
ನಿಮ್ಮ ಬ್ಯಾಂಕ್ ಖಾತೆ ಹಣವಿಲ್ಲದೆ ಖಾಲಿ ಬ್ಯಾಲೆನ್ಸ್ ಆಗಿದ್ದಾಗ (minimum balance ನಿರ್ವಹಣೆ ಸಾಧ್ಯವಾಗದ ಸಂದರ್ಭ) ಅಥವಾ ಚೆಕ್ ಕಳೆದು ಹೋದಾಗ, ಕ್ರೆಡಿಟ್ ಕಾರ್ಡ್ ಪೇಮೆಂಟ್ ವಿಳಂಬವಾದಾಗ ಮುಂತಾದ ಸಂದರ್ಭಗಳಲ್ಲಿ ಖಾತೆದಾರರಿಗೆ ಬ್ಯಾಂಕ್ ದಂಡ ವಿಧಿಸುವುದು ಮಾಮೂಲಿ.ಆದರೆ ಬ್ಯಾಂಕ್ ಗಳು ಕೂಡ ಕೆಲವು ಸಂದರ್ಭದಲ್ಲಿ ಖಾತೆದಾರರಿಗೆ ದಂಡ ಕೊಡಬೇಕಾಗುತ್ತದೆ ಎನ್ನುವುದು ಗ್ರಾಹಕರಿಗೆ ಇದುವರೆಗೂ ತಿಳಿದಿಲ್ಲ.
ಎಟಿಎಂ ಅಥವಾ ಡೆಬಿಟ್ ಕಾರ್ಡ್ ನಿಂದ ನಾವು ಎಟಿಎಂನಲ್ಲಿ ಹಣವನ್ನು ತೆಗೆದಾಗ ಕೆಲವೊಮ್ಮೆ ಎಟಿಎಂ ಯಂತ್ರದ ದೋಷದಿಂದಾಗಿ ಹಣ ಬರದಿದ್ದರೂ ಖಾತೆಯಿಂದ ಹಣ ಕಡಿತಗೊಂಡಿರುವ ರಸೀತಿ ಬರುತ್ತದೆ. ಮತ್ತೆ ಕೆಲವು ಸಲ ಪ್ರೋಸೆಸ್ ರಿಜೆಕ್ಟೆಡ್ ಎಂಬ ಸಂದೇಶ ಬರುತ್ತದೆ. ಆದರೆ ಖಾತೆಯಲ್ಲಿ ನಾವು ನಮೂದಿಸಿದಷ್ಟು ಹಣ ಕಡಿತಗೊಂಡಿರುತ್ತದೆ.
ಈ ಬಗ್ಗೆ ಕೆಲವು ಗ್ರಾಹಕರು ಬ್ಯಾಂಕಿಗೆ ದೂರು ಸಲ್ಲಿಸಿ ಸುಮ್ಮನಾಗುತ್ತಾರೆ. ಆದರೆ, ಉಳಿದಂತೆ ಯಾರು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ.
ಗ್ರಾಹಕರು ಏನು ಮಾಡಬೇಕು?: ಸಮಯದಲ್ಲಿ ಗ್ರಾಹಕರು ಖಾತೆಯಿರುವ ಸಮೀಪದ ಬ್ಯಾಂಕ್ ಖಾತೆಗೆ ಹೋಗಬೇಕು ಅಥವಾ ಎಟಿಎಂ ಅಥವಾ ಡೆಬಿಡ್ ಕಾರ್ಡ್ ನ ಹಿಂಬದಿಯಲ್ಲಿರುವ ಸಹಾಯವಾಣಿಗೆ ಕರೆ ಮಾಡಬೇಕು. ದೂರವಾಣಿ ಅಥವಾ ಲಿಖಿತ ದೂರು ನೀಡಿದ ದೂರು ಸಂಖ್ಯೆಯನ್ನು ಪಡೆದುಕೊಳ್ಳಬೇಕು.
ಗ್ರಾಹಕ ದೂರು ನೀಡಿದ ಏಳು ದಿನದ ಒಳಗಡೆ ಗ್ರಾಹಕನ ಖಾತೆ ಬ್ಯಾಂಕ್ ಹಣವನ್ನು ಜಮಾ ಮಾಡಬೇಕು. ಇಲ್ಲವಾದಲ್ಲಿ 8ನೇ ದಿನದಿಂದ ಆರಂಭಿಸಿ(ರಜಾದಿನವೂ ಸೇರಿದಂತೆ) ಪ್ರತೀ ದಿನಕ್ಕೆ ನೂರರಂತೆ ಹಣ ಜಮಾ ಆಗುವ ತನಕ ದಂಡ ತೆರಬೇಕಾಗುತ್ತದೆ. ಇದಕ್ಕಾಗಿ ಗ್ರಾಹಕರು 30 ದಿನಗಳ ಒಳಗಡೆ ದೂರು ನೀಡುವುದು ಮುಖ್ಯ ಎಂದು ಆರ್ ಬಿಐ ಹೇಳಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications