ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಸುರಕ್ಷಿತ ಹೂಡಿಕೆಯಲ್ಲಿ ಒಂದಾಗಿದೆ. ಇಪಿಎಫ್ ಲಕ್ಷಾಂತರ ಉದ್ಯೋಗಿಗಳ ಪ್ರಮುಖ ಹಣಕಾಸು ಯೋಜನೆ ಮತ್ತು ನಿವೃತ್ತಿ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ.
ಖಚಿತವಾದ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುವ ಇಪಿಎಫ್ ಉತ್ತಮ ಹೂಡಿಕೆಯಾಗಿದೆ. Exempt, Exempt, Exempt scheme (ಇಇಇ) ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ಈ ನಿಧಿಯನ್ನು ಹಿಂಪಡೆಯಲು ಕೂಡಾ ಸಾಧ್ಯವಾಗುತ್ತದೆ.
ಆದರೆ ಇಪಿಎಫ್ಗೆ ನೀಡುವ ಕೊಡುಗೆಗಳಿಗಾಗಿ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಲಭ್ಯವಿರುವ ತೆರಿಗೆ ಪ್ರಯೋಜನಗಳಿಗೆ ಸರ್ಕಾರವು ತಿದ್ದುಪಡಿಗಳನ್ನು ತಂದಿದೆ. ಏಪ್ರಿಲ್ 1, 2022 ರಿಂದ ಭವಿಷ್ಯ ನಿಧಿ ಖಾತೆಗಳನ್ನು ತೆರಿಗೆ ಮತ್ತು ತೆರಿಗೆ ರಹಿತ ಖಾತೆಗಳಾಗಿ ವಿಂಗಡಿಸಲಾಗಿದೆ. ಇಇಇ ಯೋಜನೆಯಿಂದ ಲಾಭ ಪಡೆಯುವ ಹೆಚ್ಚಿನ ಆದಾಯ ಗಳಿಸುವವರನ್ನು ಗುರಿಯಾಗಿಸಲು ತೆರಿಗೆ ಪ್ರಯೋಜನಗಳನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಇಲ್ಲಿದೆ ಪ್ರಮುಖ ಹತ್ತು ಮಾಹಿತಿ ಮುಂದೆ ಓದಿ...

ಪ್ರಮುಖ ಮಾಹಿತಿ ಇಲ್ಲಿದೆ
* ಹಣಕಾಸು ವರ್ಷ 2021-22 ಕ್ಕೆ ಇಪಿಎಫ್ಒ ಬಡ್ಡಿದರವನ್ನು ನಾಲ್ಕು ದಶಕಗಳ ಕನಿಷ್ಠ ಶೇಕಡಾ 8.1 ಕ್ಕೆ ಇಳಿಸಿದೆ.
* ಉದ್ಯೋಗಿಯ ಇಪಿಎಫ್ಗೆ ನೀಡಿದ ಕೊಡುಗೆಗಳ ಮೇಲಿನ ಯಾವುದೇ ಬಡ್ಡಿಯು ವರ್ಷಕ್ಕೆ ರೂಪಾಯಿ 2.5 ಲಕ್ಷದವರೆಗಿನ ಕೊಡುಗೆಗಳು ಮಾತ್ರ ತೆರಿಗೆ ಮುಕ್ತವಾಗಿರುತ್ತದೆ.
* ವಾರ್ಷಿಕವಾಗಿ ರೂಪಾಯಿ 2.5 ಲಕ್ಷಕ್ಕಿಂತ ಹೆಚ್ಚಿನ ಇಪಿಎಫ್ ಕೊಡುಗೆಗಳ ಮೇಲಿನ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ.
* ಉದ್ಯೋಗದಾತನು ಉದ್ಯೋಗಿಯ ಇಪಿಎಫ್ಗೆ ಕೊಡುಗೆ ನೀಡದಿದ್ದರೆ ಕೊಡುಗೆ ಮಿತಿಯನ್ನು ಐದು ಲಕ್ಷಕ್ಕೆ ಹೆಚ್ಚಳ ಮಾಡಲಾಗುತ್ತದೆ.
* ಮಿತಿಗಿಂತ ಹೆಚ್ಚಿನ ಕೊಡುಗೆಗೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ, ಒಟ್ಟು ಕೊಡುಗೆಗೆ ತೆರಿಗೆ ವಿಧಿಸುವುದು ಅಲ್ಲ.
* ಹೆಚ್ಚುವರಿ ಕೊಡುಗೆಗಳು ಮತ್ತು ಅದರ ಮೇಲೆ ಸಂಗ್ರಹವಾದ ಬಡ್ಡಿಯನ್ನು ಇಪಿಎಫ್ಒ ಜೊತೆ ಪ್ರತ್ಯೇಕ ಖಾತೆಯಲ್ಲಿ ಇರಿಸಲಾಗುತ್ತದೆ
* ಪ್ರಾವಿಡೆಂಟ್ ಫಂಡ್, ಎನ್ಪಿಎಸ್ಗೆ ಉದ್ಯೋಗದಾತರ ಕೊಡುಗೆ ಮತ್ತು ವರ್ಷಕ್ಕೆ ಒಟ್ಟು ರೂಪಾಯಿ 7.5 ಲಕ್ಷ ಮೊತ್ತದ ಹೆಚ್ಚುವರಿ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.
* ಉದ್ಯೋಗದಾತರು ಈ ವಿವರಗಳನ್ನು ಫಾರ್ಮ್ 16 ಮತ್ತು ಫಾರ್ಮ್ 12BA ನಲ್ಲಿ ಭರ್ತಿ ಮಾಡಬೇಕು.
* ಮಾಸಿಕ ಆದಾಯ ರೂಪಾಯಿ 15,000ವರೆಗಿನ ಆದಾಯಕ್ಕೆ ಕಡ್ಡಾಯವಾಗಿ ಇಪಿಎಫ್ ಕೊಡುಗೆಗಳನ್ನು ನೀಡಬೇಕು.
* ತಡೆಹಿಡಿಯಲಾದ ತೆರಿಗೆಗಳನ್ನು ನೌಕರರು "ಇತರ ಮೂಲಗಳಿಂದ ಆದಾಯ" ಎಂದು ವರದಿ ಮಾಡಬೇಕಾಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications