ಸ್ವಂತ ಮನೆ ಇರಬೇಕು. ಅದು ನಾವು ಅಂದುಕೊಂಡಂತೆ, ಅಭಿರುಚಿಗೆ ತಕ್ಕಂತೆ ಇರಬೇಕು. - ಹೀಗೆ ಯಾರಿಗೆ ಅನ್ನಿಸುವುದಿಲ್ಲ? ಆ ಕಾರಣಕ್ಕೆ ಅಲ್ಲವಾ ಹೊಟ್ಟೆ- ಬಟ್ಟೆ ಕಟ್ಟಿಯಾದರೂ ಸ್ವಂತ ಮನೆ ಮಾಡಿಕೊಳ್ಳುತ್ತಾರೆ. ತಮ್ಮ ಎಷ್ಟೋ ಆಸೆಗಳನ್ನು ತ್ಯಾಗ ಮಾಡುತ್ತಾರೆ. ಶಕ್ತಿ ಮೀರಿ, ಕೆಲಸ ಮಾಡುತ್ತಾರೆ. ಹೀಗೆ ಸ್ವಂತ ಮನೆ ಎಂಬುದು ಭಾವನಾತ್ಮಕ ಸಂಗತಿ.
ಆದರೆ, ಸ್ವಂತ ಮನೆಯನ್ನು ಯಾವಾಗ ಕಟ್ಟಬೇಕು ಎಂಬ ಅಂಶ ಗಮನದಲ್ಲಿ ಇರಬೇಕು. ಈ ಹಿಂದಿನ ಲೇಖನದಲ್ಲಿ ಸ್ವಂತ ಮನೆ ಕಟ್ಟಬೇಕಾದಾಗ ಗಮನಿಸಬೇಕಾದ ಅಂಶಗಳನ್ನು ಪ್ರಸ್ತಾವ ಮಾಡಲಾಗಿತ್ತು. ಈ ಲೇಖನದಲ್ಲಿ ಸ್ವಂತ ಮನೆಯನ್ನು ಯಾವಾಗ ಕಟ್ಟಬೇಕು ಅಥವಾ ಖರೀದಿಸಬೇಕು ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಆರ್ಥಿಕ ಹಿಂಜರಿತದ ತನಕ ಕಾಯಿರಿ
ಈಗ ಎಲ್ಲೆಲ್ಲೂ ಆರ್ಥಿಕ ಹಿಂಜರಿತದ ಮಾತು ಕೇಳಿಬರುತ್ತದೆ. ಜನರ ಬಳಿ ಹಣ ಇಲ್ಲ ಎಂಬುದೇ ಬೇಡಿಕೆ ಕುಸಿತಕ್ಕೆ ಕಾರಣ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಒಂದು ಕಡೆ ಷೇರು ಮಾರುಕಟ್ಟೆ, ಚಿನ್ನ ಗಗನಕ್ಕೆ ಏರಿದ್ದರೆ, ರಿಯಲ್ ಎಸ್ಟೇಟ್ ವ್ಯವಹಾರ ಪಾತಾಳಕ್ಕೆ ಕಚ್ಚಿದೆ. ಸಾಲ ವಾಪಸ್ ಮಾಡಲಾಗದೆ ಅದೆಷ್ಟೋ ಮನೆ- ಅಪಾರ್ಟ್ ಮೆಂಟ್ ಗಳನ್ನು ದೊಡ್ಡ ಲಾಭದ ನಿರೀಕ್ಷೆ ಮಾಡದೆ ಮಾರುತ್ತಿರುವವರು ಹೆಚ್ಚಾಗಿದ್ದಾರೆ. ನೆನಪಿಡಿ, ಇದೊಂದು ವೃತ್ತ. ರಿಯಲ್ ಎಸ್ಟೇಟ್ ಬಹಳ ಚೆನ್ನಾಗಿದ್ದಾಗ ಷೇರು ಮಾರುಕಟ್ಟೆ ಹಾಗೂ ಚಿನ್ನದ ದರ ಅಂಥ ಏರಿಕೆ ಆಗಿರಲಿಲ್ಲ. ಅಂದರೆ ಆರ್ಥಿಕ ಹಿಂಜರಿತದ ವೃತ್ತ ಒಂದು ಸುತ್ತು ತಿರುಗಿ ಬಂದಾಗ ಯಾರ ಬಳಿ ನಗದು ಇರುತ್ತದೋ ಅಂಥವರಿಗೆ ಚೌಕಾಶಿ ಮಾಡಿ, ಆಸ್ತಿ ಖರೀದಿ ಮಾಡುವ ಅವಕಾಶ ಇರುತ್ತದೆ. ಅಲ್ಲಿಯವರಿಗೆ ಹಣವನ್ನು ಉಳಿತಾಯ ಮಾಡಿ, ಒಂದು ಕಡೆ ಸರಿಯಾದ ಹೂಡಿಕೆ ಮಾಡಿಟ್ಟಿರಬೇಕು. ಉದಾಹರಣೆಗೆ ಷೇರು, ಮ್ಯೂಚುವಲ್ ಫಂಡ್, ಚಿನ್ನ ಇತ್ಯಾದಿ. ಯಾವಾಗ ರಿಸೆಷನ್ ಬರುತ್ತದೋ ಅಂಥ ಸಮಯದಲ್ಲಿ ಮನೆ ಖರೀದಿಗೆ ಕೈ ಹಾಕಬೇಕು.
ಶೇಕಡಾ 1ಕ್ಕಿಂತ ಹೆಚ್ಚಿನ ರಿಟರ್ನ್ಸ್ ಬರುವಂತೆ ನೋಡಿಕೊಳ್ಳಿ
ಎಲ್ಲ ಸಂದರ್ಭದಲ್ಲೂ ರಿಸೆಷನ್ ಗೆ ಕಾಯ್ತಾ ಕೂರುವುದಕ್ಕೆ ಆಗುತ್ತಾ? ಈ ಪ್ರಶ್ನೆ ನಿಮಗೆ ಬಂದಿರಬಹುದು. ಅಂಥ ಸಂದರ್ಭದಲ್ಲಿ ಸೈಟು ಖರೀದಿ ಹಾಗೂ ಮನೆ ನಿರ್ಮಾಣ ಒಟ್ಟೊಟ್ಟಿಗೆ ಮಾಡದಿರಿ. ಸೈಟು ಖರೀದಿಗಾಗಿ, ಅದರಲ್ಲೂ ನೀವು ಎಷ್ಟು ಅಳತೆಯಲ್ಲಿ ಮನೆ ಖರೀದಿ ಮಾಡಬೇಕು ಅಂದುಕೊಂಡಿರುತ್ತೀರಿ ಅದಕ್ಕಿಂತ ಸ್ವಲ್ಪ ದೊಡ್ಡ ಅಳತೆಯ ಸೈಟು ಖರೀದಿಸಿರಿ. ಸೈಟು ಖರೀದಿ ಮತ್ತು ಮನೆ ಕಟ್ಟುವ ಮಧ್ಯೆ ಐದು ವರ್ಷದ ಸಮಯ ಇಟ್ಟುಕೊಂಡು, ಹಣ ಕೂಡಿಟ್ಟುಕೊಳ್ಳಿ. ಅಗತ್ಯ ಬಿದ್ದಲ್ಲಿ ಸೈಟಿನಲ್ಲಿ ಸ್ವಲ್ಪ ಭಾಗ ಮಾರಾಟ ಮಾಡಿ. ಆದಷ್ಟು ಕಡಿಮೆ ಸಾಲ ಮಾಡಿ ಮನೆ ಕಟ್ಟಿಕೊಳ್ಳಿ. ಸಂಬಳದ 40 ಭಾಗಕ್ಕಿಂತ ಹೆಚ್ಚು ಮೊತ್ತ ಇಎಂಐಗೆ ಹೋಗದಂತೆ ಪ್ಲ್ಯಾನಿಂಗ್ ಮಾಡಿಕೊಳ್ಳಿ. ಈ ಮೊತ್ತದಲ್ಲೇ ಬಾಡಿಗೆಗೆ ಮನೆಯೊಂದನ್ನು ಕಟ್ಟುವ ಸಾಧ್ಯತೆ ಇದ್ದಲ್ಲಿ ಕಟ್ಟಿ. ಆದರೆ ಸಾಲ ಮಾಡಿಕೊಂಡು ಮನೆ ಕಟ್ಟಿ, ಬಾಡಿಗೆ ಬರುವುದಕ್ಕೆ ಪ್ರಯತ್ನಿಸುವುದಾದರೆ ಶೇಕಡಾ 1ಕ್ಕಿಂತ ಹೆಚ್ಚಿನ ರಿಟರ್ನ್ಸ್ ಬರುವಂತೆ ನೋಡಿಕೊಳ್ಳಿ.
ಸೈಟುಗಳ ದಾಖಲೆ- ಪತ್ರಗಳು ಸರಿ ಇರಬೇಕು
ದಿನಪತ್ರಿಕೆ ಅಥವಾ ಮತ್ತೆಲ್ಲಾದರೂ ಬ್ಯಾಂಕ್ ಗಳ ಮೂಲಕ ಸೈಟು, ಮನೆ ಹರಾಜಿಗೆ ಬಂದಿರುತ್ತದೆ. ಅಂಥದ್ದರ ಬಗ್ಗೆ ಗಮನ ಇರಲಿ. ಏಕೆಂದರೆ, ದಾಖಲಾತಿಗಳನ್ನು ಅದಾಗಲೇ ಪರಿಶೀಲನೆ ಮಾಡಿಯಾಗಿರುತ್ತದೆ. ಬ್ರೋಕರೇಜ್ ನೀಡುವ ಅಗತ್ಯ ಇರುವುದಿಲ್ಲ. ಸಾಲ ಪಡೆದಿರುತ್ತಾರಾದ್ದರಿಂದ ತೆರಿಗೆ ಮತ್ತಿತರ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲಾಗಿರುತ್ತದೆ. ಸಾಲ ಕೂಡ ನಿಮ್ಮ ಅರ್ಹತೆಗೆ ತಕ್ಕಂತೆ ಸುಲಭವಾಗಿ ದೊರೆಯುತ್ತದೆ. ಮಾರುಕಟ್ಟೆ ಮೌಲ್ಯವನ್ನು ಅಂದಾಜು ಮಾಡುವುದು ಕಷ್ಟವಾಗುವುದಿಲ್ಲ. ಆದ್ದರಿಂದ ಹರಾಜಿಗೆ ಬಂದಂಥ ಆಸ್ತಿಗಳ ಕಡೆಗೆ ಲಕ್ಷ್ಯ ನೀಡಿ. ಅದೇ ರೀತಿ ಬಿಡಿಎ, ಮೂಡಾದಂಥ ಅಭಿವೃದ್ಧಿ ಪ್ರಾಧಿಕಾರಗಳು ಹರಾಜು ಹಾಕುವಂಥ ಸೈಟುಗಳ ಖರೀದಿ ಮಾಡಿದರೆ ದಾಖಲಾತಿಗಳ ಸಮಸ್ಯೆ ಆಗುವುದಿಲ್ಲ. ದಾಖಲೆಗಳು ಉತ್ತಮವಾಗಿರುವ ಸೈಟುಗಳ ಮೌಲ್ಯ ಯಾವಾಗಲೂ ಚೆನ್ನಾಗಿರುತ್ತದೆ ಹಾಗೂ ರೀಸೇಲ್ ಕೂಡ ಸಲೀಸಾಗಿರುತ್ತದೆ.
ಎಷ್ಟು ಸಾಲ, ಬಡ್ಡಿ ಎಷ್ಟು?
ಈಗ ಮುಖ್ಯ ವಿಚಾರಕ್ಕೆ ಬರೋಣ. ಮನೆ ಕಟ್ಟುವ ಸಲುವಾಗಿ ಒಂದು ಲಕ್ಷ ರುಪಾಯಿ ಸಾಲ ಮಾಡಿದರೆ 1 ಲಕ್ಷಕ್ಕೆ ವರ್ಷಕ್ಕೆ 9 ಸಾವಿರ ರುಪಾಯಿ ಬಡ್ಡಿ ಕಟ್ಟಬೇಕು. ಅದು ಕೂಡ ಇಪ್ಪತ್ತು- ಮೂವತ್ತು ವರ್ಷದ ಅವಧಿಗೆ. ಅದೇ 30 ಲಕ್ಷ ಅಥವಾ 50 ಲಕ್ಷ ರುಪಾಯಿ ಸಾಲ ಪಡೆದಲ್ಲಿ 2.70 ಲಕ್ಷದಿಂದ 4.50 ಲಕ್ಷ ರುಪಾಯಿ ಬಡ್ಡಿಗೇ ಹೋಗುತ್ತದೆ. ಈ ಮೊತ್ತವನ್ನು ಹನ್ನೆರಡರಿಂದ ಭಾಗ ಮಾಡಿದರೆ ತಿಂಗಳಿಗೆ ಎಷ್ಟು ಮೊತ್ತ ಬಡ್ಡಿಯಾಗಿ ಕಟ್ಟಿರುತ್ತೀರಿ ಲೆಕ್ಕ ಹಾಕಿಕೊಳ್ಳಿ. ತುಂಬ ಹೆಸರಾಂತ ಬಡಾವಣೆಗಳಲ್ಲಿ ಎರಡು- ಮೂರು ಕೋಟಿ ಬಂಡವಾಳ ಹಾಕಿ ಕಟ್ಟಿದ ಮನೆಗೆ 30 ಸಾವಿರ ರುಪಾಯಿ ಬಾಡಿಗೆ ಬರುವುದು ಕಷ್ಟ. ಇನ್ನು ಕೆಲಸ ಮಾಡುವ ಸ್ಥಳದಿಂದ ಬಹಳ ದೂರ ಮನೆ ಕಟ್ಟಿದರೆ ಓಡಾಟಕ್ಕೂ ಸಮಸ್ಯೆ. ಇನ್ನು ಮಕ್ಕಳ ಶಾಲೆ ಇತ್ಯಾದಿಗೂ ಕಷ್ಟ. ಸಾಲದ ಸುಳಿಗೆ ಸಿಲುಕಿಕೊಂಡು, ಕಷ್ಟ ಅನುಭವಿಸುವುದಕ್ಕಿಂತ ಬಾಡಿಗೆ ಮನೆಯಲ್ಲಿ ಇದ್ದರೂ ತೊಂದರೆ ಇಲ್ಲ. ಸಾಲ ಮಾಡಿಕೊಂಡು, ಸ್ವಂತ ಮನೆ ಕಟ್ಟಿಕೊಂಡು ಕಷ್ಟಕ್ಕೆ ಸಿಲುಕಿಕೊಳ್ಳಬೇಡಿ. ಎಷ್ಟು ಸಾಲ ಪಡೆಯುತ್ತೀರಿ, ಎಷ್ಟು ಬಡ್ಡಿ ಕಟ್ಟುತ್ತೀರಿ, ಈಗ ಮನೆ ಕಟ್ಟುವುದಕ್ಕೆ ಅಥವಾ ಖರೀದಿಸುವುದಕ್ಕೆ ಸೂಕ್ತ ಸಮಯವೇ ಇತ್ಯಾದಿ ಯೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications