ಮೊದಲ ಕೆಲಸ ಸಿಕ್ಕಾಗ ನಿಮಗೆ ಆಗುವ ಸಂತೋಷವನ್ನು ಮರೆಯಲು ಸಾಧ್ಯವಿಲ್ಲ. ಮೊದಲ ತಿಂಗಳು ಸಂಬಳ ಬಂದಾಗ ಯಾರಿಗೆ ತಾನೇ ಖುಷಿಯಾಗುವುದಿಲ್ಲ. ಇದೇ ಖುಷಿ ನೀವು ನಿವೃತ್ತಿ ದಿನ ಕಚೇರಿ ಬಿಡುವಾಗಲು ಉಳಿಯುವಂತೆ ನೀವು ಮಾಡಬೇಕೆ? ಹಾಗಾದರೆ ನೀವು ಈ ನಾಲ್ಕು ಸೂತ್ರಗಳನ್ನು ಪಾಲಿಸಿ.
ಉಳಿತಾಯ ಮತ್ತು ನಿವೃತ್ತಿ ಯೋಜನೆಗಳ ಬಗ್ಗೆ ಕಡೆಗಣಿಸಿದರೆ ಮುಂದಾಗುವ ತೊಂದರೆಗಳಿಗೆ ನೀವೆ ಜವಾಬ್ದಾರರು. ಉಳಿತಾಯ ಯೋಜನೆಗಳ ಬಗೆಗಿನ ನಿರ್ಲಕ್ಷ್ಯ ನಿಮ್ಮನ್ನು ಕಷ್ಟಕ್ಕೆ ದೂಡಬಹುದು. ನಿಶ್ಚಿತ ಆದಾಯವಿಲ್ಲದೆ ನಿವೃತ್ತಿ ಜೀವನವು ಸಾಲದ ಸುಳಿಯಲ್ಲಿ ಸಿಲುಕಿಸಬಹುದು. ಹೀಗಾಗಿ ಈಗಿನಿಂದಲೇ ಈ ನಾಲ್ಕು ಸೂತ್ರಗಳತ್ತ ಗಮನ ಹರಿಸಿ.
ನಾಳೆಗಾಗಿ ಸೂಕ್ತ ಯೋಜನೆ ರೂಪಿಸಿ
ಪ್ರಸ್ತುತ ಕೆಲಸ, ಸಂಬಳ ಎಲ್ಲವೂ ಚೆನ್ನಾಗಿದೆ , ಬದುಕು ಚೆನ್ನಾಗಿಯೇ ನಡೆಯುತ್ತಿದೆ ಎಂದು ನಿವೃತ್ತಿಯ ಬಗ್ಗೆ ಯೋಚನೆ ಮಾಡದೇ ಇರುವವರ ಸಂಖ್ಯೆಯೇ ಹೆಚ್ಚು. ಪ್ರತಿ ತಿಂಗಳು ಬರುವ ಹಣವನ್ನು ಹೇಗೆ ಬಳಸಿಕೊಳ್ಳಬೇಕು.
ನಿವೃತ್ತಿ ಯೋಜನೆಗಳಿಗೆ ಎಷ್ಟು ಹಣ ಉಳಿಸಬೇಕು ಎನ್ನುವ ಸ್ಪಷ್ಟತೆ ಇರುವುದಿಲ್ಲ. ಹೀಗಾಗಿ ನಿವೃತ್ತಿ ಬದುಕಿನಲ್ಲಿ ಎದುರಾಗುವ ಸವಾಲುಗಳು, ಖರ್ಚುವೆಚ್ಚಗಳನ್ನು ಈಗಲೇ ಆಲೋಚಿಸಿ ಸೂಕ್ತ ಯೋಜನೆಯನ್ನು ರೂಪಿಸಿಕೊಳ್ಳಿ. ಆ ಮೂಲಕ ಸೂಕ್ತ ಮೊತ್ತವನ್ನು ಉಳಿತಾಯ ಮಾಡಬಹುದು.
ಈಗಿನ ಹೂಡಿಕೆಯೇ ಮುಂದಿನ ಉಳಿತಾಯ
ಮುಂದಾಲೋಚನೆಯಿಲ್ಲದೆ ಮಾಡುವ ಖರ್ಚುಗಳು ಸಮಸ್ಯೆಯನ್ನು ತಂದೊಡ್ಡಬಹುದು. ಮೊದಲ ವೇತನ ಪಡೆದಾಗಲೇ ಭವಿಷ್ಯದ ಕಡೆಗೆ ಸ್ವಲ್ಪ ಗಮನವಹಿಸಿ. ಏಕೆಂದರೆ ತಡವಾಗಿ ನಿವೃತ್ತಿ ಯೋಜನೆ ಮಾಡಿದರೆ ಉಳಿತಾಯದ ಮೊತ್ತ ಅಲ್ಪವಾಗಿರುತ್ತದೆ. ಅಥವಾ ನಿವೃತ್ತಿ ಯೋಜನೆಗೆ ದೊಡ್ಡ ಮೊತ್ತದ ಕಂತುಗಳನ್ನು ಕಟ್ಟಬೇಕಾಗಬಹುದು. ಹೀಗಾಗಿ ನೀವು ಯುವಕರಾಗಿರುವಾಗಲೇ ಇಂತಹ ಯೋಜನೆಗಳತ್ತ ಗಮನ ಹರಿಸಿದರೆ ಒಳಿತು.
ಇಪಿಎಫ್, ಪಿಪಿಎಫ್, ಅಟಲ್ ಪಿಂಚಣಿ ಯೋಜನೆ, ದೀರ್ಘಾವಧಿ ಹೂಡಿಕೆಗಳು ಹೀಗೆ ಯಾವುದಾದರೂ ಉತ್ತಮ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಕು. ಈಗ ನೀವು ಪ್ರತಿ ತಿಂಗಳು ಕಟ್ಟುವ ಅಲ್ಪ ಹಣವು ಮುಂದೆ ದೊಡ್ಡ ಮೊತ್ತವಾಗಿ ಬೆಳೆಯುತ್ತದೆ. ಉತ್ತಮ ಬಡ್ಡಿದರಗಳು ನೀಡುವ ಬ್ಯಾಂಕುಗಳನ್ನು ಆರಿಸಿ ಈಗಿನಿಂದಲೇ ಹಣ ಹೂಡಿಕೆಗೆ ಗಮನ ಹರಿಸಿ.
ಹಣದುಬ್ಬರದ ಅರಿವು ನಿಮಗಿರಲಿ
ಪ್ರತಿಯೊಬ್ಬರಿಗೂ ಹಣದುಬ್ಬರದ ಅರಿವು ಬಹಳ ಮುಖ್ಯ. ಏಕೆಂದರೆ ನೀವು ತಿಂಗಳಿಗೆ 1 ಸಾವಿರ ರುಪಾಯಿ ಉಳಿತಾಯ ಮಾಡಿದರೂ ವರ್ಷಕ್ಕೆ 12 ಸಾವಿರ ರುಪಾಯಿಗಳನ್ನು ಹೂಡಿಕೆ ಮಾಡಬಹುದು. ಆದರೆ ಈ ಪ್ರಮಾಣವು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ತಿಂಗಳ ಸಂಬಳದಲ್ಲಿ ಶೇಕಡಾ 25 ರಿಂದ 30ರಷ್ಟು ಹಣವನ್ನು ನೀವು ನಿವೃತ್ತಿ ಯೋಜನೆಗಳಿಗೆ ತೆಗೆದಿಡಬೇಕು.
ಹಣದುಬ್ಬರದ ಅಂದಾಜು ಇಲ್ಲದೆ ಹೋದರೆ ನಿಮ್ಮ ಭವಿಷ್ಯದ ಹೂಡಿಕೆ ಪ್ರಯೋಜನವಾಗುವುದಿಲ್ಲ. ಉದಾಹರಣೆಗೆ ಒಂದು ವಸ್ತುವಿನ ಬೆಲೆ 100 ರುಪಾಯಿ ಎಂದಿಟ್ಟುಕೊಳ್ಳೋಣ. ಶೇಕಡಾ 7ರಷ್ಟು ಹಣದುಬ್ಬರ ಲೆಕ್ಕಹಾಕಿದರೆ ಅದೇ ವಸ್ತುವಿನ ಬೆಲೆ 30 ವರ್ಷಗಳ ಬಳಿಕ 762 ರುಪಾಯಿ ಆಗುತ್ತದೆ. ಹೀಗಾಗಿ ನಿವೃತ್ತಿಗೆ ಮೊದಲೇ ನಂತರದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ, ಉಳಿತಾಯ ಮಾಡಿ.
ಆರೋಗ್ಯದ ಕಡೆ ಗಮನವಹಿಸಿ
ಮನುಷ್ಯನಿಗೆ ಆರೋಗ್ಯವೇ ಬಹುದೊಡ್ಡ ಸಂಪತ್ತು. ಹೀಗಾಗಿ ನೀವು ಎಷ್ಟು ಚೆನ್ನಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೀರಾ ಎಂಬುದು ನಿಮ್ಮ ಜೇಬಿಗೆ ಕನ್ನ ಬೀಳುವುದನ್ನು ತಪ್ಪಿಸುತ್ತದೆ. ಅನುವಂಶೀಯವಾಗಿ ಬರುವ ಕಾಯಿಲೆಗಳ ಬಗ್ಗೆ ಜಾಗ್ರತೆ ಇರಲಿ. ಸಮಸ್ಯೆಗಳು ಇದೆ ಎನ್ನುವುದಾದರೆ ಸೂಕ್ತ ಆರೋಗ್ಯ ವಿಮೆಗಳನ್ನು ಮಾಡಿಸಿ.
ಏಕೆಂದರೆ ಮುಂದೆ ಎದುರಾಗಬಹುದಾದ ದೊಡ್ಡ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ನೀವು ಶಕ್ತರಾಗಿರುತ್ತೀರ ಗಮನಿಸಿ. ಇಲ್ಲದೇ ಹೋದರೆ ನಿಮ್ಮ ಆದಾಯದ ಬಹು ಭಾಗವನ್ನು ವೈದ್ಯಕೀಯ ವೆಚ್ಚಗಳಲ್ಲಿ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಈಗಿನಿಂದಲೇ ನಿವೃತ್ತಿ ಯೋಜನೆಗಳನ್ನು ರೂಪಿಸಿಕೊಂಡರೆ ಸೂಕ್ತ.
More From GoodReturns

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

International Women's Day: ಮಹಿಳೆಯರೇ ಇಲ್ಲಿ ಗಮನಿಸಿ; ಇಲ್ಲಿದೆ ಬೆಸ್ಟ್ 5 ಹೂಡಿಕೆ ಯೋಜನೆಗಳು!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications