ಕೇಂದ್ರ ಬಜೆಟ್ 2020 ಇನ್ನೂ ಕೆಲ ದಶಕಗಳ ನೆನಪಿಟ್ಟುಕೊಳ್ಳುವಂಥದ್ದು ಖಂಡಿತಾ ಆಗಿರುತ್ತದೆ. ಭಾರತದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಿಂದ ಏರು ಗತಿಯ ಕಡೆಗೆ ಕರೆದೊಯ್ಯುವ ಯೋಜನೆಗಳನ್ನು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮಾಡಲೇಬೇಕಿದೆ. ಅತಿಯಾದ ನಿರೀಕ್ಷೆ ಹಾಗೂ ಅಗ್ನಿ ಪರೀಕ್ಷೆ ಎರಡನ್ನೂ ಸಂಭಾಳಿಸಬೇಕಿದೆ ಈ ಬಜೆಟ್.
ಆದ್ದರಿಂದ ಆ ಯತ್ನದಲ್ಲಿ ಸಫಲವಾದರೂ ವಿಫಲವಾದರೂ ಇತಿಹಾಸದಲ್ಲಿ ದಾಖಲಾರ್ಹವಂತೂ ಹೌದು. ಹನ್ನೆರಡು ವರ್ಷದ ನಂತರ ಆರ್ಥಿಕ ಕುಸಿತದ ಇಳಿಜಾರು ಆತಂಕ ಸೃಷ್ಟಿಸುತ್ತಿದೆ. ದಿಟ್ಟ ಹಾಗೂ ಸ್ಪಷ್ಟ ನಿರ್ಧಾರ-ಯೋಜನೆ-ಉತ್ತೇಜನ ಎಲ್ಲವೂ ಪ್ರದರ್ಶಿಸಬೇಕು.
ಅಂದ ಹಾಗೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲನೇ ಸಲಕ್ಕೆ ಮಂಡಿಸಿದ್ದು ಮಧ್ಯಂತರ ಬಜೆಟ್ ಆಗಿತ್ತು. ಆರೇಳು ತಿಂಗಳೊಳಗೆ ಬಂದೇ ಬಿಟ್ಟಿದೆ ಈ ಪೂರ್ಣ ಪ್ರಮಾಣದ ಬಜೆಟ್. ಈ ಬಾರಿ ಅವರು ವಿರೋಧ ಪಕ್ಷಗಳಿಗೆ ಹೇಳಬೇಕಾದ್ದೇನೋ ಇರುವಂತೆ ಕಾಣುವುದಿಲ್ಲ. ಆದರೆ ಸಮಾಜದ ನಾನಾ ವಲಯಗಳ ಆಶೋತ್ತರಗಳಿಗೆ ಸ್ಪಂದಿಸಬೇಕಿದೆ.
ಬಜೆಟ್ ಅಂದರೆ, ಮುಂದಿನ ಒಂದು ವರ್ಷದಲ್ಲಿ ಸರ್ಕಾರಕ್ಕೆ ಬರಬಹುದಾದ ಆದಾಯ ಮತ್ತು ಅದನ್ನು ವೆಚ್ಚ ಮಾಡುವ ಬಗೆಯನ್ನು ಜನರ ಮುಂದಿಡುವ ಅಂದಾಜು ಪಟ್ಟಿ. ಏನಿದೆ ನಿರ್ಮಲಾ ಸೀತಾರಾಮನ್ ಮುಂದಿಡುವ ಅಂದಾಜು ಪಟ್ಟಿಯಲ್ಲಿ ಎಂಬುದರ ಲೈವ್ ಅಪ್ ಡೇಟ್ಸ್ ಇಲ್ಲಿದೆ.
6:13 PM
Feb 1, 2020
ಈ ದಶಕದ ಮೊದಲ ಬಜೆಟ್ಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಂಡವನ್ನು ನಾನು ಮೊದಲು ಅಭಿನಂದಿಸುತ್ತೇನೆ. 2020ರ ಕೇಂದ್ರ ಬಜೆಟ್ ಆದಾಯ ಮತ್ತು ಹೂಡಿಕೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹಣಕಾಸು ವ್ಯವಸ್ಥೆಯಲ್ಲಿ ಹೊಸ ಚೈತನ್ಯ ಮತ್ತು ಸಾಲದ ಹರಿವನ್ನು ತರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
6:13 PM
Feb 1, 2020
ಈ ಬಜೆಟ್ ದೇಶದ ಪ್ರಸ್ತುತ ಅಗತ್ಯತೆಗಳ ಜೊತೆಗೆ ಭವಿಷ್ಯದ ನಿರೀಕ್ಷೆಗಳನ್ನೂ ಪೂರೈಸಲಿದೆ. ನಾವು ಕೃಷಿಗೆ ಒಂದು ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ, ಇದು ಸಾಂಪ್ರದಾಯಿಕ ವಿಧಾನಗಳ ಜೊತೆಗೆ ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆಗಳಲ್ಲಿ ಮೌಲ್ಯವರ್ಧನೆಯನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
5:15 PM
Feb 1, 2020
ಆದಾಯ ತೆರಿಗೆಯ ಎಲ್ಲ ವಿನಾಯಿತಿ ತೆಗೆಯುವ ಉದ್ದೇಶವಿದೆ: ಸಚಿವೆ
ತೆರಿಗೆ ವಿನಾಯಿತಿ- ಕಡಿತ ಬಿಟ್ಟುಕೊಡಬೇಕು ಎಂಬ ಷರತ್ತಿನ ಮೇಲೆ ತೆರಿಗೆ ದರ ಇಳಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಭವಿಷ್ಯದಲ್ಲಿ ಆದಾಯ ತೆರಿಗೆಯ ಎಲ್ಲ ವಿನಾಯಿತಿಯನ್ನು ತೆಗೆಯಲು ಸರ್ಕಾರ ಉದ್ದೇಶಿಸಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅಗತ್ಯ ಬಿದ್ದಾಗ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಹೆಚ್ಚುವರಿ ಬಂಡವಾಳ ಪೂರೈಸುವುದಾಗಿ ಹೇಳಿದ್ದಾರೆ.
3:52 PM
Feb 1, 2020
160 ನಿಮಿಷಗಳ ನಂತರವೂ ಭಾಷಣ ಪೂರ್ತಿ ಆಗಲಿಲ್ಲ
ನಿರ್ಮಲಾ ಸೀತಾರಾಮನ್ ಅವರು ಶನಿವಾರ ತಮ್ಮ ಅನಾರೋಗ್ಯದ ಕಾರಣ ಭಾಷಣ ಓದುವುದನ್ನು ಮೊಟಕುಗೊಳಿಸಿದರು. ದಾಖಲೆಯ 160 ನಿಮಿಷಗಳ ನಂತರವೂ ಅವರ ಭಾಷಣ ಬಾಕಿ ಇತ್ತು. ಇನ್ನೂ ಎರಡು ಪುಟಗಳನ್ನು ಓದಬೇಕಿತ್ತು. ಅಷ್ಟರಲ್ಲಿ ಬಳಲಿದ ಅವರು, ಹಣೆಯ ಮೇಲಿನ ಬೆವರು ಒರೆಸಿಕೊಂಡು, ಕೂತರು.
2:48 PM
Feb 1, 2020
12.7 ಲಕ್ಷ ಕೋಟಿ ವರ್ಗಾವಣೆ
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 12.7 ಲಕ್ಷ ಕೋಟಿ ವರ್ಗಾವಣೆ ಮಾಡಲಿರುವ ಕೇಂದ್ರ.
ಆದಾಯ ತೆರಿಗೆದಾರರಿಗೆ ಸಿಹಿ ಸುದ್ದಿ:5 Lakh ಯಾವುದೇ ತೆರಿಗೆ ಇಲ್ಲ
2020-21ರ ಕೇಂದ್ರ ಬಜೆಟ್ನಲ್ಲಿ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಈಗಿನ ಆದಾಯ ತೆರಿಗೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆಗೆ ಮುಂದಾಗಿದ್ದು ತೆರಿಗೆ ದರವನ್ನು ಇಳಿಸಿದೆ. ಐದು ಲಕ್ಷದವರೆಗೆ ಆದಾಯ ಪಡೆಯುವವರಿಗೆ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ
ಪ್ಯಾನ್ ವಿತರಣೆ ಪ್ರಕ್ರಿಯೆ ಇನ್ನಷ್ಟು ಸಲೀಸು. ಆಧಾರ್ ನ ಮೂಲವಾಗಿಟ್ಟುಕೊಂಡು ತಕ್ಷಣ ಪ್ಯಾನ್ ವಿತರಿಸುವ ಯೋಜನೆ ಪರಿಚಯಿಸಲಿದೆ ಸರ್ಕಾರ.
1:40 PM
Feb 1, 2020
ತೆರಿಗೆ
ದತ್ತಿ ಸಂಸ್ಥೆಗಳ ಆದಾಯಕ್ಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ; ಅಂಥ ಸಂಸ್ಥೆಗಳಿಗೆ ನೀಡುವ ದೇಣಿಗೆಗಳಿಗೆ ತೆರಿಗೆದಾರರಿಗೆ ವಿನಾಯಿತಿ ದೊರೆಯುತ್ತದೆ.
ದೇಶೀಯವಾಗಿ ವಿದ್ಯುತ್ ಉತ್ಪಾದನೆ ಮಾಡುವ ಹೊಸ ಕಂಪೆನಿಗಳಿಗೆ ಕಾರ್ಪೊರೇಟ್ ತೆರೆ ಕಡಿತದ ವಿಸ್ತರಣೆ
ಲಾಭಾಂಶ ವಿತರಣೆ ತೆರಿಗೆಯನ್ನು ಡಿವಿಡೆಂಡ್ ಪಡೆಯುವವರೇ ಪಾವತಿಸಬೇಕು.
1:39 PM
Feb 1, 2020
ಸರಳ ತೆರಿಗೆ
ನೂರಕ್ಕೂ ಹೆಚ್ಚಿದ್ದ ತೆರಿಗೆ ವಿನಾಯಿತಿಗಳಲ್ಲಿ ಎಪ್ಪತ್ತಕ್ಕೂ ಹೆಚ್ಚನ್ನು ತೆಗೆಯಲಾಗಿದೆ. ಆ ಮೂಲಕ ತೆರಿಗೆ ರಿಟರ್ನ್ಸ್ ಸರಳಗೊಳಿಸಲಾಗಿದೆ.
1:37 PM
Feb 1, 2020
ಮನೆಗಳಿಗೆ ತೆರಿಗೆ ವಿನಾಯಿತಿ
ಕೈಗೆಟುಕುವ ದರದ ಮನೆಗಳಿಗೆ ತೆರಿಗೆ ವಿನಾಯಿತಿ.
1:24 PM
Feb 1, 2020
ಹಾಲು ಸಂಸ್ಕರಣೆ
ಹಾಲು ಸಂಸ್ಕರಣಾ ಸಾಮರ್ಥ್ಯ ದ್ವಿಗುಣ ಮಾಡುವ ಗುರಿ.
1:18 PM
Feb 1, 2020
ಷೇರು ಹೂಡಿಕೆದಾರರಿಗೆ ಸಿಹಿ ಸುದ್ದಿ
ಲಾಭಾಂಶ ವಿತರಣೆ ತೆರಿಗೆ ತೆಗೆದ ಕೇಂದ್ರ ಸರ್ಕಾರ
1:15 PM
Feb 1, 2020
ವಿತ್ತೀಯ ಕೊರತೆ
2019- 20ನೇ ಸಾಲಿಗೆ 3.8% ,
2020- 21ಕ್ಕೆ 3.5%
1:12 PM
Feb 1, 2020
ಆದಾಯ ತೆರಿಗೆ ದರ
5ರಿಂದ 7.5 ಲಕ್ಷ 10 ಪರ್ಸೆಂಟ್,
7.5 ಲಕ್ಷದಿಂದ 10 ಲಕ್ಷ 15 ಪರ್ಸೆಂಟ್,
10 ಲಕ್ಷದಿಂದ 12.5 ಲಕ್ಷ 20 ಪರ್ಸೆಂಟ್,
12.5 ಲಕ್ಷದಿಂದ 15 ಲಕ್ಷ 25 ಪರ್ಸೆಂಟ್,
15 ಲಕ್ಷ ಮೇಲ್ಪಟ್ಟ ಅದಾಯಕ್ಕೆ 30 ಪರ್ಸೆಂಟ್.
1:07 PM
Feb 1, 2020
ಆದಾಯ ತೆರಿಗೆ
ಆದಾಯ ತೆರಿಗೆ ಪಾವತಿದಾರರಿಗೆ ಭರ್ಜರಿ ಸಿಹಿ ಸುದ್ದಿ.
1:06 PM
Feb 1, 2020
ಅಪ್ಲಿಕೇಷನ್ ಆಧಾರಿತ ಸಾಲ ನೀಡುವ ಉತ್ಪನ್ನ
ಅಪ್ಲಿಕೇಷನ್ ಆಧಾರಿತ ಹಣಕಾಸು ಸಾಲ ನೀಡುವ ಉತ್ಪನ್ನ ಆರಂಭಿಸಲಾಗುವುದು. ಎಂಎಸ್ ಎಂಇಗಳಿಗೆ ಪಾವತಿ ವಿಳಂಬ ಹಾಗೂ ನಗದು ಹರಿವಿನ ವ್ಯತ್ಯಾಸ ಸರಿಪಡಿಸಲು ಇದರಿಂದ ನೆರವು,
1:04 PM
Feb 1, 2020
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 18,600 ಕೋಟಿ
ಬೆಂಗಳೂರು ಸಬ್ ಅರ್ಬನ್ (ಉಪ ನಗರ) ರೈಲು ಯೋಜನೆಗೆ 2020ರ ಕೇಂದ್ರ ಬಜೆಟ್ನಲ್ಲಿ ಒತ್ತು ನೀಡಲಾಗಿದೆ.
ಶಿಕ್ಷಣ ಕ್ಷೇತ್ರಕ್ಕೆ 1 ಲಕ್ಷ ಕೋಟಿ ಅನುದಾನ : ಹೊಸ ಶಿಕ್ಷಣ ನೀತಿ ಜಾರಿ
2021 ಮಾರ್ಚ್ ಒಳಗಾಗಿ 150 ವಿಶ್ವವಿದ್ಯಾಲಯಗಳಲ್ಲಿ ನೂತನ ಕೋರ್ಸ್ಗಳನ್ನು ಆರಂಭಿಸಲಾಗುವುದು. ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವುದು ನಮ್ಮ ಗುರಿ ಎಂದು ನಿರ್ಮಲಾ ಸೀತಾರಾಮನ್ 2020ರ ಕೇಂದ್ರ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.
ಮೊಬೈಲ್ ಫೋನ್, ಸೆಮಿ ಕಂಡಕ್ಟರ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಸಲಕರಣೆಗಳ ತಯಾರಿಗೆ ಯೋಜನೆ ಪ್ರಸ್ತಾವ.
12:28 PM
Feb 1, 2020
ಬೆಂಗಳೂರಿಗೆ 18,600 ಕೋಟಿ
ಬೆಂಗಳೂರು ಸಬರ್ಬನ್ ಸಾರಿಗೆ ಯೋಜನೆಗಳಿಗೆ 18,600 ಕೋಟಿ ರು. ಪ್ರಸ್ತಾವ.
12:27 PM
Feb 1, 2020
35,600 ಕೋಟಿ
ಪೌಷ್ಟಿಕಾಂಶ ಕಾರ್ಯಕ್ರಮಗಳಿಗೆ 35,600 ಕೋಟಿ ಮೀಸಲು.
12:27 PM
Feb 1, 2020
ಹಿರಿಯ ನಾಗರಿಕರಿಗೆ ಹೆಚ್ಚುವರಿ 9,500 ಕೋಟಿ
ಹಿರಿಯ ನಾಗರಿಕರಿಗಾಗಿ ಹೆಚ್ಚುವರಿಯಾಗಿ 9,500 ಕೋಟಿ ಘೋಷಣೆ.
12:27 PM
Feb 1, 2020
ಮಹಿಳೆಯರಿಗೆ 28,600 ಕೋಟಿ
ಮಹಿಳೆಯರಿಗಾಗಿ ರೂಪಿಸಲಾದ ಯೋಜನೆಗಳಿಗೆ 28,600 ಕೋಟಿ ಸರ್ಕಾರದಿಂದ ಮೀಸಲು
12:23 PM
Feb 1, 2020
ಡೇಟಾ ಸೆಂಟರ್ ಪಾರ್ಕ್ ಗಳ ಸ್ಥಾಪನೆ
ದೇಶದಾದ್ಯಂತ ಡೇಟಾ ಸೆಂಟರ್ ಪಾರ್ಕ್ ಗಳ ಸ್ಥಾಪನೆಗೆ ಪ್ರಸ್ತಾವ.
12:23 PM
Feb 1, 2020
ವಿಮಾನಗಳ ಸಂಖ್ಯೆ ದುಪ್ಪಟ್ಟು
ಉಡಾನ್ ಯೋಜನೆ ಆಡಿಯಲ್ಲಿ ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣ ಸೇರ್ಪಡೆ. ವಿಮಾನಗಳ ಸಂಖ್ಯೆ ದುಪ್ಪಟ್ಟು ಮಾಡಲಾಗುವುದು.
12:17 PM
Feb 1, 2020
ರೈಲ್ವೆ ಹಳಿಗಳ ಪಕ್ಕ ಸೋಲಾರ್ ಪ್ಯಾನೆಲ್
ದೆಹಲಿ- ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ ಆರಂಭಿಸಲಾಗುವುದು. ರೈಲ್ವೆ ಹಳಿಗಳ ಪಕ್ಕದಲ್ಲಿ, ರೈಲ್ವೆ ಇಲಾಖೆ ಭೂಮಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗುವುದು.
12:15 PM
Feb 1, 2020
ಪದವಿ ಮಟ್ಟದ ಶಿಕ್ಷಣದ ಆನ್ ಲೈನ್ ಪ್ರೋಗ್ರಾಂ
ಪದವಿ ಮಟ್ಟದಲ್ಲಿ ಪೂರ್ಣ ಪ್ರಮಾಣದ ಶಿಕ್ಷಣದ ಪ್ರೋಗ್ರಾಂಗಳನ್ನು ಟಾಪ್ ನೂರು ಶಿಕ್ಷಣ ಸಂಸ್ಥೆಗಳಲ್ಲಿ ಒದಗಿಸಲಾಗುವುದು.
12:11 PM
Feb 1, 2020
ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ 27,300 ಕೋಟಿ
ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ 27,300 ಕೋಟಿ ರುಪಾಯಿ ಒದಗಿಸುವ ಪ್ರಸ್ತಾವ.
12:11 PM
Feb 1, 2020
ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ
2023ಕ್ಕೆ ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ ಪೂರ್ಣ
9,000 ಕಿ. ಮೀ
12:09 PM
Feb 1, 2020
ರಫ್ತು ಹಬ್ ಗಳಾಗಿ ಅಭಿವೃದ್ಧಿ
ಪ್ರತಿ ಜಿಲ್ಲೆಯನ್ನು ರಫ್ತು ಹಬ್ ಗಳಾಗಿ ಅಭಿವೃದ್ಧಿ. ಇದಕ್ಕಾಗಿ ವ್ಯವಸ್ಥೆ ಮಾಡಲಾಗುವುದು. ಇದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ವರ್ತಕರಿಗೆ ಅನುಕೂಲ.
12:05 PM
Feb 1, 2020
ಮೆಡಿಕಲ್ ಕಾಲೇಜನ್ನು ಜಿಲ್ಲಾಸ್ಪತ್ರೆಗೆ ಸೇರ್ಪಡೆ
ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲಾಸ್ಪತ್ರೆಗೆ ಮೆಡಿಕಲ್ ಕಾಲೇಜು ಸೇರಿಸಿಕೊಳ್ಳಲು ಪ್ರಸ್ತಾವ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಪಡೆದು, ಚರ್ಚಿಸಲಾಗುವುದು.
12:00 PM
Feb 1, 2020
2.83 ಲಕ್ಷ ಕೋಟಿ
ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳಿಗೆ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿಗೆ 2.83 ಲಕ್ಷ ಕೋಟಿ.
12:00 PM
Feb 1, 2020
ರೈತರಿಗೆ ಅನುಕೂಲ
6.11 ಕೋಟಿ ರೈತರು 'ಫಾರ್ಮರ್ಸ್ ಫಸಲ್ ಬಿಮಾ' ಯೋಜನೆ ಅಡಿ ವಿಮೆ ಪಡೆದಿದ್ದು, ಸರ್ಕಾರದ ಯೋಜನೆಗಳಿಂದ ಅವರಿಗೆ ಅನುಕೂಲ ಆಗಲಿದೆ.
11:56 AM
Feb 1, 2020
ಯುವ ಎಂಜಿನಿಯರ್ ಗಳಿಗೆ ಇಂಟರ್ನ್ ಷಿಪ್
ಯುವ ಎಂಜಿನಿಯರ್ ಗಳಿಗೆ ಶೀಘ್ರದಲ್ಲಿ ಇಂಟರ್ನ್ ಷಿಪ್! ಸ್ಥಳೀಯ ನಗರ ಸಂಸ್ಥೆಗಳಿಗೆ ಅವಕಾಶ ನೀಡಲು ನಿರ್ದೇಶನ. ಇದರಿಂದ ಎಂಜಿನಿಯರಿಂಗ್ ಗಳು ಸಹಾಯ ಮಾಡುತ್ತಾರೆ, ತಾವೂ ಕಲಿಯುತ್ತಾರೆ.
11:56 AM
Feb 1, 2020
ಟಿಬಿ ಹಾರೇಗಾ, ದೇಶ್ ಜೀತೇಗಾ
ಟಿಬಿ ಹಾರೇಗಾ, ದೇಶ್ ಜೀತೇಗಾ: ಜನ್ ಔಷಧಿ ಯೋಜನೆಯು ಎರಡು ಸಾವಿರ ಔಷಧಿ ಮತ್ತು ಇತರ ಔಷಧಿಗಳನ್ನು ಒದಗಿಸುತ್ತದೆ.
11:55 AM
Feb 1, 2020
ಹೊಸ ಶಿಕ್ಷಣ ನೀತಿ
ಹೊಸ ಶಿಕ್ಷಣ ನೀತಿ ಪ್ರಕಟ, ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರು ಅನುದಾನ
11:53 AM
Feb 1, 2020
ಶಿಕ್ಷಣ ಕ್ಷೇತ್ರ
ಶಿಕ್ಷಣ ಕ್ಷೇತ್ರದಲ್ಲಿ ಎಫ್ಡಿಐಗೆ ಒತ್ತು, ಸ್ಟಡಿ ಇನ್ ಇಂಡಿಯಾ ಯೋಜನೆ ಘೋಷಣೆ
11:50 AM
Feb 1, 2020
ಹೆಚ್ಚು ಆಸ್ಪತ್ರೆಗಳ ಅಗತ್ಯ ಇದೆ
ಇನ್ನಷ್ಟು ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಇಂಧ್ರಧನುಷ್ ಯೋಜನೆ. ಜಲ್ ಜೀವನ್ ಅಭಿಯಾನ ಮತ್ತು ಒಳಚರಂಡಿ ಅಭಿಯಾನದ ಮೂಲಕ ಬಡವರ ಆರೋಗ್ಯ ಸ್ಥಿತಿ ಉತ್ತಮಗೊಳಿಸಲು ಯತ್ನ. ಆಯುಷ್ಮಾನ್ ಭಾರತ್ ಯೋಜನೆ ಅಡಿ ಇಪ್ಪತ್ತು ಸಾವಿರ ಆಸ್ಪತ್ರೆಗಳು. ಟಯರ್ 2 ನಗರಗಳಲ್ಲಿ ಹೆಚ್ಚು ಆಸ್ಪತ್ರೆಗಳ ಅಗತ್ಯ ಇದೆ.
11:49 AM
Feb 1, 2020
ರಾಷ್ಟ್ರೀಯ ಶೀತಲೀಗೃಹ ಜಾಲ ನಿರ್ಮಾಣ
ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಶೀತಲೀಗೃಹ ಜಾಲ ನಿರ್ಮಾಣಕ್ಕೆ ನಬಾರ್ಡ್ ನಿಂದ ಹಣಕಾಸು ಯೋಜನೆ ವಿಸ್ತರಣೆ.
11:49 AM
Feb 1, 2020
ಸ್ವಚ್ಛಭಾರತ್ ಯೋಜನೆ
ಸ್ವಚ್ಛಭಾರತ್ ಯೋಜನೆಗೆ 12,300 ಕೋಟಿ ರು ಅನುದಾನ.
ಜಲ ಜೀವನ್ ಮಿಷನ್ ಯೋಜನೆಗೆ 3.6 ಲಕ್ಷ ಕೋಟಿ ರು ಅನುದಾನ
11:47 AM
Feb 1, 2020
ಆಯುಷ್ಮಾನ್ ಭಾರತ್
112 ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಡೆಯಡಿ ಆಸ್ಪತ್ರೆ ನಿರ್ಮಾಣ.
2024ರ ವೇಳೆಗೆ ದೇಶದೆಲ್ಲೆಡೆ ಜನೌಷಧ ಕೇಂದ್ರಗಳನ್ನು ವಿಸ್ತರಿಸಲು ಬದ್ಧ
11:46 AM
Feb 1, 2020
ಕೃಷಿ ಉಡಾನ್ ಯೋಜನೆ
ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಿಗೆ ಕೃಷಿ ಉಡಾನ್ ಯೋಜನೆ ಆರಂಭಿಸಲಾಗುವುದು.
11:43 AM
Feb 1, 2020
ನೀರಿನ ಸಮಸ್ಯೆಗೆ ಪರಿಹಾರ
ನೀರಿನ ಸಮಸ್ಯೆ ಇರುವ ದೇಶದ 100 ಜಿಲ್ಲೆಗಳಿಗೆ ಸಮಗ್ರ ಯೋಜನೆ.
11:41 AM
Feb 1, 2020
ಫಸಲ್ ಬಿಮಾ ಯೋಜನೆ
ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ 6.11 ಕೋಟಿ ರೈತರಿಗೆ ವಿಮೆ ಪ್ರಯೋಜನೆ ಸಿಕ್ಕಿದೆ
11:40 AM
Feb 1, 2020
ಧಾನ್ಯ ಲಕ್ಷ್ಮಿ ಯೋಜನೆ
ಸ್ವ ಸಹಾಯ ಗುಂಪುಗಳಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ. ಈ ಗುಂಪುಗಳನ್ನು ಧಾನ್ಯ ಲಕ್ಷ್ಮಿ ಎಂದು ಕರೆಯಲಾಗುವುದು. ನಬಾರ್ಡ್, ಮುದ್ರಾ ಯೋಜನೆಯಡಿ ನೆರವು ನೀಡಲಾಗುವುದು.
11:32 AM
Feb 1, 2020
ರೈತರಿಗಾಗಿ ಕಿಸಾನ್ ರೈಲು ಘೋಷಣೆ
ರೈತರಿಗಾಗಿ ಕಿಸಾನ್ ರೈಲು ಘೋಷಣೆ, ಪಿಪಿಪಿ ಮಾದರಿಯಲ್ಲಿ ನಿರ್ಮಾಣ
11:30 AM
Feb 1, 2020
ಇಪ್ಪತ್ತು ಲಕ್ಷ ರೈತರಿಗೆ ಸೋಲಾರ್ ಪಂಪ್
ಸೋಲಾರ್ ಪ್ಯಾನೆಲ್ ಗೆ ಪಂಪ್ ಸೆಟ್ ಜೋಡಣೆ ಮಾಡಲಾಗುವುದು. ಇಪ್ಪತ್ತು ಲಕ್ಷ ರೈತರಿಗೆ ಸೋಲಾರ್ ಪಂಪ್ ನೀಡಲಾಗುವುದು. ಹದಿನೈದು ಲಕ್ಷ ಮಂದಿಗೆ ಸೌರಶಕ್ತಿ ಮೂಲಕ ಸಹಾಯ ಮಾಡಲಾಗುವುದು. ಬರಡು ಭೂಮಿಯನ್ನು ಗ್ರಿಡ್ ಗೆ ಮಾರಿ, ಹಣ ಗಳಿಸಬಹುದು.
11:28 AM
Feb 1, 2020
ಮೂರು ಮುಖ್ಯ ವಿಚಾರಗಳು
ಭರವಸೆ ಭಾರತ, ಆರ್ಥಿಕ ಅಭಿವೃದ್ಧಿ ಮತ್ತು ಸಮಾಜದ ಕಾಳಜಿ ಮೂರು ಮುಖ್ಯ ವಿಚಾರಗಳ ಮೇಲೆ ಈ ಬಜೆಟ್ ನಿಂತಿದೆ.
11:23 AM
Feb 1, 2020
ಐದನೇ ವಿಶ್ವದೊಡ್ಡ ಅತಿ ದೊಡ್ಡ ಅರ್ಥಿಕತೆ
2006-2016ರ ಮಧ್ಯೆ 27.10 ಕೋಟಿ ಮಂದಿಯನ್ನು ಬಡತನದಿಂದ ಹೊರತಂದಿದ್ದೇವೆ. ನಾವೀಗ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ.
11:19 AM
Feb 1, 2020
ಹಲವು ಯೋಜನೆಗಳು
ಬಡವರಿಗಾಗಿ ಒಳಚರಂಡಿ, ನೇರ ಅನುಕೂಲ ಯೋಜನೆ, ಆಯುಷ್ಮಾನ್ ಭಾರತ್, ಉಜ್ವಲ, ಸಾಲ ಬೆಂಬಲ, ಡಿಜಿಟಲ್ ಪ್ರಮಾಣದಲ್ಲಿ ಹೆಚ್ಚಳ, ಕೈಗೆಟುಕುವ ದರದಲ್ಲಿ ಮನೆ... ಹೀಗೆ ಹಲವು ಯೋಜನೆಗಳು ಮಾಡಿದ್ದೇವೆ.
11:16 AM
Feb 1, 2020
ಹೊಸ ತೆರಿಗೆದಾರರ ಸೇರ್ಪಡೆ
ಒಂದು ಕುಟುಂಬವು ವೆಚ್ಚದ ಸರಾಸರಿ ನಾಲ್ಕು ಪರ್ಸೆಂಟ್ ಉಳಿತಾಯ ಮಾಡುತ್ತಿದೆ. ಸಮಸ್ಯೆಗಳನ್ನು ನಿವಾರಿಸುವಲ್ಲಿ ಜಿಎಸ್ ಟಿ ಕೌನ್ಸಿಲ್ ನಿರತವಾಗಿದೆ. ಹೊಸದಾಗಿ ಹದಿನೈದು ಲಕ್ಷ ತೆರಿಗೆದಾರರನ್ನು ಸೇರ್ಪಡೆ ಮಾಡಿದ್ದೇವೆ.
11:13 AM
Feb 1, 2020
ಜಿಎಸ್ ಟಿ ಐತಿಹಾಸಿಕವಾದದು
ಸರಕು ಮತ್ತು ಸೇವೆ ತೆರಿಗೆ ಐತಿಹಾಸಿಕವಾದದ್ದು. ಜಿಎಸ್ ಟಿ ಸುಧಾರಣೆಯ ಬಗ್ಗೆ ದೂರದೃಷ್ಟಿ ಇದ್ದ ದಿವಂಗತ ಅರುಣ್ ಜೇಟ್ಲಿ ಅವರಿಗೆ ಗೌರವ ಅರ್ಪಿಸುತ್ತೇನೆ
11:11 AM
Feb 1, 2020
ಭರವಸೆಯ ಬಜೆಟ್
ಯುವಜನರು, ದಲಿತರು, ಮಹಿಳೆಯರಿಗೆ ಈ ಬಜೆಟ್ ಭರವಸೆ ನೀಡಲಿದೆ. ಹಿರಿಯರು, ಅಶಕ್ತರ ಕಾಳಜಿಯನ್ನು ಭಾರತದ ಸಮಾಜ ಮಾಡಲಿದೆ. ಮೂಲಭೂತ ಅಂಶಗಳು ಬಲಿಷ್ಠವಾಗಿದೆ.
11:09 AM
Feb 1, 2020
ಆದಾಯ, ಖರೀದಿ ಸಾಮರ್ಥ್ಯ ವಿಸ್ತರಣೆ
ಆದಾಯ ಮತ್ತು ಖರೀದಿ ಸಾಮರ್ಥ್ಯ ವಿಸ್ತರಣೆ ಮಾಡುವ ಬಜೆಟ್ ಇದಾಗಿರುತ್ತದೆ: ನಿರ್ಮಲಾ ಸೀತಾರಾಮನ್
11:08 AM
Feb 1, 2020
ಕೇಂದ್ರ ಬಜೆಟ್
ಬಜೆಟ್ ನೇರ ಪ್ರಸಾರ
11:04 AM
Feb 1, 2020
ಬಜೆಟ್ ಭಾಷಣ ಆರಂಭ
ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್.
11:01 AM
Feb 1, 2020
ಬಜೆಟ್ ಅನುಮೋದನೆ
ಕೇಂದ್ರ ಬಜೆಟ್ 2020ಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ.
10:51 AM
Feb 1, 2020
ಜಿಎಸ್ ಟಿ
Gross GST collection in January at Rs 1,10,828 crore
Delhi: Finance Minister Nirmala Sitharaman's family including her daughter Parakala Vangmayi arrive in Parliament. #Budget2020pic.twitter.com/Pcm6Uc746j
ಕೇಂದ್ರ ಬಜೆಟ್: ಸಂಸತ್ ಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.
10:25 AM
Feb 1, 2020
ಏರಿಕೆ ಹಾದಿಗೆ ಸೆನ್ಸೆಕ್ಸ್, ನಿಫ್ಟಿ
ಆರಂಭದ ವಹಿವಾಟಿನ ಇಳಿಕೆ ನಂತರ ಮತ್ತೆ ಏರಿಕೆ ಹಾದಿಗೆ ಮರಳಿದ ಸೆನ್ಸೆಕ್ಸ್ ಹಾಗೂ ನಿಫ್ಟಿ.
10:16 AM
Feb 1, 2020
ಬಜೆಟ್ ಪ್ರತಿಗಳು ಸಂಸತ್ ಗೆ
#WATCH Delhi: Copies of #Budget2020 have been brought to the Parliament. Finance Minister Nirmala Sitharaman will present the Budget in Lok Sabha at 11 AM today. pic.twitter.com/z3gD0IkLO4
ಸರ್ಕಾರಿ ಸ್ವಾಮ್ಯದ ಷೇರುಗಳಾದ ಒಎನ್ ಜಿಸಿ, ಆಯಿಲ್ ಇಂಡಿಯಾ ಮತ್ತು ಕೋಲ್ ಇಂಡಿಯಾ ಷೇರುಗಳು ವಾರ್ಷಿಕ ಕನಿಷ್ಠ ಮಟ್ಟಕ್ಕೆ. ಕೇಂದ್ರ ಬಜೆಟ್ ನಲ್ಲಿ ಬಂಡವಾಳ ಹಿಂತೆಗೆತದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಗಮನಿಸಿ, ಖರೀದಿಗೆ ಮುಂದಾಗಬಹುದು.
10:07 AM
Feb 1, 2020
ಸಂಸತ್ತಿಗೆ ಆಗಮಿಸಿದ ವಿತ್ತ ಸಚಿವೆ
Delhi: Finance Minister Nirmala Sitharaman and MoS Finance Anurag Thakur arrive at the Parliament, to attend Cabinet meeting at 10:15 am. #Budget2020pic.twitter.com/GgY2Govlv1
ಸಂಪುಟ ಸಭೆಯಲ್ಲಿ ಭಾಗಿಯಾಗಲು ನಿರ್ಮಲಾ ಸೀತಾರಾಮನ್, ಅನುರಾಗ್ ಠಾಕೂರ್ ಸಂಸತ್ತಿಗೆ ಆಗಮನ.
10:00 AM
Feb 1, 2020
ರಾಷ್ಟ್ರಪತಿ ಭೇಟಿ
ಸಂಪ್ರದಾಯದಂತೆ ಕೇಂದ್ರ ಬಜೆಟ್ ಗೆ ಮುನ್ನ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್.
9:50 AM
Feb 1, 2020
ಯಾವ ಸಮಯಕ್ಕೆ ಬಜೆಟ್ ಮಂಡನೆ?
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11ಕ್ಕೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.
9:44 AM
Feb 1, 2020
ರಿಯಲ್ ಎಸ್ಟೇಟ್ ವಲಯಕ್ಕೆ ಅಗತ್ಯ ಇರುವ 1 ಲಕ್ಷ ಕೋಟಿ ರುಪಾಯಿ ಸಾಲದ ನಿರೀಕ್ಷೆ.
9:35 AM
Feb 1, 2020
ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 140 ಹಾಗೂ ನಿಫ್ಟಿ 126.50 ಅಂಶ ಕುಸಿತ.
9:29 AM
Feb 1, 2020
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಭೇಟಿಗೆ ತೆರಳುತ್ತಿರುವ ನಿರ್ಮಲಾ ಸೀತಾರಾಮನ್, ಅನುರಾಗ್ ಠಾಕೂರ್ ಮತ್ತು ಹಣಕಾಸು ಸಚಿವಾಲಯದ ತಂಡ.
9:22 AM
Feb 1, 2020
2020-21ರ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಬೆಳಗ್ಗೆ 10.15ಕ್ಕೆ ಸಂಪುಟ ಸಭೆ ನಡೆಯಲಿದೆ.
9:12 AM
Feb 1, 2020
Delhi: MoS Finance Anurag Thakur offers prayers at his residence, ahead of the presentation of the Union Budget 2020-21 in the Parliament today. pic.twitter.com/dZrhl9v7c5
ಆರ್ಥಿಕ ಸಚಿವಾಲಯದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್
8:55 AM
Feb 1, 2020
ಸೆಕ್ಷನ್ 80C ಅಡಿಯಲ್ಲಿ ಸದ್ಯಕ್ಕೆ ಇರುವ 1.5 ಲಕ್ಷ ಮಿತಿಯನ್ನು 2 ಲಕ್ಷಕ್ಕೆ ವಿಸ್ತರಿಸಬಹುದು ಎಂಬ ನಿರೀಕ್ಷೆಯಲ್ಲಿ ತೆರಿಗೆ ಪಾವತಿದಾರರು ಇದ್ದಾರೆ. ಇದರಿಂದ ಉಳಿತಾಯವನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ.
8:49 AM
Feb 1, 2020
ಗ್ರಾಮೀಣ ಭಾಗದಲ್ಲಿ ಆದಾಯ ಹೆಚ್ಚಳ ಆಗಲು, ಬೇಡಿಕೆ ಸೃಷ್ಟಿ ಆಗಲು ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ತುರ್ತಾಗಿ ಗಮನ ನೀಡಬೇಕಾದ ವಲಯ ಇದು. ಕಳೆದ ಬಜೆಟ್ ಗಳಲ್ಲೂ ಕೃಷಿ ವಲಯಕ್ಕೆ ಆದ್ಯತೆ ಸಿಕ್ಕಿದೆ.
8:45 AM
Feb 1, 2020
ಈ ದಿನ ಶನಿವಾರವೇ ಆದರೂ ಬೆಳಗ್ಗೆ 9.15ರಿಂದ ಮಧ್ಯಾಹ್ನ 3.30ರ ತನಕ ಎಂದಿನಂತೆ ಬಿಎಸ್ ಇ, ಎನ್ ಎಸ್ ಇ ಕಾರ್ಯ ನಿರ್ವಹಿಸಲಿದೆ. ಕೇಂದ್ರ ಬಜೆಟ್ ಕಾರಣಕ್ಕೆ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಾಣಿಸಬಹುದು ಎಂಬ ನಿರೀಕ್ಷೆ ಇದೆ.
8:42 AM
Feb 1, 2020
ವಿತ್ತೀಯ ಕೊರತೆ ಪ್ರಮಾಣ ಎಷ್ಟಾಗಬಹುದು ಎಂಬ ಬಗ್ಗೆ ಕುತೂಹಲ ಬಹಳ ಇದೆ. 2019-20ನೇ ಆರ್ಥಿಕ ವರ್ಷದಲ್ಲಿ 3.6ರಿಂದ 3.8 ಪರ್ಸೆಂಟ್, 2020- 21ನೇ ಸಾಲಿಗೆ ಜಿಡಿಪಿಯ (ಅಂದಾಜು) 3.4 ಪರ್ಸೆಂಟ್ ನಿರೀಕ್ಷೆ ಮಾಡಲಾಗಿದೆ.
8:38 AM
Feb 1, 2020
ಲಾಭಾಂಶ ವಿತರಣೆ ತೆರಿಗೆ, ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ (ಎಲ್ ಟಿಸಿಜಿ) ಕಡಿತದ ನಿರೀಕ್ಷೆಯಲ್ಲಿ ಹೂಡಿಕೆದಾರರು. "ಇದರಿಂದ ಸರ್ಕಾರಕ್ಕೆ ಬರುವ ಆದಾಯದಲ್ಲಿ ಹೆಚ್ಚಿನ ನಷ್ಟವಾಗಲ್ಲ. ಹೂಡಿಕೆದಾರರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ" ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
8:27 AM
Feb 1, 2020
ಬಜೆಟ್ ಇರುವುದರಿಂದ ಬಿಎಸ್ ಇ, ಎನ್ ಎಸ್ ಇ ಷೇರು ಮಾರುಕಟ್ಟೆ ಶನಿವಾರವಾದರೂ ಕಾರ್ಯ ನಿರ್ವಹಿಸಲಿವೆ.
12:01 AM
Feb 1, 2020
ಆದಾಯ ತೆರಿಗೆ ಪ್ರಮಾಣ ಇಳಿಕೆ ಮಾಡಬಹುದಾ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬಹುದಾ, ರಿಯಲ್ ಎಸ್ಟೇಟ್ ಗೆ ಉತ್ತೇಜನ, ರೈತರಿಗೆ ಏನು ಯೋಜನೆ ನೀಡುತ್ತಾರೆ ಇತ್ಯಾದಿ ಕುತೂಹಲ ಇದ್ದೇ ಇದೆ.
12:01 AM
Feb 1, 2020
ರೈಲ್ವೆ ಬಜೆಟ್ ಕೂಡ ಕೇಂದ್ರ ಬಜೆಟ್ ಜತೆಗೆ ಆಗುವುದರಿಂದ ಮಹತ್ವದ ಖಾಸಗೀಕರಣ ಯೋಜನೆಗಳ ಬಗ್ಗೆ ಸರ್ಕಾರ ಏನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯೂ ಇದೆ.
Notifications
Settings
Clear Notifications
No New Notifications
Notifications
Use the toggle to switch on notifications
Block for 8 hours
Block for 12 hours
Block for 24 hours
Don't block
To start receiving timely alerts, as shown below click on the Green “lock” icon next to the address bar
Click it and Unblock the Notifications
Close X
Close X
To Start receiving timely alerts please follow the below steps:
Click on the Menu icon of the browser, it opens up a list of options.
Click on the “Options ”, it opens up the settings page,
Here click on the “Privacy & Security” options listed on the left hand side of the page.
Scroll down the page to the “Permission” section .
Here click on the “Settings” tab of the Notification option.
A pop up will open with all listed sites, select the option “ALLOW“, for the respective site under the status head to allow the notification.
Once the changes is done, click on the “Save Changes” option to save the changes.