ನವದೆಹಲಿ, ಅ. 17: ಜಾಗತಿಕವಾಗಿ ಬಹುತೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತದ ಸ್ಥಿತಿ ಇದೆ. ಅನೇಕ ಆರ್ಥಿಕತೆಗಳು ಬಿಕ್ಕಟ್ಟು ಅನುಭವಿಸುತ್ತಿವೆ. ಇವುಗಳ ಮಧ್ಯೆ ಭಾರತದ ಇದ್ದುದರಲ್ಲಿ ಉತ್ತಮ ಎಂಬಂತಿದೆ. ಅಂತೆಯೇ ಅಂತಾರಾಷ್ಟ್ರೀಯ ಹಣಕಾಸು ನಿಧಿ ಇತ್ತೀಚೆಗೆ ಭಾರತವನ್ನು ಬ್ರೈಟ್ ಸ್ಟಾರ್ ಎಂದು ಬಣ್ಣಿಸಿತ್ತು.
ಭಾರತದಲ್ಲಿ ರೂಪಾಯಿ ಕರೆನ್ಸಿ ಡಾಲರ್ ಎದುರು ಮಂಕಾಗುತ್ತಲೇ ಹೋಗುತ್ತಿದ್ದರೂ, ಹಣದುಬ್ಬರ ಸುರಕ್ಷಿತ ಮಟ್ಟದಿಂದ ಹೊರಗೇ ಇದ್ದರೂ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಸಮಾಧಾನಪಡುವಂತಹ ಸ್ಥಿತಿಯಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಇಂಬು ಕೊಡುವಂತೆ ಈ ಬಾರಿಯ ಹಬ್ಬದ ಋತುವಿನಲ್ಲಿ ಭಾರತದಲ್ಲಿ ನಡೆಯುತ್ತಿರುವ ವ್ಯಾಪಾರ ವಹಿವಾಟು ಗಮನಾರ್ಹ ರೀತಿಯಲ್ಲಿ ಇದೆ. ಇದು ನಮ್ಮ ಆರ್ಥಿಕತೆಯ ಆರೋಗ್ಯದ ಸಂಕೇತವೆಂದು ಭಾವಿಸಲಡ್ಡಿ ಇಲ್ಲ.
ಟಿವಿ, ಗೃಹ ಯಂತ್ರೋಪಕರಣ, ಎಂಎಂಸಿಜಿ ಆಹಾರ ಮತ್ತು ಆಹಾರೇತರ ವಸ್ತು, ಬಟ್ಟೆ ಇತ್ಯಾದಿ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷದ ಹಬ್ಬದ ಸೀಸನ್ನಲ್ಲಿ ಆಗಿದ್ದಕ್ಕಿಂತ ಈ ಬಾರಿ ಶೇ. 8ರಷ್ಟು ಮಾರಾಟ ಹೆಚ್ಚಳವಾಗಿರುವುದು ತಿಳಿದುಬಂದಿದೆ. ಇನ್ನು ದೀಪಾವಳಿ ಹಬ್ಬದವರೆಗೂ ಹಬ್ಬದ ಸೀಸನ್ ಇದೆ. ವ್ಯಾಪಾರ ಸಂಘಟನೆ ಸಿಎಐಟಿ ಪ್ರಕಾರ ದೀಪಾವಳಿ ಸೀಸನ್ನಲ್ಲಿ ಆಗುವ ವ್ಯಾಪಾರದಿಂದಾಗಿ 2.5 ಲಕ್ಷ ಕೋಟಿ ರೂ ಹಣವು ಮಾರುಕಟ್ಟೆಗೆ ಸಿಗಬಹುದು ಎನ್ನಲಾಗಿದೆ.

ಡಿಎ ಹೆಚ್ಚಳ
ಕೇಂದ್ರ ಸರಕಾರ ಇತ್ತೀಚೆಗೆ ಶೇ. 4ರಷ್ಟು ಡಿಎ ಹೆಚ್ಚಿಸಿರುವುದು ಆರ್ಥಿಕತೆಗೆ ಪುಷ್ಟಿಕೊಡುವ ನಿರೀಕ್ಷೆ ಇದೆ. ಡಿಎ ಹೆಚ್ಚಳವು 69.7 ಲಕ್ಷ ಪಿಂಚಣಿದಾರರು ಮತ್ತು 41.8 ಲಕ್ಷ ಕೇಂದ್ರ ಸರಕಾರ ಉದ್ಯೋಗಿಗಳ ಜೇಬಿಗೆ ಹೆಚ್ಚು ಹಣ ಭರ್ತಿ ಮಾಡುತ್ತದೆ. ಇದರಿಂದ ಆರ್ಥಿಕತೆಗೆ ಒಂದು ರೀತಿಯಲ್ಲಿ ಉತ್ತೇಜಕವಾಗಿ ಕೆಲಸ ಮಾಡಬಹುದು ಎಂದು ಸಿಎಐಟಿ ನಿರೀಕ್ಷಿಸಿದೆ.
ಇದರ ಜೊತೆಗೆ ರೈಲ್ರೋಡ್ ಕಾರ್ಮಿಕರಿಗೆ ಉತ್ಪನ್ನತೆ ಆಧಾರಿತ ಬೋನಸ್ (ಪಿಎಲ್ಬಿ) ಅನ್ನು ನೀಡಲಾಗಿದೆ. ಲಕ್ಷಾಂತರ ಸಂಖ್ಯೆಯ ಕಾರ್ಮಿಕರಿಗೆ 78 ದಿನಗಳ ಹೆಚ್ಚುವರಿ ಸಂಬಳ ಸಿಕ್ಕಂತಾಗುತ್ತದೆ. ಡಿಎ ಮತ್ತು ಪಿಎಲ್ಬಿ ಕ್ರಮಗಳಿಂದಾಗಿ ಆರ್ಥಿಕತೆಗೆ ಸಾವಿರಾರು ಕೋಟಿ ರೂ ಹರಿದುಬರುತ್ತದೆ ಎಂಬುದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಅನಿಸಿಕೆ.

ಗೃಹೋಪಕರಣಗಳ ಮಾರಾಟ
ಗಣೇಶ ಹಬ್ಬದಿಂದ ಶುರುವಾದ ಹಬ್ಬದ ಸೀಸನ್ನಲ್ಲಿ ದಸರಾ, ನವರಾತ್ರಿಯ ಪ್ರಮುಖ ಹಂತ ಹಾದು ಹೋಗಿದೆ. ಈಗ ಅಕ್ಟೋಬರ್ ಕೊನೆಯ ವಾರದಲ್ಲಿರುವ ದೀಪಾವಳಿಯಲ್ಲಿ ಸೀಸನ್ ಉಚ್ಛ ಸ್ಥಿತಿ ಮುಟ್ಟುತ್ತದೆ. ನವರಾತ್ರಿಯಲ್ಲಿ ಮಾರಾಟಕ್ಕೆ ಪುಷ್ಟಿ ಸಿಕ್ಕಿತ್ತು. ಈಗ ದೀಪಾವಳಿಯಲ್ಲಿ ಮಾರಾಟ ಉಚ್ಛ್ರಾಯ ಸ್ಥಿತಿ ತಲುಪಬಹುದು. ಎಲ್ಇಡಿ ಟಿವಿ, ವಾಷಿಂಗ್ ಮೆಷಿನ್, ಫ್ರಿಡ್ಜ್ ಇತ್ಯಾದಿ ಉತ್ಪನ್ನಗಳ ಮಾರಾಟ ಗರಿಷ್ಠ ಮಟ್ಟಕ್ಕೆ ಬರಲಿದೆ ಎಂದು ಕನ್ಸೂಮರ್ ಎಲೆಕ್ಟ್ರಾನಿಕ್ಸ್ ತಯಾರಕರ ಸಂಘಟನೆ ಅಂದಾಜು ಮಾಡಿದೆ.
ಡಾಬರ್ ಇಂಡಿಯಾದ ಅಧಿಕಾರಿ ಆದರ್ಶ್ ಶರ್ಮಾ ಕೂಡ ಇದೇ ನಿರೀಕ್ಷೆಲ್ಲಿದ್ದಾರೆ. "ಹಬ್ಬದ ಸೀಸನ್ ಮೇರು ಸ್ಥಿತಿಗೆ ಹೋಗುತ್ತಿರುವಂತೆಯೇ ಗ್ರಾಹಕರ ಖರೀದಿ ಮನೋಭಾವ ಕೂಡ ಹೆಚ್ಚಬಹುದು ಎಂದು ನಿರೀಕ್ಷಿಸಿದ್ದೇವೆ. ಆಹಾರ, ಪಾನೀಯ, ಸೌಂದರ್ಯವರ್ದಕ ಉತ್ಪನ್ನಗಳು ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಾರಾಟ ಕಾಣಬಹುದು" ಎಂದು ಅವರು ಹೇಳಿದ್ದಾರೆ.
ಇನ್ನು, ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘಟನೆ (ಆರ್ಎಐ) ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ಕೋವಿಡ್ ಮುಂಚೆಗಿಂತಲೂ ಈ ಬಾರಿಯ ಹಬ್ಬದ ಸೀಸನ್ನಲ್ಲಿ ಉತ್ತಮ ವ್ಯಾಪಾರ ನಡೆದಿದೆಯಂತೆ. 2019ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 2022ರ ಸೆಪ್ಟೆಂಬರ್ ತಿಂಗಳಲ್ಲಿ ರೀಟೇಲ್ ಮಾರಾಟ ಪ್ರಮಾಣದಲ್ಲಿ ಶೇ 21ರಷ್ಟು ಹೆಚ್ಚಳವಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications