ಭಾರತದ ಸಂಪ್ರದಾಯದಲ್ಲಿ ಮನೆ ಎಂಬುದು ಕೇವಲ ಕಟ್ಟಡವಲ್ಲ. ಅದೊಂದು ಭಾವನಾತ್ಮಕ ಬಂಧವಾಗಿರುತ್ತದೆ. ಜೊತೆಗೆ ಮನೆ ಎಂಬುದು ಬಹುದೀರ್ಘಕಾಲದ ಬಂಡವಾಳ ಹೂಡಿಕೆಯೂ ಹೌದು. ಎಷ್ಟೇ ಬಡವರಾಗಿದ್ದರೂ ತಮ್ಮ ಜೀವಮಾನದಲ್ಲಿ ಒಮ್ಮೆ ಸ್ವಂತ ಮನೆ ಹೊಂದಬೇಕೆಂಬುದು ಭಾರತೀಯರ ಸಹಜ ಆಸೆಯಾಗಿದೆ. ಜೀವನಪೂರ್ತಿ ಮನೆ ಬಾಡಿಗೆ ಕಟ್ಟಲು ಯಾರೂ ಬಯಸುವುದಿಲ್ಲ. ಇತ್ತೀಚಿನ ದಿನಮಾನಗಳಲ್ಲಿ ಬ್ಯಾಂಕುಗಳು ಸಹ ಸುಲಭವಾಗಿ ಹಾಗೂ ಕಡಿಮೆ ಬಡ್ಡಿದರದಲ್ಲಿ ಮನೆ ಸಾಲ ನೀಡುತ್ತಿರುವುದರಿಂದ ಸ್ವಂತ ಮನೆಯ ಕನಸನ್ನು ಸಾಕಾರ ಮಾಡಿಕೊಳ್ಳುವುದು ಮೊದಲಿಗಿಂತ ಸುಲಭವಾಗುತ್ತಿದೆ.
ಇನ್ನು ಮನೆ ಸಾಲ ಪಡೆದವರಿಗೆ ಪ್ರತಿ ತಿಂಗಳು ಇಎಂಐ ಕಟ್ಟುವ ಚಿಂತೆ ಇರುವುದು ಸಹಜ. ಹಾಗೆಯೇ ಈಗಾಗಲೇ ಒಂದಕ್ಕಿಂತ ಹೆಚ್ಚು ಮನೆಗಳಿದ್ದು, ಅವನ್ನು ಬಾಡಿಗೆಗೆ ಬಿಟ್ಟಿದ್ದರೆ ಬಾಡಿಗೆ ಆದಾಯದ ಮೇಲೆ ತೆರಿಗೆ ಉಳಿಸುವುದು ಹೇಗೆಂಬ ಚಿಂತೆ ಇನ್ನು ಕೆಲವರದ್ದು.
ಈಗಲೂ ಭಾರತದಲ್ಲಿ ಆಸ್ತಿ ವಿಮೆ ಹಾಗೂ ಸಾಲಗಳನ್ನು ಒಂದು ದೊಡ್ಡ ಹೊರೆ ಎಂದೇ ಪರಿಗಣಿಸಲಾಗುತ್ತದೆ. ಆದರೆ ಒಂದಿಷ್ಟು ಸರಿಯಾಗಿ ಯೋಜನೆ ರೂಪಿಸಿದಲ್ಲಿ ಬಾಡಿಗೆ ಆದಾಯದ ಮೇಲೆ ಕಟ್ಟಬೇಕಾದ ತೆರಿಗೆಯನ್ನು ಸಾಕಷ್ಟು ಉಳಿಸಬಹುದು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 24 ರ ಪ್ರಕಾರ ವಾಸದ ಮನೆಯಿಂದ ಬರುವ ಆದಾಯದ ಮೇಲೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ಹಾಗಾದರೆ ಬನ್ನಿ.. ಬಾಡಿಗೆ ಆದಾಯದ ಮೇಲೆ ವಿಧಿಸಲಾಗುವ ತೆರಿಗೆ ಹಾಗೂ ಅದನ್ನು ಉಳಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಬಾಡಿಗೆ ಆದಾಯಕ್ಕೂ ಕಟ್ಟಬೇಕು ಟ್ಯಾಕ್ಸ್
ಬಾಡಿಗೆಯಿಂದ ಬರುವ ಆದಾಯದ ಮೇಲೆ ಬಾಡಿಗೆ ಆದಾಯ ತೆರಿಗೆಯನ್ನು ವಿಧಿಸಲಾಗುತ್ತದೆ. 'ವಾಸದ ಮನೆಯಿಂದ ಬರುವ ಆದಾಯ' ಎಂಬ ಶೀರ್ಷಿಕೆಯಡಿ ಇದನ್ನು ವರ್ಗೀಕರಿಸಲಾಗಿದೆ. ವಾಸದ ಮನೆ ಆಸ್ತಿ, ಕಟ್ಟಡದಲ್ಲಿ ನಡೆಯುತ್ತಿರುವ ವಾಣಿಜ್ಯ ಸಂಸ್ಥೆ ಅಥವಾ ಉತ್ಪಾದನಾ ಘಟಕದಿಂದ ಬರುವ ಬಾಡಿಗೆ ಹೀಗೆ ಎಲ್ಲದಕ್ಕೂ ಬಾಡಿಗೆ ಆದಾಯ ತೆರಿಗೆ ಅನ್ವಯವಾಗುತ್ತದೆ.
ಬಾಡಿಗೆ ಆದಾಯದ ತೆರಿಗೆ ವಿನಾಯಿತಿ ಕ್ಲೇಮ್ ಹೀಗೆ ಮಾಡಿ
ಪಡೆದುಕೊಂಡ ಬಾಡಿಗೆಯ ಒಟ್ಟು ವಾರ್ಷಿಕ ಮೌಲ್ಯ (GAV)ವನ್ನು ಆದಾಯ ತೆರಿಗೆ ಉದ್ದೇಶಗಳಿಗಾಗಿ ಮಾತ್ರ ಗುರುತಿಸಲಾಗುತ್ತದೆ. ಅಂದರೆ ಮಾಲೀಕರು ಬಾಡಿಗೆ ಆದಾಯವನ್ನು ಪಡೆಯದಿದ್ದಲ್ಲಿ ಅವರು ಆ ಬಾಡಿಗೆಯ ಮೊತ್ತದ ಮೇಲೆ ಆದಾಯ ತೆರಿಗೆ ಕಡಿತವನ್ನು ಪಡೆಯಬಹುದು. ಇದನ್ನು ಬಿಟ್ಟು, ನಿರ್ದಿಷ್ಟ ಸಂದರ್ಭಗಳಲ್ಲಿ ಮನೆಯನ್ನು 14 ದಿನಗಳಿಗಿಂತ ಕಡಿಮೆ ಅವಧಿಗೆ ಬಾಡಿಗೆಗೆ ನೀಡಿದ್ದರೆ, ಮಾಲೀಕರು ಆಸ್ತಿಯ GAV ಯಿಂದ ವೆಚ್ಚವನ್ನು ಕಡಿತಗೊಳಿಸಬಹುದು. ಮನೆ ಖಾಲಿ ಉಳಿದಾಗ ಅಥವಾ ಬಾಡಿಗೆ ಪಾವತಿ ಆಗದಿದ್ದಾಗ ಸಂಭವಿಸುವ ಯಾವುದೇ ನಷ್ಟವನ್ನು ವಾಸ್ತವಿಕವಾಗಿ ಬರಬಹುದಾದ ಬಾಡಿಗೆ ಆದಾಯಕ್ಕೆ ಸರಿಹೊಂದಿಸಿದಲ್ಲಿ ಆಸ್ತಿಯ ಒಟ್ಟು ವಾರ್ಷಿಕ ಮೌಲ್ಯವನ್ನು ನಿರ್ಧರಿಸಬಹುದು.
ಮುನ್ಸಿಪಲ್ ಟ್ಯಾಕ್ಸ್ ಡಿಡಕ್ಷನ್
ಪ್ರತಿ ವರ್ಷ ಆಸ್ತಿ ಮೌಲ್ಯದ ಮೇಲೆ ಸ್ಥಳೀಯ ಮುನ್ಸಿಪಲ್ ಕಾರ್ಪೊರೇಶನ್ಗಳಿಗೆ ಪಾವತಿಸಲಾಗುವ ತೆರಿಗೆಯನ್ನು ಮುನ್ಸಿಪಲ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ. ಒಟ್ಟು ವಾರ್ಷಿಕ ಮೌಲ್ಯದಲ್ಲಿ ಮುನ್ಸಿಪಲ್ ಟ್ಯಾಕ್ಸ್ ಕಡಿತಗೊಳಿಸಿದಲ್ಲಿ ನಿವ್ವಳ ವಾರ್ಷಿಕ ಮೌಲ್ಯವನ್ನು (NAV) ವನ್ನು ಕಂಡುಹಿಡಿಯಬಹುದು. ಆಯಾ ಆರ್ಥಿಕ ವರ್ಷದಲ್ಲಿ ಮನೆ ಮಾಲೀಕನು ಮುನ್ಸಿಪಲ್ ಟ್ಯಾಕ್ಸ್ ಕಟ್ಟಿದ್ದಲ್ಲಿ ಮಾತ್ರ ಇಂಥ ತೆರಿಗೆ ಕಡಿತವನ್ನು ಪಡೆಯಬಹುದು. ಒಳಚರಂಡಿ ಶುಲ್ಕ, ಆಸ್ತಿ ತೆರಿಗೆ ಮುಂತಾದುವುಗಳ ಮೊತ್ತವನ್ನು ಬಾಡಿಗೆ ಆದಾಯ ತೆರಿಗೆಯಿಂದ ಕಡಿತಗೊಳಿಸಬಹುದು. ಆದರೆ, ಎಲ್ಲ ಮುನ್ಸಿಪಲ್ ಟ್ಯಾಕ್ಸ್ಗಳನ್ನು ಮನೆ ಮಾಲೀಕನೇ ಕಟ್ಟಿರಬೇಕು, ಬಾಡಿಗೆದಾರ ಕಟ್ಟಿರಬಾರದು. ಇಂಥ ಪಾವತಿಗಳು ನಿಮ್ಮ ಬಾಡಿಗೆ ಆದಾಯವನ್ನು ಕಡಿಮೆ ಮಾಡುವ ಮೂಲಕ ಅದರ ಮೇಲಿನ ತೆರಿಗೆಯನ್ನೂ ಕಡಿಮೆ ಮಾಡುತ್ತವೆ.
30 ಪರ್ಸೆಂಟ್ ಸ್ಟ್ಯಾಂಡರ್ಡ್ ಡಿಡಕ್ಷನ್
ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 24 (ಎ) ಪ್ರಕಾರ ಆಸ್ತಿಯ ನಿವ್ವಳ ವಾರ್ಷಿಕ ಮೌಲ್ಯದ ಮೇಲೆ ಶೇಕಡಾ 30 ರಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ವಿನಾಯಿತಿ ಸಿಗುತ್ತದೆ. ಇತರೆ ಖರ್ಚುಗಳಾದ ಪೇಂಟಿಂಗ್, ರಿಪೇರಿ ಮುಂತಾದುವುಗಳ ಲೆಕ್ಕದಲ್ಲಿ ಈ ಸ್ಟ್ಯಾಂಡರ್ಡ್ ಡಿಡಕ್ಷನ್ನಲ್ಲಿ ಶೇ 30 ಕ್ಕಿಂತ ಹೆಚ್ಚು ಕ್ಲೇಮ್ ಮಾಡಲು ಸಾಧ್ಯವಿಲ್ಲ.
ಷರತ್ತುಬದ್ಧ ಕಡಿತ
ಮಾಲೀಕರು ಅಥವಾ ಅವರ ಕುಟುಂಬವು ಮನೆಯಲ್ಲಿ ವಾಸಿಸುತ್ತಿದ್ದರೆ ಅಂಥ ಆಸ್ತಿಯ ಮೇಲೆ ಮಾಲೀಕರು ಅಥವಾ ಅವರ ಕುಟುಂಬವು ಸೆಕ್ಷನ್ 24(ಬಿ) ಅಡಿಯಲ್ಲಿ ತಮ್ಮ ಗೃಹ ಸಾಲದ ಬಡ್ಡಿಯ ಮೇಲೆ ರೂ 2 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು. ಮನೆ ಖಾಲಿಯಾದಾಗ ಸಹ ಇದೇ ತಂತ್ರವನ್ನು ಬಳಸಲಾಗುತ್ತದೆ. ಒಂದು ವೇಳೆ ನೀವು ಮನೆಯನ್ನು ಬಾಡಿಗೆಗೆ ನೀಡಿದರೆ, ನೀವು ಗೃಹ ಸಾಲದ ಸಂಪೂರ್ಣ ಬಡ್ಡಿಯನ್ನು ಕ್ಲೇಮ್ ಮಾಡಬಹುದು. ಈ ಕಡಿತವು ಸ್ವಯಂ-ಬಳಸುವ ಆಸ್ತಿಯ ಮೇಲೆ ಸಹ ಲಭ್ಯವಿದೆ.
ಆದಾಗ್ಯೂ, ಈ ಕೆಳಗೆ ತೋರಿಸಲಾದ ಮೂರು ನಿರ್ದಿಷ್ಟ ಷರತ್ತುಗಳಲ್ಲಿ ಯಾವುದೇ ಒಂದನ್ನು ಪೂರೈಸದಿದ್ದರೆ, ನಿಮ್ಮ ಬಡ್ಡಿ ಕಡಿತವು 2 ಲಕ್ಷ ರೂಪಾಯಿಗಳ ಬದಲಿಗೆ 30 ಸಾವಿರ ರೂಪಾಯಿಗಳಿಗೆ ಸೀಮಿತವಾಗುತ್ತದೆ.
ಷರತ್ತುಗಳು ಹೀಗಿವೆ:
1. ವಾಸಿಸುವ ಮನೆ ಕಟ್ಟಲು ಅಥವಾ ವಾಸದ ಮನೆ ಖರೀದಿಸಲು 01-04-1999 ಕ್ಕೂ ಮುಂಚೆ ಸಾಲ ಪಡೆದಿದ್ದರೆ;
2. ಮನೆ ಪುನರ್ ನಿರ್ಮಾಣ, ರಿಪೇರಿ ಅಥವಾ ನವೀಕರಣಕ್ಕಾಗಿ 01-04-1999 ರಂದು ಅಥವಾ ಅದರ ನಂತರ ಸಾಲ ಪಡೆದಿದ್ದರೆ;
3. 01-04-1999 ರಂದು ಅಥವಾ ಅದರ ನಂತರ ಮನೆ ಸಾಲ ಪಡೆದು, ಸಾಲ ಪಡೆದ ವರ್ಷದ ಹಿಂದಿನ ವರ್ಷದಿಂದ 5 ವರ್ಷಗಳಾದರೂ ಮನೆ ನಿರ್ಮಾಣ ಕಾಮಗಾರಿ ಪೂರ್ಣವಾಗಿರದಿದ್ದರೆ;
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications