ನಿಜ ಕೊರೊನಾವೈರಸ್ ಅದೆಷ್ಟೋ ಜನರಿಗೆ ನರಕವನ್ನು ತೋರಿಸುತ್ತಿದೆ. ಈ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರಗಳೇ ಹೈರಾಣಾಗಿ ನೆಲಕಚ್ಚುತ್ತಿವೆ. ಕಾರ್ಮಿಕರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಬಡವರು, ನಿರ್ಗತಿಕರು ಬದುಕಂತು ಅಯೋಮಯವಾಗಿದೆ.
ಲಾಕ್ಡೌನ್ ಸಮಯದಲ್ಲಿ ಉದ್ಯೋಗವಿಲ್ಲದೇ ಆದಾಯವಿಲ್ಲದೇ ತಿನ್ನಲು ಪಡಿಪಾಟಲು ಪಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಅನ್ನಕ್ಕಾಗಿ ಅರಸುತ್ತಿದ್ದಾರೆ. ಆದರೆ ಕೊರೊನಾವೈರಸ್ ಹಾವಳಿ ಅವರನ್ನು ಮತ್ತಷ್ಟು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದೆ.
ಇಂತಹುದೇ ಲಾಕ್ಡೌನ್ ನ ಕೆಟ್ಟ ಘೋರ ಸ್ವರೂಪ ಕಂಡು ಬರುತ್ತಿದೆ ಉತ್ತರ ಪ್ರದೇಶದ ಕೆಲ ಬುಡುಕಟ್ಟು ಕುಟುಂಬಗಳಲ್ಲಿ. ಈ ಬಗ್ಗೆ ಇಂಡಿಯಾ ಟುಡೇ ಸಮಗ್ರ ವರದಿ ಲಾಕ್ಡೌನ್ ನಿಂದ ತೊಂದರೆಗೆ ಸಿಲುಕಿರುವ ಬುಡುಕಟ್ಟು ಹೆಣ್ಣು ಮಕ್ಕಳು ಗಣಿಗಳಲ್ಲಿ 150 ರಿಂದ 200 ರುಪಾಯಿಗೆ ದೇಹ ಮಾರಾಟ ಮಾಡಿಕೊಂಡು ಬದುಕುವಂತಹ ಪರಿಸ್ಥಿತಿಯನ್ನು ತೋರಿಸಿದೆ.
ಚಿತ್ರಕೂಟ್ ಭಾಗದ ಬಡ ಬುಡಕಟ್ಟು ಕುಟುಂಬಗಳು
ಉತ್ತರ ಪ್ರದೇಶದ ಬುಂದೇಲ್ಖಂಡ್ ನ ಚಿತ್ರಕೂಟ್ ಭಾಗದ ಬಡ ಬುಡಕಟ್ಟು ಕುಟುಂಬಗಳ ಅಪ್ರಾಪ್ತ ಬಾಲಕಿಯರನ್ನು ಅಕ್ರಮ ಗಣಿಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲಾಗುತ್ತದೆ. ಆದರೆ, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳು ಅವರಿಗೆ ವೇತನವನ್ನು ಸುಲಭವಾಗಿ ಪಾವತಿಸುವುದಿಲ್ಲ. ಏಕೆಂದರೆ ಈ ಹುಡುಗಿಯರು ತಮ್ಮ ಅಲ್ಪ ವೇತನಕ್ಕೆ ಬದಲಾಗಿ ತಮ್ಮ ದೇಹವನ್ನು ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಬಂದೊಂದಗಿದೆ. ಇಲ್ಲಿ ಬಡತನವು ಎಷ್ಟು ಭದ್ರವಾಗಿದೆ ಎಂದರೆ, ಸಣ್ಣ ಹುಡುಗಿಯರು ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಭರಿಸಬೇಕು ಮತ್ತು ಮನೆಯ ಆದಾಯಕ್ಕೆ ಕೊಡುಗೆ ನೀಡಬೇಕಾಗುತ್ತದೆ. ಚಿತ್ರಕೂಟ್ನ ಬೆಟ್ಟಗಳಲ್ಲಿ ಸುಮಾರು 50 ಕಲ್ಲು ಕ್ರಷರ್ಗಳು ಕಾರ್ಯನಿರ್ವಹಿಸುತ್ತಿವೆ. ಹಸಿವು ಮತ್ತು ನಿರುದ್ಯೋಗದ ವಿರುದ್ಧ ಹೋರಾಡುವ ಕೋಲ್ ಬುಡಕಟ್ಟು ಜನಾಂಗದವರಿಗೆ ಈ ಗಣಿಗಳಲ್ಲಿ ಕಲ್ಲು ಪುಡಿ ಮಾಡುವವರಾಗಿ ಕೆಲಸ ಮಾಡುವುದನ್ನು ಬಿಟ್ಟು ಬೇರೆ ಉದ್ಯೋಗದ ಮೂಲಗಳಿಲ್ಲ.
200 ರಿಂದ 300 ರುಪಾಯಿಗೆ ದೇಹ ಮಾರಾಟ
12-14 ವರ್ಷ ವಯಸ್ಸಿನ ಹುಡುಗಿಯರು ಅಕ್ರಮ ಗಣಿಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಅವರ ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳು ಹುಡುಗಿಯರ ದೇಹವನ್ನು 200 ರಿಂದ 300 ರೂಗಳ ಅಲ್ಪ ವೇತನಕ್ಕೆ ಮಾರಾಟ ಮಾಡಲು ಒತ್ತಾಯಿಸುತ್ತಾರೆ. ಅಂದರೆ ವೈಶ್ಯಾವಾಟಿಕೆ ನಡೆಸಲು ಪ್ರಚೋಧಿಸುತ್ತಾರೆ. ಕೆಲಸ ಹುಡುಕಲು ಗಣಿಗಳಿಗೆ ಹೋದಾಗ, ಗುತ್ತಿಗೆದಾರರು ತಮ್ಮ ದೇಹವನ್ನು ಸಹ ಮಾರಾಟ ಮಾಡಬೇಕಾಗುತ್ತದೆ ಎಂಬ ಷರತ್ತಿನ ಮೇಲೆ ಅವರನ್ನು ನೇಮಿಸಿಕೊಳ್ಳಲು ಒಪ್ಪುತ್ತಾರೆ.
ಒಂದಕ್ಕಿಂತ ಹೆಚ್ಚು ಪುರುಷರು ಶೋಷಣೆಯಲ್ಲಿ ತೊಡಗುತ್ತಾರೆ
ನಮ್ಮ ಉದ್ಯೋಗಗಳು ಬೇಕಾದರೆ ನಾವು ಅವರ ಷರತ್ತುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ನೊಂದ ಬಾಲಕಿಯರು ಹೇಳುತ್ತಾರೆ. ನಮ್ಮನ್ನು ಹಣದಿಂದ ಆಮಿಷಕ್ಕೆ ಒಳಪಡಿಸುತ್ತಾರೆ ಮತ್ತು ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಪುರುಷರು ಶೋಷಣೆಯಲ್ಲಿ ತೊಡಗುತ್ತಾರೆ. ಬೇಡವೆಂದು ಹೇಳಿದರೆ, ಅವರು ನಮ್ಮನ್ನು ಬೆಟ್ಟದಿಂದ ಕೆಳಕ್ಕೆ ಎಸೆಯುವ ಬೆದರಿಕೆ ಹಾಕುತ್ತಾರೆ ಎನ್ನುತ್ತಾರೆ.
ದೇಹ ಮಾರಿಕೊಳ್ಳುವಂತೆ ಮಾಡುತ್ತಿದ್ದಾರೆ
ಚಿತ್ರಕೂಟ್ನಲ್ಲಿರುವ ಈ ಅಪ್ರಾಪ್ತ ಬಾಲಕಿಯರು ಬಡತನದ ಬೇಗೆಗೆ ಬೆಂದಿದ್ದಾರೆ. ತಿಂಗಳುಗಳ ಕಾಲದ ಲಾಕ್ಡೌನ್ ಅವರನ್ನು ತೀವ್ರವಾಗಿ ಹೈರಾಣಾಗಿಸಿದೆ ಮತ್ತು ಶೋಷಣೆಗೆ ಹೆಚ್ಚು ಗುರಿಯಾಗಿದ್ದಾರೆ. ಲಾಕ್ಡೌನ್ ಮೂರು ತಿಂಗಳಿನಿಂದ ಮುಂದುವರೆದಿದೆ ಮತ್ತು ಅವರು ತಮ್ಮ ಕುಟುಂಬವನ್ನು ಪೋಷಿಸಲು ಕೆಲಸಕ್ಕಾಗಿ ತೀವ್ರವಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅಕ್ರಮ ಗಣಿಗಳಲ್ಲಿನವರು ಬಾಲಕಿಯರನ್ನು ದೇಹ ಮಾರಿಕೊಳ್ಳುವಂತೆ ಮಾಡುತ್ತಿದ್ದಾರೆ. ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳು ತಮ್ಮ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಮತ್ತು ತಮ್ಮ ಮಕ್ಕಳನ್ನು ಲೈಂಗಿಕವಾಗಿ ಬಳಸುತ್ತಾರೆ. ವಿರೋಧಿಸಲು ಅಸಹಾಯಕರಾಗಿದ್ದಾರೆ ಎಂದು ಅವರ ಕುಟುಂಬಗಳು ಹೇಳುತ್ತವೆ ಎಂದು ವರದಿ ಹೇಳುತ್ತದೆ. ಈ ಬಗ್ಗೆ ಉತ್ತರ ಪ್ರದೇಶ ಮಕ್ಕಳ ಸಂರಕ್ಷಣಾ ಆಯೋಗದ ಗಮನವನ್ನು ವರದಿ ಸೆಳೆದಿದೆ.
More From GoodReturns

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications