ಕೇಂದ್ರ ಬಜೆಟ್ 2020 ಇನ್ನೂ ಕೆಲ ದಶಕಗಳ ನೆನಪಿಟ್ಟುಕೊಳ್ಳುವಂಥದ್ದು ಖಂಡಿತಾ ಆಗಿರುತ್ತದೆ. ಭಾರತದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಿಂದ ಏರು ಗತಿಯ ಕಡೆಗೆ ಕರೆದೊಯ್ಯುವ ಯೋಜನೆಗಳನ್ನು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮಾಡಲೇಬೇಕಿದೆ. ಅತಿಯಾದ ನಿರೀಕ್ಷೆ ಹಾಗೂ ಅಗ್ನಿ ಪರೀಕ್ಷೆ ಎರಡನ್ನೂ ಸಂಭಾಳಿಸಬೇಕಿದೆ ಈ ಬಜೆಟ್.
ಆದ್ದರಿಂದ ಆ ಯತ್ನದಲ್ಲಿ ಸಫಲವಾದರೂ ವಿಫಲವಾದರೂ ಇತಿಹಾಸದಲ್ಲಿ ದಾಖಲಾರ್ಹವಂತೂ ಹೌದು. ಹನ್ನೆರಡು ವರ್ಷದ ನಂತರ ಆರ್ಥಿಕ ಕುಸಿತದ ಇಳಿಜಾರು ಆತಂಕ ಸೃಷ್ಟಿಸುತ್ತಿದೆ. ದಿಟ್ಟ ಹಾಗೂ ಸ್ಪಷ್ಟ ನಿರ್ಧಾರ-ಯೋಜನೆ-ಉತ್ತೇಜನ ಎಲ್ಲವೂ ಪ್ರದರ್ಶಿಸಬೇಕು.
ಅಂದ ಹಾಗೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲನೇ ಸಲಕ್ಕೆ ಮಂಡಿಸಿದ್ದು ಮಧ್ಯಂತರ ಬಜೆಟ್ ಆಗಿತ್ತು. ಆರೇಳು ತಿಂಗಳೊಳಗೆ ಬಂದೇ ಬಿಟ್ಟಿದೆ ಈ ಪೂರ್ಣ ಪ್ರಮಾಣದ ಬಜೆಟ್. ಈ ಬಾರಿ ಅವರು ವಿರೋಧ ಪಕ್ಷಗಳಿಗೆ ಹೇಳಬೇಕಾದ್ದೇನೋ ಇರುವಂತೆ ಕಾಣುವುದಿಲ್ಲ. ಆದರೆ ಸಮಾಜದ ನಾನಾ ವಲಯಗಳ ಆಶೋತ್ತರಗಳಿಗೆ ಸ್ಪಂದಿಸಬೇಕಿದೆ.
ಬಜೆಟ್ ಅಂದರೆ, ಮುಂದಿನ ಒಂದು ವರ್ಷದಲ್ಲಿ ಸರ್ಕಾರಕ್ಕೆ ಬರಬಹುದಾದ ಆದಾಯ ಮತ್ತು ಅದನ್ನು ವೆಚ್ಚ ಮಾಡುವ ಬಗೆಯನ್ನು ಜನರ ಮುಂದಿಡುವ ಅಂದಾಜು ಪಟ್ಟಿ. ಏನಿದೆ ನಿರ್ಮಲಾ ಸೀತಾರಾಮನ್ ಮುಂದಿಡುವ ಅಂದಾಜು ಪಟ್ಟಿಯಲ್ಲಿ ಎಂಬುದರ ಲೈವ್ ಅಪ್ ಡೇಟ್ಸ್ ಇಲ್ಲಿದೆ.
ಈ ದಶಕದ ಮೊದಲ ಬಜೆಟ್ಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಂಡವನ್ನು ನಾನು ಮೊದಲು ಅಭಿನಂದಿಸುತ್ತೇನೆ. 2020ರ ಕೇಂದ್ರ ಬಜೆಟ್ ಆದಾಯ ಮತ್ತು ಹೂಡಿಕೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹಣಕಾಸು ವ್ಯವಸ್ಥೆಯಲ್ಲಿ ಹೊಸ ಚೈತನ್ಯ ಮತ್ತು ಸಾಲದ ಹರಿವನ್ನು ತರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಬಜೆಟ್ ದೇಶದ ಪ್ರಸ್ತುತ ಅಗತ್ಯತೆಗಳ ಜೊತೆಗೆ ಭವಿಷ್ಯದ ನಿರೀಕ್ಷೆಗಳನ್ನೂ ಪೂರೈಸಲಿದೆ. ನಾವು ಕೃಷಿಗೆ ಒಂದು ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ, ಇದು ಸಾಂಪ್ರದಾಯಿಕ ವಿಧಾನಗಳ ಜೊತೆಗೆ ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆಗಳಲ್ಲಿ ಮೌಲ್ಯವರ್ಧನೆಯನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಆದಾಯ ತೆರಿಗೆಯ ಎಲ್ಲ ವಿನಾಯಿತಿ ತೆಗೆಯುವ ಉದ್ದೇಶವಿದೆ: ಸಚಿವೆ
ತೆರಿಗೆ ವಿನಾಯಿತಿ- ಕಡಿತ ಬಿಟ್ಟುಕೊಡಬೇಕು ಎಂಬ ಷರತ್ತಿನ ಮೇಲೆ ತೆರಿಗೆ ದರ ಇಳಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಭವಿಷ್ಯದಲ್ಲಿ ಆದಾಯ ತೆರಿಗೆಯ ಎಲ್ಲ ವಿನಾಯಿತಿಯನ್ನು ತೆಗೆಯಲು ಸರ್ಕಾರ ಉದ್ದೇಶಿಸಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅಗತ್ಯ ಬಿದ್ದಾಗ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಹೆಚ್ಚುವರಿ ಬಂಡವಾಳ ಪೂರೈಸುವುದಾಗಿ ಹೇಳಿದ್ದಾರೆ.
160 ನಿಮಿಷಗಳ ನಂತರವೂ ಭಾಷಣ ಪೂರ್ತಿ ಆಗಲಿಲ್ಲ
ನಿರ್ಮಲಾ ಸೀತಾರಾಮನ್ ಅವರು ಶನಿವಾರ ತಮ್ಮ ಅನಾರೋಗ್ಯದ ಕಾರಣ ಭಾಷಣ ಓದುವುದನ್ನು ಮೊಟಕುಗೊಳಿಸಿದರು. ದಾಖಲೆಯ 160 ನಿಮಿಷಗಳ ನಂತರವೂ ಅವರ ಭಾಷಣ ಬಾಕಿ ಇತ್ತು. ಇನ್ನೂ ಎರಡು ಪುಟಗಳನ್ನು ಓದಬೇಕಿತ್ತು. ಅಷ್ಟರಲ್ಲಿ ಬಳಲಿದ ಅವರು, ಹಣೆಯ ಮೇಲಿನ ಬೆವರು ಒರೆಸಿಕೊಂಡು, ಕೂತರು.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 12.7 ಲಕ್ಷ ಕೋಟಿ ವರ್ಗಾವಣೆ ಮಾಡಲಿರುವ ಕೇಂದ್ರ.
ಬಜೆಟ್ ಮಂಡನೆ ಪೂರ್ಣಗೊಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಸೋಮವಾರಕ್ಕೆ ಸಭೆ ಮುಂದೂಡಿದ ಸ್ಪೀಕರ್.
ಆದಾಯ ತೆರಿಗೆದಾರರಿಗೆ ಸಿಹಿ ಸುದ್ದಿ:5 Lakh ಯಾವುದೇ ತೆರಿಗೆ ಇಲ್ಲ
2020-21ರ ಕೇಂದ್ರ ಬಜೆಟ್ನಲ್ಲಿ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಈಗಿನ ಆದಾಯ ತೆರಿಗೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆಗೆ ಮುಂದಾಗಿದ್ದು ತೆರಿಗೆ ದರವನ್ನು ಇಳಿಸಿದೆ. ಐದು ಲಕ್ಷದವರೆಗೆ ಆದಾಯ ಪಡೆಯುವವರಿಗೆ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ
ಪ್ಯಾನ್ ವಿತರಣೆ ಪ್ರಕ್ರಿಯೆ ಇನ್ನಷ್ಟು ಸಲೀಸು. ಆಧಾರ್ ನ ಮೂಲವಾಗಿಟ್ಟುಕೊಂಡು ತಕ್ಷಣ ಪ್ಯಾನ್ ವಿತರಿಸುವ ಯೋಜನೆ ಪರಿಚಯಿಸಲಿದೆ ಸರ್ಕಾರ.
ದತ್ತಿ ಸಂಸ್ಥೆಗಳ ಆದಾಯಕ್ಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ; ಅಂಥ ಸಂಸ್ಥೆಗಳಿಗೆ ನೀಡುವ ದೇಣಿಗೆಗಳಿಗೆ ತೆರಿಗೆದಾರರಿಗೆ ವಿನಾಯಿತಿ ದೊರೆಯುತ್ತದೆ.
ದೇಶೀಯವಾಗಿ ವಿದ್ಯುತ್ ಉತ್ಪಾದನೆ ಮಾಡುವ ಹೊಸ ಕಂಪೆನಿಗಳಿಗೆ ಕಾರ್ಪೊರೇಟ್ ತೆರೆ ಕಡಿತದ ವಿಸ್ತರಣೆ
ಲಾಭಾಂಶ ವಿತರಣೆ ತೆರಿಗೆಯನ್ನು ಡಿವಿಡೆಂಡ್ ಪಡೆಯುವವರೇ ಪಾವತಿಸಬೇಕು.
ನೂರಕ್ಕೂ ಹೆಚ್ಚಿದ್ದ ತೆರಿಗೆ ವಿನಾಯಿತಿಗಳಲ್ಲಿ ಎಪ್ಪತ್ತಕ್ಕೂ ಹೆಚ್ಚನ್ನು ತೆಗೆಯಲಾಗಿದೆ. ಆ ಮೂಲಕ ತೆರಿಗೆ ರಿಟರ್ನ್ಸ್ ಸರಳಗೊಳಿಸಲಾಗಿದೆ.
ಕೈಗೆಟುಕುವ ದರದ ಮನೆಗಳಿಗೆ ತೆರಿಗೆ ವಿನಾಯಿತಿ.
ಹಾಲು ಸಂಸ್ಕರಣಾ ಸಾಮರ್ಥ್ಯ ದ್ವಿಗುಣ ಮಾಡುವ ಗುರಿ.
ಷೇರು ಹೂಡಿಕೆದಾರರಿಗೆ ಸಿಹಿ ಸುದ್ದಿ
ಲಾಭಾಂಶ ವಿತರಣೆ ತೆರಿಗೆ ತೆಗೆದ ಕೇಂದ್ರ ಸರ್ಕಾರ
2019- 20ನೇ ಸಾಲಿಗೆ 3.8% ,
2020- 21ಕ್ಕೆ 3.5%
5ರಿಂದ 7.5 ಲಕ್ಷ 10 ಪರ್ಸೆಂಟ್,
7.5 ಲಕ್ಷದಿಂದ 10 ಲಕ್ಷ 15 ಪರ್ಸೆಂಟ್,
10 ಲಕ್ಷದಿಂದ 12.5 ಲಕ್ಷ 20 ಪರ್ಸೆಂಟ್,
12.5 ಲಕ್ಷದಿಂದ 15 ಲಕ್ಷ 25 ಪರ್ಸೆಂಟ್,
15 ಲಕ್ಷ ಮೇಲ್ಪಟ್ಟ ಅದಾಯಕ್ಕೆ 30 ಪರ್ಸೆಂಟ್.
ಆದಾಯ ತೆರಿಗೆ ಪಾವತಿದಾರರಿಗೆ ಭರ್ಜರಿ ಸಿಹಿ ಸುದ್ದಿ.
ಅಪ್ಲಿಕೇಷನ್ ಆಧಾರಿತ ಸಾಲ ನೀಡುವ ಉತ್ಪನ್ನ
ಅಪ್ಲಿಕೇಷನ್ ಆಧಾರಿತ ಹಣಕಾಸು ಸಾಲ ನೀಡುವ ಉತ್ಪನ್ನ ಆರಂಭಿಸಲಾಗುವುದು. ಎಂಎಸ್ ಎಂಇಗಳಿಗೆ ಪಾವತಿ ವಿಳಂಬ ಹಾಗೂ ನಗದು ಹರಿವಿನ ವ್ಯತ್ಯಾಸ ಸರಿಪಡಿಸಲು ಇದರಿಂದ ನೆರವು,
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 18,600 ಕೋಟಿ
ಬೆಂಗಳೂರು ಸಬ್ ಅರ್ಬನ್ (ಉಪ ನಗರ) ರೈಲು ಯೋಜನೆಗೆ 2020ರ ಕೇಂದ್ರ ಬಜೆಟ್ನಲ್ಲಿ ಒತ್ತು ನೀಡಲಾಗಿದೆ.
ಯೂನಿವರ್ಸಲ್ ಪೆನ್ಷನ್ ಕವರೇಜ್ ನ ಆಟೋ ನೋಂದಣಿ.
ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಾರ್ಪೊರೇಷನ್ ಮತ್ತು ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ಸ್ ನ ನಗದು ಸಮಸ್ಯೆ ಬಗ್ಗೆ ಗಮನ. ಅವುಗಳ ಸೆಕ್ಯೂರಿಟೀಸ್ ಗೆ ಸರ್ಕಾರದ ಖಾತ್ರಿ ಮೂಲಕ ಬೆಂಬಲ.
ಐಪಿಒ ಮೂಲಕ ಎಲ್ ಐಸಿಯಲ್ಲಿ ಇರುವ ಸರ್ಕಾರದ ಪಾಲನ್ನು ಮಾರಲು ಪ್ರಸ್ತಾವ
ನೂರೈವತ್ತು ಅಂಶ ಇಳಿಕೆ ಕಂಡ ಸೆನ್ಸೆಕ್ಸ್
ಕೇಂದ್ರಾಡಳಿತ ಪ್ರದೇಶಕ್ಕೆ ಹಣ ಮೀಸಲು
ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರಕ್ಕೆ 30,757 ಕೋಟಿ, ಲಡಾಖ್ ಗೆ 5,958 ಕೋಟಿ.
ಷೆಡ್ಯೂಲ್ಡ್ ಮತ್ತು ವಾಣಿಜ್ಯ ಬ್ಯಾಂಕ್ ಗಳ ಠೇವಣಿದಾರರ ಭದ್ರತೆಗಾಗಿ ಇನ್ಷೂರೆನ್ಸ್ ಮೊತ್ತವನ್ನು ಒಂದರಿಂದ ಐದು ಲಕ್ಷಕ್ಕೆ ಏರಿಕೆ.
2022ರಲ್ಲಿ ಜಿ20 ಅಧ್ಯಕ್ಷತೆ ವಹಿಸಲಿದೆ ಭಾರತ
ನಾನ್ ಗೆಜೆಟೆಡ್ ಹುದ್ದೆಗಳಿಗೆ ದೇಶದಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆ. ನ್ಯಾಷನಲ್ ರಿಕ್ರೂಟ್ ಮೆಂಟ್ಸ್ ಏಜೆನ್ಸಿ ಸ್ಥಾಪನೆ.
ಎಸ್ಸಿ, ಒಬಿಸಿಗೆ 85,000 ಕೋಟಿ
ಪರಿಶಿಷ್ಟ ಜಾತಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ 85,000 ಕೋಟಿ ಮತ್ತು ಪರಿಶಿಷ್ಟ ಪಂಗಡಗಳಿಗೆ 53,700 ಕೋಟಿ.
ಮಕ್ಕಳ ಆರೋಗ್ಯ ಸಂರಕ್ಷಣೆಗೆ ಇಂದ್ರಧನುಷ್ ಯೋಜನೆ ವಿಸ್ತರಣೆ
ಕೇಂದ್ರ ಬಜೆಟ್ 2020-21ರಲ್ಲಿ ಮಕ್ಕಳ ಆರೋಗ್ಯ ಸಂರಕ್ಷಣೆಗೆ ಇಂದ್ರಧನುಷ್ ಯೋಜನೆಯನ್ನು ವಿಸ್ತರಣೆಗೆ ಮುಂದಾಗಿದೆ.
ಪ್ರವಾಸೋದ್ಯಮ ವಲಯಕ್ಕೆ 2,500 ಕೋಟಿ ಮೀಸಲು.
ಸ್ವಚ್ಛ ಭಾರತ್ ಅಭಿಯಾನಕ್ಕೆ 12,300 ಕೋಟಿ ಮೀಸಲು.
ಶಿಕ್ಷಣ ಕ್ಷೇತ್ರಕ್ಕೆ 1 ಲಕ್ಷ ಕೋಟಿ ಅನುದಾನ : ಹೊಸ ಶಿಕ್ಷಣ ನೀತಿ ಜಾರಿ
2021 ಮಾರ್ಚ್ ಒಳಗಾಗಿ 150 ವಿಶ್ವವಿದ್ಯಾಲಯಗಳಲ್ಲಿ ನೂತನ ಕೋರ್ಸ್ಗಳನ್ನು ಆರಂಭಿಸಲಾಗುವುದು. ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವುದು ನಮ್ಮ ಗುರಿ ಎಂದು ನಿರ್ಮಲಾ ಸೀತಾರಾಮನ್ 2020ರ ಕೇಂದ್ರ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.
ಮೊಬೈಲ್ ಫೋನ್, ಸೆಮಿ ಕಂಡಕ್ಟರ್ಸ್ ತಯಾರಿ
ಮೊಬೈಲ್ ಫೋನ್, ಸೆಮಿ ಕಂಡಕ್ಟರ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಸಲಕರಣೆಗಳ ತಯಾರಿಗೆ ಯೋಜನೆ ಪ್ರಸ್ತಾವ.
ಬೆಂಗಳೂರು ಸಬರ್ಬನ್ ಸಾರಿಗೆ ಯೋಜನೆಗಳಿಗೆ 18,600 ಕೋಟಿ ರು. ಪ್ರಸ್ತಾವ.
ಪೌಷ್ಟಿಕಾಂಶ ಕಾರ್ಯಕ್ರಮಗಳಿಗೆ 35,600 ಕೋಟಿ ಮೀಸಲು.
ಹಿರಿಯ ನಾಗರಿಕರಿಗೆ ಹೆಚ್ಚುವರಿ 9,500 ಕೋಟಿ
ಹಿರಿಯ ನಾಗರಿಕರಿಗಾಗಿ ಹೆಚ್ಚುವರಿಯಾಗಿ 9,500 ಕೋಟಿ ಘೋಷಣೆ.
ಮಹಿಳೆಯರಿಗಾಗಿ ರೂಪಿಸಲಾದ ಯೋಜನೆಗಳಿಗೆ 28,600 ಕೋಟಿ ಸರ್ಕಾರದಿಂದ ಮೀಸಲು
ಡೇಟಾ ಸೆಂಟರ್ ಪಾರ್ಕ್ ಗಳ ಸ್ಥಾಪನೆ
ದೇಶದಾದ್ಯಂತ ಡೇಟಾ ಸೆಂಟರ್ ಪಾರ್ಕ್ ಗಳ ಸ್ಥಾಪನೆಗೆ ಪ್ರಸ್ತಾವ.
ಉಡಾನ್ ಯೋಜನೆ ಆಡಿಯಲ್ಲಿ ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣ ಸೇರ್ಪಡೆ. ವಿಮಾನಗಳ ಸಂಖ್ಯೆ ದುಪ್ಪಟ್ಟು ಮಾಡಲಾಗುವುದು.
ರೈಲ್ವೆ ಹಳಿಗಳ ಪಕ್ಕ ಸೋಲಾರ್ ಪ್ಯಾನೆಲ್
ದೆಹಲಿ- ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ ಆರಂಭಿಸಲಾಗುವುದು. ರೈಲ್ವೆ ಹಳಿಗಳ ಪಕ್ಕದಲ್ಲಿ, ರೈಲ್ವೆ ಇಲಾಖೆ ಭೂಮಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗುವುದು.
ಪದವಿ ಮಟ್ಟದ ಶಿಕ್ಷಣದ ಆನ್ ಲೈನ್ ಪ್ರೋಗ್ರಾಂ
ಪದವಿ ಮಟ್ಟದಲ್ಲಿ ಪೂರ್ಣ ಪ್ರಮಾಣದ ಶಿಕ್ಷಣದ ಪ್ರೋಗ್ರಾಂಗಳನ್ನು ಟಾಪ್ ನೂರು ಶಿಕ್ಷಣ ಸಂಸ್ಥೆಗಳಲ್ಲಿ ಒದಗಿಸಲಾಗುವುದು.
ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ 27,300 ಕೋಟಿ
ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ 27,300 ಕೋಟಿ ರುಪಾಯಿ ಒದಗಿಸುವ ಪ್ರಸ್ತಾವ.
ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ
2023ಕ್ಕೆ ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ ಪೂರ್ಣ
9,000 ಕಿ. ಮೀ
ರಫ್ತು ಹಬ್ ಗಳಾಗಿ ಅಭಿವೃದ್ಧಿ
ಪ್ರತಿ ಜಿಲ್ಲೆಯನ್ನು ರಫ್ತು ಹಬ್ ಗಳಾಗಿ ಅಭಿವೃದ್ಧಿ. ಇದಕ್ಕಾಗಿ ವ್ಯವಸ್ಥೆ ಮಾಡಲಾಗುವುದು. ಇದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ವರ್ತಕರಿಗೆ ಅನುಕೂಲ.
ಮೆಡಿಕಲ್ ಕಾಲೇಜನ್ನು ಜಿಲ್ಲಾಸ್ಪತ್ರೆಗೆ ಸೇರ್ಪಡೆ
ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲಾಸ್ಪತ್ರೆಗೆ ಮೆಡಿಕಲ್ ಕಾಲೇಜು ಸೇರಿಸಿಕೊಳ್ಳಲು ಪ್ರಸ್ತಾವ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಪಡೆದು, ಚರ್ಚಿಸಲಾಗುವುದು.
ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳಿಗೆ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿಗೆ 2.83 ಲಕ್ಷ ಕೋಟಿ.
6.11 ಕೋಟಿ ರೈತರು 'ಫಾರ್ಮರ್ಸ್ ಫಸಲ್ ಬಿಮಾ' ಯೋಜನೆ ಅಡಿ ವಿಮೆ ಪಡೆದಿದ್ದು, ಸರ್ಕಾರದ ಯೋಜನೆಗಳಿಂದ ಅವರಿಗೆ ಅನುಕೂಲ ಆಗಲಿದೆ.
ಯುವ ಎಂಜಿನಿಯರ್ ಗಳಿಗೆ ಇಂಟರ್ನ್ ಷಿಪ್
ಯುವ ಎಂಜಿನಿಯರ್ ಗಳಿಗೆ ಶೀಘ್ರದಲ್ಲಿ ಇಂಟರ್ನ್ ಷಿಪ್! ಸ್ಥಳೀಯ ನಗರ ಸಂಸ್ಥೆಗಳಿಗೆ ಅವಕಾಶ ನೀಡಲು ನಿರ್ದೇಶನ. ಇದರಿಂದ ಎಂಜಿನಿಯರಿಂಗ್ ಗಳು ಸಹಾಯ ಮಾಡುತ್ತಾರೆ, ತಾವೂ ಕಲಿಯುತ್ತಾರೆ.
ಟಿಬಿ ಹಾರೇಗಾ, ದೇಶ್ ಜೀತೇಗಾ: ಜನ್ ಔಷಧಿ ಯೋಜನೆಯು ಎರಡು ಸಾವಿರ ಔಷಧಿ ಮತ್ತು ಇತರ ಔಷಧಿಗಳನ್ನು ಒದಗಿಸುತ್ತದೆ.
ಹೊಸ ಶಿಕ್ಷಣ ನೀತಿ ಪ್ರಕಟ, ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರು ಅನುದಾನ
ಶಿಕ್ಷಣ ಕ್ಷೇತ್ರದಲ್ಲಿ ಎಫ್ಡಿಐಗೆ ಒತ್ತು, ಸ್ಟಡಿ ಇನ್ ಇಂಡಿಯಾ ಯೋಜನೆ ಘೋಷಣೆ
ಹೆಚ್ಚು ಆಸ್ಪತ್ರೆಗಳ ಅಗತ್ಯ ಇದೆ
ಇನ್ನಷ್ಟು ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಇಂಧ್ರಧನುಷ್ ಯೋಜನೆ. ಜಲ್ ಜೀವನ್ ಅಭಿಯಾನ ಮತ್ತು ಒಳಚರಂಡಿ ಅಭಿಯಾನದ ಮೂಲಕ ಬಡವರ ಆರೋಗ್ಯ ಸ್ಥಿತಿ ಉತ್ತಮಗೊಳಿಸಲು ಯತ್ನ. ಆಯುಷ್ಮಾನ್ ಭಾರತ್ ಯೋಜನೆ ಅಡಿ ಇಪ್ಪತ್ತು ಸಾವಿರ ಆಸ್ಪತ್ರೆಗಳು. ಟಯರ್ 2 ನಗರಗಳಲ್ಲಿ ಹೆಚ್ಚು ಆಸ್ಪತ್ರೆಗಳ ಅಗತ್ಯ ಇದೆ.
ರಾಷ್ಟ್ರೀಯ ಶೀತಲೀಗೃಹ ಜಾಲ ನಿರ್ಮಾಣ
ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಶೀತಲೀಗೃಹ ಜಾಲ ನಿರ್ಮಾಣಕ್ಕೆ ನಬಾರ್ಡ್ ನಿಂದ ಹಣಕಾಸು ಯೋಜನೆ ವಿಸ್ತರಣೆ.
ಸ್ವಚ್ಛಭಾರತ್ ಯೋಜನೆಗೆ 12,300 ಕೋಟಿ ರು ಅನುದಾನ.
ಜಲ ಜೀವನ್ ಮಿಷನ್ ಯೋಜನೆಗೆ 3.6 ಲಕ್ಷ ಕೋಟಿ ರು ಅನುದಾನ
112 ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಡೆಯಡಿ ಆಸ್ಪತ್ರೆ ನಿರ್ಮಾಣ.
2024ರ ವೇಳೆಗೆ ದೇಶದೆಲ್ಲೆಡೆ ಜನೌಷಧ ಕೇಂದ್ರಗಳನ್ನು ವಿಸ್ತರಿಸಲು ಬದ್ಧ
ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಿಗೆ ಕೃಷಿ ಉಡಾನ್ ಯೋಜನೆ ಆರಂಭಿಸಲಾಗುವುದು.
ನೀರಿನ ಸಮಸ್ಯೆ ಇರುವ ದೇಶದ 100 ಜಿಲ್ಲೆಗಳಿಗೆ ಸಮಗ್ರ ಯೋಜನೆ.
ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ 6.11 ಕೋಟಿ ರೈತರಿಗೆ ವಿಮೆ ಪ್ರಯೋಜನೆ ಸಿಕ್ಕಿದೆ
ಸ್ವ ಸಹಾಯ ಗುಂಪುಗಳಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ. ಈ ಗುಂಪುಗಳನ್ನು ಧಾನ್ಯ ಲಕ್ಷ್ಮಿ ಎಂದು ಕರೆಯಲಾಗುವುದು. ನಬಾರ್ಡ್, ಮುದ್ರಾ ಯೋಜನೆಯಡಿ ನೆರವು ನೀಡಲಾಗುವುದು.
ರೈತರಿಗಾಗಿ ಕಿಸಾನ್ ರೈಲು ಘೋಷಣೆ
ರೈತರಿಗಾಗಿ ಕಿಸಾನ್ ರೈಲು ಘೋಷಣೆ, ಪಿಪಿಪಿ ಮಾದರಿಯಲ್ಲಿ ನಿರ್ಮಾಣ
ಇಪ್ಪತ್ತು ಲಕ್ಷ ರೈತರಿಗೆ ಸೋಲಾರ್ ಪಂಪ್
ಸೋಲಾರ್ ಪ್ಯಾನೆಲ್ ಗೆ ಪಂಪ್ ಸೆಟ್ ಜೋಡಣೆ ಮಾಡಲಾಗುವುದು. ಇಪ್ಪತ್ತು ಲಕ್ಷ ರೈತರಿಗೆ ಸೋಲಾರ್ ಪಂಪ್ ನೀಡಲಾಗುವುದು. ಹದಿನೈದು ಲಕ್ಷ ಮಂದಿಗೆ ಸೌರಶಕ್ತಿ ಮೂಲಕ ಸಹಾಯ ಮಾಡಲಾಗುವುದು. ಬರಡು ಭೂಮಿಯನ್ನು ಗ್ರಿಡ್ ಗೆ ಮಾರಿ, ಹಣ ಗಳಿಸಬಹುದು.
ಭರವಸೆ ಭಾರತ, ಆರ್ಥಿಕ ಅಭಿವೃದ್ಧಿ ಮತ್ತು ಸಮಾಜದ ಕಾಳಜಿ ಮೂರು ಮುಖ್ಯ ವಿಚಾರಗಳ ಮೇಲೆ ಈ ಬಜೆಟ್ ನಿಂತಿದೆ.
ಐದನೇ ವಿಶ್ವದೊಡ್ಡ ಅತಿ ದೊಡ್ಡ ಅರ್ಥಿಕತೆ
2006-2016ರ ಮಧ್ಯೆ 27.10 ಕೋಟಿ ಮಂದಿಯನ್ನು ಬಡತನದಿಂದ ಹೊರತಂದಿದ್ದೇವೆ. ನಾವೀಗ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ.
ಬಡವರಿಗಾಗಿ ಒಳಚರಂಡಿ, ನೇರ ಅನುಕೂಲ ಯೋಜನೆ, ಆಯುಷ್ಮಾನ್ ಭಾರತ್, ಉಜ್ವಲ, ಸಾಲ ಬೆಂಬಲ, ಡಿಜಿಟಲ್ ಪ್ರಮಾಣದಲ್ಲಿ ಹೆಚ್ಚಳ, ಕೈಗೆಟುಕುವ ದರದಲ್ಲಿ ಮನೆ... ಹೀಗೆ ಹಲವು ಯೋಜನೆಗಳು ಮಾಡಿದ್ದೇವೆ.
ಒಂದು ಕುಟುಂಬವು ವೆಚ್ಚದ ಸರಾಸರಿ ನಾಲ್ಕು ಪರ್ಸೆಂಟ್ ಉಳಿತಾಯ ಮಾಡುತ್ತಿದೆ. ಸಮಸ್ಯೆಗಳನ್ನು ನಿವಾರಿಸುವಲ್ಲಿ ಜಿಎಸ್ ಟಿ ಕೌನ್ಸಿಲ್ ನಿರತವಾಗಿದೆ. ಹೊಸದಾಗಿ ಹದಿನೈದು ಲಕ್ಷ ತೆರಿಗೆದಾರರನ್ನು ಸೇರ್ಪಡೆ ಮಾಡಿದ್ದೇವೆ.
ಸರಕು ಮತ್ತು ಸೇವೆ ತೆರಿಗೆ ಐತಿಹಾಸಿಕವಾದದ್ದು. ಜಿಎಸ್ ಟಿ ಸುಧಾರಣೆಯ ಬಗ್ಗೆ ದೂರದೃಷ್ಟಿ ಇದ್ದ ದಿವಂಗತ ಅರುಣ್ ಜೇಟ್ಲಿ ಅವರಿಗೆ ಗೌರವ ಅರ್ಪಿಸುತ್ತೇನೆ
ಯುವಜನರು, ದಲಿತರು, ಮಹಿಳೆಯರಿಗೆ ಈ ಬಜೆಟ್ ಭರವಸೆ ನೀಡಲಿದೆ. ಹಿರಿಯರು, ಅಶಕ್ತರ ಕಾಳಜಿಯನ್ನು ಭಾರತದ ಸಮಾಜ ಮಾಡಲಿದೆ. ಮೂಲಭೂತ ಅಂಶಗಳು ಬಲಿಷ್ಠವಾಗಿದೆ.
ಆದಾಯ, ಖರೀದಿ ಸಾಮರ್ಥ್ಯ ವಿಸ್ತರಣೆ
ಆದಾಯ ಮತ್ತು ಖರೀದಿ ಸಾಮರ್ಥ್ಯ ವಿಸ್ತರಣೆ ಮಾಡುವ ಬಜೆಟ್ ಇದಾಗಿರುತ್ತದೆ: ನಿರ್ಮಲಾ ಸೀತಾರಾಮನ್
ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್.
ಕೇಂದ್ರ ಬಜೆಟ್ 2020ಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ.
ಜನವರಿಯಲ್ಲಿ ಜಿಎಸ್ ಟಿ ಸಂಗ್ರಹ 1,10,828 ಕೋಟಿ.
ಬಜೆಟ್ ವೀಕ್ಷಿಸಲು ಸಂಸತ್ ಗೆ ಬಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕುಟುಂಬ.
ರಿಯಲ್ ಎಸ್ಟೇಟ್ ವಲಯ ಮತ್ತಿತರ ನಿರೀಕ್ಷೆಗಳು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ ಗೆ ಆಗಮನ.
ಕೇಂದ್ರ ಬಜೆಟ್: ಸಂಸತ್ ಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.
ಏರಿಕೆ ಹಾದಿಗೆ ಸೆನ್ಸೆಕ್ಸ್, ನಿಫ್ಟಿ
ಆರಂಭದ ವಹಿವಾಟಿನ ಇಳಿಕೆ ನಂತರ ಮತ್ತೆ ಏರಿಕೆ ಹಾದಿಗೆ ಮರಳಿದ ಸೆನ್ಸೆಕ್ಸ್ ಹಾಗೂ ನಿಫ್ಟಿ.
ಬಜೆಟ್ ಪ್ರತಿಗಳನ್ನು ಸಂಸತ್ ಗೆ ತರುತ್ತಿರುವ ದೃಶ್ಯ.
ಸರ್ಕಾರಿ ಸ್ವಾಮ್ಯದ ಷೇರುಗಳಲ್ಲಿ ಮಾರಾಟದ ಒತ್ತಡ
ಸರ್ಕಾರಿ ಸ್ವಾಮ್ಯದ ಷೇರುಗಳಾದ ಒಎನ್ ಜಿಸಿ, ಆಯಿಲ್ ಇಂಡಿಯಾ ಮತ್ತು ಕೋಲ್ ಇಂಡಿಯಾ ಷೇರುಗಳು ವಾರ್ಷಿಕ ಕನಿಷ್ಠ ಮಟ್ಟಕ್ಕೆ. ಕೇಂದ್ರ ಬಜೆಟ್ ನಲ್ಲಿ ಬಂಡವಾಳ ಹಿಂತೆಗೆತದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಗಮನಿಸಿ, ಖರೀದಿಗೆ ಮುಂದಾಗಬಹುದು.
ಸಂಸತ್ತಿಗೆ ಆಗಮಿಸಿದ ವಿತ್ತ ಸಚಿವೆ
ಸಂಪುಟ ಸಭೆಯಲ್ಲಿ ಭಾಗಿಯಾಗಲು ನಿರ್ಮಲಾ ಸೀತಾರಾಮನ್, ಅನುರಾಗ್ ಠಾಕೂರ್ ಸಂಸತ್ತಿಗೆ ಆಗಮನ.
ಸಂಪ್ರದಾಯದಂತೆ ಕೇಂದ್ರ ಬಜೆಟ್ ಗೆ ಮುನ್ನ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11ಕ್ಕೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.
ರಿಯಲ್ ಎಸ್ಟೇಟ್ ವಲಯಕ್ಕೆ ಅಗತ್ಯ ಇರುವ 1 ಲಕ್ಷ ಕೋಟಿ ರುಪಾಯಿ ಸಾಲದ ನಿರೀಕ್ಷೆ.
ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 140 ಹಾಗೂ ನಿಫ್ಟಿ 126.50 ಅಂಶ ಕುಸಿತ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಭೇಟಿಗೆ ತೆರಳುತ್ತಿರುವ ನಿರ್ಮಲಾ ಸೀತಾರಾಮನ್, ಅನುರಾಗ್ ಠಾಕೂರ್ ಮತ್ತು ಹಣಕಾಸು ಸಚಿವಾಲಯದ ತಂಡ.
2020-21ರ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಬೆಳಗ್ಗೆ 10.15ಕ್ಕೆ ಸಂಪುಟ ಸಭೆ ನಡೆಯಲಿದೆ.
ಬಜೆಟ್ ಮಂಡನೆ ಆಗುವ ಮುನ್ನ ತಮ್ಮ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್.
ಬಜೆಟ್ ಮಂಡನೆ ಪೂರ್ವಭಾವಿಯಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಆರ್ಥಿಕ ಸಚಿವಾಲಯದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್
ಸೆಕ್ಷನ್ 80C ಅಡಿಯಲ್ಲಿ ಸದ್ಯಕ್ಕೆ ಇರುವ 1.5 ಲಕ್ಷ ಮಿತಿಯನ್ನು 2 ಲಕ್ಷಕ್ಕೆ ವಿಸ್ತರಿಸಬಹುದು ಎಂಬ ನಿರೀಕ್ಷೆಯಲ್ಲಿ ತೆರಿಗೆ ಪಾವತಿದಾರರು ಇದ್ದಾರೆ. ಇದರಿಂದ ಉಳಿತಾಯವನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ.
ಗ್ರಾಮೀಣ ಭಾಗದಲ್ಲಿ ಆದಾಯ ಹೆಚ್ಚಳ ಆಗಲು, ಬೇಡಿಕೆ ಸೃಷ್ಟಿ ಆಗಲು ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ತುರ್ತಾಗಿ ಗಮನ ನೀಡಬೇಕಾದ ವಲಯ ಇದು. ಕಳೆದ ಬಜೆಟ್ ಗಳಲ್ಲೂ ಕೃಷಿ ವಲಯಕ್ಕೆ ಆದ್ಯತೆ ಸಿಕ್ಕಿದೆ.
ಈ ದಿನ ಶನಿವಾರವೇ ಆದರೂ ಬೆಳಗ್ಗೆ 9.15ರಿಂದ ಮಧ್ಯಾಹ್ನ 3.30ರ ತನಕ ಎಂದಿನಂತೆ ಬಿಎಸ್ ಇ, ಎನ್ ಎಸ್ ಇ ಕಾರ್ಯ ನಿರ್ವಹಿಸಲಿದೆ. ಕೇಂದ್ರ ಬಜೆಟ್ ಕಾರಣಕ್ಕೆ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಾಣಿಸಬಹುದು ಎಂಬ ನಿರೀಕ್ಷೆ ಇದೆ.
ವಿತ್ತೀಯ ಕೊರತೆ ಪ್ರಮಾಣ ಎಷ್ಟಾಗಬಹುದು ಎಂಬ ಬಗ್ಗೆ ಕುತೂಹಲ ಬಹಳ ಇದೆ. 2019-20ನೇ ಆರ್ಥಿಕ ವರ್ಷದಲ್ಲಿ 3.6ರಿಂದ 3.8 ಪರ್ಸೆಂಟ್, 2020- 21ನೇ ಸಾಲಿಗೆ ಜಿಡಿಪಿಯ (ಅಂದಾಜು) 3.4 ಪರ್ಸೆಂಟ್ ನಿರೀಕ್ಷೆ ಮಾಡಲಾಗಿದೆ.
ಲಾಭಾಂಶ ವಿತರಣೆ ತೆರಿಗೆ, ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ (ಎಲ್ ಟಿಸಿಜಿ) ಕಡಿತದ ನಿರೀಕ್ಷೆಯಲ್ಲಿ ಹೂಡಿಕೆದಾರರು. "ಇದರಿಂದ ಸರ್ಕಾರಕ್ಕೆ ಬರುವ ಆದಾಯದಲ್ಲಿ ಹೆಚ್ಚಿನ ನಷ್ಟವಾಗಲ್ಲ. ಹೂಡಿಕೆದಾರರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ" ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಬಜೆಟ್ ಇರುವುದರಿಂದ ಬಿಎಸ್ ಇ, ಎನ್ ಎಸ್ ಇ ಷೇರು ಮಾರುಕಟ್ಟೆ ಶನಿವಾರವಾದರೂ ಕಾರ್ಯ ನಿರ್ವಹಿಸಲಿವೆ.
ಆದಾಯ ತೆರಿಗೆ ಪ್ರಮಾಣ ಇಳಿಕೆ ಮಾಡಬಹುದಾ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬಹುದಾ, ರಿಯಲ್ ಎಸ್ಟೇಟ್ ಗೆ ಉತ್ತೇಜನ, ರೈತರಿಗೆ ಏನು ಯೋಜನೆ ನೀಡುತ್ತಾರೆ ಇತ್ಯಾದಿ ಕುತೂಹಲ ಇದ್ದೇ ಇದೆ.
ರೈಲ್ವೆ ಬಜೆಟ್ ಕೂಡ ಕೇಂದ್ರ ಬಜೆಟ್ ಜತೆಗೆ ಆಗುವುದರಿಂದ ಮಹತ್ವದ ಖಾಸಗೀಕರಣ ಯೋಜನೆಗಳ ಬಗ್ಗೆ ಸರ್ಕಾರ ಏನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯೂ ಇದೆ.
Share This Article
English summary
Budget 2020 Live Updates in Kannada
Budget 2020 Live Updates in Kannada: Catch all the live updates on Budget 2020 latest news and updates. Check budget expectations, budget opinions, budget reactions.
Story first published: Saturday, February 1, 2020, 18:13 [IST]