ಕಳೆದ ಕೆಲವು ವಾರಗಳಿಂದ ಖಾದ್ಯ ತೈಲ, ಹತ್ತಿ ಹಾಗೂ ಕೋಳಿ ಬೆಳೆಯು ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲೇ ಹಲವಾರು ತಿಂಗಳುಗಳಿಂದ ದೇಶದ ಆರ್ಥಿಕ ಸ್ಥಿತಿಗೆ ಸಮಸ್ಯೆಯಾಗಿರುವ ಈರುಳ್ಳಿ, ಕಾಳು, ಸಕ್ಕರೆ ಬೆಲೆಯು ಯಥಾಸ್ಥಿತಿ ಕಾಯ್ದುಕೊಂಡಿದೆ.
ಸಕ್ಕರೆ ರಫ್ತಿನ ಮೇಲೆ ಸರ್ಕಾರ ಈಗಾಗಲೇ ನಿರ್ಬಂಧವನ್ನು ಹೇರಿದೆ. ಈ ಮೂಲಕ ಸಕ್ಕರೆ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಿದೆ. ಈ ಕಾರಣದಿಂದಾಗಿ ಸದ್ಯಕ್ಕೆ ಸಕ್ಕರೆ ಬೆಲೆಯು ಅಧಿಕವಾಗುವ ಯಾವುದೇ ಸಾಧ್ಯತೆ ಇಲ್ಲ. ಕೇಂದ್ರ ಸರ್ಕಾರವು ಜೂನ್ 1 ರಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಿ ಆದೇಶವನ್ನು ಹೊರಡಿಸಿದೆ. ಪ್ರಮುಖವಾಗಿ ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಿದೆ.
ಸಾಮಾನ್ಯವಾಗಿ ಮಾನ್ಸೂನ್ ಆರಂಭವಾಗುವ ಸಂದರ್ಭದಲ್ಲಿ ಈರುಳ್ಳಿ, ಕಾಳು ಬೆಲೆಯು ಹೆಚ್ಚಳವಾಗುತ್ತದೆ. ಅದರಂತೆಯೇ ಈ ವರ್ಷವು ಈರುಳ್ಳಿ, ಕಾಳು ಬೆಲೆಯು ಅಧಿಕವಾಗಿದೆ. ಆದರೆ ತೀವ್ರ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲೂ ಈರುಳ್ಳಿ, ಕಾಳು ಬೆಲೆಯು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಕೋಳಿ, ಖಾದ್ಯ ತೈಲ ಬೆಲೆ ಇಳಿಕೆ
ಈ ಸಂದರ್ಭದಲ್ಲಿ ಕೋಳಿಯ ಬೆಲೆಯು ಕಳೆದ ಹದಿನೈದು ದಿನದಲ್ಲಿ ಶೇಕಡ 8-10ರಷ್ಟು ಇಳಿದಿದೆ. ಈ ಸಂದರ್ಭದಲ್ಲಿ ಖಾದ್ಯ ತೈಲ ರಿಟೇಲ್ ಬೆಲೆಯು ಸುಮಾರು ಪ್ರತಿ ಲೀಟರ್ಗೆ 10-15 ರೂಪಾಯಿ ಇಳಿದಿದೆ. ಇನ್ನು ಕಚ್ಚಾ ಪಾಮ್ ಆಯಿಲ್ ಆಮದು ಬೆಲೆಯಲ್ಲಿ ಸುಮಾರು ಶೇಕಡ 20 ಕುಸಿದಿದೆ. ಕಳೆದ ತಿಂಗಳು ಪ್ರತಿ ಟನ್ಗೆ 1,695 ಡಾಲರ್ ಆಗಿತ್ತು. ಆದರೆ ಶೇಕಡ 20ರಷ್ಟು ಕಡಿತವಾದ ಬಳಿಕ ಪ್ರತಿ ಟನ್ಗೆ 1,350 ಡಾಲರ್ ಆಗಿದೆ.
ಹತ್ತಿ ಬೆಲೆಯು ಇಳಿಕೆ
ಇನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಹತ್ತಿ ಬೆಲೆಯು ಕೂಡಾ ಇಳಿಕೆ ಕಂಡಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು ಶೇಕಡ 10-12ರಷ್ಟು ಹತ್ತಿ ಬೆಲೆ ಇಳಿದಿದೆ. ಈ ಸಂದರ್ಭದಲ್ಲೇ ಜಾಗತಿಕವಾಗಿ ಐಸಿಇ ಫ್ಯೂಚರ್ಸ್ನಲ್ಲಿ ಹತ್ತಿ ಬೆಲೆಯು ಶೇಕಡ 25ರಷ್ಟು ಇಳಿದಿದೆ ಎಂದು ಮಹಾರಾಷ್ಟ್ರ ಹತ್ತಿ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಬಿಎಸ್ ರಾಜ್ಪಾಲ್ ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ಗಿರಣಿಗಳಲ್ಲಿ ಹತ್ತಿ ಬಳಕೆಯು ಶೇಕಡ 30-35ರಷ್ಟು ಇಳಿಕೆಯಾಗಿದೆ. ಈ ಕಾರಣದಿಂದಾಗಿ ಹತ್ತಿ ಬೆಲೆಯು ಇಳಿಕೆಯಾಗಿದೆ.
ಕಾಳುಗಳ ಬೆಲೆ ಸ್ಥಿರ
ಮಾನ್ಸೂನ್ ಆರಂಭವಾದ ಬೆನ್ನಲ್ಲೇ ಕಾಳುಗಳ ಬೆಲೆಯು ಅಧಿಕವಾಗುತ್ತದೆ. ಆದರೆ ಆಮದು ಮಾಡಿರುವ ಕಾರಣದಿಂದಾಗಿ ಬೆಲೆಯು ಸ್ಥಿರವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಈ ನಡುವೆ ಮೊಟ್ಟೆ ಬೆಲೆಯು ಅಧಿಕವಾಗುತ್ತಿದೆ. ಹಾಗೆಯೇ ಬಾಯಿಲರ್ ಕೋಳಿ ಬೆಲೆಯು ಕೂಡಾ ಹೆಚ್ಚಾಗುತ್ತಿದೆ.
More From GoodReturns

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications