ಇವತ್ತಿನ ಯದ್ವಾತದ್ವಾ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಗಗನ ಕುಸುಮದಂತಾಗಿ ಹೋಗಿದೆ. ಬರುವ ಆದಾಯ ಸಂಪೂರ್ಣ ಖರ್ಚಾಗಿ ಹೋಗಿ ತರಿತಪಿಸುವವರೇ ಹೆಚ್ಚು. ಆದಾಯದಲ್ಲಿ ಒಂದಷ್ಟು ಉಳಿತಾಯ ಮಾಡಿದರೆ ಭವಿಷ್ಯಕ್ಕೆ ಅನುಕೂಲವಾಗುತ್ತದೆ. ಅಂಚೆ ಇಲಾಖೆಯಿಂದ ಇಂಥ ಕೆಲ ಮುಖ್ಯ ಸ್ಕೀಮ್ಗಳಿವೆ. ಅದರಲ್ಲಿ ಕಿಸಾನ್ ವಿಕಾಸ್ ಪತ್ರ ಒಂದು. ಇದು ಉಳಿತಾಯ ಸ್ಕೀಮ್ ಮಾತ್ರವಲ್ಲ ರಿಸ್ಕ್ ಇಲ್ಲದೇ ಹಣ ಹೂಡಿಕೆಗೆ ಒಳ್ಳೆಯ ಯೋಜನೆಯಾಗಿದೆ.
ಸರ್ಕಾರಿ ಪ್ರಾಯೋಕತ್ವವಾದ್ದರಿಂದ ಕಿಸಾನ್ ವಿಕಾಸ್ ಪತ್ರದ ವಿಶ್ವಾಸಾರ್ಹತೆ ಬಗ್ಗೆ ಸಂಶಯ ಬೇಡ. ಕಿಸಾನ್ ವಿಕಾಸ್ ಪತ್ರ ಮಾತ್ರವಲ್ಲ ಪೋಸ್ಟ್ ಆಫೀಸ್ನ ಹಲವಾರು ಸ್ಕೀಮ್ಗಳು ಇದೇ ಕಾರಣಕ್ಕೆ ಜನರನ್ನು ಸೆಳೆದಿವೆ. ಇದ್ದುದ್ದರಲ್ಲಿ ಹೆಚ್ಚು ಬಡ್ಡಿ ನೀಡುತ್ತವೆ.
ಏನಿದು ಕಿಸಾನ್ ವಿಕಾಸ್ ಪತ್ರ ಯೋಜನೆ?
ಇದು 124 ತಿಂಗಳ ಅವಧಿಯದ್ದಾಗಿರುತ್ತದೆ. ಒಮ್ಮೆ ಹಣ ತೊಡಗಿಸಿದರೆ ಸಾಕು. ಕನಿಷ್ಠ 1 ಸಾವಿರ ರೂ ಗೆ ಕಿಸಾನ್ ವಿಕಾಸ್ ಪತ್ರ ಖರೀದಿಸಬಹುದು. ಗರಿಷ್ಠ ಮಿತಿ ಇಲ್ಲ. ಆಧಾರ್ ಕಾರ್ಡ್ ಅನ್ನು ಐಡಿಯಾಗಿ ನೀಡಬೇಕು. ಆದರೆ, 50 ಸಾವಿರ ರೂಗಿಂತ ಹೆಚ್ಚು ಮೊತ್ತದ ಕಿಸಾನ್ ವಿಕಾಸ್ ಪತ್ರ ಖರೀದಿಸಿದರೆ ಪಾನ್ ನಂಬರ್ ನಮೂದಿಸಬೇಕು.
10 ಲಕ್ಷ ರೂಗಿಂತ ಹೆಚ್ಚು ಹಣ ಹೂಡಿಕೆ ಮಾಡಿದರೆ ಐಟಿಆರ್, ಬ್ಯಾಂಕ್ ಸ್ಟೇಟ್ಮೆಂಟ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನೀವು ಎಷ್ಟೇ ಮೊತ್ತದ ಹಣವನ್ನು ಕಿಸಾನ್ ವಿಕಾಸ್ ಪತ್ರ ಯೋಜನೆಗೆ ತೊಡಗಿಸಿದರೂ 124 ತಿಂಗಳಿಗೆ, ಅಂದರೆ 10 ವರ್ಷ 4 ತಿಂಗಳ ಬಳಿಕ ಹಣ ದ್ವಿಗುಣಗೊಂಡು ನಿಮ್ಮ ಕೈ ಸೇರುತ್ತದೆ.
ಮೊದಲಿಗೆ ಈ ಯೋಜನೆಯನ್ನು ರೈತರಿಗೆಂದು ಮಾಡಲಾಗಿತ್ತು. ಇದೀಗ ಎಲ್ಲರಿಗೂ ಇದನ್ನು ಮುಕ್ತಗೊಳಿಸಲಾಗಿದೆ.

ಹೇಗೆ ಖರೀದಿಸುವುದು?
ಅಂಚೆ ಕಚೇರಿಯಲ್ಲಿ ನೀವು ಕೆವಿಪಿಯನ್ನು ಖರೀದಿಸಬಹುದು. ಪೋಸ್ಟ್ ಆಫೀಸ್ ವೆಬ್ಸೈಟ್ಗೆ ಹೋದರೆ ಅಲ್ಲಿ ಸಿಗುವ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬಹುದು.
18 ವರ್ಷ ಮೇಲ್ಪಟ್ಟವರು ಕಿಸಾನ್ ವಿಕಾಸ್ ಪತ್ರ ಪಡೆಯಬಹುದು. ಅಪ್ರಾಪ್ತರಾದರೆ ದೊಡ್ಡವರ ಮೂಲಕ ಅದನ್ನು ಖರೀದಿಸಬಹುದು. ಗಮನಾರ್ಹ ಅಂಶ ಎಂದರೆ ಹಿಂದೂ ಅವಿಭಕ್ತ ಕುಟುಂಬದವರು ಕಿಸಾನ್ ವಿಕಾಸ್ ಪತ್ರ ಪಡೆಯುವಂತಿಲ್ಲ. ಎನ್ಆರ್ಐಗಳಿಗೂ ಇದು ಲಭ್ಯ ಇರುವುದಿಲ್ಲ.
ಇಲ್ಲಿ ಕಿಸಾನ್ ವಿಕಾಸ್ ಪತ್ರಕ್ಕೆ ತೆರಿಗೆ ವಿನಾಯಿತಿ ಇರುವುದಿಲ್ಲ. ಇದರಲ್ಲಿ ಸಿಗುವ ಬಡ್ಡಿಗೆ ತೆರಿಗೆ ಕಡಿತ ಮಾಡಲಾಗುತ್ತದೆ. ಸ್ಕೀಮ್ 124 ತಿಂಗಳು ಇರುತ್ತದೆ. 30 ತಿಂಗಳ ಲಾಕ್-ಇನ್ ಅವಧಿ ಇರುತ್ತದೆ. ಈ ಅವಧಿಯ ಬಳಿಕ ನೀವು ಸ್ಕೀಮ್ನಲ್ಲಿ ತೊಡಗಿಸಿರುವ ಹಣವನ್ನು ಹಿಂಪಡೆಯಲು ಸಾಧ್ಯ ಇದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications