ದೇಶದ ಪ್ರಮುಖ ಐಟಿ ಸಂಸ್ಥೆ ವಿಪ್ರೋ ಲಿಮಿಟೆಡ್ ಬುಧವಾರದಂದು ತನ್ನ 3ನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಡಿಸೆಂಬರ್ 2021 ರ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 2,969 ಕೋಟಿ ರೂ.ಗೆ ಏಕೀಕೃತ ನಿವ್ವಳ ಲಾಭವನ್ನು ವರದಿ ಮಾಡಿದೆ. ಹಿಂದಿನ ವರ್ಷದ ಅವಧಿಯಲ್ಲಿ ಇದು 2,968 ಕೋಟಿ ರೂ ಗಳಿಸಿತ್ತು.
ಕಾರ್ಯಾಚರಣೆಗಳಿಂದ ಕ್ರೋಢೀಕೃತ ಆದಾಯವು ಶೇ 30 ರಷ್ಟು ಏರಿಕೆಯಾಗಿ 20,313 ಕೋಟಿ ರೂ. ದಾಖಲಾಗಿದ್ದು, ಹಿಂದಿನ ವರ್ಷ ಈ ಅವಧಿಯ ತ್ರೈಮಾಸಿಕದಲ್ಲಿ15,670 ಕೋಟಿ ರೂ ಗಳಿಸಿತ್ತು. ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ, ನಿವ್ವಳ ಲಾಭವು ಬಹುತೇಕ ಒಂದೇ ಆಗಿತ್ತು. ಕಂಪನಿಯು ಹಿಂದಿನ ವರ್ಷದ ಅವಧಿಯಲ್ಲಿ 2,968 ಕೋಟಿ ರೂ ಬಂದಿತ್ತು.
CNBC-TV18 ಅಂದಾಜಿಸಲಾದ 3,560 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, Q3 FY22 ಗಾಗಿ ಬಡ್ಡಿ ಮತ್ತು ತೆರಿಗೆಗಳ ಕಡಿತಕ್ಕೂ (EBIT) ಮೊದಲಿನ ಗಳಿಕೆಯು 3,553.5 ಕೋಟಿ ರೂ ಬಂದಿದ್ದು, ಬಹುತೇಕ ನಿರೀಕ್ಷೆ ಮುಟ್ಟಿದೆ.

"ವಿಪ್ರೋ ಸತತ ಐದನೇ ತ್ರೈಮಾಸಿಕದಲ್ಲಿ ಆದಾಯ ಮತ್ತು ಮಾರ್ಜಿನ್ ಗಳೆರಡರಲ್ಲೂ ಬಲವಾದ ಕಾರ್ಯಕ್ಷಮತೆಯನ್ನು ನೀಡಿದೆ. ಆರ್ಡರ್ ಬುಕಿಂಗ್ ಕೂಡ ಪ್ರಬಲವಾಗಿದೆ ಮತ್ತು ಕಳೆದ 12 ತಿಂಗಳುಗಳಲ್ಲಿ $100 ಮಿಲಿಯನ್ಗಿಂತಲೂ ಹೆಚ್ಚು ಆದಾಯದ ಲೀಗ್ನಲ್ಲಿ ನಾವು ಏಳು ಹೊಸ ಗ್ರಾಹಕರನ್ನು ಸೇರಿಸಿದ್ದೇವೆ," ಕಂಪನಿಯ ಸಿಇಒ ಮತ್ತು ನಿರ್ದೇಶಕ ಥಿಯೆರಿ ಡೆಲಾಪೋರ್ಟೆ ಪ್ರತಿಕ್ರಿಯಿಸಿದ್ದಾರೆ.
ಬುಧವಾರದಂದು ಎನ್ಎಸ್ಇಯಲ್ಲಿ ಕಂಪನಿಯ ಷೇರು 0.45% ಕಡಿಮೆಯಾಗಿ ರೂ 691 ಕ್ಕೆ ಕೊನೆಗೊಂಡಿದೆ.
ಈ ನಡುವೆ ಕಂಪನಿಯು ಪ್ರತಿ ಷೇರಿಗೆ ರೂ 1 ರ ಮಧ್ಯಂತರ ಲಾಭಾಂಶವನ್ನು ಸಹ ಘೋಷಿಸಿದೆ.
"ಕಾರ್ಯನಿರ್ವಹಣೆಯ ಮೆಟ್ರಿಕ್ಗಳಲ್ಲಿ ಮುಂದುವರಿದ ಸುಧಾರಣೆಯ ಕಾರಣದಿಂದ ಸಂಬಳ ಹೆಚ್ಚಳದ ಮೇಲೆ ಗಣನೀಯ ಹೂಡಿಕೆಗಳನ್ನು ಅಳವಡಿಸಿಕೊಂಡ ನಂತರ ನಾವು ದೃಢವಾದ ಕಾರ್ಯಾಚರಣೆಯ ಮಾರ್ಜಿನ್ ಗಳನ್ನು ತಲುಪಿಸಿದ್ದೇವೆ. ನಮ್ಮ ದಿನದ ಮಾರಾಟದ ಬಾಕಿಯನ್ನು ಕಡಿಮೆ ಮಾಡುವ ಮೂಲಕ ನಾವು ನಮ್ಮ ಕಾರ್ಯ ಬಂಡವಾಳ(working capital)ವನ್ನು ಸುಧಾರಿಸಿದ್ದೇವೆ. ಇದು ನಿವ್ವಳ ಆದಾಯದ 101.3 ಪ್ರತಿಶತದಷ್ಟು ಬಲವಾದ ಕಾರ್ಯಾಚರಣೆಯ ನಗದು ಹರಿವಿನ ಪರಿವರ್ತನೆಗೆ ಕಾರಣವಾಗಿದೆ." ಎಂದು ವಿಪ್ರೋದ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಲ್ ಹೇಳಿದ್ದಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!



Click it and Unblock the Notifications