ಎಟಿಎಂ ಕಾರ್ಡ್ ಬಳಕೆ ಮಾಡುವವರು ಅದರ 'ಪಿನ್' ಅನ್ನು ಒಂದೊಂದು ರೀತಿಯಲ್ಲಿ ಸೇವ್ ಮಾಡಿಟ್ಟುಕೊಳ್ಳುತ್ತಾರೆ. ಈ ವರದಿಯಲ್ಲಿ ಆಗಿರುವಂತೆ ಕೆಲವರು ಎಟಿಎಂ ಕಾರ್ಡ್ ಹಿಂಬದಿಯಲ್ಲೇ ಪಿನ್ ಬರೆದಿಟ್ಟುರುತ್ತಾರೆ. ಒಂದು ವೇಳೆ ನೀವೂ ಹೀಗೇ ಮಾಡುತ್ತಿದ್ದಲ್ಲಿ ಎಚ್ಚರವಾಗಿರಿ. ಬೆಂಗಳೂರಿನಲ್ಲಿ ಮೂವತ್ತು ವರ್ಷದ ಮಹಿಳಾ ಕಾನ್ ಸ್ಟೇಬಲ್ ನಲವತ್ತು ಸಾವಿರ ರುಪಾಯಿ ಕಳೆದುಕೊಂಡಿದ್ದಾರೆ.
ರಾಜ್ಯ ಪೊಲೀಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಕಾರ್ಯ ನಿರ್ವಹಿಸುವ ಸುಬ್ರಹ್ಮಣ್ಯಪುರದ ರುಕ್ಮಿಣಿ ಬಾಯಿ ಹಣ ಕಳೆದುಕೊಂಡವರು. ಅವರ ವ್ಯಾಲೆಟ್ ಅನ್ನು ಎಗರಿಸಿದ ದುಷ್ಕರ್ಮಿಯೊಬ್ಬ ಕಿಯೋಸ್ಕ್ ನಿಂದ 40 ಸಾವಿರ ರುಪಾಯಿ ಹಣ ವಿಥ್ ಡ್ರಾ ಮಾಡಿದ್ದಾನೆ. ಜನವರಿ 12ನೇ ತಾರೀಕಿನಂದು ಬಿಎಂಟಿಸಿ ಬಸ್ಸಿನಲ್ಲಿ ಆಕೆಯ ಮನೆಯಿಂದ ತೆರಳುವಾಗ ವ್ಯಾಲೆಟ್ ನಾಪತ್ತೆ ಆಗಿದೆ ಎಂಬುದು ಗಮನಕ್ಕೆ ಬಂದಿತ್ತು.

ಹತ್ತು ಗ್ರಾಮ್ ತೂಕದ ಚಿನ್ನದ ಸರ, ಆಕೆಯ ಮತದಾನದ ಗುರುತು ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಇಟ್ಟಿದ್ದರು. ಅದರಲ್ಲಿ ಪಿನ್ ಕೂಡ ಇಟ್ಟಿದ್ದರು. ವ್ಯಾಲೆಟ್ ಕಳೆದ ಕೆಲ ಹೊತ್ತಿಗೆ ತಲಾ 10 ಸಾವಿರ ರುಪಾಯಿಯಂತೆ ನಾಲ್ಕು ಕಂತಿನಲ್ಲಿ ಹಣ ವಿಥ್ ಡ್ರಾ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಜಯನಗರ ಪೊಲೀಸರು ಹೇಳಿದ್ದಾರೆ.
More From GoodReturns

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Mysore Road: ಮೈಸೂರು ರೋಡ್ ಟ್ರಾಫಿಕ್ಗೆ ಆದಷ್ಟು ಬೇಗ ಮುಕ್ತಿ; 810 ಕೋಟಿ ವೆಚ್ಚದಲ್ಲಿ ಬರಲಿದೆ ಈ ಯೋಜನೆ

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ



Click it and Unblock the Notifications