ಇದೊಂದು ವಿಭಿನ್ನ ಪ್ರಯತ್ನ. ಆದರೆ ಇಂಥ ಪರಿಸ್ಥಿತಿ ಬಂತಲ್ಲ ಎಂದು ಬೇಸರಿಸಿಕೊಂಡರೆ ಏನೂ ಮಾಡುವುದಕ್ಕೆ ಆಗಲ್ಲ. ದಿನದಿನಕ್ಕೂ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಸಿಕ್ ನ ರೈಲು ನಿಲ್ದಾಣದಲ್ಲಿ "ಆಕ್ಸಿಜನ್ ಪಾರ್ಲರ್" ತೆರೆಯಲಾಗಿದೆ. ಆಕ್ಸಿಜನ್ ಅಂದರೆ ಆಮ್ಲಜನಕ. ಇನ್ನು ಪಾರ್ಲರ್ ಅಂದರೆ ನಿಮಗೆ ಗೊತ್ತೇ ಇರುತ್ತದೆ.
ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶುದ್ಧ ಗಾಳಿ ಉಸಿರಾಡುವ ಅನುಭವ ದೊರೆಯಲಿ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಭಾರತೀಯ ರೈಲ್ವೆ ಜತೆ ಏರೋ ಗಾರ್ಡ್ ಸಹಯೋಗ ವಹಿಸಿದೆ. ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಶಿಫಾರಸಿನ ಮೇಲೆ ಈ "ಆಕ್ಸಿಜನ್ ಪಾರ್ಲರ್" ಆಧಾರಗೊಂಡಿದೆ ಎಂದು ಏರೋ ಗಾರ್ಡ್ ನ ಸಹ ಸಂಸ್ಥಾಪಕ ಅಮಿತ್ ಅಮೃತ್ ಕರ್ ತಿಳಿಸಿದ್ದಾರೆ.
"1989ರಲ್ಲಿ ನಾಸಾದಿಂದ ಅಧ್ಯಯನ ನಡೆದಿತ್ತು. ಆಗ ಕೆಲವು ಸಸ್ಯಗಳನ್ನು ಗುರುತಿಸಲಾಯಿತು. ಅವುಗಳು ಗಾಳಿಯಲ್ಲಿನ ಐದು ಹಾನಿಕಾರಕ ಅಂಶಗಳನ್ನು ಹೀರಿಕೊಳ್ಳುತ್ತವೆ. ಅವುಗಳ ಪೈಕಿ ಹಲವನ್ನು ನಾವು ಬೆಳೆಸಿದ್ದೇವೆ. ಆ ಸಸ್ಯಗಳು ಇರುವ ಸುತ್ತಲ 10X10 ಜಾಗವನ್ನು ಶುದ್ಧಗೊಳಿಸುತ್ತವೆ" ಎಂದಿದ್ದಾರೆ.

"ಇಲ್ಲಿ 1500 ಸಸ್ಯಗಳಿವೆ. ಇವುಗಳು ನೇರವಾಗಿ ಹಾಗೂ ಪರಿಣಾಮಕಾರಿಯಾಗಿ ರೈಲು ನಿಲ್ದಾಣದ ಮಾಲಿನ್ಯವನ್ನು ಕಡಿಮೆ ಮಾಡುತ್ತವೆ ಹಾಗೂ ಜನರು ಶುದ್ಧ ಗಾಳಿ ಉಸಿರಾಡಲು ಅವಕಾಶ ಆಗುತ್ತದೆ" ಎಂದು ಅವರು ಹೇಳಿದ್ದಾರೆ. ಇದೇ ರೀತಿ ಎಲ್ಲ ರೈಲು ನಿಲ್ದಾಣಗಳಲ್ಲಿ, ಜತೆಗೆ ಪ್ರತಿ ಮನೆಗಳಲ್ಲೂ ವಿಸ್ತರಿಸುವ ಆಲೋಚನೆ ಇದೆ ಎಂದಿದ್ದಾರೆ.
ಈ ಸಸ್ಯಗಳನ್ನು ಗೆಳೆಯರಿಗೆ, ಕುಟುಂಬದವರಿಗೆ ಉಡುಗೊರೆ ನೀಡಬಹುದು. ಹೀಗೆ ಮಾಡಿದರೆ ಗಾಳಿಯ ಗುಣಮಟ್ಟ ಹೆಚ್ಚಿಸಲು ಸಹಾಯ ಆಗುತ್ತದೆ. ದೇಶದಾದ್ಯಂತ ಈ ಪ್ರಯತ್ನ ಆಗಬೇಕು ಎಂದು ಅವರು ತಿಳಿಸಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications