ನವದೆಹಲಿ, ಫೆಬ್ರವರಿ 14: ಭಾರತದಲ್ಲಿ ಡೇಟಾ ಬೆಲೆಗಳನ್ನು ಅನಿರೀಕ್ಷಿತ ಮಟ್ಟಕ್ಕೆ ಇಳಿಸುವ ಮೂಲಕ ಸ್ಟ್ರೀಮಿಂಗ್ ಸೇವೆಗಳ ಯಶಸ್ಸಿಗೆ ಕಾರಣವಾಗಿದ್ದಕ್ಕಾಗಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋದ ಪ್ರಯತ್ನಗಳನ್ನು ನೆಟ್ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ ಶ್ಲಾಘಿಸಿದ್ದಾರೆ ಎಂದು ಫಾರ್ಚೂನ್ ಇಂಡಿಯಾ ವರದಿ ಮಾಡಿದೆ.
"ಭಾರತದಲ್ಲಿ ಆದಂತೆ ವಿಶ್ವದ ಬೇರೆಲ್ಲಿಯೂ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಡೇಟಾ ಬೆಲೆಗಳು ಅತ್ಯಧಿಕ ಮಟ್ಟದಿಂದ ಅತ್ಯಂತ ಕಡಿಮೆ ಮಟ್ಟಕ್ಕೆ ಬದಲಾಗಿಲ್ಲ. ವಾಸ್ತವವಾಗಿ, ರಿಲಯನ್ಸ್ ಜಿಯೋ ತಂದ ಈ ಪರಿವರ್ತನೆ ಇಲ್ಲದಿದ್ದರೆ, ನೆಟ್ಫ್ಲಿಕ್ಸ್ನ ವ್ಯವಹಾರವು ಭಾರತದಲ್ಲಿ ನಡೆಯುತ್ತಲೇ ಇರಲಿಲ್ಲ," ಎಂದು ಹೇಸ್ಟಿಂಗ್ಸ್ ಹೇಳಿದ್ದಾರೆ.
"ನಾವು ಕಂಟೆಂಟ್ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ ಸಮಯದಲ್ಲೇ ಇತರರು ಅಂತರಜಾಲವನ್ನು ಪರಿವರ್ತಿಸಲು ಹೂಡಿಕೆ ಮಾಡುತ್ತಿದ್ದದ್ದು ನಮ್ಮ ಅದೃಷ್ಟ" ಎಂದು ಅವರು ಹೇಳಿದ್ದಾರೆ.

ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಅವರು, "ನಾವು ಪ್ರತಿವರ್ಷವೂ ಬೆಳೆಯುತ್ತಿದ್ದೇವೆ, ನಾವು ನಮ್ಮ ತಂಡವನ್ನು ಕಟ್ಟುತ್ತಿದ್ದೇವೆ, ಕಂಟೆಂಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಸೇಕ್ರೆಡ್ ಗೇಮ್ಸ್ ಇರಲಿ, ಎಕೆ ವರ್ಸಸ್ ಎಕೆ ಇರಲಿ, ವಿವಿಧ ಬಗೆಯ ಹೆಚ್ಚುಹೆಚ್ಚಿನ ಕಂಟೆಂಟ್ನೊಂದಿಗೆ ಯಾವುದು ಕೆಲಸ ಮಾಡುತ್ತದೆಂದು ಅರಿತುಕೊಳ್ಳುತ್ತಿದ್ದೇವೆ. ನಾವು ಇನ್ನೂ ಕಲಿಕೆಯ ಹಂತದಲ್ಲಿದ್ದೇವೆ. ನಾವು ಭಾರತದಲ್ಲಿ ಎಲ್ಲಿಗೆ ತಲುಪಬೇಕು ಎನ್ನುವುದಕ್ಕೆ ಇದು ಕೇವಲ ಆರಂಭ ಅಷ್ಟೇ," ಎಂದು ಹೇಳಿದ್ದಾರೆ.
"ನೀವು ಅಂತರಜಾಲದಲ್ಲಿರುವ ಹಲವು ಮಾರುಕಟ್ಟೆಗಳನ್ನು ನೋಡಿದರೆ, ಹಲವು ವಿಭಿನ್ನ ಸಂಸ್ಥೆಗಳೊಂದಿಗೆ ಅದು ಸಾಕಷ್ಟು ಛಿದ್ರಗೊಂಡಿದೆ. ಯಾವುದೇ ದೇಶದಲ್ಲಿ ಒಂದು ಟೀವಿ ಕೇಂದ್ರವನ್ನು ರೂಪಿಸುವುದು ಎಷ್ಟು ಕಷ್ಟ ಎಂದು ಯೋಚಿಸಿ. ವೀಡಿಯೊ ವೆಬ್ಸೈಟ್ ರಚಿಸುವುದು ಅದಕ್ಕಿಂತ ಬಹಳ ಸುಲಭ. ಹಾಗಾಗಿ, ಅಲ್ಲಿ ಬಹಳಷ್ಟು ಆಯ್ಕೆಗಳಿರುತ್ತವೆಂದು ನಾನು ಭಾವಿಸುತ್ತೇನೆ,"ಎಂದು ಅವರು ಹೇಳಿದ್ದಾರೆ.
ಪ್ರೇಕ್ಷಕರು ಸಿನೆಮಾ ಹಾಲ್ಗಳಿಗೆ ಭೇಟಿ ನೀಡಲು ಸಾಧ್ಯವಾಗದ ಮತ್ತು ಚಿತ್ರಮಂದಿರಗಳಲ್ಲಿ ಪ್ರವೇಶದ ಹಕ್ಕುಗಳನ್ನು ಸಹ ನಿರ್ಬಂಧಿಸಲಾಗಿರುವ ಕೋವಿಡ್-19 ಜಾಗತಿಕ ಸೋಂಕಿನ ಸಂದರ್ಭದ ಕುರಿತು, "ನಮ್ಮ ಸದಸ್ಯರನ್ನು ಸಂತೋಷಪಡಿಸುವುದರ ಕಡೆಗೇ ನಮ್ಮ ಹೆಚ್ಚಿನ ಗಮನ ಕೇಂದ್ರೀಕೃತವಾಗಿದೆ. ಆದ್ದರಿಂದ, ವಿಶೇಷವಾಗಿ ಕೋವಿಡ್-19 ಸಂದರ್ಭದಲ್ಲಿ, ಚಿತ್ರಮಂದಿರಕ್ಕೆ ಹೋಗಬಹುದಾಗಿದ್ದ ಚಲನಚಿತ್ರಗಳನ್ನು ಖರೀದಿಸುವ ಅವಕಾಶ ನಮಗೆ ಸಿಕ್ಕಿದರೆ, ಅದು ನಿಜಕ್ಕೂ ಅರ್ಥಪೂರ್ಣ. ಮೂಲತಃ, ನಮ್ಮ ಸದಸ್ಯರ ಪರವಾಗಿ, ಅವರು ಇಷ್ಟಪಡುವ ಕಂಟೆಂಟ್ ಅನ್ನು ಒದಗಿಸಲು ನಾವು ಖರ್ಚು ಮಾಡಲು ಬಯಸುತ್ತೇವೆ. ಹಾಗೆ ಮಾಡಿದಾಗ ನಾವು ಬೆಳೆಯುತ್ತೇವೆ. ನಮ್ಮದೇ ಅದ ಕಂಟೆಂಟ್ ಅನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ನಾವು ಹೆಚ್ಚು ಉತ್ಸುಕರಾಗಿದ್ದೇವೆ ಮತ್ತು ಅದು ನಮಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ," ಎಂದು ಅವರು ಹೇಳಿದರು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications