ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೆ ಜನವರಿ 31ರಂದು ತುಟ್ಟಿ ಭತ್ಯೆಯನ್ನು ಏರಿಕೆ ಮಾಡುವ ಸೂಚನೆ ಲಭ್ಯವಾಗಿದೆ. ಜನವರಿ 31ರಂದು ಅಖಿಲ ಭಾರತ ಗ್ರಾಹಕರ ದರ ಸೂಚ್ಯಂಕ (ಎಐಸಿಪಿಐ) ವರದಿಯನ್ನು ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಲಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಮತ್ತೆ ಡಿಎ ಹೆಚ್ಚಳದ ಬಗ್ಗೆ ಮಾಹಿತಿ ನೀಡಲಿದೆ.
ಎಐಸಿಪಿಐ ಸೂಚ್ಯಂಕ ಆಧಾರದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಘೋಷಣೆ ಮಾಡಲಾಗುತ್ತದೆ, ಲೆಕ್ಕಾಚಾರ ಮಾಡಲಾಗುತ್ತದೆ. ಈ ಸೂಚ್ಯಂಕವನ್ನು 88 ಸೆಂಟರ್ಗಳಿಗಾಗಿ ಸಿದ್ಧಪಡಿಸಲಾಗುತ್ತದೆ. ಪ್ರತಿ ತಿಂಗಳು ಎಐಸಿಪಿಐ ಸೂಚ್ಯಂಕ ವನ್ನು ಕೊನೆಯ ಕೆಲಸದ ದಿನದಂದು ಪ್ರಕಟಿಸುತ್ತದೆ. ಈ ಸಂದರ್ಭದಲ್ಲೇ ತುಟ್ಟಿ ಭತ್ಯೆ ಏರಿಕೆ ಘೋಷಣೆ ನಿರೀಕ್ಷೆಯಿದೆ.
ನವೆಂಬರ್ 2022ರಲ್ಲಿ ಎಐಸಿಪಿಐ ಸೂಚ್ಯಂಕವು 132.5 ಆಗಿದೆ. ಮುಂಬರುವ ಸೂಚ್ಯಂಕ ಅಂದರೆ ಡಿಸೆಂಬರ್ 2022ರ ಸೂಚ್ಯಂಕವು ಸ್ಥಿರವಾಗಿರುವ ಸಾಧ್ಯತೆಯಿದೆ. ಸ್ಥಿರವಾಗಿದ್ದರೆ ತುಟ್ಟಿ ಭತ್ಯೆ ಶೇಕಡ 3ರಷ್ಟು ಏರಿಕೆಯಾಗಲಿದೆ. ಇದರಿಂದಾಗಿ ಶೇಕಡ ತುಟ್ಟಿ ಭತ್ಯೆ ಅಥವಾ ಡಿಎ ಶೇಕಡ 38ರಿಂದ ಶೇಕಡ 41ಕ್ಕೆ ಏರಿಕೆಯಾಗಲಿದೆ.

ಈ ಹಿಂದೆ ಶೇಕಡ 4ರಷ್ಟು ಡಿಎ ಹೆಚ್ಚಳ
ಈ ಹಿಂದೆ ಏಳನೇ ವೇತನ ಆಯೋಗದ ಅಡಿಯಲ್ಲಿ 2022ರ ಸೆಪ್ಟೆಂಬರ್ 28ರಂದು ಕೇಂದ್ರ ಸಂಸತ್ತು ಡಿಎ ಶೇಕಡ 4ರಷ್ಟು ಏರಿಕೆ ಮಾಡಲು ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ 2022ರ ಜುಲೈ 1ರಿಂದ ಜಾರಿಗೆ ಬರುವಂತೆ ಈ ಡಿಎ ಏರಿಕೆಯನ್ನು ಮಾಡಲಾಗಿದೆ.
ಜೂನ್ 2022ರಲ್ಲಿ ಅಖಿಲ ಭಾರತ ಗ್ರಾಹಕರ ದರ ಸೂಚ್ಯಂಕ (ಎಐಸಿಪಿಐ) 12 ತಿಂಗಳ ಸರಾಸರಿಯಿಂದ ಏರಿಕೆಯಾದಾಗ ಈ ತುಟ್ಟಿ ಭತ್ಯೆ ಏರಿಕೆ ಘೋಷಣೆ ಮಾಡಲಾಗಿತ್ತು. ಹಾಗೆಯೆ ಜುಲೈ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಶೇಕಡ 4ರಷ್ಟು ಹೆಚ್ಚುವರಿ ತುಟ್ಟಿ ಭತ್ಯೆ ಲಭ್ಯವಾಗಿದೆ.
ಕೇಂದ್ರ ಸರ್ಕಾರವು ತಮ್ಮ ಸರ್ಕಾರಿ ನೌಕರರಿಗೆ ನೀಡುವ ತುಟ್ಟಿ ಭತ್ಯೆ ವಾರ್ಷಿಕವಾಗಿ 6,591.36 ಕೋಟಿ ರೂಪಾಯಿಗೆ ಏರುವ ನಿರೀಕ್ಷೆಯಿದೆ. 2022-23ರ ಹಣಕಾಸು ವರ್ಷದಲ್ಲಿ 4,394.24 ಕೋಟಿ ರೂಪಾಯಿ ಆಗುವ ಅಂದಾಜು ಇದೆ. ಇದು 2022ರ ಜುಲೈನಿಂದ 2023ರ ಫೆಬ್ರವರಿವರೆಗಿನ 8 ತಿಂಗಳ ಲೆಕ್ಕಾಚಾರವಾಗಿದೆ.
ಇನ್ನು ತುಟ್ಟಿ ಪರಿಹಾರ ವಾರ್ಷಿಕವಾಗಿ 6,261.20 ಕೋಟಿ ರೂಪಾಯಿಗೆ ಏರಿಕೆಯಾಗುವ, 2022-23ರ ಹಣಕಾಸು ವರ್ಷದಲ್ಲಿ (2022ರ ಜುಲೈನಿಂದ 2023ರ ಫೆಬ್ರವರಿವರೆಗಿನ 8 ತಿಂಗಳು) 4,174.12 ಕೋಟಿ ರೂಪಾಯಿ ಆಗುವ ಅಂದಾಜು ಇದೆ. ಈ ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರ ಸೇರಿ ವಾರ್ಷಿಕವಾಗಿ 12,852.56 ಕೋಟಿ ರೂಪಾಯಿ, 2022ರ ಜುಲೈನಿಂದ 2023ರ ಫೆಬ್ರವರಿವರೆಗಿನ 8 ತಿಂಗಳಿಗೆ 8,568.36 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications