ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ ಅಥವಾ ಕ್ವಾಡ್ ಎನ್ನುವುದು ಅಮೇರಿಕಾ , ಜಪಾನ್ , ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ಕಾರ್ಯತಂತ್ರದ ಮಾತುಕತೆಗೆ ಜಾಗತಿಕ ಮಟ್ಟದಲ್ಲಿ ಸಿಕ್ಕಿರುವ ಹೆಸರು. ಚೀನಾ ದೇಶದ ಪ್ರಾಬಲ್ಯವನ್ನ ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶ. ಕೊರೊನಾವೈರಸ್ ಸೃಷ್ಟಿಗೆ ಚೀನಾ ದೇಶ ಕಾರಣ , ಇದು ನಿಜವೋ ಅಥವಾ ಸುಳ್ಳೋ ಎನ್ನುವುದನ್ನ ನಿಮ್ಮ ನೆಲದಲ್ಲಿ ತಪಾಸಣೆ ಮಾಡಲು ಅಂತರಾಷ್ಟ್ರೀಯ ಮಟ್ಟದ ನಿಯೋಗಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕ್ವಾಡ್ ಒತ್ತಾಯಿಸುತ್ತಿದೆ.
ಇದಲ್ಲದೆ ಏಷ್ಯಾ ಪೆಸಿಫಿಕ್ ರೀಜನ್ ನಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಾದರೆ ಅದು ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಒಳ್ಳೆಯ ಸುದ್ದಿಯಲ್ಲ. ಜಾಗತಿಕ ಮಟ್ಟದಲ್ಲಿ ಕೂಡ ಚೀನಾ ಯಾವ ಮಟ್ಟದ ಅವಾಂತರ ಸೃಷ್ಟಿಸಬಹುದು ಎನ್ನುವುದನ್ನ ಜಗತ್ತು ನೋಡಿದೆ. ಹೀಗಾಗಿ ಚೀನಾ ದೇಶದ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾರ್ಯ ತಂತ್ರವನ್ನ ಕ್ವಾಡ್ ದೇಶಗಳು ರೂಪಿಸುತ್ತಿವೆ.
ಚೀನಾ ದೇಶದಲ್ಲಿ ಉತ್ಪಾದನೆ ಒಂದಷ್ಟು ಕಡಿಮೆ ಮಾಡಿರುವುದು ಮತ್ತು ಬಂದರುಗಳಲ್ಲಿ ಹೆಚ್ಚಿನ ಮಟ್ಟದ ತಪಾಸಣೆ ಎರಡೂ ಸೇರಿ ಜಗತ್ತಿನ ಸಪ್ಲೈ ಚೈನ್ ನಲ್ಲಿ ಕುಸಿತ ಉಂಟಾಗಿದೆ. ಇಂಗ್ಲೆಂಡ್ ದೇಶದಲ್ಲಿ ಕ್ರಿಸ್ಮಸ್ ಹಬ್ಬದ ಬಗ್ಗೆ ಜನರಲ್ಲಿ ಇರುವ ಸಿಹಿಯನ್ನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಅದರಲ್ಲೂ 5ಜಿ ಟೆಲಿಕಾಂ ಟೆಕ್ನಾಲಜಿ ಮತ್ತು ಸೆಮಿಕಂಡಕ್ಟರ್ ಚಿಪ್ ಗಳ ತಯಾರಿಕೆಯಲ್ಲಿ ಚೀನಾದ ಪ್ರಭಾವ ಬಹಳ ಹೆಚ್ಚಾಗಿದೆ. ಹೀಗಾಗಿ ಎರಡೂ ಕ್ಷೇತ್ರದಲ್ಲಿ ಬಳಕೆಯಾಗುವ ಚಿಪ್ ಗಳ ಕೊರತೆಯನ್ನ ಜಗತ್ತು ಎದುರಿಸುತ್ತಿದೆ. ಪ್ರಥಮ ಬಾರಿಗೆ ಮುಖಾಮುಖಿ ಕ್ವಾಡ್ ಸಭೆಯಲ್ಲಿ ಚೀನಾದ ದೇಶದ ಈ ಚಿಪ್ ಗಳ ಮೇಲಿನ ಪ್ರಾಬಲ್ಯವನ್ನ ಕಡಿಮೆ ಮಾಡಲು ಮಾತುಕತೆಯನ್ನ ನೆಡೆಸಲಾಗಿದೆ. ನಾಲ್ಕೂ ದೇಶಗಳ ಹಿತವನ್ನ ಕಾಪಾಡಿಕೊಳ್ಳುವುದು ಆ ಮೂಲಕ ಜಾಗತಿಕ ಮಟ್ಟದಲ್ಲಿ ಚಿಪ್ ಒಂದೇ ಅಲ್ಲದೆ ಇತರ ಸಪ್ಲೈ ಚೈನ್ ಕೂಡ ಸರಾಗ ಮಾಡುವುದರ ಬಗ್ಗೆ ಕೂಡ ಕಾರ್ಯ ತಂತ್ರವನ್ನ ಹೆಣೆಯಲಾಗಿದೆ.
ಸಭೆಯ ನಂತರ ಕ್ವಾಲ್ಕಾಮ್ನ ಸಂಸ್ಥೆಯ ಸಿಇಓ ಕ್ರಿಸ್ಟಿಯಾನೊ ಅಮನ್ ಅವರನ್ನ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಭೇಟಿಯಾಗಿ ಭಾರತದಲ್ಲಿ ಇಂತಹ ಉತ್ಪಾದನಾ ಘಟಕಗಳನ್ನ ತೆರೆಯಲು ಆಹ್ವಾನವನ್ನ ನೀಡಿದ್ದಾರೆ. ಹೆಚ್ಚಿನ ಹಣ ಹೂಡಿಕೆಯ ರೂಪದಲ್ಲಿ ಬರುವುದರ ಜೊತೆಗೆ ಈ ಕಾರ್ಯ ಕ್ಷೇತ್ರದಲ್ಲಿ ಒಂದಷ್ಟು ಕೆಲಸಗಳ ಸೃಷ್ಟಿ ಕೂಡ ಆಗಲಿದೆ.
ಕ್ವಾಡ್ ದೇಶಗಳ ತತ್ವಗಳಲ್ಲಿ ನಂಬಿಕೆಯಿಟ್ಟಿರುವ ಎಲ್ಲಾ ದೇಶಗಳು ಕೂಡ ಸಪ್ಲೈ ಚೈನ್ ಸರಿ ಪಡಿಸುವುದು ಮತ್ತು ಜಾಗತಿಕ ಮಟ್ಟದಲ್ಲಿ ಅವಶ್ಯವಿರುವ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಲು ಕೈ ಜೋಡಿಸಬೇಕಾಗಿದೆ. ಎಲ್ಲಾ ದೇಶಗಳ ಸಹಕಾರದಿಂದ ಇದು ಸಾಧ್ಯ ಎನ್ನುವ ಮಾತುಗಳನ್ನ ಕ್ವಾಡ್ ಸಭೆಯಲ್ಲಿ ನಾಲ್ಕೂ ದೇಶದ ನಾಯಕರು ಉಚ್ಛರಿಸಿರುವುದು ವಿಶೇಷ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Tejasvi Surya: ಹೋಟೆಲ್ ಉದ್ಯಮದ ಬೆಂಬಲಕ್ಕೆ ನಿಂತ ತೇಜಸ್ವಿ ಸೂರ್ಯ; LPG ಗ್ಯಾಸ್ ಪೂರೈಸುವಂತೆ ಮನವಿ

International Women's Day: ಮಹಿಳೆಯರೇ ಇಲ್ಲಿ ಗಮನಿಸಿ; ಇಲ್ಲಿದೆ ಬೆಸ್ಟ್ 5 ಹೂಡಿಕೆ ಯೋಜನೆಗಳು!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications