PMJDY:1,73,954 ಕೋಟಿಗೂ ಅಧಿಕ ಬ್ಯಾಂಕ್ ವ್ಯವಹಾರ ದಾಖಲೆ
ನವದೆಹಲಿ, ಆಗಸ್ಟ್ 28: ಹಣಕಾಸಿನ ಸೇರ್ಪಡೆಯು ಕಡಿಮೆ-ಆದಾಯದ ಗುಂಪುಗಳು ಮತ್ತು ಅತ್ಯಂತ ಮೂಲಭೂತ ಬ್ಯಾಂಕಿಂಗ್ ಸೇವೆಗಳ ಸೌಲಭ್ಯ ಪಡೆಯದ ದುರ್ಬಲ ವರ್ಗಗಳಂತಹ ಅಸುರಕ್ಷಿತ ಆದಾಯದ ವರ್ಗಗಳಿಗೆ ಸಕಾಲಿಕ ಆಧಾರದ ಮೇಲೆ ಕೈಗೆಟುಕುವ ವೆಚ್ಚದಲ್ಲಿ ಸೂಕ್ತವಾದ ಹಣಕಾಸು ಸೇವೆಗಳನ್ನು ತಲುಪಿಸುತ್ತದೆ.
ಇದು ಬಡವರಿಗೆ ತಮ್ಮ ಉಳಿತಾಯವನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ತರಲು ಒಂದು ಮಾರ್ಗವನ್ನು ಒದಗಿಸುತ್ತದೆ, ಜೊತೆಗೆ ಹಳ್ಳಿಗಳಲ್ಲಿನ ಅವರ ಕುಟುಂಬಗಳಿಗೆ ಹಣವನ್ನು ರವಾನೆ ಮಾಡುವ ಮಾರ್ಗವನ್ನು ಸುಸ್ತಿ ಸಾಲಗಾರರ ಹಿಡಿತದಿಂದ ಹೊರತರುತ್ತದೆ. ಈ ಬದ್ಧತೆಯ ಕಡೆಗೆ ಪ್ರಮುಖ ಉಪಕ್ರಮವೆಂದರೆ ಪ್ರಧಾನಮಂತ್ರಿ ಜನ್ ಧನ್ ಯೋಜನೆ (ಪಿ.ಎಂ.ಜೆ.ಡಿ.ವೈ. ), ಇದು ವಿಶ್ವದ ಅತಿದೊಡ್ಡ ಆರ್ಥಿಕ ಸೇರ್ಪಡೆ ಉಪಕ್ರಮಗಳಲ್ಲಿ ಒಂದಾಗಿದೆ.
ಪಿ.ಎಂ.ಜೆ.ಡಿ.ವೈ. ಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 15ನೇ ಆಗಸ್ಟ್ 2014 ರಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದರು. ಆಗಸ್ಟ್ 28, 2014 ರಂದು ಕಾರ್ಯಕ್ರಮವನ್ನು ಪ್ರಾರಂಭಿಸುವಾಗ, ಪ್ರಧಾನಮಂತ್ರಿಗಳು ಈ ಸಂದರ್ಭವನ್ನು ಹಣಕಾಸಿನ ಕಷ್ಟನಷ್ಟದ ಚಕ್ರದಿಂದ ಬಡವರ ವಿಮೋಚನೆಯನ್ನು ಆಚರಿಸುವ ಹಬ್ಬ ಎಂದು ಬಣ್ಣಿಸಿದರು.
ಪಿ.ಎಂ.ಜೆ.ಡಿ.ವೈ. ಯ 8 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿ, "ಹಣಕಾಸು ಸೇರ್ಪಡೆಯು ಸಮಗ್ರ ಬೆಳವಣಿಗೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ, ಇದು ಸಮಾಜದ ಅಂಚಿನಲ್ಲಿರುವ ವರ್ಗಗಳ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ.
ಆಗಸ್ಟ್ 28, 2014 ರಿಂದ ಪಿ.ಎಂ.ಜೆ.ಡಿ.ವೈ ಯಶಸ್ಸಿನ ಹಾದಿಯಲ್ಲಿದೆ, 67 ಪ್ರತಿಶತ ಗ್ರಾಮೀಣ ಅಥವಾ ಅರೆ-ನಗರ ಪ್ರದೇಶಗಳಿಗೆ ಮತ್ತು 56 ಪ್ರತಿಶತ ಮಹಿಳೆಯರು ಜನ್ ಧನ್ ಖಾತೆದಾರರಾಗಿ ವಿಸ್ತೃತ ವ್ಯಾಪ್ತಿಯೊಂದಿಗೆ ರೂ 1.74 ಲಕ್ಷ ಕೋಟಿ ಠೇವಣಿ ಯೊಂದಿಗೆ 46 ಕೋಟಿಗೂ ಹೆಚ್ಚು ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯುವಲ್ಲಿ ಯಶಸ್ಸು ಕಂಡಿದೆ.
2018 ರ ನಂತರದ ಪಿ.ಎಂ.ಜೆ.ಡಿ.ವೈ. ನ ಮುಂದುವರಿಕೆಯು ದೇಶದಲ್ಲಿ ಹಣಕಾಸು ಸೇರ್ಪಡೆ (ಎಫ್.ಐ.) ಮೂಲಕ ಸವಾಲುಗಳು ಮತ್ತು ಅವಶ್ಯಕತೆಗಳನ್ನು ಪೂರೈಸುವ ವಿಧಾನದಲ್ಲಿ ಗಮನಾರ್ಹ ಬದಲಾವಣೆಯನ್ನು ಕಂಡಿತು. ಈ ಖಾತೆಗಳ ಮೂಲಕ ನೇರ ಲಾಭ ವರ್ಗಾವಣೆ (ಡಿ.ಬಿ.ಟಿ.) ಹರಿವುಗಳನ್ನು ಹೆಚ್ಚಿಸುವ ಮೂಲಕ, ರುಪೇ ಕಾರ್ಡ್ಗಳ ಬಳಕೆಯ ಮೂಲಕ , ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಮೂಲಕ, ಖಾತೆಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ, "ಪ್ರತಿ ಮನೆಯವರು" ನಿಂದ "ಪ್ರತಿ ವಯಸ್ಕ" ಕಡೆಗೆ ಗಮನಹರಿಸಲಾಗಿದೆ." ಎಂದು ಹೇಳಿದ್ದಾರೆ.
"ಪಿ.ಎಂ.ಜೆ.ಡಿ.ವೈ. ಯ ಆಧಾರ ಸ್ತಂಭಗಳು, ಬ್ಯಾಂಕಿಂಗ್ ಮಾಡದವರಿಂದ ಬ್ಯಾಂಕಿಂಗ್, ಅಸುರಕ್ಷಿತ ಮತ್ತು ನಿಧಿಯಿಲ್ಲದವರಿಗೆ ಧನಸಹಾಯ ನೀಡುವುದು, ಸೇವೆ ಸಲ್ಲಿಸದ ಮತ್ತು ಹಿಂದುಳಿದ ಪ್ರದೇಶಗಳಿಗೆ ಸೇವೆ ಸಲ್ಲಿಸಲು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವಾಗ ಅನೇಕ-ಸ್ಟೇಕ್ಹೋಲ್ಡರ್ಗಳ ಸಹಯೋಗದ ವಿಧಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿಸಿದೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
"ಖಾತೆದಾರರ ಒಪ್ಪಿಗೆಯಿಂದ ಅವರ ಬ್ಯಾಂಕ್ ಖಾತೆಗಳನ್ನು ಆಧಾರ್ ಸಂಖ್ಯೆಗೆ ಮತ್ತು ಖಾತೆದಾರರ ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡುವ ಮೂಲಕ ರಚಿಸಲಾದ ಜೆ.ಎ.ಎಂ ಪೈಪ್ಲೈನ್ ವ್ಯವಸ್ಥೆಯು, ಹಣಕಾಸು ಸೇರ್ಪಡೆ (ಎಫ್.ಐ.) ವ್ಯವಸ್ಥೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದ್ದು, ತ್ವರಿತ ಕಾರ್ಯವನ್ನು ಸಕ್ರಿಯಗೊಳಿಸಿದೆ. ಹಣಕಾಸು ಸೇರ್ಪಡೆ (ಎಫ್.ಐ.) ಪರಿಸರ ವ್ಯವಸ್ಥೆಯ ಅಡಿಯಲ್ಲಿ ರಚಿಸಲಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ನೇರ ಲಾಭ ವರ್ಗಾವಣೆಯಾಗುತ್ತಿದೆ.
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಪಿಎಂ-ಕಿಸಾನ್ ಅಡಿಯಲ್ಲಿ ರೈತರಿಗೆ ನೇರ ಆದಾಯದ ಬೆಂಬಲವನ್ನು ಮತ್ತು ಪಿ.ಎಂ.ಜಿ.ಕೆ.ಪಿ. ಅಡಿಯಲ್ಲಿ ಪಿ.ಎಂ.ಜೆ.ಡಿ.ವೈ.ಯ ಮಹಿಳಾ ಖಾತೆದಾರರಿಗೆ ಎಕ್ಸ್-ಗ್ರೇಷಿಯಾ ಪಾವತಿಯನ್ನು ತಡೆರಹಿತ ಮತ್ತು ಸಮಯ ಪರಿಮಿತಿಯಲ್ಲಿ ವರ್ಗಾಯಿಸಲು ಅನುಕೂಲವಾಯಿತು.
"ಹಣಕಾಸು ಸೇರ್ಪಡೆಗೆ ಸೂಕ್ತವಾದ ಹಣಕಾಸು ಉತ್ಪನ್ನಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ಮತ್ತು ಡೇಟಾ ಮೂಲಸೌಕರ್ಯಕ್ಕೆ ಸಂಬಂಧಿಸಿದ ವ್ಯವಸ್ಥೆಯ ಆಧಾರದ ಮೇಲೆ ನೀತಿ ರೂಪಿಸುವ ಅಗತ್ಯವಿದೆ. ದೇಶದ ಜನರಿಗೆ ಯೋಜನೆಯ ಉದ್ದೇಶಿತ ಪ್ರಯೋಜನಗಳನ್ನು ಅತ್ಯುತ್ತಮವಾಗಿಸಲು ಪಿ.ಎಂ.ಜೆ.ಡಿ.ವೈ. ಪ್ರಾರಂಭವಾದಾಗಿನಿಂದ ದೇಶವು ಈ ತಂತ್ರವನ್ನು ಅಳವಡಿಸಿಕೊಂಡಿದೆ. ಪಿ.ಎಂ.ಜೆ.ಡಿ.ವೈ. ಅನ್ನು ಅಪೂರ್ವ ಯಶಸ್ಸಾಗಿಸುವಲ್ಲಿ ತೋರಿದ ಅವಿರತ ಪ್ರಯತ್ನಗಳಿಗಾಗಿ ಎಲ್ಲಾ ಕ್ಷೇತ್ರದ ಕಾರ್ಯಕರ್ತರಿಗೂ ನನ್ನ ಧನ್ಯವಾದಗಳು" ಎಂದು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಪಿ.ಎಂ.ಜೆ.ಡಿ.ವೈ. ಗಾಗಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿದ ಕೇಂದ್ರ ಹಣಕಾಸು ರಾಜ್ಯ ಸಚಿವ ಡಾ. ಭಾಗವತ್ ಕರಾಡ್ ಅವರು, "ಪ್ರಧಾನಮಂತ್ರಿ ಜನ್ ಧನ್ ಯೋಜನೆ (ಪಿ.ಎಂ.ಜೆ.ಡಿ.ವೈ. ) ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಆರ್ಥಿಕ ಸೇರ್ಪಡೆಯ ಕಡೆಗೆ ಅತಿ ಹೆಚ್ಚು ತಲುಪುವ ಉಪಕ್ರಮಗಳಲ್ಲಿ ಒಂದಾಗಿದೆ. ಆರ್ಥಿಕ ಸೇರ್ಪಡೆಯು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಏಕೆಂದರೆ, ಇದು ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಇದು ಬಡವರಿಗೆ ತಮ್ಮ ಉಳಿತಾಯವನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ತರಲು ಒಂದು ಮಾರ್ಗವನ್ನು ಒದಗಿಸುತ್ತದೆ. ಅವರ ಕುಟುಂಬಗಳಿಗೆ ಹಣವನ್ನು ರವಾನೆ ಮಾಡಲು ಒಂದು ಮಾರ್ಗವಾಗಿದೆ, ಜೊತೆಗೆ ಅವರನ್ನು ಚಕ್ರಬಡ್ಡಿಗೆ ಹಣ ನೀಡುವವರ ಹಿಡಿತದಿಂದ ಹೊರಬರುವಂತೆ ಮಾಡುತ್ತದೆ. " ಎಂದು ಹೇಳಿದರು.
ಜನ್ ಧನ್ ದರ್ಶಕ್ ಆಪ್
ದೇಶದಲ್ಲಿ ಬ್ಯಾಂಕ್ ಶಾಖೆಗಳು, ಎಟಿಎಂಗಳು, ಬ್ಯಾಂಕ್ ಮಿತ್ರಗಳು, ಅಂಚೆ ಕಚೇರಿಗಳು ಮುಂತಾದ ಬ್ಯಾಂಕಿಂಗ್ ಟಚ್ ಪಾಯಿಂಟ್ಗಳನ್ನು ಪತ್ತೆಹಚ್ಚಲು ನಾಗರಿಕ ಕೇಂದ್ರಿತ ವೇದಿಕೆಯನ್ನು ಒದಗಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ. ಜಿಐಎಸ್ ಆ್ಯಪ್ನಲ್ಲಿ 8 ಲಕ್ಷಕ್ಕೂ ಹೆಚ್ಚು ಬ್ಯಾಂಕಿಂಗ್ ಟಚ್ಪಾಯಿಂಟ್ಗಳನ್ನು ಮ್ಯಾಪ್ ಮಾಡಲಾಗಿದೆ. ಜನಧನ್ ದರ್ಶಕ್ ಆಪ್ ಅಡಿಯಲ್ಲಿ ಸೌಲಭ್ಯಗಳನ್ನು ಸಾಮಾನ್ಯ ಜನರ ಅವಶ್ಯಕತೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ಪಡೆಯಬಹುದು. ಈ ಅಪ್ಲಿಕೇಶನ್ನ ವೆಬ್ ಆವೃತ್ತಿಯನ್ನು http://findmybank.gov.in ಲಿಂಕ್ ಮೂಲಕನಲ್ಲಿ ಪಡೆಯಬಹುದು.
5 ಕಿಮೀ ವ್ಯಾಪ್ತಿಯಲ್ಲಿ ಬ್ಯಾಂಕಿಂಗ್ ಟಚ್ಪಾಯಿಂಟ್ಗಳಿಂದ ಸೇವೆ ಸಲ್ಲಿಸದ ಗ್ರಾಮಗಳನ್ನು ಗುರುತಿಸಲು ಈ ಅಪ್ಲಿಕೇಶನ್ ಅನ್ನು ಸಹ ಬಳಸಲಾಗುತ್ತಿದೆ. ಈ ಗುರುತಿಸಲಾದ ಗ್ರಾಮಗಳನ್ನು ಬ್ಯಾಂಕಿಂಗ್ ಔಟ್ಲೆಟ್ಗಳನ್ನು ತೆರೆಯಲು ಸಂಬಂಧಪಟ್ಟ ಎಸ್.ಎಲ್.ಬಿ.ಸಿ.ಗಳಿಂದ ವಿವಿಧ ಬ್ಯಾಂಕ್ಗಳಿಗೆ ಮಾಹಿತಿಯನ್ನು ಹಂಚಲಾಗುತ್ತದೆ. ಈ ಪ್ರಯತ್ನಗಳು ಇಂತಹ ಗ್ರಾಮಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಗೆ ಕಾರಣವಾಗಿವೆ.