ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ (ಆಗಸ್ಟ್ 6, 2020) ಘೋಷಣೆ ಮಾಡಿದ ಹಣಕಾಸು ನೀತಿಯ ಪ್ರಮುಖಾಂಶಗಳು ಇಲ್ಲಿವೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದು 4% ದರದಲ್ಲೇ ಮುಂದುವರಿಯಲಿದೆ. ಇನ್ನುಳಿದಂತೆ ಮಾಧ್ಯಮಗಳ ಜತೆ ಹಂಚಿಕೊಂಡ ಮುಖ್ಯ ಮಾಹಿತಿಗಳು ಹೀಗಿವೆ.
* ಆರ್ ಬಿಐ ಹಣಕಾಸು ನೀತಿ ಸಮಿತಿಯಿಂದ ರೆಪೋ ದರ 4% ಮುಂದುವರಿಕೆ
* ರಿವರ್ಸ್ ರೆಪೋ ದರದಲ್ಲಿ ಕೂಡ ಬದಲಾವಣೆ ಇಲ್ಲ. 3.35% ಮುಂದುವರಿಕೆ.
* ನಗದು ಮೀಸಲು ಪ್ರಮಾಣ (CRR) 3% ಯಥಾಸ್ಥಿತಿಯಲ್ಲೇ ಇರಲಿದೆ.
* ಕೊರೊನಾ ಬಿಕ್ಕಟ್ಟು ಉದ್ಭವಿಸಿದ ಮೇಲೆ ಎಲ್ಲ ದೇಶೀಯ ಹಣದುಬ್ಬರ ಕೂಡ ಹೆಚ್ಚಾಗಿದೆ.

* ಜಾಗತಿಕ ಆರ್ಥಿಕತೆಯು ದುರ್ಬಲವಾಗಿದೆ. ಕೊರೊನಾ ಪ್ರಕರಣ ಸಂಖ್ಯೆ ಕಡಿಮೆ ಆಗುತ್ತಿದ್ದಂತೆ ಪುನಶ್ಚೇತನದ ಸೂಚನೆಗಳು ದೊರೆಯುತ್ತವೆ.
* ಏಪ್ರಿಲ್- ಮೇ ತಿಂಗಳ ಕನಿಷ್ಠ ಮಟ್ಟದಿಂದ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಿವೆ.
* ಎಲ್ಲ ಸೆಗ್ಮೆಂಟ್ ಗಳಲ್ಲೂ ಹಣದುಬ್ಬರ ಕಾಣುತ್ತಿದೆ. ಪೂರೈಕೆ ಜಾಲ ಅಸ್ತವ್ಯಸ್ತ ಆಗಿದ್ದರ ಫಲಿತಾಂಶ ಇದು.
* ಜಿಡಿಪಿ ಬೆಳವಣಿಗೆ ದರ ನಕಾರಾತ್ಮಕವಾಗಿಯೇ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಕೊರೊನಾ ನಿಯಂತ್ರಣದ ಯಾವುದೇ ಪ್ರಯತ್ನದಿಂದ ಸನ್ನಿವೇಶ ಬದಲಾಗಲಿದೆ.
* ಭಾರತದ ಆರ್ಥಿಕ ಬೆಳವಣಿಗೆಯು 2020 ಏಪ್ರಿಲ್ ನಿಂದ ಆರಂಭವಾಗುವ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕುಗ್ಗಲಿದೆ.
* ವ್ಯವಸ್ಥೆಯಲ್ಲಿ ಅಗತ್ಯ ಪ್ರಮಾಣದ ನಗದು ಹರಿದಾಡದೆ ದರ ಕಡಿತ ಮಾಡುವುದು ಸಾಧ್ಯವಿಲ್ಲ.
* ಹಣಕಾಸು ಮಾರ್ಕೆಟ್ ಗೆ ನಗದು ಬೆಂಬಲ, ಸಾಲದ ಹರಿವಿಗೆ ಉತ್ತೇಜನ, ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.
* ನಬಾರ್ಡ್ ಮತ್ತು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಗೆ ಹೆಚ್ಚುವರಿಯಾಗಿ ಹತ್ತು ಸಾವಿರ ಕೋಟಿ ನಗದು ಒದಗಿಸಲಾಗುತ್ತದೆ. ಇದರಿಂದ ಎನ್ ಬಿಎಫ್ ಸಿ ಮತ್ತು ಹೌಸಿಂಗ್ ವಲಯದ ನಗದು ಬಿಕ್ಕಟ್ಟು ಪರಿಹಾರಕ್ಕೆ ನೆರವು ಸಿಕ್ಕಂತಾಗುತ್ತದೆ.
* ಈಗಾಗಲೇ ಎಂಎಸ್ ಎಂಇ ಸಾಲ ಪುನಾರಚನೆ ಯೋಜನೆ ಜಾರಿಯಲ್ಲಿದೆ. ಕೊರೊನಾ ಕಾರಣಕ್ಕೆ ಈ ಕ್ಷೇತ್ರಕ್ಕೆ ಇನ್ನು ಹೆಚ್ಚಿನ ನೆರವು ಆಗಬೇಕಿದೆ.
* ಸದ್ಯಕ್ಕೆ ಚಿನ್ನ ಅಡಮಾನ ಮಾಡಿದಲ್ಲಿ ಮೌಲ್ಯದ ಶೇಕಡಾ 90% ನೀಡಲಾಗುತ್ತಿದೆ. ಈ ಹಿಂದೆ ಅದು ಶೇಕಡಾ ಎಪ್ಪತ್ತೈದರಷ್ಟಿತ್ತು.
* ಭವಿಷ್ಯದಲ್ಲಿ ಆರ್ ಬಿಐನಿಂದ ಇನ್ನೋವೇಷನ್ ಹಬ್ ಗಳನ್ನು ಆರಂಭಿಸಲಾಗುತ್ತದೆ. ಡಿಜಿಟಲ್ ಪಾವತಿಗೆ ಆನ್ ಲೈನ್ ವ್ಯಾಜ್ಯ ಪರಿಹಾರ ವೇದಿಕೆ ಪರಿಚಯಿಸಲಾಗುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications