ಎಲ್ ಪಿಜಿಗೆ ಸಂಬಂಧಿಸಿದ ಅವಘಡಗಳು ಯಾವ ಸಮಯದಲ್ಲಾದರೂ ಸಂಭವಿಸಬಹುದು. ಒಂಚೂರು ಬೇಜವಾಬ್ದಾರಿತನ ತೋರಿದರೂ ಇದರಿಂದಲೇ ಸಾವು ಅಥವಾ ಗಂಭೀರ ಸ್ವರೂಪದ ಗಾಯಗಳು, ಆಸ್ತಿ ಹಾನಿ ಸಂಭವಿಸಬಹುದು. ಆದರೆ ಬಹಳ ಮಂದಿಗೆ ಗೊತ್ತಿಲ್ಲದ ವಿಚಾರ ಏನೆಂದರೆ, ತೈಲ ಮಾರ್ಕೆಟಿಂಗ್ ಕಂಪೆನಿಗಳ ಬಳಿ ನೋಂದಣಿ ಆಗಿರುವ ಎಲ್ಲ ಗ್ರಾಹಕರಿಗೂ ಇಂಥ ಅಪಘಾತಗಳಿಗೆ ಕವರ್ ಆಗುತ್ತದೆ.
ಸರ್ಕಾರಿ ಸ್ವಾಮ್ಯದ ಎಲ್ ಪಿಜಿ ಮಾರ್ಕೆಟಿಂಗ್ ಹಾಗೂ ವಿತರಣೆ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಡೀಲರ್ ಗಳಿಗೆ ಎಲ್ ಪಿಜಿ ಅನಿಲ ಇನ್ಷೂರೆನ್ಸ್ - ಗ್ರೂಪ್ ಇನ್ಷೂರೆನ್ಸ್ ಕವರ್ ಆಗುತ್ತದೆ.
"ಪಬ್ಲಿಕ್ ಲಯಬಿಲಿಟಿ ಪಾಲಿಸಿ ಫಾರ್ ಆಯಿಲ್ ಇಂಡಸ್ಟ್ರೀಸ್" ಅಡಿಯಲ್ಲಿ ಸಮಗ್ರ ವಿಮಾ ಪಾಲಿಸಿ ಖರೀದಿ ಮಾಡುವುದರಿಂದ ಎಲ್ ಪಿಜಿಗೆ ಸಂಬಂಧಿಸಿದ ಅವಘಡಗಳು ಸಂಭವಿಸಿದಾಗ ಶೀಘ್ರವಾಗಿ ಪರಿಹಾರ ದೊರೆಯುತ್ತದೆ.
ಎಲ್ ಪಿಜಿ ಅನಿಲ ಸಿಲಿಂಡರ್ ಅಪಘಾತ ವಿಮೆ ಯಾವಾಗ ಸಿಗುತ್ತೆ?
ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಅಪಘಾತದಿಂದ ಆಗುವ ಜೀವ ಹಾಗೂ ಆಸ್ತಿ ನಾಶಕ್ಕೆ ಪಬ್ಲಿಕ್ ಲಯಬಿಲಿಟಿ ಇನ್ಷೂರೆನ್ಸ್ ಅಡಿಯಲ್ಲಿ ವಿಮೆ ದೊರೆಯುತ್ತದೆ. ಮುಖ್ಯವಾಗಿ ಎಲ್ ಪಿಜಿಯಿಂದ ಆ ಅಪಘಾತ ಸಂಭವಿಸಿರಬೇಕು. ಬೇರೆ ಮೂಲದಿಂದ ಅಥವಾ ಕಾರಣದಿಂದ ಎಲ್ ಪಿಜಿ ಸಿಲಿಂಡರ್ ಗಳ ಅಪಘಾತ ಸಂಭವಿಸಿದಲ್ಲಿ ಅದಕ್ಕೆ ವಿಮೆ ಕವರ್ ಆಗಲ್ಲ.
ಇನ್ಷೂರೆನ್ಸ್ ನಲ್ಲಿ ಏನೇನು ಮತ್ತು ಎಷ್ಟು ಕವರ್ ಆಗುತ್ತದೆ?
* ಜೂನ್ 24, 2019ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ಸಂಬಂಧವಾಗಿ ಪತ್ರಿಕಾಗೋಷ್ಠಿ ಹೊರಡಿಸಿತ್ತು. ಆ ನಿಯಮಾವಳಿಗಳು ಹೀಗಿವೆ.
