ಹತ್ತು ವರ್ಷದ ಆರ್ಥಿಕತೆಯ ಏರಿಳಿತದ ಹಾದಿಯನ್ನು ಕಂಡಿದ್ದೇವೆ. ಈ ದಶಕದ ಮೊದಲ ಬಜೆಟ್ ನ ಎದುರು ನೋಡುತ್ತಿದ್ದೇವೆ. ಸದ್ಯದ ಆರ್ಥಿಕ ಬೆಳವಣಿಗೆಯು ಕಳೆದ ಹನ್ನೆರಡು ವರ್ಷಗಳಲ್ಲೇ ತೀರಾ ದುರ್ಬಲವಾಗಿದೆ. ಆಹಾರ ಬೆಲೆಗಳ ಏರಿಕೆಯು ಹಣದುಬ್ಬರ ದರವನ್ನು ಆರು ವರ್ಷದಲ್ಲೇ ಗರಿಷ್ಠ ಮಟ್ಟವನ್ನು ತಲುಪುವಂತೆ ಮಾಡಿದೆ.
ಈ ಮಧ್ಯೆ ಕೇಂದ್ರದ ಆದಾಯ ಸಂಗ್ರಹದ ಗುರಿಯು ದಶಕದಲ್ಲೇ ಕನಿಷ್ಠ್ ಮಟ್ಟ ತಲುಪಿದೆ. ಈ ಆರ್ಥಿಕ ವರ್ಷದಲ್ಲಿ ನಿವ್ವಳ ತೆರಿಗೆ ಸಂಗ್ರಹವು ಇಪ್ಪತ್ತೈದು ಪರ್ಸೆಂಟ್ ಏರಿಕೆಯ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ನವೆಂಬರ್ ತನಕ ಎರಡೂವರೆ ಪರ್ಸೆಂಟ್ ಗಿಂತ ಸ್ವಲ್ಪ ಹೆಚ್ಚಾಗಿದೆ. ಒಂದು ವೇಳೆ ಆರ್ಥಿಕ ವರ್ಷದ ಕೊನೆಯ ನಾಲ್ಕು ತಿಂಗಳು ತೆರಿಗೆ ಸಂಗ್ರಹ ಹೆಚ್ಚಾದರೂ ಕೊರತೆಯನ್ನು ತುಂಬಲು ಸಾಧ್ಯವಿಲ್ಲ.v
ಜಿಡಿಪಿ ದರವು 9ರಿಂದ 10 ಪರ್ಸೆಂಟ್ ನಲ್ಲಿ ಪ್ರಗತಿ ಸಾಧಿಸಬೇಕು
ಈಗಲೂ ಸರ್ಕಾರದ ಕಡೆಯಿಂದ ಕೇಳಿಬರುತ್ತಿರುವುದು ಮುಂದಿನ ನಾಲ್ಕು ವರ್ಷದಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವ ಗುರಿ. ಆದರೆ ಸದ್ಯಕ್ಕೆ ಭಾರತದ ಆರ್ಥಿಕತೆಯ ಗಾತ್ರ 2.7 ಟ್ರಿಲಿಯನ್ ಡಾಲರ್ ಇದೆ. ಒಂದು ವೇಳೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಬೇಕೆಂದರೆ, ಜಿಡಿಪಿ ದರವು 9ರಿಂದ 10 ಪರ್ಸೆಂಟ್ ನಲ್ಲಿ ಪ್ರಗತಿ ಸಾಧಿಸಬೇಕು. ಈ ಆರ್ಥಿಕ ಸವಾಲನ್ನು ಹಣದ ಕೊರತೆಯಿರುವ ಸರ್ಕಾರವು ಹೇಗೆ ಗ್ರಾಹಕರ ವಿಶ್ವಾಸವನ್ನು ಮತ್ತೆ ಗಳಿಸುತ್ತದೆ, ನಲವತ್ತೈದು ವರ್ಷದಲ್ಲೇ ಗರಿಷ್ಠ ಮಟ್ಟದಲ್ಲಿ ಇರುವ ನಿರುದ್ಯೋಗ ಪ್ರಮಾಣವನ್ನು ಹೇಗೆ ಸರಿ ಮಾಡುತ್ತದೆ ಎಂಬಿತ್ಯಾದಿ ಪ್ರಶ್ನೆಗಳು ಹಾಗೇ ಉಳಿದಿವೆ.
ಜಿಡಿಪಿಗೆ ಹೊಂದಿಕೊಂಡಂತೆ ವಿತ್ತೀಯ ಕೊರತೆ
ಇದೆಲ್ಲ ಇರಲಿ ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯಾದ ಭಾರತದ ಪಾಲಿಗೆ 2014 ರಿಂದ 2019ರ ಯಾವ ಅಂಶಗಳು, ಯಾವ ಅಂಕಿಯನ್ನು ತೋರಿಸುತ್ತಿವೆ ಎಂಬುದರ ವಿವರ ಇಲ್ಲಿದೆ.
ವಿತ್ತೀಯ ಕೊರತೆ
ಆರ್ಥಿಕ ವರ್ಷ 2014: 4.5%
ಆರ್ಥಿಕ ವರ್ಷ 2015: 4.1%
ಆರ್ಥಿಕ ವರ್ಷ 2016: 3.9%
ಆರ್ಥಿಕ ವರ್ಷ 2017: 3.5%
ಆರ್ಥಿಕ ವರ್ಷ 2018: 3.2%
ಆರ್ಥಿಕ ವರ್ಷ 2019: 3.3% (ಅಂದಾಜು)
ವಾರ್ಷಿಕ ಸರಾಸರಿ ಗ್ರಾಹಕ ದರ ಸೂಚ್ಯಂಕ 2014 ರಿಂದ 2019
2019: 7.49%
2018: 4.85%
2017: 4.2%
2016: 4.97%
2015: 5.88%
2014: 6.37%
ವಾರ್ಷಿಕ ಜಿಡಿಪಿ ಪ್ರಗತಿ
2020 ಮುಂಚಿತವಾಗಿ ಅಂದಾಜು: 5%
2019: 5%
2018: 6.8%
2017: 7.1%
2016: 8.2%
2015: 8.0%
2014: 7.41%
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications