ಮುಂಬೈನ ಸಿದ್ದಿವಿನಾಯಕ ದೇವಾಲಯವು ಸೆಲೆಬ್ರೆಟಿಗಳ ಅತೀ ನೆಚ್ಚಿನ ದೇವಾಲಯಗಳಲ್ಲಿ ಒಂದಾಗಿದೆ. 1801ರಲ್ಲಿ ಈ ದೇವಾಲಯ ನಿರ್ಮಾಣ ಕಾರ್ಯವನ್ನು ಆರಂಭ ಮಾಡಲಾಗಿದ್ದು, 1993ರಲ್ಲಿ ನಿರ್ಮಾಣ ಸಂಪೂರ್ಣವಾಗಿದೆ. ಪ್ರಸ್ತುತ ಈ ದೇವಾಲಯವು ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಸೆಲೆಬ್ರೆಟಿಗಳ ಫೇವರೇಟ್ ದೇವಾಲಯವಾಗಿದೆ.
ಅಷ್ಟು ಮಾತ್ರವಲ್ಲದೆ ದೇಶದ ಹತ್ತು ಅತೀ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಮುಂಬೈನ ಈ ಸಿದ್ದಿವಿನಾಯಕ ದೇವಾಲಯವು ಕೂಡಾ ಕಂಡುಬರುತ್ತದೆ. ಈ ದೇವಾಲಯಕ್ಕೆ ಸಾವಿರಾರು ಪ್ರವಾಸಿಗರು ಕೂಡಾ ಆಗಮಿಸುತ್ತಾರೆ. ದೇವಾಲಯದ ಅಭಿವೃದ್ಧಿಗೆ ಕೊಡುಗೆಯನ್ನು ಕೂಡಾ ನೀಡುವವರು ಕೂಡಾ ಇದ್ದಾರೆ.
ಇತ್ತೀಚೆಗೆ ಈ ದೇವಾಲಯಕ್ಕೆ ಸಲ್ಮಾನ್ ಖಾನ್, ಬಚ್ಚನ್ ಕುಟುಂಬ, ಸಂಜಯ್ ದತ್ತ್, ಏಕ್ತಾ ಕಪೂರ್, ದೀಪಿಕಾ ಪಡುಕೋಣೆ, ರಿತೇಶ್ ದೇಶ್ಮುಖ್, ಕಾರ್ತಿಕ್ ಆರ್ಯನ್, ಕಾಜೋಲ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭೇಟಿ ನೀಡಿದ್ದಾರೆ. ಇತ್ತೀಚೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕೂಡಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇಶದ ಅತೀ ಶ್ರೀಮಂತ ದೇವಾಲಯಗಳ ಪೈಕಿ ಒಂದಾಗಿರುವ ಸಿದ್ದಿವಿನಾಯಕ ದೇವಾಲಯದ ಆದಾಯವೆಷ್ಟು ಎಂದು ನಿಮಗೆ ತಿಳಿದಿದೆಯೇ?, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಶ್ರೀಮಂತ ದೇವಾಲಯಗಳಲ್ಲಿ ಒಂದು
ಭಾರತದ ಅತೀ ಶ್ರೀಮಂತ ದೇವಾಲಯಗಳಲ್ಲಿ ಮಾತ್ರವಲ್ಲ ವಿಶ್ವದ ಅತೀ ಶ್ರೀಮಂತ ದೇವಾಲಯಗಳಲ್ಲಿ ಕೂಡಾ ಮುಂಬೈನ ಸಿದ್ದಿವಿನಾಯಕ ದೇವಾಲಯವು ಒಂದಾಗಿದೆ. ಸಾಮಾನ್ಯವಾಗಿ ನಾವು ಶ್ರೀಮಂತ ದೇವಾಲಯವೆಂದಾಗ ಪದ್ಮನಾಭ ದೇವಾಲಯ, ತಿರುಮಲ ದೇವಾಲಯವ ಎಂದುಕೊಳ್ಳುತ್ತೇವೆ. ಆದರೆ ಮುಂಬೈನ ಸಿದ್ದಿವಿನಾಯಕ ದೇವಾಲಯವು ಕೂಡಾ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.
ಸಿದ್ದಿವಿನಾಯಕ ದೇವಾಲಯದ ಆದಾಯ
ಗಣೇಶ ದೇವರ ದೇವಾಲಯವಾದ ಮಹಾರಾಷ್ಟ್ರದ ಮುಂಬೈನಲ್ಲಿರುವ ಸಿದ್ದಿವಿನಾಯಕ ದೇವಾಲಯವು ಅತೀ ಹೆಚ್ಚು ಕಾಣಿಕೆಯನ್ನು ಪಡೆಯುತ್ತದೆ. ಹೆಚ್ಚಾಗಿ ಶ್ರೀಮಂತರಾಗಿರುವ ಭಕ್ತರು ಈ ದೇವಾಲಯಕ್ಕೆ ದಾನ ರೂಪದಲ್ಲಿ ಧನ ಸಹಾಯವನ್ನು ಮಾಡುತ್ತಾರೆ. ಆದ್ದರಿಂದಾಗಿ ಈ ದೇವಾಲಯದ ಆದಾಯವು ಹೆಚ್ಚಾಗಿದೆ. ಇನ್ನು ಈ ದೇವಾಲಯವು ಸುಮಾರು ನಾಲ್ಕು ಕೆಜಿ ಬಂಗಾರದಿಂದ ಮಾಡಿರುವಂತಹ ದೇವಾಲಯವಾಗಿದೆ. ಈ ದೇವಾಲಯದ ನಿವ್ವಳ ಆದಾಯ 125 ಕೋಟಿ ರೂಪಾಯಿ ಆಗಿದೆ. ಪ್ರತಿ ದಿನ ದಾನದ ರೂಪದಲ್ಲಿ ಸುಮಾರು 30 ಲಕ್ಷ ರೂಪಾಯಿ ಆದಾಯವು ದೇವಾಲಯಕ್ಕೆ ಲಭ್ಯವಾಗುತ್ತದೆ.
ದೇವಾಲಯದ ಎಂಟ್ರಿ ಫೀಸ್ ಎಷ್ಟಿದೆ?
ಸಾಮಾನ್ಯ ಜನರಿಗೆ ಸಿದ್ದಿವಿನಾಯಕ ದೇವಾಲಯದಲ್ಲಿ ಯಾವುದೇ ಶುಲ್ಕವಿಲ್ಲ, ಉಚಿತ ಪ್ರವೇಶವಾಗಿದೆ. ನೀವು ವಿಶೇಷ ಕ್ಯೂನಲ್ಲಿ ನಿಂತು ಶೀಘ್ರವೇ ದೇವರ ದರ್ಶನವನ್ನು ಪಡೆಯಬೇಕಾದರೆ 50 ಸಾವಿರ ರೂಪಾಯಿ ಪಾವತಿಸಬಹುದು. ಎನ್ಆರ್ಐಗಳು ದರ್ಶನವನ್ನು ಪಡೆಯಲು http://www.siddhivinayak.org/bookyourdarshan.asp ಮೂಲಕ ಬುಕ್ ಮಾಡಬಹುದು. ಈ ದೇವಾಲಯಕ್ಕೆ ಕ್ಯಾಮೆರಾವನ್ನು ಕೊಂಡೊಯ್ಯಲು ಅವಕಾಶವಿಲ್ಲ. ನೀವು ಈ ಕ್ಯಾಮೆರಾವನ್ನು ಹತ್ತು ರೂಪಾಯಿ ನೀಡಿ ಹಾಗೂ ಲ್ಯಾಪ್ಟಾಪ್ ಅನ್ನು 50 ರೂಪಾಯಿ ನೀಡಿ ಲಾಕರ್ನಲ್ಲಿ ಇರಿಸಬಹುದು. ಮೊಬೈಲ್ ಫೋನ್ ಕೊಂಡೊಯ್ಯಬಹುದು, ಆದರೆ ಅದನ್ನು ಸೈಲೆಂಟ್ ಮೋಡ್ನಲ್ಲಿ ಇಡಬೇಕಾಗುತ್ತದೆ. ನಿಮ್ಮ ಚಪ್ಪಲಿಯನ್ನು ಇಡಲು ಕೂಡಾ ಇಲ್ಲಿ ಸ್ಥಳವಿದೆ. ಅದು ಉಚಿತವಾಗಿದೆ. ಆದರೆ ಅದಕ್ಕಾಗಿ ದೇವಾಲಯಕ್ಕೆ ಭೇಟಿ ನೀಡಿದವರು, ಸಿಬ್ಬಂದಿಗಳಿಗೆ 10-20 ರೂಪಾಯಿ ನೀಡುತ್ತಾರೆ.
ದೇಶದ ಅತೀ ಶ್ರೀಮಂತ ದೇವಾಲಯಗಳಿವು
ತಿರುಮಲ ತಿರುಪತಿ ವೆಂಕಟೇಶ್ವರ ದೇವಾಲಯ (650 ಕೋಟಿ ರೂಪಾಯಿ), ಮೀನಾಕ್ಷಿ ದೇವಾಲಯ, ಮದುರೈ (ಆರು ಕೋಟಿ ರೂಪಾಯಿ), ಶಿರಡಿ ಸಾಯಿ ಬಾಬಾ ದೇವಾಲಯ, ಶಿರಡಿ (320 ಕೋಟಿ ರೂಪಾಯಿ), ಸಿದ್ಧಿವಿನಾಯಕ ದೇವಾಲಯ (125 ಕೋಟಿ ರೂಪಾಯಿ), ಸೋಮನಾಥ್ ದೇವಾಲಯ, ಗುಜರಾತ್ (90,000 ಮಿಲಿಯನ್ ರೂಪಾಯಿ), ಶ್ರೀ ಪದ್ಮನಾಭಸ್ವಾಮಿ ದೇವಾಲಯ, ತಿರುವನಂತಪುರಂ (500 ಕೋಟಿ ರೂಪಾಯಿ), ಜಗನ್ನಾಥ್ ದೇವಾಲಯ, ಪುರಿ (1.72 ಕೋಟಿ ರೂಪಾಯಿ), ಗೋಲ್ಡನ್ ಟೆಂಪಲ್, ಅಮೃತಸರ (130 ಕೋಟಿ ರೂಪಾಯಿ), ಶಬರಿಮಲೆ ಅಯ್ಯಪ್ಪ ದೇವಾಲಯ, ಕೇರಳ (500 ಕೋಟಿ ರೂಪಾಯಿ), ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ದೇಶದ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!



Click it and Unblock the Notifications