ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಭಾರತೀಯ ರಿಸರ್ವ್ ಬ್ಯಾಂಕ್ನ ಎರಡು ನವೀನ ಗ್ರಾಹಕ-ಸ್ನೇಹಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಚಿಲ್ಲರೆ ನೇರ ಯೋಜನೆ ಮತ್ತು ಸಮಗ್ರ ಒಂಬುಡ್ಸ್ ಮನ್ ಯೋಜನೆಗಳ ಮಹತ್ವವನ್ನು ಪ್ರಧಾನಿ ಮೋದಿ ವಿವರಿಸಿದ್ದಾರೆ.
ಈ ಪೈಕಿ ಚಿಲ್ಲರೆ ನೇರ ಯೋಜನೆ ಬಗ್ಗೆ ವಿವರಣೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಈ ಯೋಜನೆಯು ಆತ್ಮ ನಿರ್ಭರ ಭಾರತಕ್ಕೆ ಸಹಕಾರಿ. ಹೂಡಿಕೆದಾರರಿಗೆ ಸಹಾಯ ಮಾಡಲಿದೆ. ನೀವು ಆನ್ಲೈನ್ ಮೂಲಕವೇ ಉಚಿತ ಸರ್ಕಾರಿ ಷೇರು ಖಾತೆಗಳನ್ನು ತೆರೆಯಬಹುದು. ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಮೊಬೈಲ್ ಫೋನ್, ಇಂಟರ್ನೆಟ್ ಮೂಲಕವೇ ಎಲ್ಲಾ ಕಾರ್ಯವನ್ನು ಮಾಡಬಹುದು," ಎಂದು ವಿವರಿಸಿದ್ದಾರೆ.
ಹಾಗಾದರೆ ಈ ಚಿಲ್ಲರೆ ನೇರ ಯೋಜನೆ ಎಂದರೆ ಏನು, ಆರ್ಬಿಐ ಯಾಕಾಗಿ ಈ ಯೋಜನೆಯನ್ನು ಆರಂಭ ಮಾಡಿದೆ, ಈ ಯೋಜನೆಯ ಮುಖ್ಯ ಅಂಶಗಳು ಯಾವುದು, ನೀವು ಹೇಗೆ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.

ಏನಿದು ಆರ್ಬಿಐನ ಚಿಲ್ಲರೆ ನೇರ ಯೋಜನೆ?
ಚಿಲ್ಲರೆ ಹೂಡಿಕೆದಾರರು ಸರ್ಕಾರಿ ಷೇರುಗಳಲ್ಲಿ ಅಧಿಕ ಹೂಡಿಕೆ ಮಾಡುವುದು ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್ಬಿಐ ಈ ಚಿಲ್ಲರೆ ನೇರ ಯೋಜನೆ ಅಥವಾ ಆರಂಭ ಮಾಡಿದೆ. ಈ ಯೋಜನೆಯು ಚಿಲ್ಲರೆ ಹೂಡಿಕೆದಾರರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ. ಇನ್ನು ಈ ಆರ್ಬಿಐನ ಚಿಲ್ಲರೆ ನೇರ ಯೋಜನೆ ಮೂಲಕ ಹೂಡಿಕೆದಾರರು ಉಚಿತವಾಗಿ, ಯಾವುದೇ ವೆಚ್ಚವನ್ನು ಭರಿಸದೆಯೇ ತಮ್ಮ ಸರ್ಕಾರಿ ಷೇರು ಖಾತೆಗಳನ್ನು ತೆರೆಯಬಹುದಾಗಿದೆ. ಹೂಡಿಕೆದಾರರು ಆನ್ಲೈನ್ ಮೂಲಕ ಉಚಿತ ಸರ್ಕಾರಿ ಷೇರು ಖಾತೆಗಳನ್ನು ತೆರೆಯಲು ಈ ಯೋಜನೆ ಅವಕಾಶ ಕಲ್ಪಿಸುತ್ತದೆ. ಹಾಗೆಯೇ ಆನ್ಲೈನ್ ಮೂಲಕವೇ ಹೂಡಿಕೆದಾರರು ತಮ್ಮ ಉಚಿತ ಸರ್ಕಾರಿ ಷೇರು ಖಾತೆಗಳನ್ನು ನಿರ್ವಹಣೆ ಮಾಡಬಹುದಾಗಿದೆ.
ಆರ್ಬಿಐನ ಚಿಲ್ಲರೆ ನೇರ ಯೋಜನೆಯ ಮಹತ್ವ
* ಚಿಲ್ಲರೆ ಹೂಡಿಕೆದಾರರು ಆರ್ಬಿಐನ ರಿಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ (ಆರ್ಡಿಜಿ ಖಾತೆ) ತೆರೆಯಬಹುದು ಹಾಗೂ ನಿರ್ವಹಣೆ ಮಾಡಬಹುದು.
* ಈ ಯೋಜನೆಗಾಗಿಯೇ ಆರ್ಬಿಐ ಆನ್ಲೈನ್ ಪೋರ್ಟಲ್ ಅನ್ನು ತೆರೆದಿದ್ದು, ಅದರ ಮೂಲಕ ಚಿಲ್ಲರೆ ಹೂಡಿಕೆದಾರರು ಹೂಡಿಕೆಯನ್ನು ಮಾಡಬಹುದು.
* ಈ ಆನ್ಲೈನ್ ಪೋರ್ಟಲ್ ನೋಂದಾಯಿತ ಹೂಡಿಕೆದಾರರಿಗೆ ಇತರೆ ಸೌಲಭ್ಯಗಳನ್ನು ನೀಡುತ್ತದೆ. ಸರ್ಕಾರಿ ಭದ್ರತೆಗಳ ಪ್ರಾಥಮಿಕ ವಿತರಣೆಗೆ ಪ್ರವೇಶ ಮತ್ತು ಎನ್ಡಿಎಸ್-ಒಎಂಗೆ ಪ್ರವೇಶವನ್ನು ಈ ಯೋಜನೆಯ ಮೂಲಕ ಪಡೆಯಬಹುದು.
ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?
* ಈ ಯೋಜನೆಯಲ್ಲಿ ವಿವರಿಸಿದಂತೆ ಚಿಲ್ಲರೆ ವ್ಯಾಪಾರಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ತಮ್ಮಲ್ಲಿ ಆರ್ಜೆಡಿ ಖಾತೆ ಇದ್ದರೆ ಆ ಖಾತೆಯ ನಿರ್ವಹಣೆ ಮಾಡಬಹುದು.
* ಇದಕ್ಕಾಗಿ ವ್ಯಕ್ತಿಯ ಬಳಿ ಭಾರತದ ಉಳಿತಾಯ ಬ್ಯಾಂಕ್ ಖಾತೆ, ಪ್ಯಾನ್ ಸಂಖ್ಯೆ, ಮಾನ್ಯವಾದ ಇಮೇಲ್ ಐಡಿ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಇರಬೇಕು.
* ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ, 1999 ರ ಅಡಿಯಲ್ಲಿ ಈ ಸರ್ಕಾರಿ ಷೇರುಗಳಲ್ಲಿ ಅನಿವಾಸಿ ಚಿಲ್ಲರೆ ಹೂಡಿಕೆದಾರರು ಕೂಡಾ ಅರ್ಹರು
* ಆರ್ಜೆಡಿ ಖಾತೆಯನ್ನು ಓರ್ವ ವ್ಯಕ್ತಿ ಅಥವಾ ಜಂಟಿಯಾಗಿ ತೆರೆಯಬಹುದು
ನೀವು ಹೂಡಿಕೆ ಮಾಡಬಹುದೇ, ಸುರಕ್ಷಿತವೇ?
ಇನ್ನು ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಜನರಲ್ಲಿ ಬರುವ ಪ್ರಶ್ನೆ ನಾವು ಹೂಡಿಕೆ ಮಾಡಬಹುದೇ ಎಂಬುವುದು. ನಾವು ಯಾವುದೇ ಹೂಡಿಕೆಯನ್ನು ಅಪಾಯಕಾರಿ ಎಂದು ಪರಿಗಣಿಸುತ್ತೇವೆ. ಆದರೆ ಇದು ಸರ್ಕಾರಿ ಹೂಡಿಕೆ ಆದ ಕಾರಣದಿಂದಾಗಿ ಸುರಕ್ಷಿತವಾಗಿದೆ. ಈ ಹೂಡಿಕೆಯು ಬೇರೆ ಷೇರಿನಂತೆ ಅಲ್ಲ, ಇದರಲ್ಲಿ ಕಡಿಮೆ ರಿಟರ್ನ್ ಬರುತ್ತದೆ. ಆದರೆ ಬೇರೆ ಷೇರಿಗಿಂತ ಅಧಿಕ ಸುರಕ್ಷಿತವಾಗಿದೆ. ಕೆಲವೊಮ್ಮೆ ಹೆಚ್ಚಿನ ಟರ್ಮ್ ಇರುವ ಕಾರಣದಿಂದಾಗಿ ಅಪಾಯ ಇರಬಹುದು. ಆದ್ದರಿಂದ ಹೂಡಿಕೆ ಮಾಡುವ ಮೊದಲು ಯಾವಾಗಲೂ ನೀವು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ. ನೀವು ಮೆಚ್ಯೂರಿಟಿ ಹೊಂದುವವರೆಗೂ ಹೂಡಿಕೆಯನ್ನು ಹಿಂದಕ್ಕೆ ತೆರೆಯುವುದಿಲ್ಲ ಎಂದು ಆದರೆ ಮಾತ್ರ ಹೂಡಿಕೆಯನ್ನು ಮಾಡಿ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications