊತ್ತ ಕೆವಲ 1 ರೂಪಾಯಿ. ಅಂದರೆ ವಾರ್ಷಿಕವಾಗಿ ರೂ. 12 ಆಗುತ್ತದೆ. ಪ್ರತಿ ತಿಂಗಳಿಗೆ 1 ರೂಪಾಯಿ ಲೆಕ್ಕದಂತೆ 12 ತಿಂಗಳಿಗೆ 12 ರೂಪಾಯಿಗಳು ವಾರ್ಷಿಕ ಕಂತುವಿನ ರೂಪದಲ್ಲಿ ನಿಮ್ಮ ಉಳಿತಾಯ ಖಾತೆಯಿಂದ ಸುರಕ್ಷಾ ವಿಮಾ ಯೋಜನಾ ಖಾತೆಗೆ ಜಮೆಯಾಗುತ್ತದೆ.
ಇನ್ಸೂರೆನ್ಸ್ ಕವರ್
ಈ ಯೋಜನೆ ಅಡಿಯಲ್ಲಿ ವಿಮಾದಾರರು ಸೇವಾ ತೆರಿಗೆ ಹೊರತುಪಡಿಸಿ ರೂ. 2 ಲಕ್ಷದವರೆಗೆ ವಿಮಾ ಪರಿಹಾರ ಪಡೆಯುತ್ತಾರೆ. ವ್ಯಕ್ತಿ ಕೈ, ಕಾಲು ಅಥವಾ ದೇಹದ ಯಾವುದೇ ಭಾಗ ಕಳೆದುಕೊಂಡು ಅಂಗವೈಕಲ್ಯ ಅನುಭವಿಸಿದ್ದರೆ ರೂ. 2 ಲಕ್ಷ ವಿಮಾ ಪರಿಹಾರ ಸಿಗುತ್ತದೆ.
ಆಧಾರ್ ಕಾರ್ಡ್ ಕಡ್ಡಾಯ
ವಿಮಾದಾರರು ಗುರುತಿನ ದಾಖಲಾತಿಯಾಗಿ ಹಾಗೂ ಖಾತೆಯೊಂದಿಗೆ ಲಿಂಕ್ ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಸುರಕ್ಷಾ ವಿಮಾ ಯೋಜನೆಯ ಪ್ರೀಮಿಯಂ ಮೊತ್ತವನ್ನು ಸ್ವಯಂಚಾಲಿತವಾಗಿ ಚಂದಾದಾರರ ಉಳಿತಾಯ ಖಾತೆಗೆ ಜಮೆ ಆಗುತ್ತದೆ.
ಪ್ರೀಮಿಯಂ ಅವಧಿ
ಸುರಕ್ಷಾ ವಿಮಾ ಯೋಜನೆಯ ಪ್ರೀಮಿಯಂ ಅವಧಿ ಗರಿಷ್ಠ 70 ವರ್ಷಗಳಾಗಿರುತ್ತದೆ. ಮೆಚುರಿಟಿ ಲಾಭ ಇರುವುದಿಲ್ಲ. ಸಾವಿನ ನಂತರ ಯಾವುದೇ ಲಾಭಾಂಶ ಲಭ್ಯವಿರುವುದಿಲ್ಲ.
ತಜ್ಞರ ಅಭಿಮತ
ಹಣಕಾಸು ಭದ್ರತೆ ಇಲ್ಲದಿರುವ ಹಾಗೂ ವಿಮೆ ರಕ್ಷೆ ಇಲ್ಲದಿರುವ ಹೆಚ್ಚೆಚ್ಚು ಜನರಿಗೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅತ್ಯಗತ್ಯವಾಗಿ ಬೇಕು. ಮಧ್ಯಮ ವರ್ಗದ ಜನರು ಕೂಡ ಇಂತಹ ಯೋಜನೆಗಳ ಹೆಚ್ಚೆಚ್ಚು ಲಾಭ ಪಡೆಯಬೇಕು. ಜತೆಗೆ ಸರ್ಕಾರಗಳು ಮಧ್ಯಮ ವರ್ಗದವರಿಗೆ ಸಂಬಂಧಿತ ಉತತ್ಮ ಯೋಜನೆಗಳನ್ನು ರೂಪಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications