ಅವಧಿ ಮುಗಿದ ಅಥವಾ ಲ್ಯಾಪ್ಸ್ ಆದ ಪಾಲಿಸಿಗಳಿಗೆ ಮತ್ತೆ ಚಾಲನೆ ನೀಡಲು ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ (LIC) 2 ತಿಂಗಳ ವಿಶೇಷ ಅವಕಾಶವನ್ನು ನೀಡಲಾಗುತ್ತಿದೆ. ಆಗಸ್ಟ್ 10ರಿಂದ ಈ ವಿಶೇಷ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಅಕ್ಟೋಬರ್ 9ನೇ ತಾರೀಕಿನ ತನಕ ಇದು ನಡೆಯುವುದು.
ಅನಿವಾರ್ಯ ಕಾರಣಗಳಿಗಾಗಿ ಪ್ರೀಮಿಯಂ ಪಾವತಿ ಮಾಡಲು ಸಾಧ್ಯವಾಗದೆ, ಪಾಲಿಸಿ ಲ್ಯಾಪ್ಸ್ ಆದವರ ಅನುಕೂಲಕ್ಕಾಗಿ ಈ ಅಭಿಯಾನ ಆರಂಭಿಸಲಾಗಿದೆ. ಇನ್ಷೂರೆನ್ಸ್ ಕವರ್ ಆಗುವುದಕ್ಕೆ ಹಳೆಯ ಪಾಲಿಸಿಗಳಿಗೆ ಮತ್ತೆ ಚಾಲನೆ ನೀಡುವುದು ಉತ್ತಮ ನಿರ್ಧಾರ ಎಂದು ಎಲ್ ಐಸಿ ತಿಳಿಸಿದೆ.

ಈ ಸಂದರ್ಭದಲ್ಲಿ ಎಲ್ ಐಸಿ ನೀಡಿರುವ ವಿಶೇಷ ಆಫರ್ ಬಗ್ಗೆ ತಿಳಿದುಕೊಳ್ಳಬೇಕಾದ ಐದು ಅಂಶಗಳು ಹೀಗಿವೆ:
* ವೈದ್ಯಕೀಯ ಅಗತ್ಯಗಳು ಇದ್ದಲ್ಲಿ ಅದರಿಂದ ವಿನಾಯಿತಿ ನೀಡುವುದಿಲ್ಲ. ಕೊರೊನಾ ವೈರಸ್ ಬಿಕ್ಕಟ್ಟು ಇದ್ದರೂ ಈಗಿನ ಸನ್ನಿವೇಶವನ್ನು ಮುಂದು ಮಾಡಿಕೊಂಡು, ವೈದ್ಯಕೀಯ ಅಗತ್ಯಗಳು ಪೂರೈಸಬೇಕಾದ್ದುದರಿಂದ ಯಾವ ವಿನಾಯಿತಿ ಸಿಗಲ್ಲ.
* ವಿನಾಯಿತಿಯು ಲೇಟ್ ಫೀಗೆ (ತಡವಾಗಿ ಪ್ರೀಮಿಯಂ ಪಾವತಿ ಮಾಡಿದಲ್ಲಿ ವಿಧಿಸುವ ಶುಲ್ಕಕ್ಕೆ) ಮಾತ್ರ ಅನ್ವಯಿಸುತ್ತದೆ. ಟರ್ಮ್ ಇನ್ಷೂರೆನ್ಸ್, ಹೆಲ್ತ್ ಇನ್ಷೂರೆನ್ಸ್ ಹಾಗೂ ಮಲ್ಟಿಪಲ್ ರಿಸ್ಕ್ ಪಾಲಿಸಿಗಳಂಥವುಕ್ಕೆ ಲೇಟ್ ಫೀ ವಿನಾಯಿತಿ ಸಿಗುವುದಿಲ್ಲ.
* ಪ್ರೀಮಿಯಂ ಪಾವತಿಯ ಅವಧಿ ಇನ್ನೂ ಬಾಕಿ ಇರುವಂತೆಯೇ ಪಾಲಿಸಿ ಲ್ಯಾಪ್ಸ್ ಆಗಿದ್ದಲ್ಲಿ ಹಾಗೂ ಪಾಲಿಸಿಯ ಅವಧಿ ಪೂರ್ಣಗೊಳ್ಳದೆ ಇದ್ದಲ್ಲಿ ಮಾತ್ರ ಈಗಿನ ಅಭಿಯಾನದಲ್ಲಿ ಮತ್ತೆ ಪಾಲಿಸಿಗೆ ಚಾಲನೆ ನೀಡಲು ಅರ್ಹವಾಗಿರುತ್ತದೆ.
* ಎಲ್ಲಿಂದ ಪ್ರೀಮಿಯಂ ಪಾವತಿಸಿಲ್ಲವೋ, ಆ ಮೊದಲ ಪ್ರೀಮಿಯಂ ಬಾಕಿ ಉಳಿಸಿಕೊಂಡ ಐದು ವರ್ಷದೊಳಗೆ ನಿರ್ದಿಷ್ಟ ಅರ್ಹತಾ ಪ್ಲಾನ್ ಗಳಿಗೆ ಮಾತ್ರ ಮತ್ತೆ ಚಾಲನೆ ನೀಡಬಹುದು. ಆದರೆ ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ.
* ಇನ್ನು ಲೇಟ್ ಫೀ ವಿನಾಯಿತಿ ಎಂದು ಗರಿಷ್ಠ 1500ರಿಂದ 2500 ರುಪಾಯಿ ಮಧ್ಯೆ ವಿನಾಯಿತಿ ನೀಡಲಾಗುತ್ತದೆ. 1,00,000 ರುಪಾಯಿ ತನಕ 20% ಲೇಟ್ ಫೀ ವಿನಾಯಿತಿ, ಗರಿಷ್ಠ 1500 ರುಪಾಯಿ ಮತ್ತು 1,00,001 ರುಪಾಯಿಯಿಂದ 3,00,000 ರು. ತನಕ 25% ಲೇಟ್ ಫೀ ವಿನಾಯಿತಿ, ಗರಿಷ್ಠ 2000 ರುಪಾಯಿ ಹಾಗೂ 3,00,001 ರುಪಾಯಿ ಮೇಲ್ಪಟ್ಟು 30% ಲೇಟ್ ಫೀ, ಗರಿಷ್ಠ ವಿನಾಯಿತಿ 2500 ರುಪಾಯಿ ದೊರೆಯುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications