ಬಜೆಟ್ 2021: ಉದ್ಯಮ ತಜ್ಞರ ಅಭಿಪ್ರಾಯವೇನು?
ನವದೆಹಲಿ, ಫೆಬ್ರವರಿ 02: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ (ಫೆ.01) ಬಹುನಿರೀಕ್ಷಿತ 2021-22ರ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು. ಅನೇಕ ಕ್ಷೇತ್ರಗಳಿಗೆ ವಿವಿಧ ಯೋಜನೆಗಳನ್ನು ಪ್ರಕಟಿಸಲಾಯಿತು. ಇದರ ಜೊತೆಗೆ ಕೆಲವು ಹೊಸ ನೀತಿಗಳನ್ನು ಸಹ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.
ವಿತ್ತ ಸಚಿವೆ ಮಂಡಿಸಿದ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ದೇಶದ ಪ್ರಮುಖ ಗಣ್ಯರು ಸಹ ಹೊಗಳಿದ್ದಾರೆ, ಅದೇ ಸಮಯದಲ್ಲಿ, ಪ್ರತಿಪಕ್ಷಗಳು ಬಜೆಟ್ ನಿರಾಶದಾಯಕವಾಗಿದೆ ಎಂದು ಬಣ್ಣಿಸಿದ್ದಾರೆ. ಹಾಗಿದ್ದರೆ ಉದ್ಯಮ ತಜ್ಞರು ಬಜೆಟ್ ಕುರಿತು ಏನು ಹೇಳುತ್ತಾರೆ ಎಂಬುದನ್ನು ಈ ಕೆಳಗೆ ನೋಡಿ
ಸಮತೋಲಿತ ಬಜೆಟ್ ಆಗಿದೆ
ಪಿರಮಾಲ್ ಸಮೂಹದ ಅಜಯ್ ಪಿರಮಾಲ್ ಅವರ ಪ್ರಕಾರ, ಇದು ಸಮತೋಲಿತ ಮತ್ತು ವಾಸ್ತವಿಕ ಬಜೆಟ್ ಆಗಿದೆ. ಅವರ ಪ್ರಕಾರ, ಈ ಬಜೆಟ್ ಭಾರತದ ಪ್ರಸ್ತುತ ವ್ಯವಹಾರಕ್ಕೆ ಹೆಚ್ಚು ಭದ್ರವಾದ ಅಡಿಪಾಯವನ್ನು ನೀಡುತ್ತದೆ. ದೀರ್ಘಕಾಲೀನ ಯೋಜನೆಗಳಿಗೆ ಧನಸಹಾಯ ನೀಡಲು ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್ಐ) ಪರಿಚಯಿಸುವುದರಿಂದ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುವುದು.
ಈ ದಶಕದ ಪ್ರಮುಖ ಬಜೆಟ್
ಯೂನಿಯನ್ ಬಜೆಟ್ 2021 ಈ ದಶಕದ ಪ್ರಮುಖ ಬಜೆಟ್ ಎಂದು ಫಿನೋಲೆಕ್ಸ್ ಇಂಡಸ್ಟ್ರೀಸ್ ನ ಪ್ರಕಾಶ್ ಪಿ ಛಾಬ್ರಿಯಾ ಹೇಳಿದ್ದಾರೆ. ಅನಿಶ್ಚಿತತೆಯ ಸಮಯದಲ್ಲಿ ಹೂಡಿಕೆದಾರರು ಮತ್ತು ಮಧ್ಯಸ್ಥಗಾರರನ್ನು ಸ್ಥಿರಗೊಳಿಸಲು ಸರ್ಕಾರ ತನ್ನ ಅತ್ಯುತ್ತಮ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಗತ್ಯವಿರುವ ಎಲ್ಲಾ ಕ್ಷೇತ್ರಗಳಿಗೆ ಬಜೆಟ್ ಅನ್ನು ಮ್ಯಾಕ್ರೋ ಮಟ್ಟದಲ್ಲಿ ನಿಗದಿಪಡಿಸಲಾಗಿದೆ ಎಂದು ತೋರುತ್ತದೆ, ಇದು ಭಾರತದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.
ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ
ಬಂಧನ್ ಬ್ಯಾಂಕ್ ಸಿಇಒ ಪ್ರಕಾರ ಈ ಮಟ್ಟದಲ್ಲಿ ಬೆಳವಣಿಗೆಗೆ ವೆಚ್ಚ ಮಾಡಲು ಆದ್ಯತೆ ನೀಡಿದ್ದಾರೆ. ಈ ಬೆಳವಣಿಗೆಯು ಹಣಕಾಸಿನ ಕೊರತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂಬ ಭರವಸೆಯೊಂದಿಗೆ ಸರ್ಕಾರ ಈ ಹೆಜ್ಜೆಯನ್ನಿಟ್ಟಿದೆ. ಎಂಎಸ್ಎಂಇ ವಲಯ ಸೇರಿದಂತೆ ಆರೋಗ್ಯ ಮತ್ತು ಮೂಲಸೌಕರ್ಯಗಳ ವೆಚ್ಚದಲ್ಲಿ ಗಣನೀಯ ಏರಿಕೆಯ ಘೋಷಣೆಯು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗವನ್ನು ಸೃಷ್ಟಿಸುತ್ತದೆ.
ನಿರೀಕ್ಷೆಗಳನ್ನು ಪೂರೈಸಿದ್ದಾರೆ
ನೀತಿ ಆಯೋದ್ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರ ಪ್ರಕಾರ, ಹಣಕಾಸು ಸಚಿವರು ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದರು ಮತ್ತು ಅವರು ಅವೆಲ್ಲವನ್ನೂ ಪೂರೈಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಬಜೆಟ್ ಭಾರತದ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಬೆಳವಣಿಗೆಯನ್ನು ವೇಗಗೊಳಿಸಲು ಅನುಕೂಲಕರವಾಗಿದೆ. ಎಸ್ಸಾರ್ ಶಿಪ್ಪಿಂಗ್ ಸಿಒಒ ರಾಹುಲ್ ಭಾರ್ಗವ ಅವರ ಪ್ರಕಾರ, ಬಜೆಟ್ನಲ್ಲಿ ಉದ್ಯೋಗ ಸೃಷ್ಟಿಸುವುದು ಒಂದು ಪ್ರಮುಖ ಕಾರ್ಯಸೂಚಿಯಾಗಿದೆ.
ವ್ಯಾಪಾರ ಮಾಡುವ ಸುಲಭವಾಗಿದೆ
ಜೆ.ಸಾಗರ್ ಅಸೋಸಿಯೇಟ್ಸ್ನ ರೂಪಿಂದರ್ ಮಲಿಕ್, ಎಲ್ಎಲ್ಪಿ ಕಾಯ್ದೆ, 2008 ರ ಅಡಿಯಲ್ಲಿ ಕಾರ್ಪೊರೇಟ್ ಆಡಳಿತದ ಮುಂಭಾಗದಲ್ಲಿ ಡಿಕ್ರಿಮಿನಲೈಸೇಶನ್ ನಿರೀಕ್ಷಿಸಲಾಗಿತ್ತು ಮತ್ತು ಇದು ಭಾರತದಲ್ಲಿ ಸುಲಭವಾಗಿ ಬಿಸಿನೆಸ್ಗೆ ಉತ್ತಮ ಹೆಜ್ಜೆಯಾಗಿದೆ ಎಂದು ಹೇಳುತ್ತಾರೆ. ಅದೇ ಸಮಯದಲ್ಲಿ, ನಿಯಮಗಳನ್ನು ಅನುಸರಿಸಲು ಸುಲಭವಾಗುವಂತೆ ಸಣ್ಣ ಕಂಪನಿಗಳ ವ್ಯಾಖ್ಯಾನವನ್ನು ಬದಲಾಯಿಸಲಾಗಿದೆ. ಎಸ್ಸಾರ್ ಕ್ಯಾಪಿಟಲ್ನ ಸಂಜಯ್ ಪಾಲ್ವೆ ಪ್ರಕಾರ, ಇದು ಬ್ಯಾಂಕಿಂಗ್ ಮತ್ತು ಇನ್ಫ್ರಾ ವಲಯಗಳ ಕೇಂದ್ರ ಬಜೆಟ್ ಆಗಿತ್ತು.