ಆನ್ಲೈನ್ ಮೂಲಕ ಹಣವನ್ನು ಎಗರಿಸಲು ವಂಚಕರು ಹಲವಾರು ಆನ್ಲೈನ್ ಟ್ರಿಕ್ಗಳನ್ನು ಬಳಸುತ್ತಿದ್ದಾರೆ. ವಂಚಕರು ಬಳಸುವ ಹಲವಾರು ಹೊಸ ಆನ್ಲೈನ್ ಟ್ರಿಕ್ಗಳ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಲಕ್ಷ ರೂಪಾಯಿಗಳು ಸೆಕೆಂಡುಗಳಲ್ಲಿ ಮಂಗಮಾಯವಾಗಲಿದೆ. ಆರ್ಬಿಐ ಪ್ರಕಾರ, ವಂಚಕರು ವಿವಿಧ ಚತುರ ವಿಧಾನಗಳ ಮೂಲಕ ಮೋಸ ಹೋಗುವ ಸಾರ್ವಜನಿಕರನ್ನು ವಂಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.
ಗ್ರಾಹಕರು ತಿಳಿದೋ ತಿಳಿಯದೆಯೋ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುವುದು ಹಣಕಾಸಿನ ವಂಚನೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಆರ್ಬಿಐ ಹೇಳಿದೆ. ಹಾಗಾಗಿ ಆನ್ಲೈನ್ ವಹಿವಾಟು ನಡೆಸುವಾಗ ಎಚ್ಚರದಿಂದಿರಬೇಕು.
ಈ ವಂಚಕರು ಸಾಮಾನ್ಯವಾಗಿ ಯಾವೆಲ್ಲಾ ತಂತ್ರವನ್ನು ಬಳಸುತ್ತಾರೆ ಎಂದು ಇತ್ತೀಚೆಗೆ ಆರ್ಬಿಐ ಮಾಹಿತಿ ನೀಡಿದೆ. ಈ ಟ್ರಿಕ್ಗಳ ಪೈಕಿ ಕೆಲವು ನಿಮಗೆ ತಿಳಿದಿರಬಹುದು. ಆದರೆ ಪ್ರಮುಖ ಟ್ರಿಕ್ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಮುಂದೆ ಓದಿ....

ಪ್ರಮುಖ ಟ್ರಿಕ್ಗಳು
* ಆನ್ಲೈನ್ನಲ್ಲಿ ಮಾರಾಟ ಮಾಡುವ ವಸ್ತುಗಳನ್ನು ಖರೀದಿ ಮಾಡುವ ನೆಪದಲ್ಲಿಯೂ ಕೂಡಾ ವಂಚನೆ ನಡೆಯುತ್ತದೆ. ಆನ್ಲೈನ್ನಲ್ಲಿ ವಂಚಕರು ಖರೀದಿದಾರರಂತೆ ನಟಿಸಿ, ಮಾರಾಟಗಾರರ ಉತ್ಪನ್ನವನ್ನು ಖರೀದಿ ಮಾಡುವುದಾಗಿ ಮುಂದೆ ಬರುತ್ತಾರೆ. ಇನ್ನು ಮಾರಾಟಗಾರರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ತಾನು ದೂರದ ಊರಿನಲ್ಲಿ ಕಾರ್ಯ ನಿರ್ವಹಣೆ ಮಾಡುವ ರಕ್ಷಣಾ ಸಿಬ್ಬಂದಿ, ಯೋಧ ಎಂದು ಫೋಸ್ ನೀಡುತ್ತಾರೆ. ಮಾರಾಟಗಾರರಿಗೆ ಹಣವನ್ನು ಪಾವತಿಸುವ ಬದಲು, ಅವರು ಯುಪಿಐ ಅಪ್ಲಿಕೇಶನ್ ಮೂಲಕ "ಹಣವನ್ನು ವಿನಂತಿಸಿ" ಆಯ್ಕೆಯನ್ನು ಬಳಸುತ್ತಾರೆ. ಯುಪಿಐ ಪಿನ್ ಅನ್ನು ನಮೂದಿಸುವ ಮೂಲಕ ಮಾರಾಟಗಾರನು ವಿನಂತಿಯನ್ನು ಅನುಮೋದಿಸಬೇಕೆಂದು ಹೇಳುತ್ತಾರೆ. ಮಾರಾಟಗಾರ ಪಿನ್ ನಮೂದಿ ಮಾಡಿದ ಬಳಿಕ ಹಣವನ್ನು ವಂಚಕನ ಖಾತೆಗೆ ವರ್ಗಾಯಿಸಲಾಗುತ್ತದೆ.
* ಇನ್ನು ವಂಚಕರು ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್/ರಿಮೋಟ್ ಪ್ರವೇಶವನ್ನು ಬಳಸಿಕೊಂಡು ಕೂಡಾ ವಂಚನೆ ಮಾಡುತ್ತಾರೆ. ವಂಚಕರು ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಲು ಗ್ರಾಹಕರಿಗೆ ಒತ್ತಡ ಹೇರುತ್ತಾರೆ. ಅಂತಹ ಅಪ್ಲಿಕೇಶನ್ ಅನ್ನು ಬಳಸಿಕೊಂಡು, ವಂಚಕರು ಗ್ರಾಹಕರ ಮೊಬೈಲ್ / ಲ್ಯಾಪ್ಟಾಪ್ ಅನ್ನು ವೀಕ್ಷಿಸಬಹುದು / ನಿಯಂತ್ರಿಸಬಹುದು. ಹಾಗೆಯೇ ಹಣಕಾಸಿನ ಅಪ್ಲಿಕೇಶನ್ಗೂ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ವಂಚಕರು ಈ ಮಾಹಿತಿಯನ್ನು ಅನಧಿಕೃತವಾಗಿ ಹಣ ವರ್ಗಾವಣೆ ಮಾಡಲು ಅಥವಾ ಗ್ರಾಹಕರ ಇಂಟರ್ನೆಟ್ ಬ್ಯಾಂಕಿಂಗ್ / ಪಾವತಿ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಪಾವತಿಗಳನ್ನು ಮಾಡಲು ಬಳಸುತ್ತಾರೆ.
* ಸರ್ಚ್ ಇಂಜಿನ್ಗಳ ಮೂಲಕವು ವಂಚನೆ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಬ್ಯಾಂಕ್, ವಿಮಾ ಕಂಪನಿ, ಆಧಾರ್ ಅಪ್ಡೇಟ್ ಸೆಂಟರ್, ಇತ್ಯಾದಿಗಳ ಸಂಪರ್ಕ ವಿವರಗಳು / ಗ್ರಾಹಕ ಆರೈಕೆ ಸಂಖ್ಯೆಗಳನ್ನು ಪಡೆಯಲು ಸರ್ಚ್ ಇಂಜಿನ್ಗಳನ್ನು ಬಳಸುತ್ತಾರೆ. ಸರ್ಚ್ ಇಂಜಿನ್ಗಳಲ್ಲಿನ ಈ ಸಂಪರ್ಕ ವಿವರಗಳು ಸಾಮಾನ್ಯವಾಗಿ ಆಯಾ ಘಟಕಕ್ಕೆ ಸೇರಿರುವುದಿಲ್ಲ. ಆದರೆ ವಂಚಕರು ಅದು ಅಧಿಕೃತ ಸಂಖ್ಯೆ, ವಿಳಾಸ ಎಂಬಂತೆ ಬಿಂಬಿಸುತ್ತಾರೆ. ಈ ಸಂಖ್ಯೆಗೆ ಕರೆ ಮಾಡಿದಾಗ ವಂಚಕರು ಅಗತ್ಯ ಮಾಹಿತಿಯನ್ನು ಕೇಳಿ ಆ ಮೂಲಕ ಮೋಸ ಮಾಡುತ್ತಾರೆ. ನೀವು ಅಧಿಕೃತ ಪ್ರತಿನಿಧಿ ಎಂದು ಅಗತ್ಯ ಮಾಹಿತಿ ನೀಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವು ಬರಿದಾಗುತ್ತದೆ.
* ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ವಂಚನೆ ನಡೆಯುತ್ತದೆ. ವಂಚಕರು ಅನೇಕ ಸಂದರ್ಭಗಳಲ್ಲಿ ಗ್ರಾಹಕರನ್ನು ವಿವಿಧ ನೆಪಗಳ ಅಡಿಯಲ್ಲಿ ಸಂಪರ್ಕಿಸುತ್ತಾರೆ. ಗ್ರಾಹಕರ ಫೋನ್ನಲ್ಲಿರುವ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ತ್ವರಿತ ಪ್ರತಿಕ್ರಿಯೆ (ಕ್ಯೂಆರ್) ಕೋಡ್ಗಳನ್ನು ಸ್ಕ್ಯಾನ್ ಮಾಡುವಂತೆ ಮಾಡುತ್ತಾರೆ. ಅಂತಹ QR ಕೋಡ್ಗಳನ್ನು ಸ್ಕ್ಯಾನ್ ಮಾಡುವ ಮೂಲಕ, ಗ್ರಾಹಕರು ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ವಂಚಕರಿಗೆ ತಿಳಿಯದಂತೆ ಅಧಿಕಾರ ನೀಡಿದಂತೆ ಆಗುತ್ತದೆ.
* ಮೊಬೈಲ್ನ ಚಾರ್ಜಿಂಗ್ ಪೋರ್ಟ್ ಅನ್ನು ಫೈಲ್ಗಳು / ಡೇಟಾವನ್ನು ವರ್ಗಾಯಿಸಲು ಸಹ ಬಳಸಬಹುದು. ವಂಚಕರು ಸಾರ್ವಜನಿಕ ಚಾರ್ಜಿಂಗ್ ಪೋರ್ಟ್ಗಳನ್ನು ಮಾಲ್ವೇರ್ ಅನ್ನು ಅಲ್ಲಿ ಸಂಪರ್ಕಗೊಂಡಿರುವ ಗ್ರಾಹಕರ ಫೋನ್ಗಳಿಗೆ ವರ್ಗಾಯಿಸಲು ಬಳಸುತ್ತಾರೆ. ಗ್ರಾಹಕರ ಮೊಬೈಲ್ ಫೋನ್ಗಳಿಂದ ಇಮೇಲ್ಗಳು, ಎಸ್ಎಮ್ಎಸ್, ಪಾಸ್ವರ್ಡ್ ಇತ್ಯಾದಿಗಳಂತಹ ಸೂಕ್ಷ್ಮ ಮಾಹಿತಿಯನ್ನು ಕದಿಯುತ್ತಾರೆ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ



Click it and Unblock the Notifications