ನವದೆಹಲಿ, ಆಗಸ್ಟ್ 18: ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಮಂಗಳವಾರದಂದು ಆರಂಭಿಸಿದ ಹೊಸ ಅಭಿಯಾನವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ವೈಯಕ್ತಿಕ ಲ್ಯಾಪ್ಸ್ಡ್ ಆದ ವಿಮೆ ಪಾಲಿಸಿಗಳ ಪುನರುಜ್ಜೀವನಕ್ಕಾಗಿ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಈ ವಿಶೇಷ ಅಭಿಯಾನವು ಆಗಸ್ಟ್ 17 ರಿಂದ ಅಕ್ಟೋಬರ್ 21, 2022ರ ತನಕ ಜಾರಿಯಲ್ಲಿರಲಿದೆ. ನಾನ್- Unit linked Insurance Plan(ಯುಲಿಪ್) ಪಾಲಿಸಿಗಳಿಗೂ ಇದು ಅನ್ವಯವಾಗಲಿದೆ. ಲೇಟ್ ಫೀ ಕೂಡಾ ಕಡಿಮೆ ವೆಚ್ಚದಲ್ಲಿರಲಿದೆ ಎಂದು ಸಂಸ್ಥೆ ಹೇಳಿದೆ. ಯುಲಿಪ್ ಹೊರತುಪಡಿಸಿ ಎಲ್ಲಾ ವಿಮಾ ಪಾಲಿಸಿಗಳನ್ನು ಐದು ವರ್ಷದೊಳಗೆ ರಿನ್ಯೂ ಮಾಡಬಹುದಾಗಿದ್ದು, ಮೊದಲ ಪ್ರೀಮಿಯಂ ಅನ್ ಪೇಯ್ಡ್ ಅವಧಿಯಿಂದ ಲೆಕ್ಕಕ್ಕೆ ಬರಲಿದೆ.
ಮೈಕ್ರೋ ಇನ್ಶೂರೆನ್ಸ್ ಪಾಲಿಸಿಗಳಿಗೆ ವಿಳಂಬ ಶುಲ್ಕದ 100 ಪ್ರತಿಶತ ಮನ್ನಾ ಇದೆ ಎಂದು ಸಂಸ್ಥೆ ಹೇಳಿದೆ. ಅನಿವಾರ್ಯ ಸಂದರ್ಭಗಳಲ್ಲಿ ಪ್ರೀಮಿಯಂಗಳನ್ನು ಪಾವತಿಸಲು ಸಾಧ್ಯವಾಗದ ಮತ್ತು ಅವರ ಪಾಲಿಸಿ ಲ್ಯಾಪ್ಸ್ ಆಗಿರುವ ಪಾಲಿಸಿದಾರರಿಗೆ ಅನುಕೂಲವಾಗುವಂತೆ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಜೀವ ವಿಮಾ ರಕ್ಷಣೆಯು ಅಪಾಯ ನಿರ್ವಹಣೆಯಾಗಿದ್ದು, ಆಕಸ್ಮಿಕ, ಅನಿರೀಕ್ಷಿತ ಜೀವಹಾನಿಗಾಗಿ, ಈ ಅಭಿಯಾನವು ಎಲ್ಐಸಿಯ ಪಾಲಿಸಿದಾರರಿಗೆ ತಮ್ಮ ಲ್ಯಾಪ್ಸ್ಡ್ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಅವರ ಕುಟುಂಬದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ವಿಮೆಯ ಪ್ರಯೋಜನವನ್ನು ಮುಂದುವರಿಸಲು ಅವಕಾಶವನ್ನು ನೀಡುತ್ತದೆ ಎಂದು ಅದು ಹೇಳಿದೆ.
ರೂ 1 ಲಕ್ಷದವರೆಗಿನ ಒಟ್ಟು ಸ್ವೀಕಾರಾರ್ಹ ಪ್ರೀಮಿಯಂಗೆ, ವಿಮಾದಾರರು 25 ಪ್ರತಿಶತ ರಿಯಾಯಿತಿಯನ್ನು ವಿಳಂಬ ಶುಲ್ಕದಲ್ಲಿ ನೀಡುತ್ತಿದ್ದಾರೆ, ಗರಿಷ್ಠ ಮಿತಿ ರೂ 2,500, ಆದರೆ ರೂ 1-3 ಲಕ್ಷ ಮೊತ್ತದ ಪ್ರೀಮಿಯಂಗೆ ಗರಿಷ್ಠ ರಿಯಾಯಿತಿ ರೂ 3,000 ಆಗಿದೆ. . ಅದೇ ರೀತಿ, ರೂ 3 ಲಕ್ಷಕ್ಕಿಂತ ಹೆಚ್ಚಿನ ಪ್ರೀಮಿಯಂ ಮೊತ್ತಕ್ಕೆ, 30 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ ಮತ್ತು ರೂ 3,500 ರ ಮಿತಿಯೊಂದಿಗೆ ನೀಡಲಾಗುತ್ತದೆ. ಪಿಟಿಐ
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications