ಭಾರತದ ಹೊರಗೆ ಇದ್ದು ಹಣ ಗಳಿಸುತ್ತಿರುವವರು ಈ ಎರಡು ಹೊಸ ನಿಯಮಗಳನ್ನು ಖಂಡಿತಾ ಗಮನಿಸಬೇಕು.
ಅನಿವಾಸಿ ಭಾರತೀಯ ಎಂದು ಇನ್ನು ಮುಂದೆ ಕರೆಸಿಕೊಳ್ಳಬೇಕಾದರೆ ಭಾರತೀಯರು 240 ಮತ್ತು ಅದಕ್ಕಿಂತ ಹೆಚ್ಚು ದಿನ ವಿದೇಶದಲ್ಲಿ ಇರಬೇಕು. ಈ ಹಿಂದೆ 182 ದಿನಗಳು ಇದ್ದಲ್ಲಿ ಅನಿವಾಸಿ ಎನ್ನಲಾಗುತ್ತಿತ್ತು. ಒಂದು ವರ್ಷದಲ್ಲಿ 120 ದಿನ ಮತ್ತು ಅದಕ್ಕಿಂತ ಹೆಚ್ಚು ಅವಧಿಗೆ ಭಾರತದಲ್ಲಿ ಇದ್ದಲ್ಲಿ ಅನಿವಾಸಿ ಎಂದು ಗುರುತಿಸಿಕೊಳ್ಳಲು ಸಾಧ್ಯವಿಲ್ಲ.
ಈ ಬಗ್ಗೆ ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಶನಿವಾರ ಮಾತನಾಡಿದ್ದಾರೆ. "ನಾವು ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆ ಮಾಡಿದ್ದೀವಿ. ವಿದೇಶದಲ್ಲಿ 182 ಮತ್ತು ಅದಕ್ಕಿಂತ ಹೆಚ್ಚು ದಿನ ಭಾರತೀಯರು ಇದ್ದಲ್ಲಿ ಅನಿವಾಸಿ ಆಗುತ್ತಿದ್ದರು. ಈಗ ಅನಿವಾಸಿ ಆಗಬೇಕಿದ್ದರೆ 240 ದಿನಗಳ ಕಾಲ ದೇಶದಿಂದ ಹೊರಗೆ ಇರಬೇಕು" ಎಂದಿದ್ದಾರೆ.

ಇನ್ನೂ ಒಂದು ನಿಯಮ ಬಂದಿದ್ದು, ಅನಿವಾಸಿ ಭಾರತೀಯರಾಗಿದ್ದು, ಅವರಿರುವ ದೇಶದಲ್ಲಿ ತೆರಿಗೆ ಹಾಕುತ್ತಿಲ್ಲ ಎಂದಾದಲ್ಲಿ ಭಾರತದಲ್ಲಿ ತೆರಿಗೆ ಬೀಳಲಿದೆ. ಯಾವುದೇ ಭಾರತೀಯ ಪ್ರಜೆಯು ವಿಶ್ವದ ಯಾವುದೇ ದೇಶದ ನಿವಾಸಿಯಲ್ಲದಿದ್ದಲ್ಲಿ ಅವರನ್ನು ಭಾರತದ ನಿವಾಸಿ ಎಂದು ಪರಿಗಣಿಸಿ, ವಿಶ್ವದಾದ್ಯಂತದ ಆದಾಯಕ್ಕೆ ತೆರಿಗೆ ಹಾಕಲಾಗುವುದು ಎಂದು ಪಾಂಡೆ ತಿಳಿಸಿದ್ದಾರೆ.
ಹಲವು ಭಾರತೀಯರು ವಿದೇಶಗಳಲ್ಲಿ ನೆಲೆಸಿದ್ದು, ದುಬೈನಂಥ ದೇಶಗಳಲ್ಲಿ ಆದಾಯ ತೆರಿಗೆ ಕಡಿಮೆ ಅಥವಾ ಇಲ್ಲವೇ ಇಲ್ಲ. ಈಗ, ಅವರು ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರುವಂತಿದ್ದರೆ ಭಾರತದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ ಎಂದು ತೆರಿಗೆ ತಜ್ಞರು ತಿಳಿಸಿದ್ದಾರೆ.
ಇದೀಗ ಭಾರತೀಯರಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಪದ್ಧತಿ ಪರಿಚಯಿಸಿದ್ದಾರೆ. ಅದರ ಪ್ರಕಾರ ಸೆಕ್ಷನ್ 80C ಅಡಿಯಲ್ಲಿ ಯಾವುದೇ ತೆರಿಗೆ ವಿನಾಯಿತಿ ಸಿಗಲ್ಲ. ಮನೆ ಸಾಲ ವಿನಾಯಿತಿ, ವಿಮೆ ವಿನಾಯಿತಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಇದು ಕೂಡ ಹೊಸ ತೆರಿಗೆ ಪದ್ಧತಿಯಡಿ ದೊರೆಯುವುದಿಲ್ಲ.
ಹೊಸ ತೆರಿಗೆ ಪದ್ಧತಿಯು ತೆರಿಗೆ ಪಾವತಿದಾರರ ಆಯ್ಕೆಗೆ ಬಿಟ್ಟದ್ದು. ಹಳೇ ಪದ್ಧತಿ ಅಡಿ ವಿನಾಯಿತಿ ಹಾಗೂ ಕಡಿತದ ಪ್ರಯೋಜನ ಪಡೆಯಬಹುದು. ಅಥವಾ ಯಾವುದೇ ವಿನಾಯಿತಿ, ಕಡಿತ ಇಲ್ಲದೆ ಹೊಸದಾಗಿ ಪರಿಚಯಿಸಿದ ಕಡಿಮೆ ದರದ ತೆರಿಗೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications