ನಮ್ಮ ಜೀವನದಲ್ಲಿ ಆಗುವ ಅತೀ ಕೋಪ ತರುವ ವಿಚಾರಗಳಲ್ಲಿ ಒಂದು ರಜೆಯಲ್ಲಿರುವ ನಮಗೆ ತುರ್ತಾಗಿ ಆಫೀಸ್ನಿಂದ ಕರೆ, ಇಮೇಲ್ ಬರುವುದು. ಇತ್ತ ರಜೆಯನ್ನು ಸಂತೋಷವಾಗಿ ಕಳೆಯಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಈ ಸಂಸ್ಥೆಯಲ್ಲಿ ರಜೆಯಲ್ಲಿರುವ ಉದ್ಯೋಗಿಗೆ ಕೆಲಸದ ವಿಚಾರದಲ್ಲಿ ತೊಂದರೆ ಕೊಟ್ಟರೆ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.
ಹೌದು ಆಫೀಸ್ನಿಂದ ಬರುವ ವರ್ಕ್ ಕರೆ ಅಥವಾ ಅದಕ್ಕೆ ಸಂಬಂಧಿಸಿ ನಿಮ್ಮಲ್ಲಿ ಕೇಳಲು ಕರೆ ಬಂದರೆ ಹೇಗಿರುತ್ತೆ ಅಲ್ವ? ಆದರೆ ಭಾರತದ ಈ ಒಂದು ಕಂಪನಿ ತಮ್ಮ ಉದ್ಯೋಗಿಗಳು ರಜೆಯಲ್ಲಿರುವ ಇತರೆ ಉದ್ಯೋಗಿಗಳಿಗೆ ಕೆಲಸದ ವಿಚಾರದಲ್ಲಿ ಕರೆ ಮಾಡುವಂತೆ ಇಲ್ಲ. ಕರೆ ಮಾಡಿದರೆ ಭಾರೀ ದಂಡವನ್ನು ವಿಧಿಸಲಾಗುತ್ತದೆ.
ಭಾರತದ ಪ್ಯಾಂಟಸಿ ಸ್ಪೋರ್ಟ್ಸ್ ಸಂಸ್ಥೆ ಡ್ರೀಮ್ 11 ಈ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮಕ್ಕೆ Dream 11 Unplug ಅಥವಾ ಡ್ರೀಮ್ 11 ಅನ್ಪ್ಲಗ್ ಎಂದು ಕರೆಯಲಾಗುತ್ತದೆ. ಹಾಗಾದರೆ ಏನಿದು ನಿಮಯ ಎಂದು ತಿಳಿಯೋಣ ಮುಂದೆ ಓದಿ...

ಡ್ರೀಮ್ 11 ಅನ್ಪ್ಲಗ್ ಪಾಲಿಸಿ ಎಂದರೇನು?
ಡ್ರೀಮ್ 11 ಅನ್ಪ್ಲಗ್ ಪಾಲಿಸಿಯು ಒಬ್ಬ ಉದ್ಯೋಗಿಯು ರಜೆಯ ಸಂದರ್ಭದಲ್ಲಿ ಸಂಪೂರ್ಣವಾಗಿ ಕೆಲಸದಿಂದ ಅನ್ಪ್ಲಗ್ ಆಗುವುದು ಆಗಿದೆ. ಅಂದರೆ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಮಾತುಕತೆ ರಜೆಯಲ್ಲಿರುವ ಉದ್ಯೋಗಿಯೊಂದಿಗೆ ಇರುವುದಿಲ್ಲ. ಕರೆ, ಇಮೇಲ್, ವಾಟ್ಸಾಪ್ ಗ್ರೂಪ್, ಗ್ರೂಪ್ ಚಾಟ್ ಯಾವುದರಲ್ಲೂ ಕೆಲಸದ ವಿಚಾರ ಕೇಳುವಂತಿಲ್ಲ.
ಇನ್ನು ಯಾವುದೇ ಉದ್ಯೋಗಿ ರಜೆಯಲ್ಲಿರುವ ಅಂದರೆ ಅನ್ಪ್ಲಗ್ ಉದ್ಯೋಗಿಯೊಂದಿಗೆ ಕೆಲಸದ ವಿಚಾರದಲ್ಲಿ ಮಾತನಾಡಿದರೆ, ಯಾವುದೇ ಮಾತುಕತೆ ನಡೆಸಿದರೆ ಆ ಉದ್ಯೋಗಿಗೆ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದು ಡ್ರೀಮ್ 11 ಸಂಸ್ಥಾಪಕರಾದ ಹರ್ಷ ಜೈನ್ ಹಾಗೂ ಭವಿತ್ ಸೇಟ್ ಹೇಳಿದ್ದಾರೆ.
ತಮ್ಮ ಲಿಂಕ್ಡಿನ್ ಪೋಸ್ಟ್ನಲ್ಲಿ ಸಂಸ್ಥೆಯು ಅನ್ಪ್ಲಗ್ ಪಾಲಿಸಿ ಬಗ್ಗೆ ಉಲ್ಲೇಖಿಸಿದೆ, "ನಮ್ಮ ಸಮಯವನ್ನು ನಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯುವುದು ಅತೀ ಮುಖ್ಯ ಎಂದು ನಾವು ನಂಬಿದ್ದೇವೆ. ಇದು ನಮ್ಮ ಮನಸ್ಥಿತಿ ಹಾಗೂ ಜೀವನದ ಗುಣಮಟ್ಟವನ್ನು, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದಾಗಿ ರಜೆಯಲ್ಲಿರುವ ವ್ಯಕ್ತಿಯೊಂದಿಗೆ ಸಂಸ್ಥೆಯು ಕೆಲಸದ ವಿಚಾರದಲ್ಲಿ ಮಾತನಾಡುವುದಿಲ್ಲ," ಎಂದು ತಿಳಿಸಲಾಗಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!



Click it and Unblock the Notifications