ಕೊರೊನಾದ ಕಾರಣಕ್ಕೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ತಾತ್ಕಾಲಿಕವಾಗಿ ಉದ್ಯೋಗದಿಂದ ತೆಗೆದಿರುವವರ ಪೈಕಿ ಶೇಕಡಾ ಇಪ್ಪತ್ತೈದರಷ್ಟು ಮಂದಿಗೆ ಶಾಶ್ವತವಾಗಿ ಕೆಲಸ ಇಲ್ಲದಂತಾಗಬಹುದು ಎಂದು ಗೋಲ್ಡ್ ಮ್ಯಾನ್ ಸ್ಯಾಚ್ಸ್ ಗ್ರೂಪ್ ಕಂಪೆನಿ ಅಂದಾಜು ಮಾಡಿದೆ. ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಆರಂಭದಲ್ಲಿ 2.2 ಕೋಟಿ ಮಂದಿಯನ್ನು ಕಂಪೆನಿಗಳು ಉದ್ಯೋಗದಿಂದ ಕೈ ಬಿಟ್ಟವು.
ಆ ಪೈಕಿ ಬಹುತೇಕ ಉದ್ಯೋಗ ಕಡಿತ ತಾತ್ಕಾಲಿಕ ಎನ್ನಲಾಗಿತ್ತು. 1.80 ಕೋಟು ಮಂದಿ ನಿರುದ್ಯೋಗಿಗಳಾಗಿರುವುದು ತಾತ್ಕಾಲಿಕ ಎಂದು ದಾಖಲೆಗಳಲ್ಲಿ ಇತ್ತು. ಯಾವಾಗ ಆರ್ಥಿಕ ಚಟುವಟಿಕೆಗಳು ಶುರುವಾದವೋ ಮೇ, ಜೂನ್, ಜುಲೈ ತಿಂಗಳಲ್ಲಿ ಉದ್ಯೋಗಿಗಳ ಮರುನೇಮಕ ಕೂಡ ಶುರುವಾಯಿತು.
ಆದರೆ, ಈಗಲೂ 92 ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗಿಯೇ ಇದ್ದಾರೆ. ಈ ವರ್ಷದ ಕೊನೆಗೆ ಹೆಚ್ಚುವರಿ ಉದ್ಯೋಗಗಳ ಸೇರ್ಪಡೆ ಆಗಬಹುದು ಎಂದು ಗೋಲ್ಡ್ ಮ್ಯಾನ್ ಸ್ಯಾಚ್ಸ್ ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಈಗ ತಾತ್ಕಾಲಿಕ ಉದ್ಯೋಗ ನಷ್ಟ ಎದುರಿಸುತ್ತಿರುವವರಲ್ಲಿ ಮತ್ತೆ ಪರ್ಮನೆಂಟ್ ಉದ್ಯೋಗ ಪಡೆದುಕೊಳ್ಳುವ ಸಾಧ್ಯತೆ ಬಹಳ ಕಡಿಮೆ. ಈ ವರ್ಷದ ಕೊನೆಗೆ 56 ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು, ಅಷ್ಟೇ ಎಂದಿದ್ದಾರೆ.

ಆದರೂ ತಾತ್ಕಾಲಿಕವಾಗಿ ಉದ್ಯೋಗ ಕಳೆದುಕೊಂಡಿದ್ದವರ ಮರು ನೇಮಕ ಮಾಡಿಕೊಳ್ಳುವ ಪ್ರಮಾಣ ಜುಲೈನಲ್ಲಿ ಕಡಿಮೆ ಆಗಿದೆ. ಗೋಲ್ಡ್ ಮ್ಯಾನ್ ಸ್ಯಾಚ್ಸ್ ಅಂದಾಜಿಸುವಂತೆ, ಶೇಕಡಾ ಇಪ್ಪತ್ತೈದರಷ್ಟು ಮಂದಿಗೆ ಶಾಶ್ವತವಾಗಿ ಉದ್ಯೋಗ ಸಿಗುವ ಸಾಧ್ಯತೆ ಇಲ್ಲ. ಆ ಇಪ್ಪತ್ತು ಲಕ್ಷ ಮಂದಿ 2021ರ ತನಕ ನಿರುದ್ಯೋಗಿಗಳಾಗಿಯೇ ಇರಲಿದ್ದಾರೆ.
ಇನ್ನು ನಿರುದ್ಯೋಗ ಭತ್ಯೆ ಒದಗಿಸುವುದಕ್ಕೆ ಸರ್ಕಾರದ ಬಳಿ ಸಂಪನ್ಮೂಲ ಬರಿದಾಗುತ್ತಿದ್ದಂತೆ ತಾತ್ಕಾಲಿಕದಿಂದ ಶಾಶ್ವತ ಉದ್ಯೋಗ ನಷ್ಟದ ಪ್ರಮಾಣ ಮತ್ತೂ ಹೆಚ್ಚಾಗಲಿದೆ. ಜೂನ್ ಗೆ ಹೋಲಿಸಿದಲ್ಲಿ ಜುಲೈನಲ್ಲಿ ಆ ಪ್ರಮಾಣ ಹತ್ತಿರಹತ್ತಿರ ದುಪ್ಪಟ್ಟು ಆಗಿರುವುದೇ ಅದಕ್ಕೆ ನಿದರ್ಶನ ಎನ್ನುತ್ತದೆ ವರದಿ.
ಶಿಕಾಗೋದಲ್ಲಿನ ವಿಶ್ವವಿದ್ಯಾಲಯವು ನಡೆಸಿರುವ ಸಮೀಕ್ಷೆ ಪ್ರಕಾರ, ಉದ್ಯೋಗಿಗಳಿಗೆ ತಾವು ಈ ಹಿಂದೆ ಮಾಡುತ್ತಿದ್ದ ಉದ್ಯೋಗಕ್ಕೇ ಮರುಳುತ್ತೇವೆ ಎಂಬ ಭರವಸೆಯೇ ಇಲ್ಲದಂತಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications