ಇಷ್ಟು ಕಾಲ ಸಂಸತ್ ಕ್ಯಾಂಟೀನ್ ನಲ್ಲಿ ಸಸ್ತಾ ಬೆಲೆಗೆ ಸಿಗುತ್ತಿದ್ದ ಆಹಾರಗಳು ಇನ್ನು ಮುಂದೆ ದೊರೆಯುವುದಿಲ್ಲ. ದೇಶದ ಜನಪ್ರತಿನಿಧಿಗಳಿಗಾಗಿ ಇರುವ ಕ್ಯಾಂಟೀನ್ ಆಹಾರದ ಸಬ್ಸಿಡಿಯನ್ನು ಲೋಕಸಭಾ ಕಾರ್ಯಾಲಯವು ತೆಗೆದುಹಾಕಿದೆ. ಜನವರಿ 29ರಂದು ಬಜೆಟ್ ಅಧಿವೇಶನ ಶುರುವಾಗಲಿದ್ದು, ಸಂಸತ್ ಕ್ಯಾಂಟೀನ್ ನಲ್ಲಿನ ಹೊಸ ದರ ಪಟ್ಟಿ ಅನ್ವಯ ಆಗಲಿದೆ. ಬಹುತೇಕ ಪದಾರ್ಥಗಳನ್ನು ಮಾರುಕಟ್ಟೆ ದರದಲ್ಲೇ ಮಾರಲಾಗುತ್ತದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಆ ವರದಿ ಪ್ರಕಾರ, ಸಂಸತ್ ಕ್ಯಾಂಟೀನ್ ಸಬ್ಸಿಡಿ ಕೊನೆಗೊಳಿಸಿದ ಮೇಲೆ ಹೊಸ ದರವನ್ನು ಘೋಷಣೆ ಮಾಡಲಾಗಿದೆ ಎಂದು ವರದಿ ಆಗಿದೆ. ಈಗಿನ ಹೊಸ ದರದ ಅನ್ವಯ, 3 ರುಪಾಯಿಯ ಚಪಾತಿ ತೀರಾ ಅಗ್ಗದ್ದು. ವಿಪರೀತ ದುಬಾರಿಯದ್ದು ಅಂದರೆ, ಮಾಂಸಾಹಾರಿ ಬಫೆ. ಬೆಲೆ ರು. 700. ಸಸ್ಯಾಹಾರಿ ಊಟ/ಥಾಲಿ ರು. 100. ಸಸ್ಯಾಹಾರಿ ಬಫೆ ರು. 500.
ಹೊಸ ದರ ಪಟ್ಟಿಯ ಪ್ರಕಾರ ಚಿಕನ್ ಬಿರಿಯಾನಿ ದರ ರು. 100 ಆಗುತ್ತದೆ. ಈ ಹಿಂದೆ ಅದರ ಬೆಲೆ ರು. 65 ಇತ್ತು. ಜನವರಿ 19ರಂದು ಈ ಬಗ್ಗೆ ಹೇಳಿರುವ ಸ್ಪೀಕರ್, ಸಬ್ಸಿಡಿಯನ್ನು ನಿಲ್ಲಿಸುತ್ತಿರುವುದರಿಂದ ಸಂಸತ್ ಕ್ಯಾಂಟೀನ್ ನಲ್ಲಿ ಸಂಸದರು ಮತ್ತು ಇತರರಿಗೆ ನೀಡುತ್ತಿರುವ ಆಹಾರ ದುಬಾರಿ ಆಗಲಿದೆ ಎಂದು ಹೇಳಿದ್ದಾರೆ.

ಆದರೆ, ಇದರಿಂದ ಆಗುವ ಹಣಕಾಸಿನ ಪರಿಣಾಮದ ಬಗ್ಗೆ ಅವರು ಹೇಳಿಲ್ಲ ಎಂದು ಮೂಲಗಳನ್ನು ಆಧರಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿ. ಸಬ್ಸಿಡಿ ಕೊನೆ ಮಾಡುವುದರಿಂದ ವರ್ಷಕ್ಕೆ 8 ಕೋಟಿ ರುಪಾಯಿಗೂ ಹೆಚ್ಚು ಉಳಿತಾಯ ಮಾಡಬಹುದು ಎಂದು ಲೋಕಸಭಾ ಕಾರ್ಯಾಲಯ ತಿಳಿಸಿದೆ. ಮುಂದಿನ ಬಜೆಟ್ ಅಧಿವೇಶನದ ಸಿದ್ಧತೆ ಬಗ್ಗೆ ವರದಿಗಾರರ ಜತೆ ಮಾತನಾಡಿದ ಓಂ ಬಿರ್ಲಾ, ಉತ್ತರ ರೈಲ್ವೇಸ್ ಬದಲಿಗೆ ಭಾರತ ಪ್ರವಾಸ ಅಭಿವೃದ್ಧಿ ನಿಗಮ (ಐಟಿಡಿಸಿ) ಈ ಕ್ಯಾಂಟೀನ್ ನಡೆಸುತ್ತದೆ ಎಂದು ಹೇಳಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications