ನಮ್ಮ ಮುಂದಿನ ವೃದ್ಧಾಪ್ಯ ಜೀವನದಲ್ಲಿ ಯಾವುದೇ ಹಣಕಾಸು ತೊಂದರೆ ಉಂಟಾಗದಂತೆ ನಾವು ಈಗಲೇ ತಯಾರಿ ನಡೆಸುವುದು ಮುಖ್ಯ. ನಾವು ಉದ್ಯೋಗ ಮಾಡಿ ಹಣ ಸಂಪಾದನೆ ಮಾಡುವಷ್ಟು ಸದೃಢರಾಗಿಲ್ಲದೆ ಇರುವಾಗ ಆರ್ಥಿಕ ಸಂಕಷ್ಟದಲ್ಲಿ ಸಿಲುಕುವುದಕ್ಕಿಂತ ಮೊದಲೇ ಉಳಿತಾಯ ಮಾಡುವುದು ಉತ್ತಮವಲ್ಲವೇ? ಹಣ ಉಳಿತಾಯ ಮಾಡಲು ನಮ್ಮಲ್ಲಿ ಇರುವ ಉತ್ತಮ ಆಯ್ಕೆ ಹೂಡಿಕೆ.
ಸಾಮಾನ್ಯವಾಗಿ ಹೂಡಿಕೆ ಮಾಡುವಾಗ ಯಾವ ಹೂಡಿಕೆಯಿಂದ ಹೆಚ್ಚು ರಿಟರ್ನ್ ಪಡೆಯಲು ಸಾಧ್ಯ, ಯಾವ ಹೂಡಿಕೆಯಿಂದ ಮೆಚ್ಯೂರಿಟಿ ವೇಳೆ ಹೆಚ್ಚು ಹಣ ಪಡೆಯಲು ಸಾಧ್ಯ ಎಂದು ನೋಡಿಕೊಳ್ಳುತ್ತೇವೆ. ಆದರೆ ಸುರಕ್ಷತೆ ಎಷ್ಟಿದೆ ಎಂದು ಕೂಡಾ ನೋಡುತ್ತೇವೆ. ನಮಗೆ ಅಧಿಕ ರಿಟರ್ನ್ ಕೂಡಾ ಬೇಕು, ಸುರಕ್ಷತೆಯೂ ಇರಬೇಕು ಎಂದಾದಾಗ ಅದಕ್ಕೆ ಉತ್ತಮ ಆಯ್ಕೆ ಅಂಚೆ ಕಚೇರಿ ಯೋಜನೆ.
ಈ ಒಂದು ಅಂಚೆ ಕಚೇರಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ಹೆಚ್ಚು ಲಾಭವನ್ನು ಪಡೆಯಬಹುದು ಹಾಗೂ ಮೆಚ್ಯೂರಿಟಿ ವೇಳೆ ಅಧಿಕ ಮೊತ್ತವನ್ನು ಗಳಿಸಬಹುದು. ಪ್ರತಿ ದಿನ 95 ರೂಪಾಯಿ ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆ 10 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಯೋಜನೆ ಬಗ್ಗೆ ಮಾಹಿತಿ
ನೀವು ಹೆಚ್ಚು ಉಳಿತಾಯ ಮಾಡಲು ಬಯಸುವುದಾದರೆ ಅದಕ್ಕೆ ಉತ್ತಮ ಆಯ್ಕೆ ಸುಮಂಗಲ ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ 19 ವರ್ಷದಿಂದ 45 ವರ್ಷದ ಒಳಗಿನ ಭಾರತೀಯರು ಹೂಡಿಕೆ ಮಾಡಬಹುದು. ಹಾಗೆಯೇ ಈ ಯೋಜನೆಯಲ್ಲಿ ನಾವು 10 ಲಕ್ಷ ರೂಪಾಯಿಯ ವಿಮಾ ಸೌಲಭ್ಯವನ್ನು ಕೂಡಾ ಪಡೆಯಬಹುದು. ವಿಮಾದಾದರು ಸಾವನ್ನಪ್ಪಿದರೆ ವಿಮಾದಾರರ ಕುಟುಂಬ ಸದಸ್ಯರಿಗೆ, ನಾಮಿನಿಗಳಿಗೆ ಅಥವಾ ಕಾನೂನುಬದ್ಧವಾದ ಹಕ್ಕುದಾರರಿಗೆ ಪಾಲಿಸಿಯ ಮೊತ್ತವನ್ನು ನೀಡಲಾಗುತ್ತದೆ.
ಎರಡು ಮೆಚ್ಯೂರಿಟಿ ಆಯ್ಕೆಗಳು
ಈ ಅಂಚೆ ಕಚೇರಿಯ ಉಳಿತಾಯ ಯೋಜನೆಯಲ್ಲಿ ಎರಡು ಮೆಚ್ಯೂರಿಟಿ ಆಯ್ಕೆಗಳು ಇದೆ. ಒಂದು 15 ವರ್ಷ ಮತ್ತೊಂದು 20 ವರ್ಷದ ಮೆಚ್ಯೂರಿಟಿ ಅವಧಿಯಾಗಿದೆ. ನೀವು ಈ ಎರಡರಲ್ಲಿ ಒಂದು ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. 15 ವರ್ಷದ ಯೋಜನೆಯಲ್ಲಿ ನೀವು 6, 9 ಹಾಗೂ 12 ವರ್ಷದಲ್ಲಿ ಶೇಕಡ 20ರಷ್ಟು ಮೊತ್ತವನ್ನು ಹಿಂಪಡೆಯಬಹುದು. ಇನ್ನು 20 ವರ್ಷದ ಪಾಲಿಸಿಯಲ್ಲಿ ನೀವು 8, 12, 16 ವರ್ಷದಲ್ಲಿ ನೀವು ಹಣವನ್ನು ವಿತ್ಡ್ರಾ ಮಾಡಿಕೊಳ್ಳುವ ಆಯ್ಕೆ ಇದೆ. ಉಳಿದ ಶೇಕಡ 40ರಷ್ಟು ಮೆಚ್ಯೂರಿಟಿ ವೇಳೆ ಬೋನಸ್ ರೂಪದಲ್ಲಿ ಲಭ್ಯವಾಗಲಿದೆ.
14 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ
ನೀವು 20 ವರ್ಷ ಪ್ರಾಯದಲ್ಲಿ 20 ವರ್ಷಗಳ ಅವಧಿಗೆ ಸುಮಾರು 7 ಲಕ್ಷ ರೂಪಾಯಿಯ ಪಾಲಿಸಿಯನ್ನು ಖರೀದಿ ಮಾಡಿದರೆ ಪ್ರತಿ ದಿನ ಸುಮಾರು 95 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಅಂದರೆ ಒಂದು ತಿಂಗಳಿಗೆ 2850 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಒಂದು ವರ್ಷಕ್ಕೆ 17,100 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ನೀವು ನಿಮ್ಮ ಹಣವನ್ನು ಹಿಂದಕ್ಕೆ ಪಡೆಯುತ್ತೀರಿ. ಆದರೆ ಮೆಚ್ಯೂರಿಟಿ ವೇಳೆ 14 ಲಕ್ಷ ರೂಪಾಯಿ ಪಡೆಯಬಹುದು.
ಹೂಡಿಕೆ ಲೆಕ್ಕಾಚಾರ ಹೀಗಿದೆ
ನೀವು ಈ ಹೂಡಿಕೆ ಆರಂಭಿಸಿದ 8ನೇ, 12ನೇ ಹಾಗೂ 16ನೇ ವರ್ಷದಲ್ಲಿ ಒಟ್ಟು ಮೊತ್ತದ ಶೇಕಡ 20ರಷ್ಟು ಮೊತ್ತವನ್ನು ಪಡೆಯಬಹುದು. ನಿಮ್ಮ 7 ಲಕ್ಷದ ಹೂಡಿಕೆಯಲ್ಲಿ ನೀವು 20ರಷ್ಟು ಎಂದರೆ 1.4 ಲಕ್ಷ ರೂಪಾಯಿಯನ್ನು ಪಡೆಯಬಹುದು. 20ನೇ ವರ್ಷಕ್ಕೆ ನೀವು 2.8 ಲಕ್ಷ ರೂಪಾಯಿಯನ್ನು ಪಡೆಯುತ್ತೀರಿ. ಅದಾದ ಬಳಿಕ ನೀವು ವಾರ್ಷಿಕ ಬೋನಸ್ ಆಗಿ ಪ್ರತಿ ದಿನಕ್ಕೆ ಸಾವಿರ ರೂಪಾಯಿಗೆ 48 ರೂಪಾಯಿ ಪಡಯುತ್ತೀರಿ. 20 ವರ್ಷಕ್ಕೆ ಈ ಮೊತ್ತ 6.72 ಲಕ್ಷ ರೂಪಾಯಿ ಆಗುತ್ತದೆ. ಅದರಿಂದಾಗಿ ಮೆಚ್ಯೂರಿಟಿ ವೇಳೆ ನೀವು 9.52 ಲಕ್ಷ ರೂಪಾಯಿ ಪಡೆಯುತ್ತೀರಿ. ಒಟ್ಟಾಗಿ ಈ ಯೋಜನೆಯಲ್ಲಿ ನೀವು 13.72 ಲಕ್ಷ ರೂಪಾಯಿ ಪಡೆಯಬಹುದು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications