ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ ಆದಾಯ ತೆರಿಗೆ ನಿಯಮ, 1962ಕ್ಕೆ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ, ಯಾವುದೇ ವ್ಯಕ್ತಿಗೆ ಒಂದು ದಿನದಲ್ಲಿ ನೀಡಬಹುದಾದ ಗರಿಷ್ಠ ನಗದು ಪ್ರಮಾಣವನ್ನು ಇಳಿಕೆ ಮಾಡಲಾಗಿದೆ. ಒಬ್ಬ ವ್ಯಕ್ತಿಗೆ ಒಂದು ದಿನದಲ್ಲಿ ಸರಾಸರಿ 20,000ಕ್ಕಿಂತ ಹೆಚ್ಚು ನಗದು ಪಾವತಿ ಯಾವಾಗ ಮಾಡಬಹುದು ಎಂಬುದನ್ನು ಆದಾಯ ತೆರಿಗೆ ನಿಯಮ 6DDಯಲ್ಲಿ ವಿವರಿಸಲಾಗಿದೆ.
ಒಂದೋ ಅಕೌಂಟ್ ಪೇಯಿ ಬ್ಯಾಂಕ್ ಚೆಕ್ ನೀಡಬೇಕು ಅಥವಾ ಅಕೌಂಟ್ ಪೇಯಿ ಬ್ಯಾಂಕ್ ಡ್ರಾಫ್ಟ್ ನೀಡಬೇಕು. ತೆರಿಗೆ ನಿಯಮದ ಪ್ರಕಾರ, ಇದೀಗ ಗರಿಷ್ಠ ನಗದು ಮೊತ್ತ 10,000 ರುಪಾಯಿ ಮಾತ್ರ ನೀಡಬಹುದಾಗಿದೆ.
ತಿದ್ದುಪಡಿಯಾದ 6DD ನಿಯಮ ಹೇಳುವ ಪ್ರಕಾರ, 6ABBA ವಿವರಿಸುವಂತೆ ಎಲೆಕ್ಟ್ರಾನಿಕ್ ವಿಧಾನದ ಮೂಲಕ ಅಥವಾ ಬ್ಯಾಂಕ್ ಖಾತೆಯ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ ಮೂಲಕ, ಅಕೌಂಟ್ ಪೇಯಿ ಬ್ಯಾಂಕ್ ಡ್ರಾಫ್ಟ್ ಅಥವಾ ಅಕೌಂಟ್ ಪೇಯಿ ಚೆಕ್ ಮೂಲಕ ಹಣ ನೀಡಬಹುದು. ಇಲ್ಲದಿದ್ದಲ್ಲಿ ಸರಾಸರಿ ಮೊತ್ತ 10,000 ರುಪಾಯಿ ನಗದು ಮೊತ್ತಕ್ಕಿಂತ ಹೆಚ್ಚಿನದನ್ನು ಒಬ್ಬ ವ್ಯಕ್ತಿಗೆ ಒಂದು ದಿನದಲ್ಲಿ ನೀಡಬಾರದು.

ಸೆಪ್ಟೆಂಬರ್ 1. 2019ರಿಂದ 6ABBA ವಿವರಿಸಿರುವಂತೆ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ವಿಧಾನದಲ್ಲಿ ಪಾವತಿ ಅಂದರೆ:
ಕ್ರೆಡಿಟ್ ಕಾರ್ಡ್
ಡೆಬಿಟ್ ಕಾರ್ಡ್
ನೆಟ್ ಬ್ಯಾಂಕಿಂಗ್
ಐಎಂಪಿಎಸ್
ಯುಪಿಐ
ಆರ್ ಟಿಜಿಎಸ್
ಎನ್ ಇಎಫ್ ಟಿ
ಬಿಎಚ್ ಐಎಂ ಮೂಲಕ ಪಾವತಿ ಮಾಡುವಂಥ ವಿಧಾನ.
ಕೇಂದ್ರೀಯ ನೇರ ತೆರಿಗೆ ಮಂಡಳಿಯು ಆದಾಯ ತೆರಿಗೆ ನಿಯಮ 1962ಕ್ಕೆ ತಿದ್ದುಪಡಿ ತಂದಿದೆ. ಹೊಸ ನಿಯಮವನ್ನು ಆದಾಯ ತೆರಿಗೆ (ಮೂರನೇ ತಿದ್ದುಪಡಿ) ನಿಯಮ, 2020 ಎಂದು ಕರೆಯಲಾಗಿದೆ. ಸರಳವಾಗಿ ಹೇಳಬೇಕು ಅಂದರೆ, ಎಲ್ಲೆಲ್ಲಿ ಅನ್ವಯ ಆಗುತ್ತದೋ ಅಲ್ಲೆಲ್ಲ ಎಲೆಕ್ಟ್ರಾನಿಕ್ ವಿಧಾನದಲ್ಲಿ ಬಿಟ್ಟು ಬೇರೆ ಯಾವುದೇ ವಿಧಾನದಲ್ಲಿ ಅಂದರೆ, ನಗದು ಪಾವತಿ ಮಾಡುವುದಾದರೆ ಒಂದು ದಿನಕ್ಕೆ 10,000 ರುಪಾಯಿಗೆ ನಿಗದಿ ಮಾಡಲಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications