ಪೇಟಿಯಂಗೆ ಭಾರಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ನವದೆಹಲಿ, ಅಕ್ಟೋಬರ್ 21: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್ಬಿಐ) ಸೋಮವಾರದಂದು ಒಂದು ಕೋಟಿ ರೂಪಾಯಿ ದಂಡವನ್ನು ವಿಧಿಸಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಇಂದು ಪೇಟಿಯಂಗೆ ಭಾರಿ ದಂಡ ವಿಧಿಸಿದೆ.
ವಂಚನೆ ಸಂಬಂಧಿಸಿದ ನಿಯಮಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಾಲನೆ ಮಾಡಿಲ್ಲ ಎಂಬ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಸ್ಬಿಐಗೆ ದಂಡ ವಿಧಿಸಿದೆ ಎಂದು ವರದಿ ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಗಳ ಬಗ್ಗೆ ತನಿಖೆ ನಡೆಸಲಾಗಿದೆ ಮತ್ತು ವಂಚನೆಗಳ ಬಗ್ಗೆ ಎಸ್ಬಿಐ ಬಳಿ ವರದಿ ಮಾಡುವಲ್ಲಿ ಅಡೆತಡೆಗಳು ಇದೆ. ಈ ನಿಟ್ಟಿನಲ್ಲಿ ಎಸ್ಬಿಐಗೆ ದಂಡ ವಿಧಿಸಲಾಗಿದೆ ಎಂದು ನಿಯಂತಕರು ತಿಳಿಸಿದ್ದಾರೆ.
ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಕಾಯ್ದೆ 2007 ರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೇಟಿಯಂ ಒಡೆತನದ ಪೇಟಿಎಂ ಪಾವತಿ ಬ್ಯಾಂಕ್ಗೆ ಬುಧವಾರದಂದು ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ. ಜೊತೆಗೆ ವೆಸ್ಟರ್ನ್ ಯೂನಿಯನ್ ಫೈನಾನ್ಶಿಯಲ್ ಸರ್ವಿಸಸ್ಗೆ 27.8 ಲಕ್ಷ ದಂಡವನ್ನು ವಿಧಿಸಲಾಗಿದೆ.
ಅಂತಿಮ ದೃಢೀಕರಣ ಪತ್ರಕ್ಕಾಗಿ ಪೇಟಿಎಂ ಪಾವತಿ ಬ್ಯಾಂಕ್ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿದಾಗ, ಪಿಬಿಬಿಎಲ್ ವಾಸ್ತವಿಕ ಸ್ಥಿತಿಯನ್ನು ಪ್ರತಿಬಿಂಬಿಸದ ಮಾಹಿತಿಯನ್ನು ಸಲ್ಲಿಸಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
''ಇದು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯಿದೆ, 2007 (ಪಿಎಸ್ಎಸ್ ಕಾಯ್ದೆ) ಸೆಕ್ಷನ್ 26 (2) ರಲ್ಲಿ ಉಲ್ಲೇಖಿಸಲಾಗಿರುವ ಸ್ವಾಭಾವಿಕ ನಿಯಮಾವಳಿ ಉಲ್ಲಂಘಿಸಲಾಗಿದೆ ಹಾಗೂ ಶಿಕ್ಷಾರ್ಹವಾಗಿದೆ,'' ಎಂದು ಆರ್ಬಿಐ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
"ಇದು ಪಿಎಸ್ಎಸ್ ಕಾಯಿದೆಯ ಸೆಕ್ಷನ್ 26 (2) ರಲ್ಲಿ ಉಲ್ಲೇಖಿಸಿರುವ ಸ್ವಾಭಾವಿಕ ನಿಯಮಾವಳಿ ಉಲ್ಲಂಘನೆ ಅಪರಾಧವಾಗಿದ್ದು, ಈ ಕಾರಣವಾಗಿ ಪಿಪಿಬಿಎಲ್ಗೆ ನೋಟಿಸ್ ನೀಡಲಾಗಿದೆ. ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ನೀಡಿದ ಲಿಖಿತ ಪ್ರತಿಕ್ರಿಯೆಗಳು ಮತ್ತು ಮೌಖಿಕ ಸಲ್ಲಿಕೆಗಳನ್ನು ಪರಿಶೀಲಿಸಿದ ನಂತರ, ಆರ್ಬಿಐ ಈ ಮೇಲಿನ ಆರೋಪವನ್ನು ದೃಢೀಕರಿಸಿದೆ ಮತ್ತು ವಿತ್ತೀಯ ದಂಡವನ್ನು ವಿಧಿಸುವುದನ್ನು ಖಾತರಿಪಡಿಸಿದೆ,'' ಎಂದು ಆರ್ಬಿಐ ತನ್ನ ಆದೇಶದಲ್ಲಿ ಹೇಳಲಾಗಿದೆ.
ಎಸ್ಬಿಐಗೆ 1 ಕೋಟಿ ದಂಡ ವಿಧಿಸಿದ ಆರ್ಬಿಐ!
ಇನ್ನು ವೆಸ್ಟರ್ನ್ ಯೂನಿಯನ್ ಫೈನಾನ್ಶಿಯಲ್ ಸರ್ವಿಸಸ್ ಮೇಲೆ 27.8 ಲಕ್ಷ ದಂಡವನ್ನು ವಿಧಿಸಿದೆ, 2019 ಮತ್ತು 2020ರ ಆರ್ಥಿಕ ವರ್ಷಗಳಲ್ಲಿ ಪ್ರತಿ ಫಲಾನುಭವಿಗೆ 30 ರವಾನೆ (remittances)ಗಳ ಸೀಲಿಂಗ್ ಅನ್ನು ಉಲ್ಲಂಘಿಸಿದ ಹಣ ವರ್ಗಾವಣೆ ದಾಖಲಾಗಿದೆ.
"ವೆಸ್ಟರ್ನ್ ಯೂನಿಯನ್ 2019 ಮತ್ತು 2020ರ ಕ್ಯಾಲೆಂಡರ್ ವರ್ಷಗಳಲ್ಲಿ ಪ್ರತಿ ಫಲಾನುಭವಿಗೆ 30 ರವಾನೆಯ ಸೀಲಿಂಗ್ ಅನ್ನು ಉಲ್ಲಂಘಿಸಿದ ಉದಾಹರಣೆಗಳನ್ನು ವರದಿ ಮಾಡಿದೆ ಮತ್ತು ಉಲ್ಲಂಘನೆಯ ಸಂಯೋಜನೆಗೆ ಅರ್ಜಿ ಸಲ್ಲಿಸಿದೆ. ಸಂಯುಕ್ತ ಅರ್ಜಿಯನ್ನು ವಿಶ್ಲೇಷಿಸಿದ ನಂತರ ಮತ್ತು ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ಮೌಖಿಕ ಸಲ್ಲಿಕೆಗಳನ್ನು ವಿಶ್ಲೇಷಿಸಿದ ನಂತರ ಮೇಲೆ ತಿಳಿಸಿದ ಅನುವರ್ತನೆಯು ಅಸಮರ್ಥನೀಯ,'' ಎಂದು ಆರ್ಬಿಐ ನಿರ್ಧರಿಸುತ್ತದೆ.