ಸದ್ಯ ಮಂದಗತಿಯಲ್ಲಿರುವ ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಆರ್ಥಿಕತೆಯನ್ನು ಉತ್ತೇಜಿಸಲು ನಾನಾ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ನಿರುದ್ಯೋಗದ ಪ್ರಮಾಣ ತಗ್ಗಿಸಲು ಹೊಸ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದ್ಯೋಗ ಸೃಷ್ಟಿಸಲು ಸ್ಟಾರ್ಟ್ ಅಪ್ ಕಂಪನಿಗಳನ್ನು ಪ್ರೋತ್ಸಾಹಿಸುತ್ತಿದೆ.
ಇದೇ ಸ್ಟಾರ್ಟ್ಅಪ್ ಕಂಪನಿಗಳು 2025ರ ಹೊತ್ತಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲಿವೆ. NASSCOM ವರದಿಯ ಪ್ರಕಾರ 2025ರ ವೇಳೆಗೆ ಭಾರತದ ಸ್ಟಾರ್ಟ್ಅಪ್ ಕಂಪನಿಗಳಿಂದಲೇ 12 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವರದಿಯಾಗಿದೆ.
NASSCOM (ರಾಷ್ಟ್ರೀಯ ತಂತ್ರಾಶ ಮತ್ತು ಸೇವಾ ಸಂಸ್ಥೆಗಳ ಸಂಘ) ವರದಿಯ ಪ್ರಕಾರ ಭಾರತದ ಸ್ಟಾರ್ಟ್ಅಪ್ ಕಂಪನಿಗಳು ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ. 2025ರ ವೇಳೆಗೆ 12.5 ಲಕ್ಷ ನೇರ ಉದ್ಯೋಗಗಳು ಈ ಸ್ಟಾರ್ಟ್ಅಪ್ ಕಂಪನಿಗಳಿಂದ ಸೃಷ್ಟಿಯಾಗಲಿವೆ. 2019ರಲ್ಲಿ ಸ್ಟಾರ್ಟ್ಅಪ್ ಸಂಸ್ಥೆಗಳು ಭಾರತದಲ್ಲಿ 3.9 ರಿಂದ 4.3 ಲಕ್ಷ ಜನರಿಗೆ ನೇರ ಉದ್ಯೋಗಗಳನ್ನು ನೀಡಿವೆ.

ಭಾರತದ ಸ್ಟಾರ್ಟ್ಅಪ್ ಸಂಸ್ಥೆಗಳು ನೇರ ಉದ್ಯೋಗವಷ್ಟೇ ಅಲ್ಲದೆ ಪರೋಕ್ಷ ಉದ್ಯೋಗಕ್ಕೂ ಮೂಲವಾಗಿವೆ. 2019ರಲ್ಲಿ 14 ರಿಂದ 16 ಲಕ್ಷ ಪರೋಕ್ಷ ಉದ್ಯೋಗಗಳನ್ನು ಒದಗಿಸಿವೆ. ಆದರೆ 2025ರ ಹೊತ್ತಿಗೆ ಇದರ ಗಾತ್ರ 39 ರಿಂದ 44 ಲಕ್ಷಕ್ಕೆ ಜಿಗಿಯಲಿದೆ ಎಂದು NASSCOM ತಿಳಿಸಿದೆ. ಈ ದೊಡ್ಡ ಮಟ್ಟದ ಏರಿಕೆಗೆ ಕಾರಣ ಸ್ಟಾರ್ಟ್ಅಪ್ ಕಂಪನಿಗಳ ಉತ್ತಮ ಬೆಳವಣಿಗೆಯಾಗಿದ್ದು, 2025ರ ಹೊತ್ತಿಗೆ ಈಗಿನ ಬೆಳವಣಿಗೆ ದರ 4 ಪಟ್ಟು ಹೆಚ್ಚಾಗಲಿದೆ.
ಸಂಶೋಧನೆಯೊಂದರ ಪ್ರಕಾರ ಎಲ್ಲಾ ಸ್ಟಾರ್ಟ್ಅಪ್ಗಳಲ್ಲಿ 18 ಪ್ರತಿಷತದಷ್ಟು ಜನರು ಡೀಪ್-ಟೆಕ್ ಮತ್ತು ಫಿನ್ ಟೆಕ್, ಎಂಟರ್ ಪ್ರೈಸ್ ಮತ್ತು ಚಿಲ್ಲರೆ ತಂತ್ರಜ್ಙಾನವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಶಿಕ್ಷಣ, ಮಾನವ ಸಂಪನ್ಮೂಲ, ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಪಟ್ಟ ತಂತ್ರಜ್ಙಾನ ಅಭಿವೃದ್ಧಿಯ ಸ್ಟಾರ್ಟ್ಅಪ್ಗಳು ವೇಗವಾಗಿ ಬೆಳೆಯುತ್ತಿವೆ.
ಜೊತೆಗೆ ಕೃಷಿ, ವೈಮಾನಿಕ ಕ್ಷೇತ್ರ, ರಕ್ಷಣೆ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ತಂತ್ರಜ್ಙಾನ ವಲಯಗಳು ಉತ್ತಮ ಅಭಿವೃದ್ಧಿ ಹೊಂದುತ್ತಿವೆ. 2019ರಲ್ಲಿ ಜನವರಿ ತಿಂಗಳಿನಿಂದ ಆಗಸ್ಟ್ವರೆಗೂ ಸ್ಟಾರ್ಟ್ಅಪ್ ಕಂಪನಿಗಳ ಹೂಡಿಕೆ ಶೇಕಡಾ 16ರಷ್ಟು ಹೆಚ್ಚಾಗಿದೆ ಎಂದು NASSCOM ತನ್ನ ವರದಿಯಲ್ಲಿ ತಿಳಿಸಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications