ನಾಗಾಲ್ಯಾಂಡ್ ಸರ್ಕಾರ ನಾಯಿ ಮಾಂಸದ ಮಾರಾಟವನ್ನು ನಿಷೇಧ ಮಾಡಲು ನಿರ್ಧರಿಸಿದೆ. ಇದರ ಜತೆಗೆ ವಾಣಿಜ್ಯ ಆಮದು, ನಾಯಿ ವ್ಯಾಪಾರ ಹಾಗೂ ಮಾರುಕಟ್ಟೆಯನ್ನು ಸಹ ನಿಷೇಧಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ನಾಗಾಲ್ಯಾಂಡ್ ಮುಖ್ಯ ಕಾರ್ಯದರ್ಶಿ ತೆಮ್ಜೆನ್ ಟಾಯ್ ಟ್ವೀಟ್ ಮಾಡಿದ್ದಾರೆ.
ಫೆಡರೇಷನ್ ಆಫ್ ಇಂಡಿಯನ್ ಪ್ರೊಟೆಕ್ಷನ್ ಆರ್ಗನೈಸೇಷನ್ (ಎಫ್ ಐಎಪಿಒ) ನಾಗಾಲ್ಯಾಂಡ್ ಸರ್ಕಾರಕ್ಕೆ ಹೊಸದಾಗಿ ಮನವಿ ಸಲ್ಲಿಸಿತ್ತು. ನಾಯಿ ಮಾಂಸ ಮಾರಾಟ ನಿಷೇಧ ಹಾಗೂ ಕಳ್ಳ ಸಾಗಣೆ ಹಾಗೂ ನಾಯಿ ಮಾಂಸ ಸೇವನೆ ತಡೆಗೆ ಸಂಬಂಧಿಸಿದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಕೇಳಲಾಗಿತ್ತು. ಪ್ರಾಣಿ ರಕ್ಷಣೆ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು ಎಂದಿತ್ತು.
ಚೀನಾದಲ್ಲಿ ವಿವಾದಾತ್ಮಕ ಯುಲಿನ್ ನಾಯಿ ಮಾಂಸ ಹಬ್ಬ ಜೂನ್ 30, 2020ಕ್ಕೆ ಕೊನೆಯಾದ ಮೇಲೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಭಾರತದಲ್ಲಿ ಮಾಂಸಕ್ಕಾಗಿ ನಾಯಿಗಳ ಬಳಕೆ ಮುಂದುವರಿದಿದ್ದರ ಬಗ್ಗೆ ಆಕ್ರೋಶ ಕೇಳಿಬರುತ್ತಿತ್ತು. ಈಚೆಗೆ ದಿಮಾಪುರ್ 'ಪ್ರಾಣಿ ಬಜಾರ್'ನಲ್ಲಿ ಭಯಂಕರ ಸ್ಥಿತಿಯಲ್ಲಿ ಕಂಡು ಆಕ್ಷೇಪ ಬಂದಿತ್ತು.

ವರದಿಗಳ ಪ್ರಕಾರ ಈಗಲೂ ಅಸ್ಸಾಂನಿಂದ ನಾಗಾಲ್ಯಾಂಡ್ ಗೆ ಈಗಲೂ ನಿತ್ಯ ನಾಯಿಗಳ ಕಳ್ಳಸಾಗಣೆ ನಡೆಯುತ್ತದೆ. ಜತೆಗೆ ಪಶ್ಚಿಮ ಬಂಗಾಲದಿಂದಲೂ ಬರುತ್ತದೆ. ಅಸ್ಸಾಂನಲ್ಲಿ ನಾಯಿ ಹಿಡಿಯುವವರಿಗೆ (ಕಳ್ಳ ಸಾಗಣೆ ಮಾಡುವುದಕ್ಕೆ) ಒಂದು ನಾಯಿಗೆ 50 ರುಪಾಯಿ ನೀಡಲಾಗುತ್ತದೆ. ಅದೇ ನಾಯಿಯನ್ನು ನಾಗಾಲ್ಯಾಂಡ್ ನಲ್ಲಿ ಹೋಲ್ ಸೇಲ್ ದರವಾಗಿ 1000 ರುಪಾಯಿಗೆ ಮಾರಲಾಗುತ್ತದೆ.
ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸವನ್ನು ಕೇಜಿಗೆ 200 ರುಪಾಯಿಯಂತೆ ಮಾರಲಾಗುತ್ತದೆ. ಅಂದರೆ ಒಂದು ನಾಯಿ 2,000 ರುಪಾಯಿ ಸಿಕ್ಕಂತಾಗುತ್ತದೆ. ಇದು ನಾಯಿ ಹಿಡಿಯುವವರಿಗೆ ನೀಡುವ ಮೊತ್ತಕ್ಕೆ 40ರಿಂದ 50 ಪಟ್ಟು ಹೆಚ್ಚು ಮೊತ್ತ ಸಿಕ್ಕಂತಾಗುತ್ತದೆ. 2016ರಲ್ಲಿ ನಾಯಿ ಮಾಂಸ ನಿಷೇಧ ಮಾಡಲು ನಾಗಾಲ್ಯಾಂಡ್ ಸರ್ಕಾರ ಮುಂದಾಗಿತ್ತು. ಆದರೆ ಆ ನಂತರ ಯಾವ ಬೆಳವಣಿಗೆಯೂ ಆಗಿರಲಿಲ್ಲ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications