ಭಾರತದಲ್ಲಿ ಐಟಿ ಕ್ಷೇತ್ರದಲ್ಲಿಯೇ ಅತೀ ಹೆಚ್ಚು ಸಂಬಳವನ್ನು ಪಡೆದ ಸಿಇಒ ಎಂಬ ಹೆಗ್ಗಳಿಕೆಯನ್ನು ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಪಡೆದಿದ್ದಾರೆ. ಹಣಕಾಸು ವರ್ಷ 2022ರಲ್ಲಿ ಒಟ್ಟು 10.5 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 79.66 ಕೋಟಿ ಆಗಿದೆ.
ಜೂನ್ 9ರಂದು ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಫೈಲಿಂಗ್ನಲ್ಲಿ ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆಗೆ 1.7 ಮಿಲಿಯನ್ ಡಾಲರ್ ಸಂಬಳ ಮತ್ತು ಭತ್ಯೆ ಲಭ್ಯವಾಗುತ್ತದೆ ಎಂದು ತಿಳಿಸಿದೆ. ಇನ್ನು ಕಮಿಷನ್ ರೂಪದಲ್ಲಿಯೇ ಬರೋಬರಿ 2.5 ಮಿಲಿಯನ್ ಡಾಲರ್ ಪಡೆಯುತ್ತಾರೆ. ಇನ್ನು ಬೆನಿಫಿಟ್ ರೂಪದಲ್ಲಿ 2 ಮಿಲಿಯನ್ ಡಾಲರ್ ಹಾಗೂ ಇತರೆ ಎಂದು ಉಲ್ಲೇಖ ಮಾಡಿ 4 ಮಿಲಿಯನ್ ಡಾಲರ್ ಮೊತ್ತವನ್ನು ಸಂಬಳದೊಂದಿಗೆ ನೀಡಲಾಗಿದೆ.
ಥಿಯೆರಿ ಡೆಲಾಪೋರ್ಟೆ ವಿಪ್ರೋ ಸಿಇಒ ಆಗಿ ಜುಲೈ 2020 ರಲ್ಲಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಬಳಿಕ ಹಣಕಾಸು ವರ್ಷ 2021ರಲ್ಲಿಯೇ ಈ ವೇತನದ ರೇಸ್ನಲ್ಲಿ ಮುಂದೆ ಸಾಗಿದ್ದಾರೆ. ತನ್ನ ಅಧಿಕಾರಾವಧಿಯ ಮೊದಲ ಒಂಬತ್ತು ತಿಂಗಳುಗಳಲ್ಲಿ ಸುಮಾರು ರೂ 64 ಕೋಟಿ (8.8 ಮಿಲಿಯನ್ ಡಾಲರ್) ಸಂಬಳವನ್ನು ಪಡೆದಿದ್ದಾರೆ. ಈ ಸಂಬಳದಲ್ಲಿ ರೂ.9.6 ಕೋಟಿಯ ವೇತನ, ರೂ.11.2 ಕೋಟಿ ಕಮಿಷನ್, ರೂ.5.5 ಕೋಟಿ ಬೆನಿಫಿಟ್ ರೂಪದಲ್ಲಿ ಹಾಗೂ ರೂ.37.81 ಕೋಟಿ ಇತರೆ ರೂಪದಲ್ಲಿ ಲಭ್ಯವಾಗಿದೆ.

ಈ ಹಿಂದೆ ಯಾರು ಪಡೆದಿದ್ದಾರೆ ಅಧಿಕ ವೇತನ?
2021-22 ರ ಅವಧಿಯಲ್ಲಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ 9.36 ಮಿಲಿಯನ್ ಡಾಲರ್ ವೇತನವನ್ನು ಪಡೆದಿದ್ದಾರೆ. ಅಂದರೆ ಆ ಸಂದರ್ಭದಲ್ಲಿ ಸುಮಾರು ರೂ 71.02 ಕೋಟಿ ರೂಪಾಯಿ ಆಗಿದೆ. ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಹಣಕಾಸು ವರ್ಷ 2022ರಲ್ಲಿ 34 ಕೋಟಿ ರೂಪಾಯಿ ಅಂದರೆ 4.48 ಮಿಲಿಯನ್ ಡಾಲರ್ ವೇತನ ಪಡೆದಿದ್ದಾರೆ. ಇನ್ನು ಹಣಕಾಸು ವರ್ಷ 2021ರಲ್ಲಿ ಎಚ್ಸಿಎಲ್ ಸಿಇಒ ಸಿ ವಿಜಯಕುಮಾರ್ 4.15 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಟೆಕ್ ಮಹೀಂದ್ರಾದ ಸಿಪಿ ಮಹೀಂದ್ರಾ 2.83 ಮಿಲಿಯನ್ ಡಾಲರ್ ಸಂಭಾವನೆಯನ್ನು ಪಡೆದಿದ್ದಾರೆ.
ಜಾಗತಿಕವಾಗಿ ಅತೀ ಹೆಚ್ಚು ವೇತನ ಪಡೆಯುವ ಐಟಿ ಉದ್ಯಮಿ ಯಾರು?
ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಿ ಕ್ಷೇತ್ರದ ಸಂಸ್ಥೆಯಾದ ಆಕ್ಸೆಂಚರ್ ಪಿಎಲ್ಸಿ ಸಿಇಒ ಜೂಲಿ ಸ್ವೀಟ್ ಹಣಕಾಸು ವರ್ಷ 2022ರಲ್ಲಿ ಒಟ್ಟು 23 ಮಿಲಿಯನ್ ಡಾಲರ್ ವೇತನವನ್ನು ಪಡೆದಿದ್ದಾರೆ. ಕಾಗ್ನಿಜೆಂಟ್ನ ಸಿಇಒ ಬ್ರಿಯಾನ್ ಹಂಫ್ರೀಸ್ 19.6 ಮಿಲಿಯನ್ ಗಳಿಸಿದ್ದಾರೆ. ಇನ್ನು ಐಬಿಎಂ ಸಿಇಒ ಮತ್ತು ಅಧ್ಯಕ್ಷ ಅರವಿಂದ್ ಕೃಷ್ಣ 17.56 ಮಿಲಿಯನ್ ಡಾಲರ್ ಸಂಬಳ ಪಡೆದು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿ ಇದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications