2020ರಲ್ಲಿ ಸಣ್ಣ ವ್ಯಾಪಾರಿಗಳ ಆತ್ಮಹತ್ಯೆ ಸಂಖ್ಯೆ 30%ರಷ್ಟು ಹೆಚ್ಚಳ: NCRB

ಮುಂಬೈ, ನವೆಂಬರ್ 10: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2020 ರ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆ ವರದಿಯನ್ನು ಬಿಡುಗಡೆ ಮಾಡಿದೆ. 2019 ಕ್ಕೆ ಹೋಲಿಸಿದರೆ ಕೋವಿಡ್ -19 ಸಾಂಕ್ರಾಮಿಕದ ಮೊದಲ ವರ್ಷವಾದ 2020 ರಲ್ಲಿ ಸಣ್ಣ ವ್ಯಾಪಾರ ಮಾಲೀಕರ ಆತ್ಮಹತ್ಯೆ ಪ್ರಕರಣಗಳು ರಾಷ್ಟ್ರವ್ಯಾಪಿ 30% ಹೆಚ್ಚಾಗಿದೆ.

NCRB ಬಿಡುಗಡೆ ಮಾಡಿದ ವರದಿಯಲ್ಲಿ ಸಣ್ಣ ವ್ಯಾಪಾರ ಮಾಲೀಕರ ಆತ್ಮಹತ್ಯೆ ಪ್ರಕರಣಗಳು 2019 ರಲ್ಲಿ 9,052 ರಿಂದ 2020 ರಲ್ಲಿ 11,716 ಕ್ಕೆ ಏರಿಕೆಯಾಗಿದೆ. ಇದು ಕೋವಿಡ್ ಹೇರಿದ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಗಳನ್ನು ಒತ್ತಿ ಹೇಳುತ್ತದೆ ಎಂದು ತಜ್ಞರು ಹೇಳಿದ್ದಾರೆ. ಎನ್‌ಸಿಆರ್‌ಬಿ ವರದಿಯಲ್ಲಿ ಮಾರಾಟಗಾರರು, ವ್ಯಾಪಾರಿಗಳು ಮತ್ತು ಇತರ ಸಣ್ಣ ವ್ಯಾಪಾರ ಮಾಲೀಕರನ್ನು ಸ್ವಯಂ ಉದ್ಯೋಗಿ ವರ್ಗಗಳಲ್ಲಿ ವರ್ಗೀಕರಿಸಲಾಗಿದೆ. ಒಟ್ಟಾರೆ ಭಾರತದಲ್ಲಿ ಸ್ವಯಂ ಉದ್ಯೋಗಿಗಳಲ್ಲಿ ಆತ್ಮಹತ್ಯೆಯಿಂದ ಸಾವು ಪ್ರಕರಣಗಳು 17,332ರಷ್ಟಿದ್ದು, ಇದು 2019 ರಲ್ಲಿ 16,098ರಷ್ಟಿತ್ತು.

ರಾಜ್ಯಗಳಲ್ಲಿ, ಅತಿ ಹೆಚ್ಚು ಕೋವಿಡ್ ಪ್ರಕರಣಗಳ ಸಂಖ್ಯೆ (66 ಲಕ್ಷ) ಮತ್ತು ಸಾವಿನ ಸಂಖ್ಯೆ (1.4 ಲಕ್ಷ) ಹೊಂದಿರುವ ಮಹಾರಾಷ್ಟ್ರವು ಮಾರಾಟಗಾರರು, ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರ ಮಾಲೀಕರಲ್ಲಿ 25% ರಷ್ಟು ಆತ್ಮಹತ್ಯೆಗಳನ್ನು ದಾಖಲಿಸಿದೆ. ಎನ್‌ಸಿಆರ್‌ಬಿ ವರದಿಯು ಮಹಾರಾಷ್ಟ್ರದಲ್ಲಿ 2019 ರಲ್ಲಿ 1,289 ಮತ್ತು 2020 ರಲ್ಲಿ 1,610 ಸ್ವಯಂ ಉದ್ಯೋಗಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದೆ.

2020ರಲ್ಲಿ ಸಣ್ಣ ವ್ಯಾಪಾರಿಗಳ ಆತ್ಮಹತ್ಯೆ  ಸಂಖ್ಯೆ 30%ರಷ್ಟು ಹೆಚ್ಚಳ

ಇನ್ನೂ ತಮಿಳುನಾಡು ಸ್ವಯಂ ಉದ್ಯೋಗಿ ವಿಭಾಗದಲ್ಲಿ ಗರಿಷ್ಠ ಸಾವುಗಳನ್ನು ಹೊಂದಿದೆ. 2019 ರಲ್ಲಿ 1,061 ರಷ್ಟು ಸಾವುಗಳನ್ನು ದಾಖಲಿಸಿದರೆ 2020 ರಲ್ಲಿ 1,447 ರಷ್ಟು ಅಂದರೆ 36% ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಕರ್ನಾಟಕವು 2019 ರಲ್ಲಿ 875ರಷ್ಟು ಸಾವಿನ ಸಂಖ್ಯೆ ದಾಖಲಿಸಿದರೆ 2020 ರಲ್ಲಿ 1,772ರಷ್ಟು ಅಂದರೆ 102% ಏರಿಕೆಯಾಗಿದೆ. ಪ್ರಾಸಂಗಿಕವಾಗಿ, ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕವು ಅತೀಹೆಚ್ಚು ಆತ್ಮಹತ್ಯೆಗಳ ಸಂಖ್ಯೆಯನ್ನು ದಾಖಲಿಸಿದೆ.

ಮುಂಬೈನ ಟಿಐಎಸ್‌ಎಸ್‌ನ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ ವಿಭೂತಿ ಪಟೇಲ್, ಎನ್‌ಸಿಆರ್‌ಬಿ ಸಂಶೋಧನೆಗಳು ಅನೌಪಚಾರಿಕ ವಲಯದ ಜನರು ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎಂಬ ಅಂಶವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. "ಇವರು ಸ್ವಯಂ ನಿರ್ಮಿತ ಜನರು. ಅವರು ತಮ್ಮ ಜೀವನಕ್ಕಾಗಿ ಸಂಪಾದಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ಸಂಪಾದನೆಗೆ ಮುಂದಾಗಿದ್ದರೆ ಕೊರೊನಾ ಸಂದರ್ಭದಲ್ಲಿ ಪೊಲೀಸರು ಅವರ ಮೇಲೆ ಕ್ರೂರವಾಗಿ ವರ್ತಿಸುತ್ತಿದ್ದರು. ಹೀಗಾಗಿ ಅವರಲ್ಲಿ ಹಲವರು ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು, "ಎಂದು ಅವರು ಹೇಳಿದರು. ಮಾರಾಟಗಾರರು ಮತ್ತು ಸಣ್ಣ ವ್ಯಾಪಾರಿಗಳು ಕೇವಲ ಆರ್ಥಿಕ ನಷ್ಟವನ್ನು ಅನುಭವಿಸಲಿಲ್ಲ, "ಅವರು ತಮ್ಮ ಗುರುತನ್ನು ಮತ್ತು ಸ್ವಾಭಿಮಾನವನ್ನು ಕಳೆದುಕೊಂಡಿದ್ದಾರೆ" ಎಂದು ಡಾ ಪಟೇಲ್ ಹೇಳಿದರು.

ಫೆಡರೇಶನ್ ಆಫ್ ರೀಟೇಲ್ ಟ್ರೇಡರ್ಸ್ ವೆಲ್ಫೇರ್ ಅಸೋಸಿಯೇಷನ್ ​​ಅಧ್ಯಕ್ಷ ವೀರೇನ್ ಶಾ ಮಾತನಾಡಿ, ಕಡಿಮೆ ಮತ್ತು ಮಧ್ಯಮ ಆದಾಯದ ಗುಂಪುಗಳಲ್ಲಿನ ಅಂಗಡಿಕಾರರು ಮತ್ತು ವ್ಯಾಪಾರಿಗಳು ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾಗಿದ್ದಾರೆ. "ಕೊರೊನಾದಿಂದ ಅನುಕೂಲವಾಗಿದೆ ಅಂದರೆ ಅದು ಕೈಗಾರಿಕೋದ್ಯಮಿಗಳು ಮತ್ತು ಕಾರ್ಪೊರೇಟ್ ಜಗತ್ತಿಗೆ ಮಾತ್ರ, ಸಣ್ಣ ಅಂಗಡಿಕಾರರು ಸಾಲ ಮತ್ತು ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆಯ ಹೊರತು ಬೇರೆ ದಾರಿಯಿಲ್ಲ" ಎಂದು ಶಾ ಹೇಳಿದರು.

ಲಾಕ್‌ಡೌನ್ ಸಮಯದಲ್ಲಿ ಅಂಚಿನಲ್ಲಿರುವ ಗುಂಪುಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ಎನ್‌ಜಿಒ ಪ್ರಾಜೆಕ್ಟ್ ಮುಂಬೈನ ಶಿಶಿರ್ ಜೋಶಿ, "ಸಾಂಕ್ರಾಮಿಕವು ಅನೇಕ ಹಂತಗಳಲ್ಲಿ ಜನರ ಮೇಲೆ ಪರಿಣಾಮ ಬೀರಿದೆ. ಸಣ್ಣ ಉದ್ಯಮಿಗೆ, ಸಾಂಕ್ರಾಮಿಕ ರೋಗವು ಆದಾಯದ ನಷ್ಟವನ್ನು ಮಾತ್ರವಲ್ಲ, ಅವನ ಕುಟುಂಬ ಸದಸ್ಯರಿಗೆ ಆಸ್ಪತ್ರೆಯ ಹಾಸಿಗೆಗಳನ್ನು ಪಡೆಯಲು ಮತ್ತು ಅವನ ಮಕ್ಕಳಿಗೆ ಶಾಲಾ ಶುಲ್ಕವನ್ನು ಪಾವತಿಸಲು ಹೋರಾಟ ಮಾಡುವಂತೆ ಮಾಡಿತು" ಎಂದಿದ್ದಾರೆ.

2020ರಲ್ಲಿ 18,916 ಕ್ಕೆ ಹೋಲಿಸಿದರೆ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಮಹಾರಾಷ್ಟ್ರವು 19,909 ಆತ್ಮಹತ್ಯೆಗಳೊಂದಿಗೆ ಸತತ ಎರಡನೇ ವರ್ಷದಲ್ಲಿ ಅಗ್ರಸ್ಥಾನದಲ್ಲಿದೆ. ಸ್ವಯಂ ಉದ್ಯೋಗಿಗಳ ಒಂದು ಭಾಗದ ಮೇಲೆ ರಾಜ್ಯದ ಕೃಷಿ ವಲಯವು ಹೆಚ್ಚು ಪರಿಣಾಮ ಬೀರಿತು. ರಾಜ್ಯದಲ್ಲಿ 4,006 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected].

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+