* ಒಂದು ವೇಳೆ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟಲ್ಲಿ ವೈಯಕ್ತಿಕ ಅಪಘಾತ ಕವರ್ ಮೊತ್ತ 6,00,000 ರುಪಾಯಿ ಇದೆ.
* ಒಂದು ಅವಘಡದಲ್ಲಿ ವೈದ್ಯಕೀಯ ವೆಚ್ಚ 30 ಲಕ್ಷ ಕವರ್ ಆಗುತ್ತದೆ. ಒಬ್ಬ ವ್ಯಕ್ತಿಗೆ ಗರಿಷ್ಠ 2,00,000 ರುಪಾಯಿ.
* ಅಧಿಕೃತವಾದ ಗ್ರಾಹಕರ ನೋಂದಾಯಿತ ಆವರಣದಲ್ಲಿ ಆಸ್ತಿ ಹಾನಿಯಾದಲ್ಲಿ ಒಂದು ಅವಘಡಕ್ಕೆ ಗರಿಷ್ಠ 2,00,000 ರುಪಾಯಿ ದೊರೆಯುತ್ತದೆ.
ಎಲ್ ಪಿಜಿ ಅಪಘಾತದಿಂದ ಸಂಭವಿಸುವ ನಷ್ಟಕ್ಕೆ ಕ್ಲೇಮ್ ಫೈಲ್ ಮಾಡೋದು ಹೇಗೆ?
ಎಲ್ ಪಿಜಿ ಸ್ಫೋಟ ಸಂಭವಿಸಿದಲ್ಲಿ ಡೀಲರ್ ಅಥವಾ ವಿತರಕರಿಗೆ ಬರವಣಿಗೆಯಲ್ಲಿ ಮಾಹಿತಿ ನೀಡಬೇಕು. ಆ ನಂತರ ಅವರು ತೈಲ ಮಾರ್ಕೆಟಿಂಗ್ ಕಂಪೆನಿ ಮತ್ತು ಇನ್ಷೂರರ್ ಗೆ ಮಾಹಿತಿ ನೀಡುತ್ತಾರೆ. ಈ ಹಂತದಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಯಿಂದ ಎಲ್ಲ ಪರಿಶೀಲನೆ ಮಾಡಿ, ಗ್ರಾಹಕರು ಕ್ಲೇಮ್ ನಿಯಮಾವಳಿ ಸಂಪೂರ್ಣ ಮಾಡಲು ಸಹಾಯ ಮಾಡಲಾಗುತ್ತದೆ. ಕ್ಲೇಮ್ಸ್ ಮುಂದಿನ ಹಂತಕ್ಕೆ ಪ್ರಕ್ರಿಯೆ ಶುರುವಾಗುತ್ತದೆ.
More From GoodReturns

Price Hike: ಬೆಂಗಳೂರು ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್! ಗ್ಯಾಸ್ ಬೆನ್ನಲ್ಲೇ ಏರಿಕೆಯಾಗುತ್ತಾ ಹೋಟೆಲ್ ಫುಡ್ ದರ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG cylinder Price: ದೇಶದ ಜನರಿಗೆ ಅಡುಗೆ ಅನಿಲ ದರ ಶಾಕ್… LPG ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ!

LPG Gas Cylinder: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ, ಹೋಟೆಲ್ ಉದ್ಯಮಕ್ಕೆ ಅಡ್ಡಿ; ಪ್ರಧಾನಿಗೆ ಪತ್ರ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!



Click it and Unblock the Notifications