ಹಿರಿಯ ವಯಸ್ಕರಿಗಾಗಿಯೇ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯೇ ಪ್ರಧಾನ ಮಂತ್ರಿ ವಯ ವಂದನ ಯೋಜನೆಯಾಗಿದೆ. 2017ರಲ್ಲಿ ಕಾರ್ಯಗತಗೊಳಿಸಿದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಹಿರಿಯ ನಾಗರೀಕರ ಅನುಕೂಲಕ್ಕಾಗಿ ಅನುಷ್ಠಾನಗೊಳಿಸಿತು.
ಪ್ರಧಾನ ಮಂತ್ರಿ ವಯ ವಂದನ ಯೋಜನೆಯ ಬಳಕೆ ಹೇಗೆ? ಯೋಜನೆಯ ಮೇಲಿನ ಹೂಡಿಕೆಗೆ ವಯಸ್ಸಿನ ಮಿತಿ ಎಷ್ಟು? ಬಡ್ಡಿ ದರ ಎಷ್ಟು ನೀಡಲಾಗುತ್ತದೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ವಿವರಣೆ ಓದಿ.
ಯೋಜನೆಗೆ ವಯಸ್ಸಿನ ಮಿತಿ ಎಷ್ಟು?
ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಹಿರಿಯ ನಾಗರಿಕರು 60 ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. 31 ಮಾರ್ಚ್ 2020ರವರೆಗೆ ಈ ಯೋಜನೆಯು ಚಾಲ್ತಿಯಲ್ಲಿದ್ದು ಹಿರಿಯ ವಯಸ್ಕರು ಯಾರು ಬೇಕಾದರೂ ಮಾಡಿಸಬಹುದು.
ಬಡ್ಡಿ ದರ ಎಷ್ಟು?
ಪಿಎಂವಿವಿವೈ ಯೋಜನೆಯ ಬಡ್ಡಿ ದರವು ಎಷ್ಟು ಯಾವ ಅವಧಿಗೆ ನೀವು ಹಣ ಡೆಪಾಸಿಟ್ ಮಾಡುತ್ತೀರಾ ಎಂಬುದರ ಮೇಲೆ 8 ರಿಂದ 8.5 ಪರ್ಸೆಂಟ್ ಬಡ್ಡಿ ದರವನ್ನು ನೀಡಲಾಗುತ್ತದೆ. 10 ವರ್ಷಗಳ ಪಿಂಚಣಿ ಅವಧಿ/ಪಾಲಿಸಿ ಅವಧಿ ಇರುತ್ತದೆ. ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಹೀಗೆ ನೀವು ಆಯ್ಕೆ ಮಾಡಿದ ಅವಧಿಯ ಕೊನೆಯಲ್ಲಿ ಪಿಂಚಣಿ ಪಡೆಯಬಹುದು. ಇದರ ಮೇಲೆ ಬಡ್ಡಿ ದರ ಅನ್ವಯವಾಗುತ್ತದೆ.
ಹೂಡಿಕೆ ಮಿತಿ ಹಾಗೂ ಸಿಗುವ ಪಿಂಚಣಿ ಎಷ್ಟು?
ಮಾಸಿಕ ಅವಧಿ
ಕನಿಷ್ಠ ಹೂಡಿಕೆ ಮೊತ್ತ : 1.5 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 1,000 ರುಪಾಯಿ
ಗರಿಷ್ಠ ಹೂಡಿಕೆ ಮೊತ್ತ : 7.50 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 5,000 ರುಪಾಯಿ
ತ್ರೈಮಾಸಿಕ ಅವಧಿ
ಕನಿಷ್ಠ ಹೂಡಿಕೆ ಮೊತ್ತ : 1. 49 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 3,000 ರುಪಾಯಿ
ಗರಿಷ್ಠ ಹೂಡಿಕೆ ಮೊತ್ತ : 7.45 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 15,000 ರುಪಾಯಿ
ಅರ್ಧ-ವಾರ್ಷಿಕ ಅವಧಿ
ಕನಿಷ್ಠ ಹೂಡಿಕೆ ಮೊತ್ತ : 1. 47 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 6,000 ರುಪಾಯಿ
ಗರಿಷ್ಠ ಹೂಡಿಕೆ ಮೊತ್ತ : 7.38 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 30,000 ರುಪಾಯಿ
ವಾರ್ಷಿಕ ಅವಧಿ
ಕನಿಷ್ಠ ಹೂಡಿಕೆ ಮೊತ್ತ : 1.44 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 12,000 ರುಪಾಯಿ
ಗರಿಷ್ಠ ಹೂಡಿಕೆ ಮೊತ್ತ : 7.22 ಲಕ್ಷ ರುಪಾಯಿ
ಪಿಂಚಣಿ ಬರುವ ಮೊತ್ತ: 60,000 ರುಪಾಯಿ
ಮರಣ ಹೊಂದಿದರೆ ಹಣ ಯಾರಿಗೆ ಸಿಗುತ್ತದೆ?
ಪಿಎಂವಿವಿವೈ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರರು ಮರಣ ಹೊಂದಿದಲ್ಲಿ, ಖರೀದಿ ಮೊತ್ತವನ್ನು ನಾಮಿನಿಗೆ/ಫಲಾನುಭವಿಗೆ ಹಿಂದಿರುಗಿಸಲಾಗುತ್ತದೆ. (ನಾಮಿನಿ ಇಲ್ಲದಿದ್ದರೆ ಕಾನೂನುಬದ್ದ ಉತ್ತರಾಧಿಕಾರಿ)
ಅಕಾಲಿಕ ನಿರ್ಗಮನದ ಅವಕಾಶ
ಪಾಲಿಸಿ ಅವಧಿಯ ಸಂದರ್ಭದಲ್ಲಿ ಸ್ವಯಂ ಅಥವಾ ಹೆಂಡತಿಯ ಅನಾರೋಗ್ಯದ ಚಿಕಿತ್ಸೆ ಸಂದರ್ಭದಲ್ಲಿ ಈ ಯೋಜನೆ ಅಕಾಲಿಕ ನಿರ್ಗಮನಕ್ಕೆ ಅವಕಾಶ ಕಲ್ಪಿಸುತ್ತದೆ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications